Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಷ್ಟವಿಲ್ಲದ ಜೀವನ

ಇಷ್ಟವಿಲ್ಲದ ಜೀವನ
ಕಷ್ಟವಾದ ಬಂದನ.
ಪ್ರತಿಕ್ಷಣ ಇತರರಿಗಾಗಿ
ಯಾಕಿಂತಾ ದುಸ್ಥಿತಿ.

ಇದು ನನ್ನ ಜೀವನ
ನನಗಾಗಿ ಅಲ್ಲವೇ .....
ಎಂದು ನಾನು ನನಗಾಗಿ
ಬದುಕುವುದು .

ನನ್ನಲ್ಲಿರುವ ಕವ್ಶಲ್ಯವೋಂದು
ನಾನು ಹಾರಿಸಿದ ಮಾರ್ಗ ಇನ್ನೊನ್ದು
ಸಂತೋಷವೆಲ್ಲಿ ಸಿಗುವುದು
ಒತ್ತಡದ ಬದುಕಿದಲ್ಲಿ .

ನಾನಿರುವ ಜಗತ್ತಿನಲ್ಲಿ
ಜೀವವಿಲ್ಲ..........
ಜೀವವೀಲ್ಲದ ಯಂತ್ರಗಳ
ಜೊತೆ ಬಾಳುವುದೇ
ಜೀವನವೆಲ್ಲಾ ........!!!

- ಚುಕ್ಕಿ

01 Mar 2017, 01:03 pm

ಕ್ಷಮಿಸಿ ಬಿಡು ಗೆಳತಿ..

ಕ್ಷಮಿಸಿ ಬಿಡು ಗೆಳತಿ ನನ್ನನ್ನು
ಆ ದಿನ ನಿನ್ನ ಜೋತೆಯಲ್ಲಿ ನಗು-ನಗುತ
ಕೈ ಹಿಡಿದು ಇದೆ ದಾರಿಯಲ್ಲಿ
ನಡೆದು ಬಂದೆ..
ಈ ದಿನ ನೀನಿಲ್ಲದೇ ಒಂಟಿಯಾಗಿ
ನಿನ್ನ ನೆನಪುಗಳ ಮೆಲಕು ಹಾಕುತ
ಈ ದಾರಿಯಲ್ಲಿ ಬರಲಾಗುತ್ತಿಲ್ಲ ನನಗೆ
ಮತ್ತೆಂದೂ ತಿರುಗಿ ನೋಡದ ದಾರಿಯ
ಕಡೆ
ಸಾಗಿದೆ ನನ್ನ ಪಯಣ..

- RAjESH D

28 Feb 2017, 11:24 pm

ಕುಸುಮ

ಕುಸುಮವೇ ನೀನ್ಯಾರಿಗೆ ಸ್ವಂತ
ನಿನಗೆ ನೀರು ಹಾಕಿ ಬೆಳೆಸಿದ ಮಾಲೀಕನಿಗಾ ?

ನಿನ್ನ ಜನನಕ್ಕೆ ಕಾರಣವಾದ ಗಿಡಕ್ಕಾ ?
ನಿನ್ನಲ್ಲಿ ಮಕರಂದ ಕುಡಿದು ಹೋದ ದುoಬಿಗಾ ?

ನಿನ್ನನ್ನು ಕಿತ್ತುವ ಕೈಯಿಗಾ ?
ನೀ ಸೇರುವ ದೇವರ ಪಾದಕ್ಕಾ ?

ನಿನ್ನ ಮುಡಿಯುವ ಕನ್ಯೆಯ ಜಡೆಗಾ ?
ನಿನ್ನ ಮೇಲೆ ಕವನ ಬರೆದ ನನಗಾ ?

ಕೊನೆಗೂ ಬಾಡಿಹೋದ ನಿನ್ನನ್ನು
ತನ್ನಲ್ಲಿರಿಸುವ ಭೂ ತಾಯಿಯ ಮಡಿಲಿಗಾ ?

