ಕಳೆದ ದಿನಗಳ ಮೆಲಕು ಹಾಕುತ ನನ್ನ ನಾ ಹುಡುಕುತಿರುವೆ....!
ಜೀವನದ ಅತೀ ಮುಖ್ಯ ಘಟ್ಟದಿ ನನ್ನನೇ ನಾ ಮರೆತಿರುವೆ....!
ಕುಂದಿದ ಆತ್ಮಸ್ಥೈರ್ಯಕೆ ಹೆಗಲು ಕೊಟ್ಟು ಮೇಲೆತ್ತುವುದು ಹೇಗೋ....!
ಮರೆತ ನನ್ನ ನಾ ಮರಳಿ ಪಡೆಯುವುದು ಹೇಗೋ....!
ರಾಜ್.S.
ಮುಂಗುರುಳು ಹುಬ್ಬನ್ನು ಮುತ್ತುವಾಗ ನನ್ನ ಸಾಚಾತನ ಕಟ್ಟೆ ಒಡೆಯಬೇಕೆಂದೆನಿಸುತ್ತದೆ
ಕಪ್ಪು ಕಾಡಿಗೆ ಇನ್ನೂ ಸೆಳೆಯುತಿರಲು ಮತ್ತೊಮ್ಮೆ ಮೌನಿಯಾಗುತ್ತೇನೆ
ವಕಾಲತ್ತಿಗೆ ಕಣ್ಣ ಭಾಷೆಗಳು ಬರುವಾಗ ವಯಸ್ಸಿನ ಪರಧಿ ತೆರೆ ಎಳೆದು ಬಿಡುತ್ತದೆ
ಏಕಾಂತಕ್ಕೆ ಒಲವೆಂದು ನಾಮಕರಣ
ಮಾಡಿದ್ದು ನಾನೇ ಅವಳಂತೆ ಹೊಸತು
ಮೊದಲ ವಾರೆ ನೋಟ ಅನಾಮಿಕ ಸೆಳೆತ ಮುಂಗುರುಳು ಬಿರಿದ ಮಲ್ಲಿಗೆ ಹೇಳದೇ ಕೊಲ್ಲುವ ಆಯುಧ
ಅರ್ಥವೇ ಆಗದ ಹಲ್ಕಾ ಕವನ ಭಾಷೆ ಕೇಳದ ಜಾಣ ಕಿವಿ ಮತ್ತು ಅವಳು
ಬ್ರಹ್ಮಚರ್ಯ ಕೊನೆಯಾಗಿಸುವ ತಂತ್ರ ಹೆಣೆದದ್ದು ಅವಳೇ
ಕೌಮಾರ್ದನ ಎದೆಯಲ್ಲೊಂದು ಸಣ್ಣ ಮಟ್ಟಿನ ಕಂಪನ ಆಗೂ ಹೀಗೂ ಪ್ರಥಮ ಸೋಲು
ಅಂದಿನಿಂದ ವಿಹರದ ಹೊತ್ತಗೆಯಲ್ಲಿ ಹಾಳೆ ಒದ್ದೆಯಾಗಲು ಶುಭಾರಂಭ
ಜಗತ್ತೇನೆಂದೇ ಅರಿಯದ ಪೋರಿ ನಾ ಅಂದು...
ಬಣ್ಣ ಬಣ್ಣದ ಆಟಿಕೆಗಳೇ ನನ್ನ ಜಗತ್ತಂದು...
ಆದರೆ...
ಈ ಬಣ್ಣದ ಜಗತ್ತೇನೆಂದು ಅರಿತ ..ಈ ದಿನ ನನ್ನ ಸನಿಹವಷ್ಟೇ ಅಲ್ಲ ...ನನ್ನ ಬಾಳಿನಲ್ಲೇ ನೀನಿಲ್ಲ ಇಂದೂ.....
ನಿನ್ನ ಮುಖ ಪರಿಚಯವೇ ಅಸ್ಪಷ್ಟವಾಗಿರುವ ನನಗಿಂದು ....
