ಬಿಸಿಲಿಗೆ ಬಾಡದ ಹೂವಿಲ್ಲ...
ಹೃದಯ ಗೆಲ್ಲದ ಪ್ರೀತಿ ಇಲ್ಲ....
ಆಸೆಗೆ ಮೀರಿದ ಕನಸಿಲ್ಲ...
ದೈವನಿಲ್ಲದೆ ಜಗತ್ತಿಲ್ಲ...
ಸೂಯ್ಯನಿಲ್ಲದೆ ಹಗಲಿಲ್ಲ..... ಚಂದ್ರನಿಲ್ಲದೆ
ಇರುಳಿಲ್ಲ...
ಭೂಮಿ ಇಲ್ಲದೆ ಫಲವಿಲ್ಲ.....
ಬಡಿತವಿಲ್ಲದೆ ಉಸಿರಿಲ್ಲ...
ತಾಯಿ ಇಲ್ಲದೆ ಮಗುವಿಲ್ಲ...
ಗುರುವಿಲ್ಲದ ಶಿಶ್ಯನಿಲ್ಲ....
ಸಾವಿಲ್ಲದ ಮನುಕುಲವಿಲ್ಲ...
ಹಾಗೇ..................................ಅರಿಯದೆ ಬರುವ ನಿಶ್ಕಲ್ಮಶವಾದ ಸ್ನೇಹಕ್ಕೆ ಎಂದೇಂದಿಗೂ ಸಾವಿಲ್ಲ.........................
ಅಪ್ಪನಂತೆ ಪೋಲಿ ಎನುತಾ ಸೊಂಟ ಮುಂದಾಗಿಸುವಾಗ ಹೆಣ್ತನದ ಭರಪೂರ ಸುಖ ಮೊಗದಲ್ಲಿ ಅಳಿಸಲಾಗದ ಕಿರು ನಗು ಹುಟ್ಟಿ ಬಿಡುತ್ತಿತ್ತು
ಸೀಮಂತದ ಶಾಸ್ತ್ರಕ್ಕಿಂತ ಹೆಚ್ಚು ಅವಳ ಬಯಕೆ ನಿಂತದ್ದು ಅವನು ಹೊಟ್ಟೆಯೊಳಗಿನ ತದ್ರೂಪಿಯೊಂದಿಗೆ ಸಂಭಾಷಣೆ ನಡೆಸಿದಾಗಲೆಲ್ಲ ನಿಲ್ಲುತ್ತಿತ್ತು
ಎಲ್ಲಾ ಪ್ರೇಮಿಗಳಂತೆ ಅವಳೂ ಹೇಳಿದ್ದಳು ನಿನಗಾಗಿ ಸಾಯಲು ಸಿದ್ದ ಅಂತೆಯೇ ತಯಾರು ಇದ್ದಲೂ ಕೂಡ
ಹೆರಲು ಹೊರಟವಳು ಜೀವ ಹೋಗಬಹುದೆಂಬ ಸಂಶಯಕ್ಕಿಂತ ಹೊಸ ಜೀವ ಬರುವ ಖುಷಿಯನ್ನೇ ಹೆಚ್ಚು ಆಸ್ವಾದಿಸುತ್ತಿದ್ದಳು
ಪಕ್ಕದಲ್ಲಿ ಇರುವ ಹೊಸ ಅಳು ಕೇಳಿದಾಗ ಬಂದ ನಗು ಅವಳಿಗೆ ಹಿಂದೆಂದೂ ಮೂಡದ್ದೇ ಆಗಿತ್ತು...
ಅವಳ ಕಂಗಳ ಕ್ಷಣದ ನೋಟಕೆ ದಿನವೆಲ್ಲ ಕಾಯುವ ಹಂಬಲ....!
ಆ ತುಟಿಗಳು ಚೆಲ್ಲುವ ಮುಗುಳುನಗೆಗೆ ಪ್ರತಿದಿನವೂ ಸೋಲುವ ಹಂಬಲ....!
ರಾಶಿ ಕನಸುಗಳ ಹೃದಯದ ಪೆಟ್ಟಿಗೆಗೆ ಬೀಗ ಅವಳು....!
ಪ್ರತಿ ಕನಸಿಗೂ ಪ್ರೀತಿಯ ಅಮೃತವ ಸೇರಿಸಿದವಳು....!
ಮಾತನಾಡದೆಯೇ ಮಧುರ ಭಾವನೆಗಳು ಮನದುಂಬಿ ಮೂಡಿರಲು, ಓರೆ ನೋಟ ಬೀರಿ ನಗುಮೊಗದಿ ಎಲ್ಲ ಅರಿತವಳು....!
ನೋಟಗಳು ಸೇರಿದಾಗ ಎದೆಯಲಿ ಹೂವಿನ ನಂದನ....!
ಮನಗಳು ಸೇರಿದಾಗ ಹೃದಯದಲಿ ಪ್ರೀತಿಯ
ಬಂಧನ....!
ಮೊದಲ ಪ್ರೇಮ, ಮೃದು ಮನಸುಗಳ ಸುಂದರ ಮಿಲನ....!
ರಾಜ್.S.
ಅದೇನೋ ಕಾತರ ಕಣೇ ನನಗೆ,
ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು.
ಅದೇನೋ ಅವಸರ ನನಗೆ,
ಆದಷ್ಟು ಬೇಗನೆ ನಿನ್ನ ಕಾಣಲು.
ಬರೀ ಕಣ್ಣನೋಟದಿಂದ ನೀನಿಟ್ಟೆ,
ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ
ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,
ನಾ ಮೌನದಿ ಕರಗಲೇ ನಿನ್ನ ತೋಳಲಿ ?
ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,
ನಿನ್ನ ನಗುವ ನೆನಪಿಸುತಿದೆ ಮನಸು.
ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,
ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು.
ಇದು ಪ್ರೀತಿಯೆನ್ನದೇ ಮತ್ತೇನೆಂದು ಹೇಳಲಿ,
ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,
ಒಮ್ಮೆ ಕೃಪೆ ತೋರು ಬಾ ಚೆಲುವೆ ನನ್ನಲಿ,
ಕನಸಲೂ ಕನಸಾಗಿ ಉಳಿಯದೇ, ನನಸಾಗಿ ಬಾರೇ.
ನಿನಗೆಂದೆ ಕಾದಿದೆ ಬೆಚ್ಚನೆಯ ಅಪ್ಪುಗೆ, ಕೃಪೆತೋರೆ.