Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ ಶಾಯರಿ

ಜೀವನದ ಪಯಣ ತುಂಬ ದೊಡ್ಡದು ಗೆಳೆಯಾ
ಸ್ನೆಹಕ್ಕಾಗಿ ಹುಡುಕು
ಹೃದಯವಂತರು ಸಿಗಲಿ, ಸಿಗದಿರಲಿ
ನಿನ್ನ ಪ್ರಯತ್ನ ನೀ ಮುಂದುವರೆಸು
"ತಾಜ್" ಕಟ್ಟುವ ಸಾಹಸಕ್ಕೆ ಕೈ ಹಾಕಬೆಡಾ
ಬೀದಿಗೆ ಬಂದು ಬಿಡುವೆ
ಆದರೆ ಹೋದ ಕಡೆಯಲ್ಲ
ಮುಮ್ತಾಜ್ ಗಾಗಿ ನೀ ಹುಡುಕು.....

- ಕುಮಾರ ಸಿದ್ದರಾಜ

01 Feb 2017, 08:13 pm

ನಿಜವಾದ ಪ್ರೀತಿ

ನಿಜವಾದ ಪ್ರೀತಿ ಎಂಬುವುದು
ಕೇವಲ ಪಡೆವುದಲ್ಲ,
ಕೊಡುವುದು ಮತ್ತೆ ಕ್ಷಮಿಸುವುದು
ನಿಜವಾದ ಪ್ರೀತಿ ಎಂದರೆ
ಕೇವಲ ಪ್ರೇಮಿಗಳ ದಿನದಂದು
ಗುಲಾಬಿ ಹೂಗುಚ್ಚ ಕೊಡುವುದಲ್ಲ
ಇನ್ನುಳಿದ 364 ದಿನಗಳಲ್ಲೂ
ನೋವು ನಲಿವಿಗೂ ಸ್ಪಂದಿಸುವುದು

- ಕುಮಾರ ಸಿದ್ದರಾಜ

01 Feb 2017, 07:57 pm

ಪ್ರೀತಿ ಕುರುಡು

ಪ್ರೇಮಿಗಳಿಬ್ಬರು ನಿರ್ಧರಿಸಿದರು ಸಾಯುವುದೆಂದು
ಹತ್ತಿ ನಿಂತರು ಬೆಟ್ತವೊಂದು
ಹುಡುಗ ಜಿಗಿದನು ಮೊದಲು
ಕಣ್ಣ ಮುಚ್ಚುತ ಹಿಂದೆ ಸರಿದು
ಹುಡುಗಿ ಹೇಳಿದಳು "ಪ್ರೀತಿ ಕುರುಡು" ಎಂದು
ಗಾಳಿಯಲ್ಲಿ ತೇಲುತ್ತಿದ್ದ ಹುಡುಗ
ಪ್ಯಾರಾಚೂಟ್ ಬಿಚ್ಚುತ ಹೇಳಿದ
ಪ್ರೀತಿಗೆ ಸಾವಿಲ್ಲ ಎಂದು!!!

- ಕುಮಾರ ಸಿದ್ದರಾಜ

01 Feb 2017, 07:18 pm

ಸುರಿವ ಮಳೆಯ ಜೊತೆಯಲಿ

ಸುರಿವ ಮಳೆಯ ಜೊತೆಯಲಿ
ನೆನೆವ ಮನಸು ನನ್ನಲಿ
ಕಂಬನಿ ಧಾರೆ ಕಂಗಳಲ್ಲಿ
ಹರಿದು ಹೋಗಲಿ ಈ ಮಳೆಯ ಜೊತೆಯಲಿ..

ಕಳೆದ ದಿನಗಳ ನೆನಪು
ಕಣ್ಣ ತುಂಬಿ ನಿಂತಿರಲು
ಎದೆಯ ಗದ್ದೆಯಲಿ
ನಿನ್ನ ಪ್ರೀತಿಯೇ ಬಿತ್ತಿರಲು
ನೀ ಎಷ್ಟೇ ದೂರ ಸರಿದರು
ಕರಗದು ನಿನ್ನ ನೆನಪು
ನೆರಳಂತೆ ನಿನ್ನ ಒಲವು
ಬರುತಿದೆ ನನ್ನ ಜೊತೆಯಲಿ
ಸುರಿವ ಮಳೆಯ ಜೊತೆಯಲಿ...

ನೀ ನಗುತ್ತಾ ಇರುವೆ ಎಲ್ಲೂ ಅಲ್ಲಿ
ಹೂ ಮಳೆ ಸುರಿಯುತ್ತಿದೆ ಇಲ್ಲಿ
ನಿನ್ನ ಊಸಿರಿನ ತಂಪು
ತಂಗಾಳಿಯಂತೆ ಬಿಸುತಿದೆ ಇಲ್ಲಿ
ಅಡಗಿ ಕುಳಿತರೆನು ಅಲ್ಲಿ
ಬಾನ ತುಂಬ ನಿನ್ನ ರಂಗವಲ್ಲಿ
ಜೊತೆಯಾಗಿ ನಡೆದ ದಾರಿ ಎದುರಲಿ
ನಿನಗಾಗಿ ಕಾಯುತ ನಿಂತಿರುವೆ ಬಾ ಇಲ್ಲಿ
ಸುರಿವ ಮಳೆಯ ಜೊತೆಯಲಿ....

