ಚೂರಾಯ್ತು ಹೃದಯದ ಚಿಪ್ಪು.ಕಳೆದು ಹೋಯ್ತು ಪ್ರೀತಿಯ ಮುತ್ತು.
ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು.
ನಾ ಬರೆದ ಕವನಗಳೆಲ್ಲಾ.ಬರೀ ನೆನಪುಗಳ ಚರಿತ್ರೆಯಾಯ್ತು !
ಕಮರಿಹೋದ ನನ್ನ ಕನಸಿನ ಹೂಗಳು.ಅರಳಲಿ ಅವಳ ಬಾಳಲಿ ಎಂದೆಂದೂ
ಆಶಿಸುವೆ ಅವು ಸದಾ ನಗುತಿರಲೆಂದು.
ಪ್ರೀತಿ ನರಳಿದರೆ.ಹೃದಯ ಅರಳೊಲ್ಲ ಗೆಳೆತಿ.
ಚೂರಾದ ಚಿಪ್ಪಿನಲಿ.ಉಸಿರಾಡುವ ಪ್ರೇಮಿ ನಾನು?
ನಮ್ಮೂರ ಸಂಕ್ರಾಂತಿ
ಸಿದ್ಧರಾಮನ ಜಾತ್ರಿಗೆ ಹೋಗೋಣ ಬಾ ಗೆಳತಿ
ನಾಡೆಲ್ಲಾ ಬರುತ್ತದೆ ನೋಡಾಕ!
ಸಂಕ್ರಾಂತಿ ಹಬ್ಬಕ ಸಿದ್ಧರಾಮನ ಮದುವೆ
ಸಂಜೆ ನಂದಿಕೋಲ ಮುಗಿಲಕ್ಕ!!
ನೀನಾದರು ಬಂದರೆ ನಾನಾದರೂ ಬರತೇನ
ನಮ್ಮಿಬ್ಬರ ಹೊಸಮಾತು ಜಾತ್ರ್ಯಾಗ ನನ್ನವಳೆ
ಸಂಕ್ರಾಂತಿ ಸವಿನೆನಪು ಮನದಾಗ,!!
ಹತ್ತಿರ ಬಂದಾಗ ಮತ್ತೇನು ಹೇಳಲಿ ಕಯಿ ಹಿಡಿದು ಮುಂದೆ ನಡೆದಾಗ ! ಹಳೆನೆನಪು ಮೂಡಿತ್ತ ಮಾವಿನ ಬನದಾಗ!!
ಬೆಳದಿಂಗಳಲ್ಲಿ ಕಂಡ ಬೆಳ್ಳಕ್ಕಿಹಿಂಡಿನಂತೆ ನೀ ಬರುವ ದಾರಿ ಕಾಯ್ದೇನ! ನನ್ನ ಚಿನ್ನಾ ಬಾಳ ನೆನದೇನ ಮನದಾಗ!!
ಜಾತ್ರಿಗೆಲ್ಲರು ಬಂದು ಕಯಿ ಮಾಡಿ ನಮ್ಮವ್ವ ಕಣ್ಣಲ್ಲೇ ಕೇಳಿದಳು ಮಂದ್ಯಾಗ ! ನಿನ್ನನೋಡಿ ಅವಳ್ಯಾರೋ ನಿನ್ನ ಹತ್ತಿರದಾಗ ಅಂತ!!
ಹಕ್ಕಿಯ ಇಂಚರ ಚುಕ್ಕಿಯ ಚಿತ್ತಾರ ಮುಗಿಲ ತುಂಬಿದೆ ಸಿಂಗಾರ ! ನನ್ನ ಗೆಳತಿ ನೀ ನನ್ನ ಪ್ರೇಮದ ಸಿಂಧೂರ ನನ್ನ ದೆಯ ವಿಣೆ ನಿನು
ಶೂದ್ರ ಕವಿಗಳ -ಲೇಖಕರಗಳ ಸಮಾನತೆ ಸಂದೇಶ
ಸುಟ್ಟು ಹಾಕಿರಿ
ದಾರ್ಶನಿಕರು - ಸಮಾಜ ಸುಧಾರಕರ ಭ್ರಾತತ್ವ ತತ್ವಗಳ ಮೂಲೆಗೆ ತಳ್ಳಿರಿ
ರಾಜಕೀಯವರ ಭರವಸೆಯ ಮಾತುಗಳು ಕಸದ ತೊಟ್ಟಿಗೆ ಎಸೆಯಿರಿ
ಭಾರತ ವಿಕಾಸ ಹೊಂದಿ ಏಳು ದಶ ವರ್ಷ ಬರುತ್ತಿದೆ
ನಾವು ಇನ್ನು ಕೊಳಚೆ ಸಂಸ್ಕೃತಿಯಲ್ಲಿ
ಬದುಕು ಸಾಗಿದೆ
ನರಿ ತೋಳಗಳು ಧರ್ಮದ ಹೆಸರಿನಲ್ಲಿ ದೂರ ತಳ್ಳಿದೆ
ನಮ್ಮ ಜೀವನ ಕನಸೆಂಬ ಕುದರೆ ಏರಿ ಸಾಗಿದೆ
ನಿನ್ನ ಕಣ್ಣ ಕನ್ನಡಿಯಲ್ಲಿ
ನನ್ನ ನಾ ಕಂಡಾಗಿನಿಂದ
ಬೇರೆ ಯಾವ ಕನ್ನಡಿಯು ಇಸ್ಟವಾಗುತಿಲ್ಲ
ನಿನ್ನ ಪ್ರೀತಿಯ ಪ್ರಪಾತಕ್ಕೆ ಬಿದ್ದಾಗಿನಿಂದ
ನಿನ್ನ ಯಾರೇ ನೋಡಿದರು,
ನನಗೆ ಸಹಿಸಲಾಗುತ್ತಿಲ್ಲ...