Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಡುಗನ ಪಚೀತಿ,....

ಷಹಜಾನ್ ತನ್ನ ಪ್ರೇಯಸಿಗೆ ತಾಜ್ ಮಹಲ್ ಕಟ್ಟಿದ ಹಾಗೆ,
ನಾನು ಯಾರಿಗಾಗಿ ಏನನ್ನು ಕಟ್ಟಲಿ ಎಂದು ತುಂಟ ನಗು ಬೀರುವಾಗ,
ಎದುರಾದಳು ನನ್ನ ಮನದ ಒಡತಿ,
ಅನಿಸಿತು ಅವಳೇ ನನ್ನ ಮನೆಯ ಗರತಿ,
ನನ್ನ ಶ್ರೀಮತಿ.....

ಕಣ್ಣಿನ ನೋಟವನು,
ಸಹಿಸಲಾರದ ಪಾಪಿ ಆದೆ ನಾ...
ಅವಳ ಮಾತನಾಡುವುದನ್ನು ನೋಡಿ,
ಮೂಗ ಆದೆ ನಾ....

ನಿನಗಿರಬಹುದು ತುಂಬಾ ಜನ ಫ್ಯಾನ್ಸ್,
ಮರೆತು ಬಿಡು ಅವರೆಲ್ಲರನ್ನ,
ಯಾಕಂದ್ರೆ....
ಇನ್ಮುಂದೆ ನಾನೇ ನಿನ್ನ ಯಜಮಾನ...
ಬರೆದಿಟ್ಕೊ ಈ ನನ್ನ ಮಾತನ್ನ....

ನೆನಪಿಸ್ಕೊಳ್ತಾ ಇರು ಆಗಾಗ ನನ್ನನ್ನ,
ಯಾರಿಗ್ ಗೊತ್ತು,....
ಆ "ಆಗಾಗ" ಎನ್ನುವುದು ಮುಂದೆ ಆಗಬಹುದು ಇಡೀ ಜೀವನ....

- Deekshitha Shetty

02 Feb 2017, 02:00 pm

ಹೃದಯದ ಮೇಲೆ

ಹೃದಯದ ಮೇಲೆ ಬರೆದಿರುವೆ
ಪ್ರೀತಿಯಿಂದ ಹೆಸರ..
ಹೃದಯ ಮಿಡಿಯುವವರೆಗೂ
ಅಳಿಯದ ಹೆಸರ..
ಪ್ರೀತಿಯ ಉದಾಯಕ್ಕೆ ಕಾರಣವಾದ
ಚಲುವೆ ನಿನ್ನ ಹೆಸರ..

ಕಾಗದದ ಮೇಲೆ ಬರೆದಿಲ್ಲ
ಹರಿದು ಹೋಗಲು ನಲ್ಲೇ..
ಮರಳಿನ ಮೇಲೆ ಬರೆಯಲಿಲ್ಲ
ಅಳಸಿ ಹೋಗಲು ನಲ್ಲೇ..
ಬರೆದಿರುವೆ ಹೃದಯದ ಮೇಲೆ
ಇರುವುದು ಹೃದಯ ಮಿಡಿಯುವವರೆಗೆ !

ನೀರಿನ ಮೇಲೆ ಬರೆದಿಲ್ಲ
ತೇಲಿ ಹೋಗಲು ನಲ್ಲೇ..
ಮೋಡದ ಮೇಲೆ ಬರೆಯಲಿಲ್ಲ
ಕರಗಿ ಹೋಗಲು ನಲ್ಲೇ..
ಬರೆದಿರುವೆ ಹೃದಯದ ಮೇಲೆ
ಇರುವುದು ಹೃದಯ ಮಿಡಿಯುವವರೆಗೆ !

::::::::::::::::

- ಕುಮಾರ ಸಿದ್ದರಾಜ

01 Feb 2017, 08:53 pm

ಕನ್ನಡ ಶಾಯರಿ

ಜೀವನದ ಪಯಣ ತುಂಬ ದೊಡ್ಡದು ಗೆಳೆಯಾ
ಸ್ನೆಹಕ್ಕಾಗಿ ಹುಡುಕು
ಹೃದಯವಂತರು ಸಿಗಲಿ, ಸಿಗದಿರಲಿ
ನಿನ್ನ ಪ್ರಯತ್ನ ನೀ ಮುಂದುವರೆಸು
"ತಾಜ್" ಕಟ್ಟುವ ಸಾಹಸಕ್ಕೆ ಕೈ ಹಾಕಬೆಡಾ
ಬೀದಿಗೆ ಬಂದು ಬಿಡುವೆ
ಆದರೆ ಹೋದ ಕಡೆಯಲ್ಲ
ಮುಮ್ತಾಜ್ ಗಾಗಿ ನೀ ಹುಡುಕು.....

