ನಿನ್ನ ಮೇಲೆ ನನಗೆ ಅಸಂಖ್ಯಾತ
ರೂಪಗಳಲ್ಲಿ, ಅಸಂಖ್ಯಾತ ಬಾರಿ
ಪ್ರೀತಿ ಮೂಡಿದೆ...
ಹುಚ್ಚು ಕನಸುಗಳಲ್ಲಿ ಅವಳ
ಬೆರಳುಗಳು ನನ್ನ ಕೂದಲನ್ನು
ಮೃದುವಾಗಿ ಒರಟುತ್ತಾಳೆ..,
ನನ್ನ ತಲೆ ಅವಳ ಮಡಿಲ ಸ್ವರ್ಶಿಸಿದೆ
ಮಾತನಾಡದ ಪದಗಳ ಸಂಕಟ
ಅವಳ ಸ್ವರ್ಶಕ್ಕೆ ಸಿಡಿಯುತ್ತಿದೇ
ಹೀಗೆ ಏನೇನೋ ಅವಳೊಂದಿಗೆ
ಪ್ರಾಸಬದ್ದ ಕನಸುಗಳನ್ನು
ಹೊಂದಿರುವೆ...
ಎಮ್.ಎಸ್.ಭೋವಿ...✍️
ಮಣಿಪುರದ ಅರಸ ಮಣಿಕಂಠ ತುಂಬಾ ಬುದ್ಧಿವಂತ
ಮತ್ತು ಸತ್ಯವಂತ ಆಗಿದ್ದನು.ಅವನು ವಾಸುದೇವ ಕೃಷ್ಣನ ಪರಮಭಕ್ತ ನಾಗುವುದರ ಜೊತೆ ರವಿ ಅಸ್ತ ಕಾಲದಲ್ಲಿ ಸಂಧ್ಯಾವಂದನೆ ಮಾಡುವುದ ಮರೆಯುತ್ತಿರಲಿಲ್ಲ.ಅವನ ಪತ್ನಿ ಭಾರ್ಗವಿದೇವಿ ತುಂಬಾ ಜಾಣೆ ಮತ್ತು ರಾಧಾ ಕೃಷ್ಣರ ಪರಮ ಭಕ್ತ ಆಗಿದ್ದಳು. ಅವಳು ಯಾವಾಗಲೂ ಶಂಕರನ ಧ್ಯಾನದಲ್ಲಿ ಶಿವ ಶಿವ ಎನ್ನುತ್ತಿದ್ದಳು. ಒಂದು ದಿವಸ ಒಬ್ಬ ವಯಸ್ಸಾದ ಮುದುಕಿ ಅವರ ಅರಮನೆ ಹತ್ತಿರ ಬಂದಳು .
ಮತ್ತು ತಾಯಿ ಭವತಿ ಭಿಕ್ಷಾಂ ದೇಹಿ ಎಂದಳು
ಆಗಿ ರಾಣಿ ನಿನಗೆ ಏನು ಬೇಕು ಅಂದಳು .ಆಗ ಆಕೆ ನಿನ್ನ ಸಂಪತ್ತು ಎಂದಳು.ಆಗ ರಾಣಿ ಅರೆ ತಾಯಿ ಇದೆಲ್ಲ ನಿನ್ನದೇ ನನಗೇಕೆ ಕೇಳುವೆ ಏನಲಾಗಿ ಆ ಮುದುಕಿ ನಿಜ ರೂಪದಲ್ಲಿ ದೇವತೆ ಆಗಿದ್ದಳು.ನಂತರ ಆ ದೇವತೆ ಕರುಣಭಾವದಿಂದ ಅವಳನ್ನು ಅಪ್ಪುಗೆಯ ಅರಸಿ ನಿಂಗೆ ಏನು ವರ ಬೇಕು ಎಂದು ಕೇಳಿದಳು.ನೀನೇ ಸಾಕು ನಿನ್ನ.ದರುಷನವೆ ಸಾಕು ತಾಯಿ ಎನಲು .ಅವಳ ಕೈಗೆ ಮಾಗುವನ್ನಿತ್ತು ತಗೋ ಇದುವೇ ನಿನಗೆ ನನ್ನ ಪ್ರಸಾದ ವೆಂದು ಮಾಯವಾದಳು.
ಪ್ರೀತಿ ಬಂಧ ಬರೆಯಲಿಲ್ಲ ಭಗವಂತ ಹಣೆಯಲಿ..
ಸ್ನೇಹದ ನಡುವೆಯೂ ಬಿರುಸು ಮೂಡಿದೆ ಯಾಕಿಲ್ಲಿ..??
