Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಧ್ಯಂತರ

ಆಕಾಶಕೂ ಈ ಭೂಮಿಗೂ
ಇರುವ ಅಂತರ ಅಗಾಧವು!!
ಆಕಾಶದ ಆ ಮೌನವು
ಈ ಭೂಮಿಗೆ ಸಾಕಾದವು!!

ಮಳೆಯ ತಾ ಕಾಣದೆ
ಇಳೆಯು ದಂಗಾಗಿದೆ!!
ಇನಿಯನ ಮೌನದಿ
ಇಳೆಯು ತಾ ನೊಂದಿದೆ!!

ಆ ಬಾನಿಗೆ ಕೈ ಚಾಚುತ
ಈ ಮೌನವು ಸಾಕೆಂದಿದೆ!!
ಸವಿ ಪ್ರೀತಿಯ ಸಂದೇಶವ
ಸಂತೋಷದಿ ನೀಡೆಂದಿದೆ!!

ಆಕಾಶದೀ ಸಂದೇಶವ ಆ ನೇಸರ
ಕಿರಣದಂತೆ ಭೂವಿಗೆ ಚೆಲ್ಲಿದ!!
ಈ ಭೂಮಿಯ ಜಲರಾಶಿಯ
ಆವಿ ಮಾಡಿ ಕೊಂಡು ಹೋದನು!!

ಆಕಾಶನು ಈ ಭೂಮಿಯ
ತಂಪಾದ ಒಲವ ಬಾಚಿ ತಬ್ಬಿದ!!
ಮಧ್ಯಂತರ ಮೋಡವ ಮಾಡಿ
ಪ್ರೀತಿಯ ಹನಿಗಳ ಭೂವಿಗೆ ಚೆಲ್ಲಿದ!!

ಈ ಭೂಮಿಗೆ ವಸಂತವು
ಇಳೆಯೆಲ್ಲವೂ ತಂಪಾದವು!!
ಜಲರಾಶಿ ಮೈದುಂಬಿ ವನವೆಲ್ಲ ಹಸಿರಾಗಿ
ವಿರಹದ ಬೇಗೆ ಮರೆಯಾದವು!!

- ಪಿ.ಜಿ.ಜ್ಯೋತಿ

01 Feb 2017, 11:42 am

ಸಮಾಧಿಗಳ ಸುಳಿಯಲ್ಲಿ.......

ಜೀವಿಗಳ ಒಡನಾಡಿಯಲ್ಲಿ
-ದ್ದಾಗ ಜೀವ,
ಪ್ರಾಣವಿಲ್ಲದ ಬಳಿಕ ಶವ
ಬದುಕಿರುವಾಗ ಹೆಸರಿತ್ತು
ಉಸಿರೇ ಇರಲಿಲ್ಲ....

ವೇದಿಕೆಯ ರಂಗದ ಪ್ರತಿನಡಿಗೆಯಲ್ಲೂ ವಿಧಿಯ ನಿಶ್ಯಬ್ದ ಕಿರುಚಾಟ,ಹಣೆಬರಹದ
ಅಣುಕು ಮೋರೆಯ
ಹಾಸ್ಯದ ಕರತಾಡನ..

ಪಾಪ,ಪುಣ್ಯಗಳು
ಪ್ರಾಮಾಣಿಕ,ಅನಿವಾರ್ಯತೆಯ ಸಂಘರ್ಶಗಳು,
ತೀರಿದ ನಂತರ ಬರುವವು ಅವೊಂದೆ..

