ಕೊಂಚ ನನ್ನಿಂದ ದೂರ ಸರಿದು ಬಿಡು
ಇಲ್ಲಾಂದರೆ, ನಿನ್ನ ಗುಂಗಲ್ಲಿ
ಹುಚ್ಚನಾದರೂ ಅನುಮಾನವಿಲ್ಲ..
ಯಾಕೆ ಇಷ್ಟು ಆಳವಾಗಿ ನನ್ನ ಹೃದಯದೊಳಗೆ
ಬೇರೂರಿದೆ, ಅದಕ್ಕೆ ಅನಿಸುತ್ತೆ ಪ್ರತಿ ಬಡಿತವು
ನಿನ್ನನ್ನೇ ಜಪಿಸುತ್ತಿರುವುದು..
ಬೇಕಾದರೆ ಒಮ್ಮೆ ಬಂದು ಎದೆಗೆ ಕಿವಿ ಇಟ್ಟು
ಆಲಿಸು, ನನ್ನ ಹೃದಯಬಡಿತ ನಿನ್ನನ್ನೇ
ಜಪಿಸುತ್ತಿರುವುದನ್ನು...
ಎಮ್.ಎಸ್.ಭೋವಿ...✍️
ಮುಸ್ಸಂಜೆಯ ಇಳಿ ಹೊತ್ತಿನಲ್ಲಿ..
ಮಬ್ಬುಕವಿದ ವಾತಾವರಣದಲ್ಲಿ..
ಮಂಕು ಕವಿದ ಮನಸ್ಸಿಗೆ ನೆನಪಾಯಿತು ನಿನ್ನ ಜೊತೆ ಕಳೆದ ಆ ಮಧುರ ಕ್ಷಣಗಳು ಈ ಸ್ವಚ್ಚಂದದ ಕನಮಡಿ ಪ್ರೌಢಶಾಲೆ ಅಂಗಳದಲ್ಲಿ .....
ಮತ್ತೆ ಮೂಡಿ ಬಂತು ಮುಗುಳು ನಗೆ ಈ ನನ್ನ ತುಟಿಗಳ ಅಂಚಲಿ...
ನಾನೇನೋ ಬರೆಯುತ್ತಿದ್ದೇನೆ ಪ್ರತಿದಿನ
ಈ ಕನ್ನಡ ಪೊಯೆಂ ಎಂಬ ಪ್ರಪಂಚದಲ್ಲಿ
ಕೆಲವರಿಗೆ ಏನು ಇಲ್ಲದಿರಬಹುದು
ವಿಶೇಷವಾಗಿ ಮೆಚ್ಚಲು ನನ್ನ ಬರಹವ
ಕೆಲವರಿಗೆ ಅವರದೇ ಭಾವನೆಗಳು
ಬರೆದಿದೆ ಅನಿಸಬಹುದು
ಒಂದಷ್ಟು ಬರಹಗಳು ಯಾರೋ ನೋಡಲಿ
ಮೆಚ್ಚಲಿ ಎಂದೇ ಬರೆದೆ
ಇನ್ನೊಂದಿಷ್ಟು ಮನಸ್ಸಿಂದ ಆತ್ಮತೃಪಿಗಾಗಿ
ಬರೆದೆ...
ಎಮ್.ಎಸ್.ಭೋವಿ...✍️
ಪ್ರೀತಿ ಕಣ್ಣಿಗೆ ಕಾಣದು...
ಪ್ರೀತಿ ಕಣ್ಣಿಗೆ ಕಾಣದು ನಿಜ, ಆದರೆ ಅದೊಂದು ಸುಂದರವಾದ ಭಾವನೆ...
ಆದರೆ ಅದೊಂದು ಸುಂದರವಾದ ಭಾವನೆ ಹೌದು...
ಪ್ರೀತಿ ಯಾರಿಂದನು ವರ್ಣಿಸಲಾಗದ ಒಂದು ರೀತಿ...
ಪ್ರೀತಿ ವರ್ಣಿಸಲಾಗದ ಒಂದು ರೀತಿ...
ಅದು ಮನಸ್ಸಿನಲ್ಲಿ ಭಾವನೆ ಮೂಡಿಸುತ್ತಿರುವ ಭೀತಿ...
ಪ್ರೀತಿಯ ಪರಿ ನೀ ಕಾಣದಿರು...
ಪ್ರೀತಿ ಒಮ್ಮೆ ಮನದಲ್ಲಿ ಅರಳಿದರೆ ನಿನಗೆ ಎನನ್ನು ಕಾಣದ ಒಂದು ರೀತಿ...
ಪ್ರೀತಿ ಎಂದರೆ ಆಕರ್ಷಣೆ ಅಲ್ಲ...
ಪ್ರೀತಿ ಎಂದರೆ ಮೋಹವಲ್ಲ...
ಪ್ರೀತಿ ಎಂದರೆ ವ್ಯಾಪಾರವು ಅಲ್ಲ ಮತ್ತು ಬಣ್ಣ ಬಣ್ಣದ ಮಾತುಗಳನ್ನು ಹೇಳುವುದು ಅಲ್ಲ...
