ಹಿಮಬಿಂದು ಒಂದು
ಕಾದು ಕುಳಿತಿದೆ
ಕಣ್ಣಂಚಲಿ ಜಾರಲು
ಕಾರಣವೇನು?
ಮನಸು ಮೌನವಾಗಿದೆ
ಮೌನದ ಹಿಂದೆ
ದುಗುಡ ತುಂಬಿದೆ
ಕಾರಣವೇನು?
ತುಟಿಯಂಚಲಿ ನಗುವಿದೆ
ನಗುವಲಿ ನೋವಿದೆ
ಆ ನೋವಿಗೆ
ಕಾರಣವೆನು?
ಹೃದಯ ಭಾರವಾಗಿದೆ
ಮುಖದಲಿ ಅದರ
ಸೂಚನೆಯಿದೆ
ಕಾರಣವೇನು?
ಪ್ರೀತಿಯಿಂದಲೇ ಜಗವು
ಪ್ರೀತಿಸಿದರೆ ಜೊತೆ ನಿಲ್ಲದ ಜಗವು
ಸೋಲು ಗೆಲುವಿನ ಪಯಣದಲ್ಲಿ
ಸೋಲು ಶಾಶ್ವ್ ತವಲ್ಲ ಗೆಳತಿ
ಜೊತೆಗಿರಲು ನಾನು, ನೀನೇಕೆ ಹೆದರುತಿ
ಇನ್ನಾದರೂ ನೀ ನಗಬಾರದೆ
ನನ್ನ ಬಾಳ ಒಡತಿ !
ಪ್ರೀತಿ ಬನದಲಿ ಅರಳಿದ ಹೃದಯಗಳು
ನೋವು ನಲಿವು, ಸುಖ ದುಃಖದ ಭಾಗಿಗಳು
ಪ್ರೀತಿ ಒಂದೇ......ಪ್ರೀತಿಗೆ ಜಾತಿ ಒಂದೇ.....
ಹೃದಯದ ಮನೆಯಲ್ಲಿ..
ಭಾವನೆಗಳ ಮನಸ್ಸುಂಟು...
ಮನಸ್ಸೆಂಬ ಬದುಕಲ್ಲಿ...
ನೂರಾರು ಕನಸ್ಸುಂಟು...
ಈ ಕನಸ್ಸಿನ ಕೊಲೆಯಾಗಲು ಜಾತಿ ಬೇಕೆ?
ಪ್ರೀತಿಯ ಕಾಪಾಡಿ ಜಾತಿಯ ಹೊಡೆದೂಡಿ
ಹೃದಯವನು ಬಲ್ಲೋರೆ ಮನುಜರಮ್ಮ
ಪ್ರೀತಿ ಪ್ರೇಮದಡಿ...
ಬೇಡ ಜಾತಿ ಕಿಡಿ...
ಮನಸ್ಸುಗಳು ನಲಿದಾಗ...
ನೀವೆ ಧನ್ಯ ನೋಡಿ...
ಎಲ್ಲ ಪ್ರೇಮಿಗಳು ಸಾರುವುದೊಂದೆ
ಪ್ರೀತಿ ಒಂದೇ......ಪ್ರೀತಿಗೆ ಜಾತಿ ಒಂದೇ
ಒಲವಿನ ಸಂಬಂಧ ಅಕ್ಕರೆ ಅನುಬಂಧ
ಪ್ರೀತಿಯ ಗೂಡಿನಲಿ ಈ ಬಂಧನ ಉಂಟು
ದ್ವೇಷ ಬೇಡ...
ಜಾತಿ ಬೇಡ...
ಪ್ರಾಣಕ್ಕಿಂತಲೂ ಹೆಚ್ಚು...
ಈ ಹೃದಯಕೆ ಪ್ರೀತಿ ಹುಚ್ಚು...
ಬನ್ನಿ ಪ್ರೀತಿ ಉಳಿಸೋಣ
ಪ್ರೀತಿ ಒಂದೇ........ಪ್ರೀತಿಗೆ ಜಾತಿ ಒಂದೇ
ಬರೆದಿಟ್ಟ ಕವನ ನೂರು
ಕವನಕೆ ಉಸಿರೇ ನೀನು
ಮೌನದ ಪ್ರಶ್ನೆ ಸಾಕಿನ್ನು
ಉತ್ತರಕೆ ಕಾದಿರುವೆ ನಾನು
ಮನವೇ ಓ ಮನವೇ
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ಈ ಜೀವ ನಿಂತಿದೆ ನಿನ್ನ ಹೆಸರಲಿ
ನೀನಿಲ್ಲದೆ ನನ್ನ ಉಸಿರೇ ಇಲ್ಲ ಕಣೆ
ನಿನ್ನ ಜ್ಞಾನದಲ್ಲೇ ಆಗುವುದು ಬೆಳಕು...
