Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಈ ಪ್ರೀತಿ ಪ್ರೇಮ ಶುರು ಆಗುದು
ಕಾಲೇಜನ್ಯಾಗ... // ಆದ್ರಾ...
ದೋಸ್ತಿ ಶುರು ಆಗುದು
ಮನಿಮುಂದಿನ ಅಂಗಳದಾಗ... /
ಪಿ ಅನಿ
9-2-17
- ಪಿ ಅನಿ...
09 Feb 2017, 08:56 pm
ಅವಳೆಂದಳು ಪ್ರೀತಿ ಒಂದು ನೋವಂತೆ
ನಾನೆಂದೆ ಆ ನೋವು ನನಗಿಷ್ಟ ಅಂತ
ಅವಳೆಂದಳು ಆ ನೋವಿನ ಜೊತೆಗೆ ನೀ ಬದುಕಲಾರೆ
ಅದಕ್ಕೆ ನಾನೆಂದೆ ನೀ ಕೊಡುವ ಆ ನೋವಿಗಾಗಿ
ನಾ ಸಾಯಲು ಸಿದ್ದ ಅಂತ !
- ಕುಮಾರ ಸಿದ್ದರಾಜ
09 Feb 2017, 08:44 pm
ಅವಳೆಂದಳು ಪ್ರೀತಿ ಒಂದು ನೋವಂತೆ
ನಾನೆಂದೆ ಆ ನೋವು ನನಗಿಷ್ಟ ಅಂತ
ಅವಳೆಂದಳು ಆ ನೋವಿನ ಜೊತೆಗೆ ನೀ ಬದುಕಲಾರೆ
ಅದಕ್ಕೆ ನಾನೆಂದೆ ನೀ ಕೊಡುವ ಆ ನೋವಿಗಾಗಿ
ನಾ ಸಾಯಲು ಸಿದ್ದ ಅಂತ !
- ಕುಮಾರ ಸಿದ್ದರಾಜ
09 Feb 2017, 08:43 pm
ಕೋಪದಿ ನೋಡಿದರೆ ಪ್ರೀತಿ ಇಲ್ಲ ಎಂದರ್ಥವಲ್ಲ
ನಗುತ ಮಾತನಾಡಿದರೆ ಪ್ರೀತಿ ಇದೆ ಎಂದರ್ಥವಲ್ಲ
ಜೀವನದ ಪಯಣದಲ್ಲಿ ನೋಟಗಳು ಬೆರಿತಾನೆ ಇರ್ತವೆ
ಪ್ರತಿ ನೋಟದ ಅರ್ಥ ಪ್ರೀತಿ ಎಂದರ್ಥವಲ್ಲ. !
- ಕುಮಾರ ಸಿದ್ದರಾಜ
09 Feb 2017, 08:36 pm
ಪ್ರೀತಿಯಲಿ ತೆಲುತಿದೆ ಮನಸು
ಯಾಕೋ ಕಾಣೆನು
ಹೃದಯದಿ ನಿನೀನೆ
ಮನದಿ ನಿನೀನೆ
ಎಲ್ಲೆಲ್ಲೋ ನಿನೀನೆ
ಇನ್ನೇನು ಹೇಳಲಿ ನಾನು /
ನೂರಾರು ಜನರ ನಡುವೆ
ನನ್ನ ಕಾಡುತಿರುವಳು ನೀನೆ
ಚಲುವೆಯರಲ್ಲಿ ನೀನು ಚಲುವೆ
ನನ್ನನರಸಿ ಬಂದೆಯಾ ನೀನೇ
ನೋಡುವ ನೋಟದಲ್ಲಿ
ಆಡುವ ಮಾತಿನಲ್ಲಿ
ನಿನೆನೆ ತುಂಬಿರುವೆ
ನಾನೇನು ಮಾಡಲಿ ಹೇಳು ನೀ. /
ನಗುತಿರಲಿ ನೀನು ಒಲವೇ
ಕಂಡೆ ಪ್ರೇಮಧಾರೆಯಂತೆ ನನಗೆ
ಹೂಮನದಂತೆ ನೀನು ನಲಿವೆ
ನನ್ನ ಮನವಾಯ್ತು ದುಂಬಿಯಂತೆ
ಊಸಿರಿನ ಬಿಸಿಯಲಿ
ಎದೆಯ ಮಿಡಿತದಲಿ
ಒಲವೆ ನಿನಿರುವೆ
ನಾನೆಲ್ಲಿಗೆ ಹೋಗಲಿ ಹೇಳು ನೀ /
- ಕುಮಾರ ಸಿದ್ದರಾಜ
09 Feb 2017, 08:26 pm
ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
ಎಲ್ಲಿ ಹೋಗಿರುವೆ ನೀನು ಕಾಣದಾದೆಯೇ..
ನಿನ್ನ ತುಂಬು ಗಭ೯ದಿಂದ ..
ಹೊರಬಂದ ನಿನ್ನ ಕಂದ..
ಅಳುವ ನಿನ್ನ ಕೂಸಿನ ನೋಡೆ..
ತೋರೆ ನಿನ್ನ ಪ್ರೀತಿಯ ಭಾವ..
ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
ಬಾಳಿನಲ್ಲಿ ಒಂಟಿ ನಾನು..
ಕರುಣೆ ಬಾರದೇನೆ ನಿನಗೆ..