ನೀ ಬಂದುದೆ ಅದೃಷ್ಟವೆಂದು ತಿಳಿದಿದ್ದೆ ಇಷ್ಟು ದಿನ..
ನತದೃಷ್ಟ ಬದುಕು ನನ್ನದು, ನೀನು ಕೂಡ ಜೊತೆಯಗಲಿಲ್ಲ ಹೆಚ್ಚು ದಿನ...
ಹೇ ಸಮಯವೇ ಕೆಲಕಾಲ ನಿಂತುಬಿಡು..
ಮರಳಿ ಕಳೆದ ಸಮಯವ ತಂದುಕೊಡು..
ನೆನ್ನೆ ಇದ್ದ ಸಂತೋಷ ಇಂದಿಲ್ಲ..
ಬರಿ ಅಪಾರ್ಥಗಳ ನಡುವೆ ಬಂಧ ಮುಗಿಯಿತಲ್ಲ...
ಕಳೆದುಕೊಳ್ಳುವುದಾದರೆ ಯಾಕೆ ಬೇಕಿತ್ತು ನಿನ್ನ ಬರುವಿಕೆ..
ಹೇಗೋ ಇದ್ದೆ ನಾ ಕವನ ಬರೆದುಕೊಂಡು ಏಕಾಂಗಿಯಾಗೆ...
ಖುಷಿಯನ್ನು ಹಂಚಿ ದೂರ ಹೋದೆ ನೀನು..
ದುಃಖವು ಹೆಚ್ಚಾಗಿ ಶಪಿಸಿಕೊಳ್ಳುತ್ತಿರುವೆ ನನ್ನನ್ನೆ ನಾನು...
ಅವಳು ಎನ್ನಾ ಪ್ರೀತಿಯು ಜೋಳಿಗೆಯ ಹೊಕ್ಕವಳು;
ನನ್ನ ಏಕಾಂಗಿಯ ಪಯಣಕ್ಕೆ ಮಂಗಳ ಹಾಡಿದವಳು;
ನನ್ನ ದುಃಖಕ್ಕೆ ನಗುವಾದವಳು;
ನನ್ನ ಭಾವ ಜೋಕಾಲಿಯಲ್ಲಿ ಆಡುವವಳು;
ನನ್ನ ಕನಸುಗಳಿಗೆ ನಾಯಕಿ ಆದವಳು;
ಮೂಗುತಿಯ ಸುಂದರೀ;
ಮುಂಗುರುಳ ಬೆಡಗಿ;
ಗುಳಿಗೆನ್ನೆಯ ಒಡತಿ;
ಕೆಂದುಟಿಯ ಚಲುವೆ
ಕಾಡಿಗೆ ಕಣ್ಣಿನ ಅರಸಿ;
ಚಲುವೆ ಯಾಕೀ ಮೌನ ಚಳವಳಿ;
ಮಾತಾಡೇ ನನ್ನ ಬಳಿ;
ಆ ಮಾತುಗಳಿಂದ ಅಂದರದಿ ಹೆಪ್ಪುಗಟ್ಟಿದ ನೆನಪುಗಳೆಲ್ಲವೂ...
ಮರುಚಲಿಸುವುದು ಎಂದು ನಾ ಕಾಯುತ್ತಿರುವೆ...
ನನಗರಿಯದೇ ನನ್ನ ನಾ ಮರೆತು
ನೀ ಆಲಿಸಿ ಸ್ವೀಕರಿಸು
ಈ ಪ್ರೀತಿಯು ಜಾಹೀರಾತು
ಭಾವಗಳು ವಲಸೆ ಬಂದಿದೆ ,
ನಿನ್ನ ಮನದಲ್ಲಿ ನಿಲ್ಲುವ ಆಸೆ ಹೂಡಿದೆ;
ಕನಸುಗಳೇ ಅಕ್ಕರೆಯ ಸಕ್ಕರೆಯಾಗಿದೆ;
ನನಸಾಗಲು ನಿನ್ನೆದುರು ಕೈ ಚಾಚಿ ನಿಂತಿದೆ....
ಅಂದದ ನಗುವಿಗೆ ಬೆರಗಾಗಿ ನಿಂದೆನು;
ಪ್ರೀತಿಯ ದಾರಿ ಹಿಡಿದು ನಿನ್ನ ಹಿಂದೆಯೇ ಬಂದನು; ಮುಂಗುರುಳ ಆಟಕ್ಕೆ,
ಮುಗುಳ್ನಗೆಯ ತೋಟಕೆ,
ನಿನ್ನಯ ಓರೆಯ ನೋಟಕ್ಕೆ,
ನಾ ಬಿದ್ದ ನಲ್ಲೆ 'ಪ್ರೀತಿಯ'
ಜೋಟ್ ಆಟಕ್ಕೆ
ಚಂದಿರನ ತಂಗಿ, ತಂಗಾಳಿಯೇ...... ಬಾ
ಈ ಹೃದಯವ ತಂಪಾಗಿಸು ಪ್ರೀತಿಯ ಕಂಪಿನಿಂದ
ಕಾದಿರುವೆ ನಾ ನಿನಗಾಗಿ...
