ಅವಳೆಂದರೆ ತಪಸ್ಸು ...
ಸಪ್ತ ಸಾಗರಗಳ ಸುಲಭವಾಗಿ ದಾಟಬಹುದು...ಆದರೆ ಅವಳ ಮನಸ್ಸು ಮುಟ್ಟಲು ಇನ್ನೂ ಆಗಿಲ್ಲ....
ಅವಳು ಬರುವ ದಾರಿಯಲ್ಲಿ ಕಾಯುತ್ತಿದ್ದೆ...ಆದರೆ ಎಂದೂ ಅವಳು ಹಿಂತುರಿಗಿ ನೋಡಿದವಳಲ್ಲ..
ಅವಳು ಎದರು ಬಂದರೆ ಸಾಕು ಮನಸ್ಸಲ್ಲೆನೋ ತಳಮಳ...
ಮುಖ ನೋಡದೆ ಮನಸ್ಸು ಕದ್ದವಳು...ಮಾತಡದೆ ಹೃದಯ ದೋಚಿದವಳು..
ಅವಳು ನಕ್ಕರೆ ಸಾಕು ಚಂದ್ರನು ನಾಚಿ ನೀರಾಗುವನು..
ಪದಪುಂಜಗಳೇ ಸಾಲುತ್ತಿಲ್ಲ ನನ್ನ ದೇವತೆಯ ಬಣ್ಣಿಸಲು ...
ನಿಜಕ್ಕೂ ಅವಳೊಂದು ಅದ್ಭುತ ಶಕ್ತಿ...
ಬದುಕೆಂಬ ಈ ಖಾಲಿ ಹಾಳೆಯಲಿ ಬರೆಯುವುದಾದರೂ ಏನನ್ನು...
ಆಸರೆಯ ಬಂಧನದೊಳಗಿನ ನಾಲ್ಕು ದಿನದ ಜೀವನ..
ಸ್ವಾರ್ಥದ ಬೇಹುದಿಯೊಳಗೆ ಬೆಂದು ಹೋದವರೆಷ್ಟೋ...
ಅಸತ್ಯದ ಕೂಪದೊಳಗೆ ಸತ್ತು ಬದುಕಿದವರೆಷ್ಟೋ..
ಬಚ್ಚಿಡಲು ಅದೇನು ಬಂಗಾರದ ಕಲಶವಲ್ಲ..
ಹಣವಿಲ್ಲದವನಿಗೆ ಕಾಸು ಮಾಡುವ ಹಂಬಲ ಒಂದೆಡೆಯಾದರೆ..
ಇದ್ದವನಿಗೆ ಅದನ್ನು ಹೇಗೆ ಬಚ್ಚಿಡಬೇಕೆಂಬ ಚಿಂತೆ...
ಮರ ಅದೆಷ್ಟೇ ಎತ್ತರಕ್ಕೆ ಹೋದರೂ ಜೋರಾಗಿ ಬೀಸುವ ಗಾಳಿಗೆ ತಲೆ ಒಡ್ಡಲೇಬೇಕು..
ಅಂತೆಯೇ ಮಾನವ ಸುಖದ ಸುಪ್ಪತ್ತಿಗೆ ಏರಿದ್ದರೂ ಒಂದು ದಿನ ಸಾವಿನ ಕುಣಿಕೆಗೆ ತಲೆಬಾಗಲೇಬೇಕು...
ಮನಸೆ ಮನಸೆ ಮೌನದೊಳಗಿನ ಮಾತು ತಿಳಿಯೆ ನಿನ್ನ ಮುಗುಳ್ನಗೆ ತದಿಂದೆ ಮನಸಲಿಂದು ಏಳು ಬಣ್ಣ, ನೂರೆಂಟು ಕಲಹ ,ನೊರೆ ಹಾಲಸ್ನೇಹ ನಿನ್ನ ನೋಟ, ಕದ್ದು ನೋಡಲು ಚೆನ್ನ ನಿನ್ನ ಮಾತು ..,ಸವಿಗಾನ ಸಿಹಿಯಾನ.