Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಾತು

ಮಾತು ಗತಿ ತಪ್ಪಿದರೆ
ಹೋಗುವುದು ಮಾನ
ಮಾತು ಮಿತಿಯಲ್ಲಿದ್ದರೆ
ಸಿಗುವುದು ಸನ್ಮಾನ

- ಕ್ರಿಯೆಟೀವ್ ಕೃಷ್ಣ

31 Jan 2017, 08:18 am

ನಾ ಕಂಡ ಕನಸು ನನ್ನ ವಳ ನೆನಪಲ

ಕಂಡ ಕನಸು ಕೈಗೂಡದೆಂದು.ಕನಸು ಕಾಣುವುದ ಬಿಡಲಿಲ್ಲ ನಾ.!
ನನ್ನ ಪ್ರೀತಿ ನೀನು.ನೀ ಸಿಗದೇ ಹೋದರೇನಂತೆ.?
ನಾ ನಿನ್ನನು ಪ್ರೀತಿಸುವುದ ಮರೆತಿಲ್ಲ.ಈ.ಮೆದುಳಿಗೆ ಮರೆವುಂಟೆ ಹೊರತು.!
ಪ್ರತಿ ಕ್ಷಣ ಬಡಿಯುವ .ಈ .ಪುಟ್ಟ ಹೃದಯಕ್ಕಲ್ಲ.
ಒಲವೇ ನೀನೆಲ್ಲಿರುವೇ.?
ಪ್ರಾಣ ಉಳಿಸೋ ಕಾಯಿಲೆಗೆ.ಪ್ರೀತಿಯೆಂದೆನ್ನಬಹುದೇ.?

- Mallikarjun

31 Jan 2017, 07:49 am

ನನ್ನವಳ ನೆನಪಿನಲ್ಲಿ

ಚೂರಾಯ್ತು ಹೃದಯದ ಚಿಪ್ಪು.ಕಳೆದು ಹೋಯ್ತು ಪ್ರೀತಿಯ ಮುತ್ತು.
ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು.
ನಾ ಬರೆದ ಕವನಗಳೆಲ್ಲಾ.ಬರೀ ನೆನಪುಗಳ ಚರಿತ್ರೆಯಾಯ್ತು !
ಕಮರಿಹೋದ ನನ್ನ ಕನಸಿನ ಹೂಗಳು.ಅರಳಲಿ ಅವಳ ಬಾಳಲಿ ಎಂದೆಂದೂ
ಆಶಿಸುವೆ ಅವು ಸದಾ ನಗುತಿರಲೆಂದು.
ಪ್ರೀತಿ ನರಳಿದರೆ.ಹೃದಯ ಅರಳೊಲ್ಲ ಗೆಳೆತಿ.
ಚೂರಾದ ಚಿಪ್ಪಿನಲಿ.ಉಸಿರಾಡುವ ಪ್ರೇಮಿ ನಾನು?

"" ಮಲ್ಲಿಕಾರ್ಜುನ ""

- Mallikarjun

31 Jan 2017, 07:44 am

ನಮ್ಮೂರ ಸಂಕ್ರಾಂತಿ

ನಮ್ಮೂರ ಸಂಕ್ರಾಂತಿ
ಸಿದ್ಧರಾಮನ ಜಾತ್ರಿಗೆ ಹೋಗೋಣ ಬಾ ಗೆಳತಿ
ನಾಡೆಲ್ಲಾ ಬರುತ್ತದೆ ನೋಡಾಕ!
ಸಂಕ್ರಾಂತಿ ಹಬ್ಬಕ ಸಿದ್ಧರಾಮನ ಮದುವೆ
ಸಂಜೆ ನಂದಿಕೋಲ ಮುಗಿಲಕ್ಕ!!

ನೀನಾದರು ಬಂದರೆ ನಾನಾದರೂ ಬರತೇನ
ನಮ್ಮಿಬ್ಬರ ಹೊಸಮಾತು ಜಾತ್ರ್ಯಾಗ ನನ್ನವಳೆ
ಸಂಕ್ರಾಂತಿ ಸವಿನೆನಪು ಮನದಾಗ,!!
ಹತ್ತಿರ ಬಂದಾಗ ಮತ್ತೇನು ಹೇಳಲಿ ಕಯಿ ಹಿಡಿದು ಮುಂದೆ ನಡೆದಾಗ ! ಹಳೆನೆನಪು ಮೂಡಿತ್ತ ಮಾವಿನ ಬನದಾಗ!!
ಬೆಳದಿಂಗಳಲ್ಲಿ ಕಂಡ ಬೆಳ್ಳಕ್ಕಿಹಿಂಡಿನಂತೆ ನೀ ಬರುವ ದಾರಿ ಕಾಯ್ದೇನ! ನನ್ನ ಚಿನ್ನಾ ಬಾಳ ನೆನದೇನ ಮನದಾಗ!!
ಜಾತ್ರಿಗೆಲ್ಲರು ಬಂದು ಕಯಿ ಮಾಡಿ ನಮ್ಮವ್ವ ಕಣ್ಣಲ್ಲೇ ಕೇಳಿದಳು ಮಂದ್ಯಾಗ ! ನಿನ್ನನೋಡಿ ಅವಳ್ಯಾರೋ ನಿನ್ನ ಹತ್ತಿರದಾಗ ಅಂತ!!
ಹಕ್ಕಿಯ ಇಂಚರ ಚುಕ್ಕಿಯ ಚಿತ್ತಾರ ಮುಗಿಲ ತುಂಬಿದೆ ಸಿಂಗಾರ ! ನನ್ನ ಗೆಳತಿ ನೀ ನನ್ನ ಪ್ರೇಮದ ಸಿಂಧೂರ ನನ್ನ ದೆಯ ವಿಣೆ ನಿನು