- ಕುಮಾರ ಸಿದ್ದರಾಜ

01 Feb 2017, 08:13 pm

ನಿಜವಾದ ಪ್ರೀತಿ

ನಿಜವಾದ ಪ್ರೀತಿ ಎಂಬುವುದು
ಕೇವಲ ಪಡೆವುದಲ್ಲ,
ಕೊಡುವುದು ಮತ್ತೆ ಕ್ಷಮಿಸುವುದು
ನಿಜವಾದ ಪ್ರೀತಿ ಎಂದರೆ
ಕೇವಲ ಪ್ರೇಮಿಗಳ ದಿನದಂದು
ಗುಲಾಬಿ ಹೂಗುಚ್ಚ ಕೊಡುವುದಲ್ಲ
ಇನ್ನುಳಿದ 364 ದಿನಗಳಲ್ಲೂ
ನೋವು ನಲಿವಿಗೂ ಸ್ಪಂದಿಸುವುದು

- ಕುಮಾರ ಸಿದ್ದರಾಜ

01 Feb 2017, 07:57 pm

ಪ್ರೀತಿ ಕುರುಡು

ಪ್ರೇಮಿಗಳಿಬ್ಬರು ನಿರ್ಧರಿಸಿದರು ಸಾಯುವುದೆಂದು
ಹತ್ತಿ ನಿಂತರು ಬೆಟ್ತವೊಂದು
ಹುಡುಗ ಜಿಗಿದನು ಮೊದಲು
ಕಣ್ಣ ಮುಚ್ಚುತ ಹಿಂದೆ ಸರಿದು
ಹುಡುಗಿ ಹೇಳಿದಳು "ಪ್ರೀತಿ ಕುರುಡು" ಎಂದು
ಗಾಳಿಯಲ್ಲಿ ತೇಲುತ್ತಿದ್ದ ಹುಡುಗ
ಪ್ಯಾರಾಚೂಟ್ ಬಿಚ್ಚುತ ಹೇಳಿದ
ಪ್ರೀತಿಗೆ ಸಾವಿಲ್ಲ ಎಂದು!!!

- ಕುಮಾರ ಸಿದ್ದರಾಜ

01 Feb 2017, 07:18 pm

ಸುರಿವ ಮಳೆಯ ಜೊತೆಯಲಿ

ಸುರಿವ ಮಳೆಯ ಜೊತೆಯಲಿ
ನೆನೆವ ಮನಸು ನನ್ನಲಿ
ಕಂಬನಿ ಧಾರೆ ಕಂಗಳಲ್ಲಿ
ಹರಿದು ಹೋಗಲಿ ಈ ಮಳೆಯ ಜೊತೆಯಲಿ..

ಕಳೆದ ದಿನಗಳ ನೆನಪು
ಕಣ್ಣ ತುಂಬಿ ನಿಂತಿರಲು
ಎದೆಯ ಗದ್ದೆಯಲಿ
ನಿನ್ನ ಪ್ರೀತಿಯೇ ಬಿತ್ತಿರಲು
ನೀ ಎಷ್ಟೇ ದೂರ ಸರಿದರು
ಕರಗದು ನಿನ್ನ ನೆನಪು
ನೆರಳಂತೆ ನಿನ್ನ ಒಲವು
ಬರುತಿದೆ ನನ್ನ ಜೊತೆಯಲಿ
ಸುರಿವ ಮಳೆಯ ಜೊತೆಯಲಿ...

ನೀ ನಗುತ್ತಾ ಇರುವೆ ಎಲ್ಲೂ ಅಲ್ಲಿ
ಹೂ ಮಳೆ ಸುರಿಯುತ್ತಿದೆ ಇಲ್ಲಿ
ನಿನ್ನ ಊಸಿರಿನ ತಂಪು
ತಂಗಾಳಿಯಂತೆ ಬಿಸುತಿದೆ ಇಲ್ಲಿ
ಅಡಗಿ ಕುಳಿತರೆನು ಅಲ್ಲಿ
ಬಾನ ತುಂಬ ನಿನ್ನ ರಂಗವಲ್ಲಿ
ಜೊತೆಯಾಗಿ ನಡೆದ ದಾರಿ ಎದುರಲಿ
ನಿನಗಾಗಿ ಕಾಯುತ ನಿಂತಿರುವೆ ಬಾ ಇಲ್ಲಿ
ಸುರಿವ ಮಳೆಯ ಜೊತೆಯಲಿ....

- ಕುಮಾರ ಸಿದ್ದರಾಜ

01 Feb 2017, 06:05 pm

ಪ್ರೀತಿಯ ನಶೆಯಲಿ.....

ನಿನ್ನಲಿ ನಾನಾಗಿ,
ಇರುವೆ ಮಗುವಾಗಿ,
ಕಾಪಾಡು ಜೋಪಾನವಾಗಿ,
ಉಳಿವೆ ನಿನ್ನಲಿ ಹಾಯಾಗಿ....


ಕಂಡಿಲ್ಲ ಎಲ್ಲೂ ನಿನ್ನಂತ ಹುಡುಗನ್ನ,
ನೀನು ಮರೆಸಿದೆ ಪ್ರೀತಿಯ ಕೊರತೆಯನ್ನ,
ಕಣ್ಣೀರ ಹನಿಯು ಜಾರುವ ಮುನ್ನ,
ಒಡ್ಡು ನಿನ್ನ ಕೈಯನ್ನ...