ದೌರ್ಜನ್ಯಗಳ ವಿಸ್ಮಯ,ಅಟ್ಟಹಾಸಗಳ ರಿಂಗಣ,ಬವಣೆಗಳ ಸುನಾಮಿಯಂತ ದೈತ್ಯ ನರ್ತನ
ಭಾವಭಂಗಿಯ ಮೂಕ ರೋದನ,ಕೊನೆಗೆ ಜೊತೆಯಿಲ್ಲದ ಪಯ....ಣ ಸಮಾಧಿಗಳ ಸುಳಿಯಲಿ

- ನಕ್ಷtra

31 Jan 2017, 11:37 pm

ನಕ್ಷತ್ರಗಳು-೨೩

ಬಾನ ಕೋಟಿ
ನಕ್ಷತ್ರಗಳ ಬೆಳಕನ್ನು
ನಿನ್ನ ಕಣ್ಣಕೋಟಿ
ಯಿಂದ-- ನನ್ನೆದೆಗಿಳಿಸಿ
ಬೆಚ್ಚಗಾಗಿಸು!
ಉಸಿರಾಗಿಸು!
ಆ ಮೇಲೆ
ತಂಪಾಗಿಸು!!

***********************ಪದ್ಯಾಣ.

- padyana

31 Jan 2017, 10:19 pm

ವಿಫಲ ಮನಸ್ಸು

ನಿನಗಾಗಿ ಕಾಯುವ ಬದಲು,
ಕಲ್ಲ ಮುಂದೆ ಕಾದಿದ್ದರೆ, ಕಲ್ಲಿಗೆ ಜೀವ
ಬರುತ್ತಿತ್ತೋ ಏನೋ?
ನಿನಗಾಗಿ ಕಣ್ಣೀರ್ ಇಡುವ ಬದಲು,
ಕಲ್ಲ ಮುಂದೆ ಅತ್ತಿದ್ದರೆ, ನನ್ನ ಕಣ್ಣೀರ
ಓರುತ್ತಿತ್ತೋ ಏನೋ?



ಹರೀಶ್

- Harish

31 Jan 2017, 09:37 pm

ಮುರಿದ ಕೊಳಲು...

ಹೇ ಮನಸೇ.....
ದೂರವಾಗುವ ಮುಂಚೆ ನೆನಪಾಗಲಿಲ್ಲ ಯಾಕೆ....
ನನ್ನೀ ಹೃದಯದ ಪ್ರತಿ ನಾಡಿಮಿಡಿತದಲ್ಲೂ ನಿನ್ನದೆ ನೆನಪು ...
ಸಮುದ್ರದ ಅಲೆಗಿಂತಲೂ ರಭಸವಾಗಿ
ಸುಂಟರ ಗಾಳಿಗಿಂತಲೂ ಬಿರುಸಾಗಿ
ನನ್ನ ಮನವನ್ನು ಛಿದ್ರ ಮಾಡಿತ್ತು ಆ ನಿನ್ನ ಮಾತು....
ನನ್ನ ಕಣ್ಣೀರ ಪ್ರತಿ ಹನಿಯು ಸಾರುತ್ತಿದೆ ನಿನ್ನದೇ ಹೆಸರು...
ಅರ್ಥವಾದರೂ ನೀ ಯಾಕೆ ಸುಮ್ಮನಿರುವೆ..
ನೀರಿನಾಸರೆ ಇಲ್ಲದೆ ಮೀನು ಎಂದಾದರೂ ಬದುಕವುದೇ..
ರೆಕ್ಕೆ ಮುರಿದ ಹಕ್ಕಿ ಎಂದಾದರೂ ಹಾರುವುದೇ...
ನೀನಿರದ ಈ ಬಾಳು ಅದಕ್ಕಿಂತಲೂ ಘೋರವಾದುದು...

- ನಮಿತ ಗಟ್ಟಿ

31 Jan 2017, 09:06 pm

ಹ್ರದಯ ದೂರ

" ಮರಿಬೇಕು ಅನ್ಕೋತ್ತಿನಿ ಆದರೆ ಮನಸ್ಸು
"
" ಓಪೋಲ್ಲ ದೂರ ಆಗ್ಬೇಕು ಅನ್ಕೋತಿನಿ ಆದರೆ "

" ನೆನಪುಗಳು ಕೆಳೋಲ್ಲ ಪ್ರೀತಿಸ ಬಾರದು ಅನ್ಕೋತ್ತಿನಿ "

" ಆದರೆ ಹ್ರದಯ ಬಿಡೋಲ್ಲ "


ಮಂಜು

- ಮಂಜುM

31 Jan 2017, 08:07 pm

ನೀನೆಂದರೆ .......

