Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ ಒಂದು

ಪ್ರೀತಿ ಒಂದು ಅದ್ಭುತ
ಪ್ರೇಮಿಗಳ ಮನದಲ್ಲಿ ಶಾಶ್ವತ
ಇಂದೇ ನಿಂತರು ನನ್ನ ಎದೆಬಡಿತ
ಪ್ರೀತಿಯೊಂದಿಗೆ ಆತ್ಮವಾಗಿ ಸುತ್ತುವೆ
ನಾ ನಿನ್ನ ಶಾಶ್ವತ...!

- Rahul manoj v r

27 Feb 2017, 12:40 am

ಹಲ್ಲಿ

ಗೋಡೆ ಎಂಬ ಅರಮನೆಯಲ್ಲಿ
ವಾಸವಾಗಿತ್ತು ಹಲ್ಲಿ!!
ಓಡುತಿತ್ತು ಅಲ್ಲಿ ಇಲ್ಲಿ
ಬೇಟೆಯನ್ನು ಹುಡಿಕುತಲಿ!!

ನಮ್ಮ ಮನೆಯ ಚಾವಣಿಯಲ್ಲಿ
ಜೋತು ನಡೆವ ಕಾಯಕವು!!
ನೋಡುತಿರಲು ನಾನು ಅದನೇ
ಬಿದ್ದರೆನ್ನುವ ಭಯವು!!

ನೀಳವಾದ ದೇಹಕ್ಕೆ ಒಂದು
ನೀಳವಾದ ಬಾಲದ ಬೆಸುಗೆ!!
ಬಳುಕಿ ನಡೆವ ಮೈಯ ಮಾಟ
ಕಂಡು ನನ್ನಲೇಕೆ ಈ ನಡುಕ!!

ಎರಡು ಕೈ ಎರಡು ಕಾಲು
ಐದೈದು ಬೆರಳು ಸಮ ಪಾಲು!!
ನೀಳವಾದ ನಾಲಿಗೆ ಒಡ್ಡಿ
ಬೇಟೆಯಾಡ ಹೊರಟಿತು ನುಗ್ಗಿ!!

- ಪಿ.ಜಿ.ಜ್ಯೋತಿ

26 Feb 2017, 11:32 pm

ಮರುಭೂಮಿ ಕಥೆ

ನಾ ನೋಡಿದೆ ನೊಡಿದೆ
ಕುರುಚಲು ಗಿಡವ,
ಅದು ಕಾಡಿತು ಕಾಡಿತು
ಎನ್ ಮೌನದ ಮನವ.

ಎನ ಕಾಡ ಬೇಡಿತು ತಿಂದೆಯ
ಎನ ಫಲವ,
ನಾ ಹೇಳಿದೆ ಹೇಳಿದೆ
ಮರ ಭೂಮಿಯ ಕಥೆಯ.

ಹಸಿರು ಗಾಳಿಯು
ತಂಪು ವನದಲಿ,
ಪಸರ ಬೇಡುವೆ
ನಿನ್ನನ್ನು.

ನಗೆಯ ತಂದಿತು
ಪಚ್ಚ ವನಕೆ, ಅಳುವು ತಂದಿತು ನನ್ನ ಮನಕೆ.

ಏಕೆಂದರೆ?

ST

- ST

26 Feb 2017, 08:09 pm

ತಂಗಾಳಿ ಬೀಸುತ್ತಿರಲು..

ನೀ ಬೀಸಿ ಬರುತ್ತಿರಲು ಮರಗಳು ನಮಿಸುತಿವೆ
ನಿನ್ನ ಬರುವಿಕೆಗಾಗಿ ಹಲವು ಮನ ಕಾಯುತಿವೆ
ಬರುವೆ ಯಾವಾಗ ಎಂದು ಮನದಲ್ಲೇ ತವಕಿಸಿವೆ
ಹಣ್ಣಾದ ಎಲೆಗಳು ಉದುರಲು ಕಾಯುತಿವೆ||

ನೀ ಹಸಿರೆಲೆ ಮೇಲೆ ಹಾಯ್ದು ಬರುತಿರಲು
ಮುಖದಲಿ ಮಂದಹಾಸ ಬೀರುತಿರಲು
ಕಳೆದ ನೆನಪುಗಳು ಹಾಗೇ ಸುಳಿಯುತಿರಲು
ಮನದಲಿ ಸಂತಸ ಗರಿಗೆದರುತಿರಲು..

- ನಮಿತ ಗಟ್ಟಿ

26 Feb 2017, 08:01 pm

ತಂಪುಗಾಳಿ

ಗಾಳಿ ಬಿಸಲಿ ಮೋಡ ಸುರಿಯಲಿ
ಮಳೆಯು ಮೂಡಿದು ಬಂದಿದು ಬಂದಿತು,
ಹಸಿರು ಗಾಳಿಯು ತಂಪು ಧರೆಯಿತು
ಪಚ್ಚ ಎಲೆಗಳು ಹೊಳೆಯಲಿ.