- ಚುಕ್ಕಿ

28 Feb 2017, 06:59 pm

ತಂಗಾಳಿ

ಮೊದಲ ಮಳೆಯಲಿ ಪ್ರೀತಿ ನೆನೆಯಿತು
ಎದೆಯೊಳಗೆ ಹೊಸ ಕನಸು ಚಿಗುರಿತು..
ಬಚ್ಚಿಟ್ಟ ಭಾವನೆಗಳ ಜೊತೆ

- ನಮಿತ ಗಟ್ಟಿ

28 Feb 2017, 05:54 pm

ಭೂಮಿಯ ತಾಪ

ಎಲೇ ಮಾನವ ಹೆಚ್ಚಾಯಿತು ನಿನ್ನ ಪಾಪ,
ಪ್ರಾಣಿಗಳ ಮೇಲೇಕೆ ನಿನ್ನ ಕೋಪ,
ಗಿಡಮರ ನೆಲಕ್ಕುರುಳಿಸುವೆ ನಿನಗಿಲ್ಲ ಪಶ್ಚಾತ್ತಾಪ,
ಪರಿಣಾಮ ನೋಡು ಏರುತಿದೆ ಭೂಮಿಯ ತಾಪ,
ಇದು ಆ ಪ್ರಕೃತಿ ದೇವಿ ನೀಡಿದ ಶಾಪ...ಶಾಪ.


ಗಿಡಮರಗಳ ಬೆಳೆಸಿ,
ಪ್ರಾಣಿ ಪಕ್ಷಿಗಳ ಉಳಿಸಿ.

- ರವೀಂದ್ರಬಾಪೂರ(GNL)

28 Feb 2017, 01:01 pm

ಅಮ್ಮ

ನನ್ನ ಬದುಕಿನ ದೇವತೆ
ಕೊಡುವಳು ಪ್ರೀತಿ ವಾತ್ಸಲ್ಯ ಮಮತೆ
ಹೊತ್ತಳು ನನ್ನ ನವ ಮಾಸ
ಇತ್ತಳು ಸಂಪೂರ್ಣ ಸುರಕ್ಷತೆಯ ವಾಸ
ಸಹಿಸಿದಳು ನೋವಿನ ಕಡಲ
ಗ್ರಹಿಸಿದಳು ಕೋಡುವೆಂದು ಒಡಲ
ಕೊಟ್ಟಳು ತನ್ನ ಪೂರ್ಣ ಮನಸ
ಬಿಟ್ಟಳು ತನ್ನ ಹಾದಿಯ ಕನಸ
ಹಿಡಿದಳು ಕೈ ಯ ಪ್ರತಿ ಹೆಜ್ಜೆಯಲಿ
ನುಡಿದಳು ದೈರ್ಯ ಪ್ರತಿ ನಡೆಯಲ್ಲಿ
ತಿದ್ದಿದಳು ನನ್ನ ಪ್ರತಿ ನುಡಿಯಲ್ಲಿ
ವಿತ್ತಳು ಬೆಂಬಲವ ಪ್ರತಿ ಕ್ಷಣದಲ್ಲಿ
ಸಾಧ್ಯ ವಿಲ್ಲ ನನ್ನಿಂದಾಳೆಯಲಾ ಪ್ರೇಮವ
ಸವಿಯುವೆನಾ ಮುಗ್ದತೆಯ ಮಾಧುರ್ಯವ

- ಅರುಣ್. ಕೆ. ಗಟ್ಟಿ. ಕಾಪಿಕಾಡ್

28 Feb 2017, 12:55 pm

ನನ್ನವರು ಯಾರು

ಕತ್ತಲಲ್ಲಿ ಉದಿಸಿ ಬೆತ್ತಲಾಗಿ ಬಂದೆ
ಬೆಳಕ ಅರಸಿ ನೀ ಈ ಜಗಕ್ಕೆ!!
ಸುತ್ತಲಲ್ಲಿ‌ ನಿಂತಿಹರು ನೀ ಅರಿಯದ ಜನರು
ಬಗೆ ಬಗೆಯ ಭಂಗಿಯಲಿ ನಿನ್ನ ನೋಡುತ!!

ನನ್ನವರು ಯಾರೆಂದು ಹುಡುಕುವ ಬರದಲ್ಲಿ
ಕಣ್ಣ ಹೊರಳಿಸಿ ಅಳಲು ನೀನು ನೊಂದು!!
ಮೃದುವಾದ ಸ್ಪರ್ಶವು ಬೆಚ್ಚಗಿನ ಹಿತ ನೀಡಿ
ಸುತ್ತುವರಿಯಿತು ನಿನ್ನ ಹಿತವ ಬಯಸಿ!!

ಕಣ್ಣ ತೆರೆದು ನೋಡಲು ಕ್ಷಣವನ್ನೂ ನೀಡದೇ
ಅದರದಲ್ಲಿ ಚಿಮ್ಮಿತ್ತು ಅಮೃತ ಪಾನ!!
ಕಿವಿಗಳಿಗೆ ಕೇಳಿದ್ದು ಜೋಗುಳದ ಹಾಗಿತ್ತು
ನಿದ್ರಿಸಲು ನೀನು ಸಮಾಧಾನ!!