ನೀನಿರದ ಒಂದು ಕ್ಷಣ,
ಸುಟ್ಟು ಹೋದ ಬನ,
ಸಾವಿನಕಡೆಗೆ ಹೆಜ್ಜೆಯಿಟ್ಟ ಮನ,
ಬರಲಾರದು ಪುನಹ...

ಜೀವನದ ಕೊನೆಯ ಹಾಡನ್ನ,
ಹಾಡಬೇಕು ನಾವಿಬ್ಬರು ಒಂದುಗೂಡಿಸಿ ಧ್ವನಿಯನ್ನ,
ತೊರೆಯಬೇಡ ಒಂಟಿಯಾಗಿ ನನ್ನನ್ನ,
ಬಾಳೋಣ...ಮರೆತು ಈ ಸುಳ್ಳು ಜಗತ್ತನ್ನ....


ಹಾಡಿ ಹೊಗಳಬೇಕು ನನ್ನ-ನಿನ್ನ...
"ಜೋಡಿಯನ್ನ...."....

- Deekshitha Shetty

01 Feb 2017, 03:14 pm

ದಾರಿಯಿರಲಿ ಗುರಿಯೆಡೆಗೆ.....

ರೆಕ್ಕೆ ಮುರಿದ ಹಕ್ಕಿ ಹಾರುತೈತೆ...
ಕಾಲು ಮುರಿದ ನವಿಲು ಕುಣಿಯುತೈತೆ...
ನೀನಾದರೂ ಯಾಕೆ ಸುಮ್ಮನಿರುವೆ...!!

ಕಷ್ಟವ ನೆನೆದು ಸುಮ್ಮನೆ ಕೂತರೆ
ಬದುಕು ನಿಂತಲ್ಲೇ ನಿಲ್ಲುತೈತೆ....
ಬಿಟ್ಟು ಹೋಗುವ ಸಂಬಂಧಗಳ ನೆಚ್ಚಿದರೆ
ಬದುಕೇ ಹಾಳಗ್ ತೈತೆ...

ನಡೆವ ದಾರಿಯಲಿ ಕಲ್ಲು ಮುಳ್ಳು ಸಹಜ
ಅದಕ್ಕೆದರಿ ನೀ ನಿಂತರೆ ಜೀವನ ಬರಡಾಗ್ ತೈತೆ ...
ದೇವರ ನೆನೆದು ಕಾರ್ಯವ ಮಾಡಿದರೆ ಬದುಕು ಹಸನಾಗಿ ಇರುತೈತೆ...

- ನಮಿತ ಗಟ್ಟಿ

01 Feb 2017, 02:14 pm

ಮಳೆ

ಮಳೆ ಬಂದರೂ ನೆನೆದರೂ
ಮೈಯೆಲ್ಲ ಬಿಸಿ.....!!
ಆ ಚೈತ್ರಕೆ ಕರೆಯನು ನೀಡಿ
ನೀ ಬಂದರೆ ಖುಷಿ..!!

- ಪಿ.ಜಿ.ಜ್ಯೋತಿ

01 Feb 2017, 01:55 pm

ಬಂಧನ

ಗಿಣಿಯೇ ಗಿಣಿಯೇ ಕೊರಗೋ ದನಿಯೇ
ಪಂಜರದಲ್ಲಿ ನಿನ್ನ ಬಂಧನವೇ!!
ಮುಗಿಲ ಕಡೆಗೆ ಸಾಗೋ ಬಯಕೆ
ಉಳಿದೇ ಹೋಯ್ತು ಯಾಕೀತರವೇ!!

ನಾನು ನೀನು ಒಳಗೆ ಹೊರಗೆ
ಇರುವಿವೆಂಬ ಭಾವ ಭಿನ್ನವಾಗಿದೆ!!
ಪಂಜರದಲ್ಲಿ ನಿನ್ನ ಬಂಧಿ ಮಾಡಿಬಿಟ್ಟರು
ಮಾತಿನಲ್ಲಿ ನನ್ನ ಬಂಧಿ ಮಾಡಿಬಿಟ್ಟರು!!

ಯಾಕೀತರವೇ ಮೌನ ಸರಿಯೇ
ಮಾತಾಡದೆಯೇ ನಾವು ಸೆರೆಯೇ!!
ಹೇಳು ಗಿಣಿಯೇ ಇದುವೇ ವಿಧಿಯೇ
ನನಗೂ ನಿನಗೂ ಈ ಬಂಧನವೇ!!

ಹಗಲು ಇರುಳು ಸಾಲು ಕಂಬಿ
ಸುತ್ತ ಇಹುದು ಅದುವೇ ನಿನದು!!
ಬರಿದೇ ಹೆಣೆದೆ ಸಾಲು ಕಂಬಿ
ಸುತ್ತ ನಾನೇ ನಡುವೆ ನೊಂದು!!

- ಪಿ.ಜಿ.ಜ್ಯೋತಿ

01 Feb 2017, 12:22 pm