ಸೂರ್ಯ ಮೂಡಲಿ ಜಗವ ಬೆಳಗಲಿ
ಬೆಳಗು ತಾನದಿ ಹೊಳೆಯಲಿ,
ಕಿರಣ ಕಾಂತಿಯು ಮೂಡಿಬಂದಿತು
ಸೂರ್ಯ ಕಾಂತಿಯು ತಿರುಗಿತು.

ಜನದಿ ಮನಗಳ ದನಿಯ ಕೂಗು
ಕೇಳಿ ಬಂದಿತು ಗಾಳಿಲಿ,
ಒಮ್ಮೆ ತಿರುಗಿ ನೋಡಿದಾಗ, ಅಲ್ಲಿ ನಗು
ಬಳಿಯ ಬಂದಿತು ಮೊಗದಲಿ.

ರೈತ ನೆತ್ತರ ಬಿಜವನೊತ್ತು
ಸಾಗಿ ಸಾಗಿ ನಡೆದು ಬಂದನು ಮುಂದೆ,
ಎತ್ತು ಬಂಡಿಯನು ಹೊಡೆದುಕೊಂಡು, ಎತ್ತ
ನೊಡದೆ ಬಂದಿತು ಮುಂದೆ ಮುಂದಗೆ.

ನಾಗರಾಜ್ ಎಸ್ ಟಿ
ಹೊಸದಡಗೂರು (ಪೊ)
ಮೊಳಕಾಲ್ಮೂರು (ತಾ)
ಚಿತ್ರದುರ್ಗ (ಜಿಲ್ಲೆ)
577540

- ST

26 Feb 2017, 07:50 pm

ಕತ್ತಲೆಗೆ ಕಂಡ ಕಂಬನಿ

ಕತ್ತಲ ದಾರಿ ಬಲುದೂರ
ಒಬ್ಬಂಟಿಯಾಗಿ ನಡೆಯಲಂಜಿ
ಹಚ್ಚಿದೆ ಒಂದು ಪ್ರೀತಿಯ ಹಣತೆ

ದೃಷ್ಟಿ ಇರದವರಿಗೆ ಹಗಲೇನು ಇರುಳೇನು
ಎಂದೆನುತ ಅದು ಮಿಂಚುಹುಳುವಾಗಿ
ಹಾರಿಹೋಗಿ ಮತ್ತೆ ನಾನು ಒಬ್ಬಂಟಿ

ಈಗ ಉಳಿದಿರುವುದಿಲ್ಲಿ ಕತ್ತಲೆ ಮತ್ತು ನಾನು ಮಾತ್ರ
ಕತ್ತಲೆಗೆ ಕಂಡ ಕಂಬನಿ ಬೆಳಕಿಗೆ ಕಾಣಲಿಲ್ಲ
ಕತ್ತಲೆಯನ್ನೇ ಪ್ರೀತಿಸಲು ಆರಂಭಿಸಿರುವೆ

-- ಹಂಸಿನಿ

- ವಿಸ್ಮಯ

26 Feb 2017, 07:46 pm

ನನಗಾಗಿ

ಸಂತೋಷದಲ್ಲಿರುವ ಸಾವಿರ
ಸ್ನೆಹಿತರಿಗಿಂತ ಕಣ್ಣೀರು
ಬರದೇ ಒಂದು ಕ್ಷಣ ಕೈಯೋಡ್ಡುವ
ಒಂದು ಜೀವಿಯ ಸ್ನೆಹವಿದ್ದರೆ ಸಾಕು .

ಎಲ್ಲಾರೂ ಬಂದುಗಳೆ,ಎಲ್ಲಾರೂ
ಮಿತ್ರರೇ ಆದರೂ ಈ ಕಣ್ಣೀರಿಗೆ
ಕಾರಣಿಭೂತರದರೂ.......
ನಾನೇನ ನಿಮ್ಮ ದುಕ್ಕಕ್ಕೇ
ಕಣ್ಣೀರು ಹಾಕುವುದು ......?

ನನಗೂ ಮನಸಿದೆ ಅದಕ್ಕೂ
ನೋವಾಗುತ್ತೆ ತಿಳಿದುಕೊಳ್ಳಿ .
ನಿಮಗಾಗಿ ನಾನು ಮಾಡಿದಷ್ಟು
ನನಗೆ ಮಾಡಬೇಡಿ .......

ದಯವಿಟ್ಟು ನನ್ನ ನೋವಿಗೆ
ಕೆಲವು ಕಣ್ಣೀರ ಹನಿಗಳನ್ನು
ನನ್ನ ಕಣ್ಣಲ್ಲಿ ಉಳಿಸಿ ........!!!!