"""" ಮಲ್ಲಿಕಾರ್ಜುನ """"""

- Mallikarjun

31 Jan 2017, 07:40 am

ಎಂದೂ ಮುಗಿಯದ ಗೋಳು

ಶೂದ್ರ ಕವಿಗಳ -ಲೇಖಕರಗಳ ಸಮಾನತೆ ಸಂದೇಶ
ಸುಟ್ಟು ಹಾಕಿರಿ
ದಾರ್ಶನಿಕರು - ಸಮಾಜ ಸುಧಾರಕರ ಭ್ರಾತತ್ವ ತತ್ವಗಳ ಮೂಲೆಗೆ ತಳ್ಳಿರಿ
ರಾಜಕೀಯವರ ಭರವಸೆಯ ಮಾತುಗಳು ಕಸದ ತೊಟ್ಟಿಗೆ ಎಸೆಯಿರಿ

ಭಾರತ ವಿಕಾಸ ಹೊಂದಿ ಏಳು ದಶ ವರ್ಷ ಬರುತ್ತಿದೆ
ನಾವು ಇನ್ನು ಕೊಳಚೆ ಸಂಸ್ಕೃತಿಯಲ್ಲಿ
ಬದುಕು ಸಾಗಿದೆ
ನರಿ ತೋಳಗಳು ಧರ್ಮದ ಹೆಸರಿನಲ್ಲಿ ದೂರ ತಳ್ಳಿದೆ
ನಮ್ಮ ಜೀವನ ಕನಸೆಂಬ ಕುದರೆ ಏರಿ ಸಾಗಿದೆ

"ಸಮಪಾಲು ಸಮಜೀವನ'"
ಹುಣ್ಣುಮೆ ಚಂದಿರನ ಆಗಮನ
ಹುಡುಕಿದನು ಬೆಳ್ಳಿಯ ಕಿರಣನ
ಮಿಂಚಿನಂತೆ ಮಾಯವಾದನು

ಆಶಾ ಭಾವನೆ ಬತ್ತಿ ಹೋಗುರಿವುದು
ಬದುಕುವ ಹಕ್ಕು ಕಿತ್ತು ಹೋಗುರಿವುದು
ಮುಕ್ತಾಯ ಎಂದು ಕೊನೆಗಾಣಸುವುದು
ಇಲ್ಲಾ ನಮ್ಮನ್ನ ಮಾರಣಹೋಮ ನಡೆಸುವುದು

- Shinan

31 Jan 2017, 07:01 am

ನoಬಿಕೆ

ಈ ಪ್ರಪಂಚದಲ್ಲಿ ಯಾವುದೇ
ಬಂದಕ್ಕಾಗಲಿ ನoಬಿಕೆ ಬಹಳ ಮುಖ್ಯ.

ಅದು ಸ್ನೆಹಕ್ಕಾಗಲೀ ,ಪ್ರೀತಿಗಾಗಲೀ
ಅಭಿಮಾನಕ್ಕಾಗಲೀ .

ಒಬ್ಬ ವ್ಯಕ್ತಿ ಇನ್ನೊಬ್ಬರನ್ನು ನoಬಬೇಕು
ಅವರ ಪರಿಸ್ತಿತಿಯನ್ನು ಅರ್ಥ ಮಾಡಿಕೊಳ್ಳಬೇಕು .

ನಿಮಗೆ ಕಾಣುವ ನಗುವಿನ ಹಿoದಿರುವ
ಕಣ್ಣೀರ ಕಳೆಗಳನ್ನು ಕಾಣಬೇಕು.

ಆಗ ತಾನೇ ನೀವು ಅವರ
ಆತ್ಮೀಯರಾಗುತ್ತಿರಿ .

