Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದ ಮಂದಿರವ ತೆರೆದಿರುವೆ ನಿನ

ಅವಳೆಂದರೆ ತಪಸ್ಸು ...
ಸಪ್ತ ಸಾಗರಗಳ ಸುಲಭವಾಗಿ ದಾಟಬಹುದು...ಆದರೆ ಅವಳ ಮನಸ್ಸು ಮುಟ್ಟಲು ಇನ್ನೂ ಆಗಿಲ್ಲ....
ಅವಳು ಬರುವ ದಾರಿಯಲ್ಲಿ ಕಾಯುತ್ತಿದ್ದೆ...ಆದರೆ ಎಂದೂ ಅವಳು ಹಿಂತುರಿಗಿ ನೋಡಿದವಳಲ್ಲ..
ಅವಳು ಎದರು ಬಂದರೆ ಸಾಕು ಮನಸ್ಸಲ್ಲೆನೋ ತಳಮಳ...
ಮುಖ ನೋಡದೆ ಮನಸ್ಸು ಕದ್ದವಳು...ಮಾತಡದೆ ಹೃದಯ ದೋಚಿದವಳು..
ಅವಳು ನಕ್ಕರೆ ಸಾಕು ಚಂದ್ರನು ನಾಚಿ ನೀರಾಗುವನು..
ಪದಪುಂಜಗಳೇ ಸಾಲುತ್ತಿಲ್ಲ ನನ್ನ ದೇವತೆಯ ಬಣ್ಣಿಸಲು ...
ನಿಜಕ್ಕೂ ಅವಳೊಂದು ಅದ್ಭುತ ಶಕ್ತಿ...

- ನಮಿತ ಗಟ್ಟಿ

30 Jan 2017, 09:50 pm

ನಲ್ಲೇ

ಎಲ್ಲಿ ಹೋದೆ ನಲ್ಲೇ
ಚಲ್ಲುತ ಪ್ರೀತಿಯನ್ನ ಎಲ್ಲಡೆ
ನಿನ್ನ ಪ್ರೀತಿಯ ತಂಗಾಳಿ
ಶಿಳ್ಳೆ ಹಾಕುತಿದೆ ಎದೆಯೊಳಗೆ...

ಹರಿಯುತಿದೆ ಪ್ರೀತಿ ನದಿಯಂತೆ
ಅಡೆ ತಡೆಗಳನ್ನ ದೂಡುತ ಬದಿಗೆ
ಪ್ರೀತಿಯ ಕಂಪು ಹರಡಿದೆ
ಗಡಿಗಳನ್ನ ಸರಿಸಿ ಬದಿಗೆ...

ಸವಿಜೇನಿನ ಬಿಂದಿಗೆಯ ತಂದು
ಸುರಿದಂತಾಗಿದೆ ಬಾಳಿಗೆ
ಕಣ್ಣಿಗೆ ಕಾಣುತ್ತಿಲ್ಲ ಅವಳು
ಆದರೆ ಮಿಟುತಿರುವಳು ಎದೆಯ ವೀಣೆ...


ಕುಮಾರ ಸಿದ್ದರಾಜ್
(Kumar SR )
ಬೆಂಗಳೂರು

- ಕುಮಾರ ಸಿದ್ದರಾಜ

30 Jan 2017, 09:42 pm

ಹುಡುಗಿ

ದೂರವಿದ್ದರೆ ಪ್ರೀತಿಯ ಹುಡುಗಿ
ಹೆಚ್ಚುವುದಲ್ಲವೆ ಪ್ರೀತಿ..
ದಿನವೂ ಎದುರಿಗೆ ಇದ್ದರೇ
ಆಗುವುದು ತೊಂದರೆ
ಮನಸು ಬಯಸುವುದು
ಏನೇನೋ ಹಾಗೆ ಒಳಗೂಳಗೆ...

- ಕುಮಾರ ಸಿದ್ದರಾಜ

30 Jan 2017, 09:10 pm

ನಿನ್ನ ನೆನಪಲಿ

ನಿನ್ನ ನೆನಪಲಿ
ನಿನ್ನ ಪ್ರೀತಿಯಲ್ಲಿ
ಮುಳುಗಿರುವೆ ನಾನು
ನನ್ನ ಉಳಿಸುವರು ಯಾರು?

ನಿನ್ನ ಒಲವಿನ ಅಂಗಳದಲ್ಲಿ
ಸಮಾಧಿ ಆಗಿರುವೆ
ನನ್ನ ಹೊರ ತೆಗೆಯುವರು ಯಾರು?