- ಚುಕ್ಕಿ

26 Feb 2017, 07:35 pm

ಜೀವನದ ಹಾದಿ ಬಲ್ಲವರಾರು..

ಜೀವನದ ಹಾದಿ ಬಲ್ಲವರಾರು
ಎಲ್ಲಗೆ ನಡೆಸುವುದೋ ಅರಿತವರಾರು
ಏರಿಳಿತದ ಯಾನಕೆ ಜೊತೆಯಾರು
ಬಾಯಾರಿದ ಹೃದಯಕೆ ಪ್ರೀತಿಯ ತಂಪೆರೆವರಾರು
ಸ್ನೇಹದ ತಂಗಾಳಿಯ ಬೀಸುವವರಾರು
ತುತ್ತಿನ ಚೀಲಕೆ ಆಶ್ರಯದಾತರಾರು
ಒಂಟಿತನವ ನೀಗಿಸುವವರಾರು
ಸಂಕಟ ಸಮಯದಲಿ ಕೈ ಹಿಡಿವವರಾರು
ಮೇಲಾರು ಕೀಳಾರು
ನಮ್ಮವರಾರು ಪರರಾರು
ಜೀವನದ ಹಾದಿ ಬಲ್ಲವರಾರು
ಹಾದಿಯ ಅಂತ್ಯವ ಕಂಡವರಾರು...

- Indushekar Chinivar

26 Feb 2017, 06:16 pm

ಕಣ್ಣೀರು

ಕಣ್ಣೀರ ಹನಿಯೂ ನಗುತ
ಕೇಳುತಿದೆ ಎಂದಿಗೂ ನಾ
ನಿನ್ನ ಸಂತೋಷದಲ್ಲಿ
ಕಾಣುವುದಿಲ್ಲವೇ ಎಂದೂ .

ನಾ ಹೇಗೆ ತಿಳಿಸಲಿ ನಿನಗೆ
ನನ್ನ ಬದುಕಿನಲ್ಲಿ ನಗು
ಕಾಮನಬಿಲ್ಲoತೆ .ಕೆಲವು
ನಿಮಿಷಗಳು ಮಾತ್ರ
ಇರುತ್ತದೇಂದು.

ಇದ್ದಷ್ಟು ಸಮಯ ಏಳು
ಬಣ್ಣಗಳನ್ನು ತೋರಿಸಿ
ಎಲ್ಲರ ಮನ ಗೇಲ್ಲುತ್ತದೇಂದು.
ಒಂದು ಬಾರೀ ಮಾಯವಾದರೆ
ಮತ್ತೆ ಸಿಗುವುದು ಕಷ್ಟವೇಂದು.

ಕಣ್ಣೀರೇ ಎಂದಿದ್ದರು ನೀನೇ
ನನ್ನ ಪ್ರಾಣ ಸ್ನೆಹಿತೆ ಎಂದಿಗೂ
ನಾ ನಿನ್ನ ಬಿಟ್ಟು ಹೋಗುವುದಿಲ್ಲ ....

- ಚುಕ್ಕಿ

26 Feb 2017, 05:36 pm

ಪರಿಚಯ

ಗೆಳೆತನದ ಸವಿರುಚಿಯ ಕಂಡೆ ನಾ
ನಿನ್ನ ಪರಿಚಯದಲ್ಲಿ ..........
ನಿನ್ನ ಅಕ್ಕರೆಗೆ ನಾನೇನು
ಕೊಡಲಾಗುತ್ತದೆ ನನ್ನ ಜೀವನದಲ್ಲಿ
ನನ್ನ ಸ್ನೆಹ ಬಿಟ್ಟರೆ...............

ನೀನು ನನ್ನ ಮೊದಲ ಸ್ನೆಹಿತನಲ್ಲ
ಆದರೂ ನನ್ನ ಜೀವನದಲ್ಲಿ
ನಿನ್ನ ಜಾಗ ಯಾರಿಂದಲು
ಪೂರ್ತಿಗೊಳಿಸಲಗುವುದೀಲ್ಲ ..

ನಿನ್ನ ಅಭಿಮಾನದ ಮಾತು
ಅದು ಮನಕೆ ಕೊಡುವ
ಸಂತೋಷದ ತುತ್ತು .........

ನಿನ್ನ ನಗೇಯಲ್ಲಿನ ಸದ್ದು
ಕೇಳುವ ಕಿವಿಗಳಿಗೆ ನವನೀತ
ಚೋರನ ಮುರಳೀಗಾನಕ್ಕಿಂತಲೂ
ಮಧುರ ಭಾವನೆ ತಂದಿರುವುದು
ಇಂದೂ ............!!!!

- ಚುಕ್ಕಿ

26 Feb 2017, 05:21 pm