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ಮಾಯೆಯೊಳಗೆ ಬಂದ ನನ್ನ ಕನಸು ನೀನೇ
ಜೀವಕ್ಕಿಂತ ನಿನ್ನ ಹೆಚ್ಚು ಪ್ರೀತಿಸೋನು ನಾನೇ
ಕಣ್ಣೀರ ಒರೆಸೋಳು ನೀನೇ ತಾನೇ
ಹೃದಯನ ದೋಚಿದೋಳು ನೀನೇ ತಾನೇ

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ನಿನ್ನಿಂದ ನಾನು ನನಗಾಗೆ ಹುಟ್ಟಿದವಳು ನೀನು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನಸ್ಸಿನ ಬಾಗಿಲ ತೆರೆದು
ಕಣ್ಣು ಮುಚ್ಚಿ ತೆರೆಯೋದಕ್ಕೂ ಮುಂಚೆ ಮಿಂಚಿ ಮರೆಯಾದವಳು ನೀನೇ ತಾನೇ ..

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ಎಲ್ಲಿರುವೆ ನನ್ನ ಮನದರಸಿ
ಬರಲಾರೆಯಾ ನೀ ನನ್ನ ಬಯಸಿ..
ಕಾದು ಕಾದು ಸಾಕಾಯಿತು
ನಿನ್ನ ನೆನೆದು ಈ ಹೃದಯ ಭಾರವಾಯಿತು.!!

- ನಮಿತ ಗಟ್ಟಿ

31 Jan 2017, 04:49 pm

ನನ್ನವಳ ದುರವಿದ್ದಾಗ

ಹೇ...ಗೆಳತಿ...ಹೇಗಿದ್ದೀಯಾ...?
ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ....? ಎಲ್ಲಿದ್ದೀಯ....? ಏನು ಮಾಡ್ತಿದ್ದೀಯಾ...?
ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ...ನಿನ್ನ ಉತ್ತರ ಕೇಳಿ....ನನಗೆ ತುಂಬಾ ಸಮಾಧಾನ ಆಯ್ತು...!
ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ...ನಿನ್ನೆದುರಿಗೆ ವ್ಯಕ್ತಪಡಿಸೋದು...?
ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ...!!
ನಮ್ಮ ಹಿಂದಿನ ಸವಿ....ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ...!!
ಅವತ್ತು ಸವಿಯಾಗಿದ್ದ ....ಪ್ರೀತಿ ಇಂದಿಗೂ ನನಗೆ ಸವಿಯೇ...!!
ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ....!!
ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ ಆಗಲ್ಲ...!! ಹೋಗಲಿ ಬಿಡು..ಗೆಳತಿ...!!
ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು ನಿಜವಾಗಿಯೂ ಒಂದು ಸಾಹಸವೇ ಹೌದು...!!
ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ...ತೊದಲುತ್ತಿದೆ...!!
ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು....!!
ನಾವೇನು ಪ್ರೀತಿಗಾಗಿ ತಾಮಹಲ್ ಕಟ್ಟಬೇಕಾಗಿರಲಿಲ್ಲ...ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು..!!
ಈ... ದಿನ ನಿನ್ನ ಬದುಕು ಹಸನಾಗಿದೆ....ಪರವಾಗಿಲ್ಲ...!!
ಸಾವಿನ ಹಾದಿಯಲಿ ಉಸಿರು ಹುಡುಕುವವನು ನಾನು...!!
ನಿನ್ನ ಬದುಕು ...ಹೀಗೆ...ಸುಂದರವಾಗಿರಲೆಂದೆ ನನ್ನ ಹಾರೈಕೆ....!!