ಕತ್ತಲಲ್ಲಿ ನೂಕಿ ನನಗೆ..
ಎತ್ತ ಹೋದೆ ಬಾರದೆ ಕೊನೆಗೆ..
ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
ಯಾವ ಜನ್ಮದ ಪಾಪದಲ್ಲೊ..
ಮಿಂದ ನನಗೆ ನೋವಿನ ಶಾಪ..
ಬಂದು ಕೇಳೆ ನನ್ನದೆಯ ಅಳುವ..
ಹೇಳಲಾರೆ..ತಾಳಲಾರೆ..
ಎಲ್ಲಿ ಇರುವೆ ಅಮ್ಮ ನೀ ಎಲ್ಲಿ ಇರುವೆಯೇ..
- B.Shree
09 Feb 2017, 07:36 pm
ನಿನ್ನ ಕನಸು
ಕಾಣುವ
ನನ್ನ ಮನಸು
106 ಪ್ರಯನ್ನಗಳಿಗೆ
ಕರಗದ ನಿನ್ನ
ಮುನಿಸು
ನೀ ಕದ್ದು ಹೊಯ್ದ
ನನ್ನ ಸಂತಸ
ಮರಳಿಸು
ನನಗೀಗ ಒಲ್ಲದ
ಊಟ, ನೀ
ಬಂದು ತಿನಿಸು
ನನ್ನ ಹೃದಯದ
ಪಿಸು-ಪಿಸು
ನೀ ಆಲಿಸು
ಬಂದೆನ್ನ ಸಂತೈಸು.....
vanishree
- Vanishree c p
09 Feb 2017, 06:58 pm
ಓ ಚೆಲುವೆ
ನಾ ಕೇಳುವ ಪ್ರಶ್ನೆಗೆ ಉತ್ತರ ನೀಡೆ
ನೀಡುವ ಉತ್ತರ ನನಗಾಗಿರಲಿ
ಚೆಲುವೆ ಕೊಡು ನೀ ಉತ್ತರವ...
ಚೆಲುವೆ ನೀ ಹೀಗೆ ಮೌನಿಯಾದರೆ
ನನ್ನ ಪ್ರಶ್ನೆಗೆ ನನ್ನನ್ನೇ ಉತ್ತರವಾಗಿಸಬೇಡ ಓ ಚೆಲುವೆ
- ಸುಬ್ರಹ್ಮಣ್ಯ ಶಾಸ್ತ್ರಿ
09 Feb 2017, 04:22 pm
ಎಲ್ಲರ ಎದೆಯಾಳಕ್ಕೆ
ಗರಡಿ ಹಾಕಿ ಎಳೆದು ಹುಡುಕಿದರೂ ಸಿಗಲಿಲ್ಲ
ಕರುಣೆ, ಅನುಕಂಪ,
ಹಾಳು ಆದರ್ಶಗಳ ತಗಡು ತತ್ವಗಳು
ಕನ್ನಡಿ ಮುಂದೆ ಪೋಜು ಕೊಟ್ಟು
ಕಕ್ಕಲುತನವನ್ನೆಲ್ಲ ಕಾರಿಕೊಂಡು
ಎದೆ ಎದೆ ಬಡಿದುಕೊಂಡು
ಊರಿಗೆಲ್ಲ ನಾನೇ ಗರತಿ ಗಂಗವ್ವನೆಂದರು
ನಾಳೆಗಳನ್ನೆಲ್ಲ ಒಲೆಯೊಳಗೆ ಮಡಚಿಟ್ಟು ಕೊಳ್ಳಿಇಟ್ಟು,
ಕಾ ಕಾ ಎಂದು ಬಂದ ಕಾಗೆಗಳಿಗೆಲ್ಲ ಬಾಡುಟಿಟ್ಟು,
ಉಸಿರುಗಳಿಗೆಲ್ಲ ಉರಿಇಟ್ಟರು
ಬೋರಲು ಬಿದ್ದು ಹಾಳು ತತ್ವಗಳು
ಗಂಟಲು ಹರೆದುಕೊಂಡು ಚೀರಿದ ನ್ಯಾಯನೀತಿಗಳು
ಬಿಕ್ಕಿ ಬಿಕ್ಕಿ ಬಿಕ್ಕಳಸಿ ಎದೆ ಬಿರಿದು
ಚೀರಿ ಚೀರಿ ಚಿಪ್ಪಾಡಿಯಾದ ಹರಕು ಮುರಕು ಬದುಕಗಳು
ರಚನೆ: ರೇವಣಸಿದ್ದ ಗೌಡರ
- Revanasidda Goudar
09 Feb 2017, 02:51 pm
ಅವರಿವರು ಎನೆಂದರೇನು
ನಿನೀದ್ದರೆ ಸಾಕೆಂದುಕೊಂಡಿದ್ದೆ...
ತಂಗಾಳಿಯಂತೆ ಬಂದ ನೀನು,
ಬಿರುಗಾಳಿಯಂತಾಗಿ ಹೋದೆ...
ನನ್ನ ಮನಸೆಂಬ ಹಂದರವಾಯ್ತು ಗಾಳಿ ಗೋಪುರ....
ಪಿ ಅನಿ
9-2-17
- ಪಿ ಅನಿ...
09 Feb 2017, 12:01 pm