ಪ್ರೀತಿ ಸರಿಯಾದ ಸಮಯಕ್ಕೆ ಹೇಳಿಕೊಳ್ಳುವ ರೀತಿ...
ಪ್ರೀತಿ ಅದೊಂದು ಅದ್ಭುತವಾದ ಸೆಳೆತದ ರೀತಿ...
ಪ್ರೀತಿ ಮೊಗ್ಗಿನಿಂದ ಹೂವಾಗಿ ಅರಳುವ ಒಂದು ಮನಸ್ಸಿನ ರೀತಿ...
ಪ್ರೀತಿ ಅಲ್ಲಿ ನಂಬಿಕೆ, ವಿಶ್ವಾಸ ಮತ್ತು ಎಲಾದಕ್ಕೂ ಮೀರಿರುವ ಗೌರವ ತುಂಬಿರುವಂತಹ ರೀತಿ...
ಪ್ರಕೃತಿ ಎಷ್ಟೇ ಸುಂದರವಾಗಿದ್ದರು ಹಾಗೂ
ನೆಮ್ಮದಿಯ ತಾಣವಾಗಿದ್ದರು ಮನುಷ್ಯ ಅಲ್ಲಿ
ವಾಸಿಸುವುದಕ್ಕೆ ಇಚ್ಚಿಸುವುದಿಲ್ಲ..
ಆ ವನವಾಸ ಬೇಡ ಎಂದುಕೊಳ್ಳತ್ತಾನೆ..
ಆದರೆ ಮನೆ ಆಗಲಿ ಅರಮನೆಯಾಗಲಿ
ಅಲ್ಲಿ ಬರೀ ನೋವು ಹಾಗೂ ಅಸಮಾಧಾನವೇ
ತುಂಬಿಕೊಂಡಿದ್ದರೂ ಸಹ ಅಲ್ಲಿಯೇ
ವಾಸಿಸಲು ಬಯಸುತ್ತಾನೆ ಹಾಗೂ ನೆಮ್ಮದಿಯನ್ನು
ಹುಡುಕಲು ಪ್ರಯತ್ನಿಸುತ್ತಾನೆ..
ಇದು ಎಂತಹ ವಿಚಿತ್ರ ಸತ್ಯ ಅಲ್ಲವೆ..
ಇದೊಂದು ಬದುಕಿನ ವಿಪರ್ಯಾಸವೇ ಸರಿ...
ಎಮ್.ಎಸ್.ಭೋವಿ...✍️
ಕಾಣದೂರಿನ ಹೊಸ ಲೋಕದಲ್ಲಿರುವೆ ನಾನು
ದಯಮಾಡಿ ಬರಬೇಕು ನೀ ನನ್ನವನು
ಹೇಗೆ ಹೇಳಲಿ ನಾ ಎಲ್ಲವನು
ನನ್ನ ಕವನಗಳಿಗೆ ಜೊತೆಯಾದ ಜೊತೆಗಾರನ ಗುಣವನು
ಎಂತಹ ಸಂತೋಷ ನಿನ್ನ ನೋಡಲು
ಅದೇನೋ ಹೊಸತನ ನೀ ನುಡಿಯಲು
ಎಲ್ಲಿದ್ದರೂ ಆಲಿಸುವೆ ನಿನ್ನ ಮಾತನ್ನೆ
ಎಲ್ಲರೂ ಇದ್ದು ನಾ ಒಂಟಿಯಾಗಿ ಬಿಡುವೆ ನನ್ನೊಳಗೆನೆ
ಮೈ ಮರೆತು ಬಿಡುವೆ ನಿನ್ನ ಕವನಗಳಿಗಾಗಿ
ನನ್ನ ಪ್ರತಿಕ್ಷಣವು ನಿನಗಾಗಿ..
ಹೇ ಗೆಳತಿ,
ನಾ ಹಾಗೆಲ್ಲ ಮನಬಿಚ್ಚಿ ನಕ್ಕವನೇ ಅಲ್ಲ !
ನಗುವಿಗೂ ನೆಪ ಹುಡುಕುವ ಜಿಪುಣ ನಾನು..
ಆದರೆ,
ನಿನ್ನ ನೆನಪು ಬಂದಾಗಲೆಲ್ಲ
ನನ್ನ ಮನಸ್ಸು
ಗರಿ ಬಿಚ್ಚಿದ ನವಿಲಂತಾಗುತ್ತದೆ !
ಇಳೆ ಸೇರಲು ಬಯಸುವ
ಮಳೆಯ ಹನಿಯಂತಾಗುತ್ತದೆ !
ಅದೆಲ್ಲೋ ಅಡಗಿದ್ದ ಕಿರುನಗು
ತುಟಿಯಂಚಿನಿಂದ ಜಿಗಿದು,
ನಿನ್ನ ಮಡಿಲು ಸೇರುತ್ತದೆ !
ಎಮ್.ಎಸ್.ಭೋವಿ...✍️