ನಿನ್ನ ಮುಖಪಟದ ಛಾಯಾ ಚಿತ್ರವೇ ಗತಿ ನನಗಿಂದು.....
ಇದೆಲ್ಲವನ್ನೂ ಅರಿತಿದ್ದರೂ ಬಾಳುತ್ತಿರುವೇ...
ಎಂದಾದರು ನನ್ನ ಅಳಲು ಕೇಳಿ ಮರು ಜನ್ಮವ...........
ಪಡೆಯುವೆ.......ಎಂದು.............
ಬಿಸಿಲಿಗೆ ಬಾಡದ ಹೂವಿಲ್ಲ...
ಹೃದಯ ಗೆಲ್ಲದ ಪ್ರೀತಿ ಇಲ್ಲ....
ಆಸೆಗೆ ಮೀರಿದ ಕನಸಿಲ್ಲ...
ದೈವನಿಲ್ಲದೆ ಜಗತ್ತಿಲ್ಲ...
ಸೂಯ್ಯನಿಲ್ಲದೆ ಹಗಲಿಲ್ಲ..... ಚಂದ್ರನಿಲ್ಲದೆ
ಇರುಳಿಲ್ಲ...
ಭೂಮಿ ಇಲ್ಲದೆ ಫಲವಿಲ್ಲ.....
ಬಡಿತವಿಲ್ಲದೆ ಉಸಿರಿಲ್ಲ...
ತಾಯಿ ಇಲ್ಲದೆ ಮಗುವಿಲ್ಲ...
ಗುರುವಿಲ್ಲದ ಶಿಶ್ಯನಿಲ್ಲ....
ಸಾವಿಲ್ಲದ ಮನುಕುಲವಿಲ್ಲ...
ಹಾಗೇ..................................ಅರಿಯದೆ ಬರುವ ನಿಶ್ಕಲ್ಮಶವಾದ ಸ್ನೇಹಕ್ಕೆ ಎಂದೇಂದಿಗೂ ಸಾವಿಲ್ಲ.........................
ಅಪ್ಪನಂತೆ ಪೋಲಿ ಎನುತಾ ಸೊಂಟ ಮುಂದಾಗಿಸುವಾಗ ಹೆಣ್ತನದ ಭರಪೂರ ಸುಖ ಮೊಗದಲ್ಲಿ ಅಳಿಸಲಾಗದ ಕಿರು ನಗು ಹುಟ್ಟಿ ಬಿಡುತ್ತಿತ್ತು
ಸೀಮಂತದ ಶಾಸ್ತ್ರಕ್ಕಿಂತ ಹೆಚ್ಚು ಅವಳ ಬಯಕೆ ನಿಂತದ್ದು ಅವನು ಹೊಟ್ಟೆಯೊಳಗಿನ ತದ್ರೂಪಿಯೊಂದಿಗೆ ಸಂಭಾಷಣೆ ನಡೆಸಿದಾಗಲೆಲ್ಲ ನಿಲ್ಲುತ್ತಿತ್ತು
ಎಲ್ಲಾ ಪ್ರೇಮಿಗಳಂತೆ ಅವಳೂ ಹೇಳಿದ್ದಳು ನಿನಗಾಗಿ ಸಾಯಲು ಸಿದ್ದ ಅಂತೆಯೇ ತಯಾರು ಇದ್ದಲೂ ಕೂಡ
ಹೆರಲು ಹೊರಟವಳು ಜೀವ ಹೋಗಬಹುದೆಂಬ ಸಂಶಯಕ್ಕಿಂತ ಹೊಸ ಜೀವ ಬರುವ ಖುಷಿಯನ್ನೇ ಹೆಚ್ಚು ಆಸ್ವಾದಿಸುತ್ತಿದ್ದಳು
ಪಕ್ಕದಲ್ಲಿ ಇರುವ ಹೊಸ ಅಳು ಕೇಳಿದಾಗ ಬಂದ ನಗು ಅವಳಿಗೆ ಹಿಂದೆಂದೂ ಮೂಡದ್ದೇ ಆಗಿತ್ತು...