ನಿನ್ನ ನೆನಪಲ್ಲೇ ಕಳೆಯುವುದು ಇರುಳು...
ನಿನ್ನದೆ ಜ್ಞಾನ, ನಿನ್ನದೆ ನೆನಪು...
ನಿನ್ನ ಒಂದು ಮಾತಿಗೆ
ಮಿಡಿಯುವುದು ನನ್ನ ಹೃದಯ ...
ನೀನಿದ್ದರೆ ನನ್ನ ಜೀವನ...
ನೀನಿಲ್ಲದಿದ್ದರೆ ಬರಿ ಮೌನ....
ಮಮತೆಗೆ ಬೇಕು ಹೆಣ್ಣು ತಾಯಿಯಾಗಿ
ಪ್ರೀತಿಗೆ ಬೇಕು ಹೆಣ್ಣು
ಮಡದಿಯಾಗಿ
ಕರುಣಿಗೆ ಬೇಕು ಹೆಣ್ಣು
ಅಕ್ಕ ,ತಂಗಿಯಾಗಿ
ಪ್ರೇಮಕ್ಕೆ ಬೇಕು ಹೆಣ್ಣು
ಪ್ರೇಮಿಯಾಗಿ
ಸ್ನೇಹಕ್ಕೆ ಬೇಕು ಹೆಣ್ಣು
ಸ್ನೇಹಿತೆಯಾಗಿ
ಇದಕ್ಕೆ ವಿಪರ್ಯಾಸವಾಗಿ
ಹೆಣ್ಣು ಏಕೆ ? ಬೇಡ ಮಗಳಾಗಿ .
-ಬಿ .ಸಿ ಬಸವರಾಜ
ಅಪ್ಪನ ಮುದ್ದಿನ ಮಗಳಾದೆ..
ಮಗಳಾಗಿ ಅಪ್ಪನ ಜೊತೆಯಾದೆ..
ಅಕ್ಕರೆ ತೋರುವ ಅಪ್ಪನಿಗೆ..
ಪ್ರೀತಿಯ ಕಾಣಿಕೆ ತಂದಿರುವೆ..
ಅಪ್ಪನೆ ಎಲ್ಲಿರುವೆ?..
ಕಾದಿರುವೆ ನಾನಿಲ್ಲಿ..
ಕಾಣಿಕೆ ಜೊತೆಯಲ್ಲಿ..
ಅಪ್ಪನು ನನಗೆ ತೋರಿಸಿದ..
ಮಮತೆಯು ಎಲ್ಲಿ ಮರೆಯಾಗಿದೆ..
ಆಡಿದ ಆಟ ಪಾಠಗಳು..
ಅಪ್ಪನೆ ನಿನ್ನ ಕರೆಯುತಿದೆ..
ಅಪ್ಪನೆ ನಿನ್ನಯ ತೋಳಿನಲಿ..
ಜಗವನೆ ಮರೆತೆ ನಿನ್ನ ಒಲವಿನಲಿ..
ನೀನುಣಿಸಿದ ಪ್ರೀತಿಯ ತುತ್ತೊಂದನ್ನು..
ಮತ್ತೊಮ್ಮೆ ತಿನ್ನುವ ಆಸೆಯಲಿ..
ಕಾದಿರುವೆ ನಾನಿಲ್ಲಿ....ಅಪ್ಪ
ನಿನ್ನದೆ ನೆನಪಲ್ಲಿ..
ಸುಟ್ಟುಹೋದ ನನ್ನ ಕನಸುಗಳ ಹೊಗೆ ಇನ್ನು ಇದೆ
ಬದುಕುವ ಅಸೆ ಇಲ್ಲದ ದೇಹದಲ್ಲಿ ಉಸಿರು ಇನ್ನು ಇದೆ
ನನ್ನ ಈ ಸ್ಥಿತಿ ನೋಡಿ ಅವಳ ಕಣ್ಣಲ್ಲಿ ಕಂಬನಿ ಜಾರಿದೆ
ಅಂದರೆ ಅವಳ ಮನದ ಮೂಲೆಯಲಿ ನನ್ನ ನೆನಪು ಇನ್ನು ಇದೆ. !
ಹುಟ್ಟಿನಲ್ಲಿ ಸುಖವಿಲ್ಲ, ಬಾಳಲ್ಲಿ ಬೆಲೆಯಿಲ್ಲ..
ಕಟ್ಟಿಕೊಂಡೋನು ನೋವ ಅರಿಯಲಿಲ್ಲ..
ಹುಟ್ಟಿದೋರು ನನ್ನ ಕಡೆ ನೋಡಲಿಲ್ಲ..
ನಾನು ಅಸಹಾಯಕಳಲ್ಲ, ಆದರೂ..
ಕೈಮುಗಿದು ಬೇಡುವೆ, ನನ್ನ ಹೊಟ್ಟೆ ಉರಿಸಬೇಡಿ...