ಸಂತೋಷದಲ್ಲಿ ಎಲ್ಲಾರೂ ನಿಮ್ಮ
ಬಳಿ ಇರುತ್ತಾರೆ ಆದರೆ ದುಃಖದಲ್ಲಿ
ನಿಮ್ಮನ್ನು ಇಷ್ಟ ಪಡುವವರು ಮಾತ್ರ
ಕಣ್ಣೀರು ಹೊರೆಸುತ್ತರೆ ನೆನಪಿಡಿ .....!!!

- ಚುಕ್ಕಿ

30 Jan 2017, 11:48 pm

ಶಿಳ್ಳೆ..

ರಾಮ ಬಿಲ್ಲನ್ನು ಮುರಿದಾಕ್ಷಣ
ಸೀತೆ ಓಡಿ ಬಂದಳು

ಕೃಷ್ಣ ಕೊಳಲನ್ನು ಉದಿದಾಕ್ಷಣ
ರಾಧೆ ಓಡಿ ಬಂದಳು

ನಾನು ಕೇವಲ ಶಿಳ್ಳೆ ಹೊಡೆದೆ
ಅವಳು ಅಪ್ಪನ ಕರೆ ತಂದಳು...

- ಕುಮಾರ ಸಿದ್ದರಾಜ

30 Jan 2017, 10:31 pm

ಅರಿವು

ನನ್ನನ್ನು , ನಾನು ಕೇಳಿಕೊಂಡೆ
ನಾನು ಯಾರೆಂದು?
ಅರಸುತ್ತಾ......... ಹೋದೆ..!!!
ಅರಳುತ್ತಾ ....ಹೋದೆ.

- ಕ್ರಿಯೆಟೀವ್ ಕೃಷ್ಣ

30 Jan 2017, 10:23 pm

ನನ್ನದೆಯ ಬಾನುಲಿ

""ನನ್ನೆದೆಯ ಬಾನುಲಿಯಲಿ ನನ್ನ ಅರ್ದಂಗಿ""

ಮಾತು ಮೊಳಗಿತು; ಸ್ನೇಹ ಚಿಗುರಿತು
ಹೃದಯವಿಣಿ ಹಾಡಿತು!
ಪ್ರೇಮದ್ವನಿಯಲಿ ಮನಸು ಅರಳಿತು ಸ್ನೇಹದಲೆಗಳು ಉಕ್ಕಿತು !!
ಭವಸಮುದ್ರದ ಅಲೆಗಳ
ಅಟ್ಟಹಾಸದಲಿ ಮನಸು ಬೆಸುಗೆಯ ಇಂಚರ!
ಭವ್ಯಜೀವನದ ಮಧುರ ತೊಟ್ಟಿಲಲಿ ಸುಖದುಃಖಗಳ ಸಿರಿಶಿಖರ !!
ನಮ್ಮಿಬ್ಬರ ಸ್ನೇಹ ಪ್ರೀತಿ ಬೆಳದಿಂಗಾಳಗ ಅಮರಜ್ಯೋತಿ!
ನಿನ್ನ ಪ್ರೇಮ ಹೃದಯದಲ್ಲಿ ತುಂಬಿದೆ ದಿವ್ಯ ಸ್ಪೂರ್ತಿ!!
ರಂಭೆ ಊವ್ರಶಿಯರಂತೆ ನಿನ್ನ ಚಲುವ ಬಿಂಬವನ್ನು ನೋಡಿ!
ಅಮ್ಮನಿಗೆ ಹೆಳಿದೆ ನಿನ್ನ ಹೆಸರು !
ಅಮ್ಮ ಕೆಳಿದಳು ಯಾವ ಪಟ್ಟಣದ "ನಾರಿಯವಳು" ಅಂತ?

ಸಮಯ ವಾಹಿನಿ ಮಂಡ್ಯ ಜಿಲ್ಲೆ
"" ಮಲ್ಲಿಕಾರ್ಜುನ ""

- Mallikarjun

30 Jan 2017, 10:22 pm

ಅಸೂಹೆ

ನಿನ್ನ ಕಣ್ಣ ಕನ್ನಡಿಯಲ್ಲಿ
ನನ್ನ ನಾ ಕಂಡಾಗಿನಿಂದ
ಬೇರೆ ಯಾವ ಕನ್ನಡಿಯು ಇಸ್ಟವಾಗುತಿಲ್ಲ
ನಿನ್ನ ಪ್ರೀತಿಯ ಪ್ರಪಾತಕ್ಕೆ ಬಿದ್ದಾಗಿನಿಂದ
ನಿನ್ನ ಯಾರೇ ನೋಡಿದರು,
ನನಗೆ ಸಹಿಸಲಾಗುತ್ತಿಲ್ಲ...

***************
ಕುಮಾರ ಸಿದ್ದರಾಜ್

- ಕುಮಾರ ಸಿದ್ದರಾಜ

30 Jan 2017, 10:00 pm