ನಿನ್ನ ಪ್ರೀತಿಯ ತಂಗಾಳಿ
ಹಾರಿಸಿದೆ ನನ್ನ ಗಾಳಿ ಪಟದಂತೆ
ಆ ಬಾನಿನ ಅಂಚಿನತ್ತ
ನನ್ನ ಮರಳಿ ತರುವವರು ಯಾರು?

ಒಲವಿನ ಬೆಂಕಿ ಸುಡುತಿದೆ
ನನ್ನ ಎದೆಯನು
ನನ್ನ ಅಪ್ಪಿ, ಬೆಂಕಿಯ ನಂದಿಸುವರು ಯಾರು?

- ಕುಮಾರ ಸಿದ್ದರಾಜ

30 Jan 2017, 09:00 pm

ಯಾರಿಗೂ ಕಾಣದ ಹಾಗೆ

ಯಾರಿಗೂ ಕಾಣದ ಹಾಗೆ
ಏನಾದರು ಕೊಡು ನನಗೆ
ಕೆನ್ನೆಗೆ ಎಟ ಕೊಟ್ಟರು ಸರಿಯೇ
ಸಿಹಿ ಮುತ್ತು ಕೊಟ್ಟರು ಸರಿಯೇ
ದಿನಕ್ಕೊಂದು ಬಾರಿ ನಿನ್ನ ಸ್ಪರ್ಶ
ಬೇಕು ನನಗೆ...

- ಕುಮಾರ ಸಿದ್ದರಾಜ

30 Jan 2017, 07:49 pm

ಪ್ರೀತಿ

ಕಲ್ಲು ಒಂದು ಪ್ರಕೃತಿ
ಕೆತ್ತಿ ಕೊರೆದರೆ ಆಗುವುದು ಆಕೃತಿ
ಅರಿಶಿನ, ಕುಂಕುಮ, ಹೂಗಳ ಇತ್ತು
ಪೂಜಿಸಲು ಸಂಸ್ಕೃತಿ
ಪ್ರೀತಿಯು ಸಹ ಅದೇ ರೀತಿ...

- ಕುಮಾರ ಸಿದ್ದರಾಜ

30 Jan 2017, 07:41 pm

ಏನು ಆಗದೆ ಎಲ್ಲವೂ ಆಗಿಹೋಯ್ತು

ಉರಿಸದೆ ಹತ್ತಿಕೊಂಡ ದೀಪ
ಆರಿಸದಿದ್ದರೂ ಆರಿಹೋಯ್ತು.

ಬೀಜವಿಲ್ಲದೇ ಬೆಳೆದ ಮರ
ಹಣ್ಣಾಗುವ ಮುನ್ನವೇ ಮಣ್ಣಾಯ್ತು.

ಕಣ್ಮುಚ್ಚಿದರೂ ಕಾಣುತಿದ್ದ ನಿನ್ನ ಮುಖ
ಕಣ್ತೆರೆದು ಹುಡುಕಾಡಿದರೂ ಕಾಣದಾಯ್ತು.

ಮೋಡ ಕವಿಯದೆ ಬಿದ್ದ ಮಳೆ
ಭೂಮಿ ತಾಕುವ ಮುನ್ನವೇ ಹಾವಿಯಾಯ್ತು.

ಬೆಂಕಿಯಲ್ಲಿ ಅರಳಿದ ಹೂವು
ನೀರೆರೆದರೆ ಬಾಡಿ ಹೋಯ್ತು.

ನಿದ್ದೆ ಕೂಡದ ನಿನ್ನ ಕನಸುಗಳು
ನನ್ನನು ಚಿರನಿದ್ರೆಗೆ ಜಾರಿಸಿತು.

ಸುಗಂಧ ಚೆಲ್ಲುವ ಹೂವೇ ಇಂದು
ಹಾವಾಗಿ ವಿಷ ಕಾರಿತು.

ದುಂಬಿ ಹೀರಿದ ಮಕರಂದವೇ
ಮರಣವಾಗಿ ಅದರ ಪ್ರಾಣ ಹರಣ ಮಾಡಿತು.

ಹೃದಯ ಬಡಿತವಾಗಿದ್ದ ನಿನ್ನ ನೆನಪುಗಳೇ
ನನಗಿಂದು ಹೃದಯಾಘಾತ ನೀಡಿತು.

ಬರಡು ನೆಲದ ಮೇಲೆ ಬದುಕಿದ ಮೀನು
ತುಂಬಿದ ನದಿಯಲ್ಲಿ ಬಿಟ್ಟರೂ ಬದುಕದಾಯ್ತು.

ಹೇಳದೆ ಹೊರಬಂದ ಮಾತು
ಕೇಳದಿದ್ದರೂ ಅರ್ಥವಾಯಿತು.