ಎಷ್ಟು ಮಾತನಾಡಿದರೂ ಮಾತು ಮುಗಿಯುತ್ತಿಲ್ಲ ನಿನ್ನೊಂದಿಗೆ,
ನಾ ಸೋತಿರುವೆ ನೀ ತೋರುವ ಪ್ರೀತಿ ಕಾಳಜಿಗೆ,
ಕಾಡಬೇಡ ಗೆಳೆಯ ನೆನಪಾಗೆ....
ಯಾವುದರಲ್ಲೂ ಗಮನವಿಲ್ಲ ನನಗೆ...
ಪ್ರತಿಕ್ಷಣ ನಿನ್ನ ಗುಂಗಲ್ಲೆ ನಾನು,
ಈಗೀಗ ನನ್ನೊಳಗೆ ನಗುವುದನ್ನು ಕಲಿತಿರುವೆನು..
ಮನದೊಳಗೆ ನಿನ್ನೊಂದಿಗೆ ಮತನಾಡುತ್ತಿರುವೆನು..
ಮಗುವಾಗಿ ನಿನ್ನ ಮಡಿಲಲಿ ಮಲಗುವಾಸೆ ನನಗೆ
ನೀ ನನ್ನ ಸಂತೈಸುವಾಗ ಖುಷಿಯಲೆ ನಿನ್ನ ಸನಿಹವಾಗುವಾಸೆ....
ಮಲಗಿದ್ದೆ ನಾ ಮದ್ಯಾಹ್ನ...!
ನೀ ಜೊತೆ ಇದೀಯಾ ಅನ್ನೋ
ಬ್ರಮೆಯಲಿ ತಟ್ಟನೆ ಎದ್ದೆ
ಖುಷಿಯಾಗಿ...
ಮೆಲ್ಲನೆ ಕಣ್ಣೋರೆಸಿ ಸಂರ್ಪೂಣ
ಎಚ್ಚರವಾಗಲು...
ಖಾಲಿ ಇದ್ದ ಆ ನಿನ್ನ ಜಾಗ
ಕಿತ್ತುಕೊಂಡಿತು ನನ್ನ
ಮುಗುಳುನಗೆಯ...
ಬೇಜಾರಾಗಿ ಪುನಃ
ಮಲಗಬೇಕೆಂದರು ಬಿಡದೆ
ಕಾಡಿದೆ..... ಗೆಳತಿ ನಿನ್ನ
ನೆನಪು.....!!
ಎಮ್.ಎಸ್.ಭೋವಿ....✍️
ಎಲ್ಲರಿಗೂ ಖುಷಿಯನ್ನ ಬಯಸ್ತಿನಿ ನಾನು..
ಕಷ್ಟಗಳಿದ್ರು ಕಣ್ಣೀರಿಗೂ ಅಂಜಿಕೆ ಆಗುವಷ್ಟು
ನಗಸ್ತಿನಿ...
ಆದ್ರು ಕೊನೆಯಲ್ಲಿ ನನ್ನನ್ನೇ ಅಳಿಸಿಬಿಡ್ತಾರೆ....
ಎಲ್ಲರ ನೋವುಗಳಿಗೂ ಸ್ವಂದಿಸ್ತಿನಿ ನಾನು..
ಸಂಭಂದ ಇಲ್ದೇ ಇದ್ರು ಸಮಯಕ್ಕು
ತಲೆಕೊಡದೆ ಸಮಧಾನಿಸ್ತಿನಿ...
ಆದ್ರು ಕೊನೆಯಲ್ಲಿ ನನ್ನ ಸಮಯ ಕೆಲವರಿಗೆ
ಕಾಲಹರಣವಾಗಿ ಬಿಡುತ್ತೆ....
ಯಾರೆ ಆಗ್ಲಿ,
ಕೊಟ್ಟ ಮರ್ಯಾದೆಯನ್ನ ಕಾಪಾಡಿಕೊಳ್ಳಬೇಕು..
ಸಿಕ್ಕ ವ್ಯಕ್ತಿಯನ್ನ ಉಳಿಸಿಕೊಳ್ಳಬೇಕು....
ಎಮ್.ಎಸ್.ಭೋವಿ...✍️