ಬೆಚ್ಚಿ ಎಚ್ಚರಗೊಂಡು ಮತ್ತೆ ಅಳುವುದ ಕಂಡು
ಬಿಸಿ ಉಸಿರು ಸ್ಪರ್ಶಸಿತು ನಿನ್ನ ತನುವ!!
ಮಮತೆಯ ಕರವೊಂದು ಎತ್ತಿ ಮುದ್ದಿಸಿ ನಿನ್ನ
ಎದೆಗೊತ್ತಿ ಹೇಳಿತು ಕಂದಾ ಎಂದು!!

- ಪಿ.ಜಿ.ಜ್ಯೋತಿ

28 Feb 2017, 03:20 am

ಮನಸ್ಸು

ಬೆಳಗಿನ ಇಬ್ಬನಿಯಂತೆ ಮನಸ್ಸು...
ಅರಳಿದ ತಾವರೆಯಂತೆ ಸೂಗಸು...
ಕಷ್ಟ ಎಂದಾಗ ಮಂಜಿನಂತೆ ಕರಗುವುದೂ...
ಖಷಿಯಾದಾಗ ಚಿಟ್ಟೆಯಂತೆ ಜಿಗಿಯುವುದು...

ಹರೆಯದ ವಯಸ್ಸಿನಲ್ಲಿ ನೂರೆಂಟು ಕನಸು...
ಕನಸಿನ ತುಂಬೆಲ್ಲಾ ನಿನ್ನದೆ ಸೊಗಸು...
ಕಂಡ ಕನಸೆಲ್ಲಾ ನನಸಾಗಲಿ ಮುಗ್ಧ ಮನಸ್ಸಿಗೆ ಎಂದು ನೋವಾಗದಿರಲಿ...

- chinmayi

27 Feb 2017, 02:34 pm

ಒಂಟಿ ಹಂಸ

ಕೊಳಕು ಕೊಳದಲಿ ಬಿಳಿಯ ಹಂಸ
ಮನೆಯ ಮಾಡಿ ಅದರ ವಾಸ!!
ಬಿದಿರ ಬುಡದಲಿ ಕೆದರಿದ ಗುಳಿ
ಮೊಟ್ಟೆ ಇಹುದು ಅದರ ವಂಶ!!

ಜೊತೆಗೆ ನಡೆದ ಪತಿಯ ಮರಣದಿ
ನೊಂದು ಬದುಕಿದೆ ಒಂಟಿತನದಲಿ!!
ಗರ್ಭದಿ ಇರುವ ಕುಡಿಯ ಸಲಹಲು
ಅರಸಿ ಬಂದಿತು ಪುಟ್ಟ ಆಶ್ರಯ!!

ಎಲ್ಲ ಕೊಳದಲೂ ಜೋಡಿ ಹಂಸವ
ಕಂಡು ಮರುಗಿತು ನೆನೆದು ಇನಿಯನ!!
ದೂರ ಹೋಗುವ ಮನಸು ಮಾಡಿ
ಹುಡುಕಿ ಬಂದಿದೆ ಕೊಳಕು ಕೊಳವನು!!

ಕೊಳಕು ಕೊಳದಲಿ ಈಜುತ ಆಡುತ
ಒಂಟಿತನದಲಿ ಸುಖವ ಹುಡುಕಿದೆ!!
ಕರುಳ ಕುಡಿಗಳ ಹೊಣೆಯ ಹೊತ್ತು
ಬದುಕುತಿರುವುದು ಅರಸಿ ತುತ್ತು!!

- ಪಿ.ಜಿ.ಜ್ಯೋತಿ

27 Feb 2017, 10:50 am

ಮೊದಲ ಮಳೆ

ತಂಪಿನ ಗಾಳಿಯು ಬೀಸುತ ಇರಲು
ಕಪ್ಪಿನ ಮೋಡವ ಒಯ್ಯುತ ಬರಲು
ಬೆಳ್ಳಿಯ ಗೆರೆಗಳು ನಭದಲಿ ಮಿನುಗಲು
ಗುಡುಗಿನ ಸದ್ದದು ಕೆಳುತ ಇರಲು
ಉದುರಿತು ಹನಿಯದು ಮುತ್ತಿನ ಹರಳು
ಹರಿಯಿತು ಭೂ ತಾಯಿಯ ಒಡಲು
ಮಳೆಯದು ನಿಂತಿತು ಕೊಡೆಯನು ಹಿಡಿಯಲು

- ಅರುಣ್. ಕೆ. ಗಟ್ಟಿ. ಕಾಪಿಕಾಡ್

27 Feb 2017, 10:05 am