ಕೇಳದೆ ನೀ ನನಗೆ ಕೂಟ್ಟ ಹೃದಯ
ಹಿಡಿದಿಟ್ಟರೂ ಇರಲಾರದೆ ಪುನಃ ನಿನ್ನ ಸೇರಿತು.

ಬೆಂಕಿಯೇ ಇಲ್ಲದೆ ಮೂಡಿದ ಕಿಡಿ
ನೀರು ತಾಗಿ ಧಗಧಗನೇ ಉರಿಯಿತು.

ನೋವೇ ನಿನ್ನ ನಗುವಿನ ರೂಪ ತೆಳೆದು
ತಿಳಿಯದೆಯೇ ನನ್ನ ಬದುಕ ಹಿಂಡಿತು..

- ಇಂತಿ ಅಳುವಿನ ಮಡುವಿನಲಿ ಶಶಿ ಕಿರಣ಼

- ಅಕವಿ

30 Jan 2017, 07:40 pm

ಕಾಣದ ಬದುಕಿನ ಸುತ್ತ ಒಂದು ಸು

ಬದುಕೆಂಬ ಈ ಖಾಲಿ ಹಾಳೆಯಲಿ ಬರೆಯುವುದಾದರೂ ಏನನ್ನು...
ಆಸರೆಯ ಬಂಧನದೊಳಗಿನ ನಾಲ್ಕು ದಿನದ ಜೀವನ..
ಸ್ವಾರ್ಥದ ಬೇಹುದಿಯೊಳಗೆ ಬೆಂದು ಹೋದವರೆಷ್ಟೋ...
ಅಸತ್ಯದ ಕೂಪದೊಳಗೆ ಸತ್ತು ಬದುಕಿದವರೆಷ್ಟೋ..
ಬಚ್ಚಿಡಲು ಅದೇನು ಬಂಗಾರದ ಕಲಶವಲ್ಲ..
ಹಣವಿಲ್ಲದವನಿಗೆ ಕಾಸು ಮಾಡುವ ಹಂಬಲ ಒಂದೆಡೆಯಾದರೆ..
ಇದ್ದವನಿಗೆ ಅದನ್ನು ಹೇಗೆ ಬಚ್ಚಿಡಬೇಕೆಂಬ ಚಿಂತೆ...
ಮರ ಅದೆಷ್ಟೇ ಎತ್ತರಕ್ಕೆ ಹೋದರೂ ಜೋರಾಗಿ ಬೀಸುವ ಗಾಳಿಗೆ ತಲೆ ಒಡ್ಡಲೇಬೇಕು..
ಅಂತೆಯೇ ಮಾನವ ಸುಖದ ಸುಪ್ಪತ್ತಿಗೆ ಏರಿದ್ದರೂ ಒಂದು ದಿನ ಸಾವಿನ ಕುಣಿಕೆಗೆ ತಲೆಬಾಗಲೇಬೇಕು...

- ನಮಿತ ಗಟ್ಟಿ

30 Jan 2017, 07:02 pm

ಮೌನದೊಳಗಿನ ಮಾತು

ಮನಸೆ ಮನಸೆ ಮೌನದೊಳಗಿನ ಮಾತು ತಿಳಿಯೆ ನಿನ್ನ ಮುಗುಳ್ನಗೆ ತದಿಂದೆ ಮನಸಲಿಂದು ಏಳು ಬಣ್ಣ, ನೂರೆಂಟು ಕಲಹ ,ನೊರೆ ಹಾಲಸ್ನೇಹ ನಿನ್ನ ನೋಟ, ಕದ್ದು ನೋಡಲು ಚೆನ್ನ ನಿನ್ನ ಮಾತು ..,ಸವಿಗಾನ ಸಿಹಿಯಾನ.

- shree

30 Jan 2017, 06:18 pm

ನೋಡಲಾರೆನು

ನೊoದಿರುವೆ ಏಕೆ ಹ್ರುದಯವೇ
ನಿನ ನೋವ ಹoಚಿ ಕೋಲ್ಲುವವರು
ಯಾರು ಇಲ್ಲವೆoದೇ .............!!!!!!

ನoಬಿದವರು ದೂರ ಆದರೆoದೇ
ಏನು ಮಾಡಲಿ ನಾನು......?
ನಿನ್ನ ನೋವ ನೋಡಲಾಗುತ್ತಿಲ್ಲ.

ದೂರವಿದ್ದರೆ ನೀನು ಹತ್ತಿರ
ಕರೆದು ಸಮಾಧಾನ ಮಾಡುತ್ತಿದ್ದೆ
ಆದರೆ ಏನು ಮಾಡೋದು
ನೀನು ನನ್ನಲ್ಲೇ ಅಡಗಿದಿಯಲ್ಲಾ ...!!!!!!

- ಚುಕ್ಕಿ

30 Jan 2017, 06:10 pm