"" ಮಲ್ಲಿಕಾರ್ಜುನ ""

- Mallikarjun

31 Jan 2017, 03:09 pm

ಪ್ರೀತಿಯ ಆರಾದನೆ

ಕಣ್ಮುಚಿದರೆ ನೀ ನನ್ನ ಕನಸಿನಲ್ಲಿ 
ಕಣ್ ಬಿಟ್ಟರೆ ನೀ ನನ್ನ ನೆನಪಿನಲ್ಲಿ 
ನನ್ನೋಳಗೆ ನಾನಿಲ್ಲ ನೀನೇ ನನ್ನಲ್ಲಿ
ಕಣ್ಮುಂದೆ ಬರುವೆ ನೆನೆದಲ್ಲಿ
ಅಳಿಯದು ನಿನ್ನ ಚಿತ್ರ  ನನ್ನ ಮನದಲ್ಲಿ
ಇರುವ ಬಯಕೆ ಗೂಡು ಕಟ್ಟಿ ನಿನ್ನ ಮನಸಲ್ಲಿ

ಅನಿಸುವಾಗಲೇಲ್ಲಾ ನಾ ಮುಟ್ಟುವೆ ನನ್ನ ಹ್ರುದಯವನ್ನಾ
ನಿನ್ನ ನೆನೆದು ಮರೆಯುವೆ ನನ್ನನೆ ನಾ
ನಿನ್ನ ಪ್ರೀತಿಯ ಆರಾದನೆ ಮಾಡಿದೆ ನನ್ನ ಮನ
ಅದ ಬಿಚ್ಚಿ ಹೇಳಲಾರದೆ ಮೂಡಿದೆ ನೂರು ಕವನ

- ರಾಜೇಶ್

31 Jan 2017, 01:27 pm

ಮಮಕಾರ

ಜೋರಾಗಿ ಬೀಸುತ್ತಿರುವ ಮಳೆ...
ಹೆದರಿ ಮುದ್ದೆಯಾಗಿರುವ ಕಾಗೆ ಮರಿ ತನ್ನ ತಾಯಿಗಾಗಿ ಹಂಬಲಿಸುತ್ತಿರಲು...
ಹಸಿದ ನಾಯಿಯೊಂದು ಬಾಯಿ ಚಪ್ಪರಿಸಿಕೊಂಡು ಅತ್ತ ಕಡೆ ಧಾವಿಸುತ್ತಿದೆ..
ಗಾಳಿಯ ರಭಸಕ್ಕೆ ಮರದ ರೆಂಬೆ ತುಂಡಾಗಲು,ಮರಿಯ ಗೂಡು ಕೆಳಗೆ ಬೀಳಲು...
ಅಯ್ಯೋ!! ಕಾಗೆ ಮರಿಯ ಅರಚಾಟ ಕೇಳಲಾಗದು...
ಆ ಸಮಯದಲ್ಲಿ ತಾಯಿ ಕಾಗೆಯು ಹಾರಿಬರಲು..
ನಾಯಿಯಲ್ಲಿ ಬೇಡಿಕೊಂಡಿತು ಹೀಗೆಂದು,
ಮುಟ್ಟದಿರು ,ತಿನ್ನದಿರು ಓ ಎನ್ನ ಅಣ್ಣ..
ಕಂದಮ್ಮನಿಲ್ಲದೆ ನಾ ತಾನೇ ಹೇಗೆ ಬದುಕಲಿ..
ತನ್ನ ತಿಂದು ಎನ್ನಕಂದನ ಜೀವ ಉಳಿಸೆಂದು ಪರಿ ಪರಿಯಾಗಿ ಕೇಳಲು...
ನಾಯಿಯ ಮನಃ ಕರಗಲು ಮರಿಯನ್ನು ಮುಟ್ಟದೆ ಹೊರಟು ಹೋಯಿತು...

- ನಮಿತ ಗಟ್ಟಿ

31 Jan 2017, 11:32 am