- ಕುಮಾರ ಸಿದ್ದರಾಜ

01 Feb 2017, 06:05 pm

ಪ್ರೀತಿಯ ನಶೆಯಲಿ.....

ನಿನ್ನಲಿ ನಾನಾಗಿ,
ಇರುವೆ ಮಗುವಾಗಿ,
ಕಾಪಾಡು ಜೋಪಾನವಾಗಿ,
ಉಳಿವೆ ನಿನ್ನಲಿ ಹಾಯಾಗಿ....


ಕಂಡಿಲ್ಲ ಎಲ್ಲೂ ನಿನ್ನಂತ ಹುಡುಗನ್ನ,
ನೀನು ಮರೆಸಿದೆ ಪ್ರೀತಿಯ ಕೊರತೆಯನ್ನ,
ಕಣ್ಣೀರ ಹನಿಯು ಜಾರುವ ಮುನ್ನ,
ಒಡ್ಡು ನಿನ್ನ ಕೈಯನ್ನ...


ನೀನಿರದ ಒಂದು ಕ್ಷಣ,
ಸುಟ್ಟು ಹೋದ ಬನ,
ಸಾವಿನಕಡೆಗೆ ಹೆಜ್ಜೆಯಿಟ್ಟ ಮನ,
ಬರಲಾರದು ಪುನಹ...

ಜೀವನದ ಕೊನೆಯ ಹಾಡನ್ನ,
ಹಾಡಬೇಕು ನಾವಿಬ್ಬರು ಒಂದುಗೂಡಿಸಿ ಧ್ವನಿಯನ್ನ,
ತೊರೆಯಬೇಡ ಒಂಟಿಯಾಗಿ ನನ್ನನ್ನ,
ಬಾಳೋಣ...ಮರೆತು ಈ ಸುಳ್ಳು ಜಗತ್ತನ್ನ....


ಹಾಡಿ ಹೊಗಳಬೇಕು ನನ್ನ-ನಿನ್ನ...
"ಜೋಡಿಯನ್ನ...."....

- Deekshitha Shetty

01 Feb 2017, 03:14 pm

ದಾರಿಯಿರಲಿ ಗುರಿಯೆಡೆಗೆ.....

ರೆಕ್ಕೆ ಮುರಿದ ಹಕ್ಕಿ ಹಾರುತೈತೆ...
ಕಾಲು ಮುರಿದ ನವಿಲು ಕುಣಿಯುತೈತೆ...
ನೀನಾದರೂ ಯಾಕೆ ಸುಮ್ಮನಿರುವೆ...!!

ಕಷ್ಟವ ನೆನೆದು ಸುಮ್ಮನೆ ಕೂತರೆ
ಬದುಕು ನಿಂತಲ್ಲೇ ನಿಲ್ಲುತೈತೆ....
ಬಿಟ್ಟು ಹೋಗುವ ಸಂಬಂಧಗಳ ನೆಚ್ಚಿದರೆ
ಬದುಕೇ ಹಾಳಗ್ ತೈತೆ...

ನಡೆವ ದಾರಿಯಲಿ ಕಲ್ಲು ಮುಳ್ಳು ಸಹಜ
ಅದಕ್ಕೆದರಿ ನೀ ನಿಂತರೆ ಜೀವನ ಬರಡಾಗ್ ತೈತೆ ...
ದೇವರ ನೆನೆದು ಕಾರ್ಯವ ಮಾಡಿದರೆ ಬದುಕು ಹಸನಾಗಿ ಇರುತೈತೆ...

- ನಮಿತ ಗಟ್ಟಿ

01 Feb 2017, 02:14 pm

ಮಳೆ

ಮಳೆ ಬಂದರೂ ನೆನೆದರೂ
ಮೈಯೆಲ್ಲ ಬಿಸಿ.....!!
ಆ ಚೈತ್ರಕೆ ಕರೆಯನು ನೀಡಿ
ನೀ ಬಂದರೆ ಖುಷಿ..!!

- ಪಿ.ಜಿ.ಜ್ಯೋತಿ

01 Feb 2017, 01:55 pm

ಬಂಧನ

ಗಿಣಿಯೇ ಗಿಣಿಯೇ ಕೊರಗೋ ದನಿಯೇ
ಪಂಜರದಲ್ಲಿ ನಿನ್ನ ಬಂಧನವೇ!!
ಮುಗಿಲ ಕಡೆಗೆ ಸಾಗೋ ಬಯಕೆ
ಉಳಿದೇ ಹೋಯ್ತು ಯಾಕೀತರವೇ!!

ನಾನು ನೀನು ಒಳಗೆ ಹೊರಗೆ
ಇರುವಿವೆಂಬ ಭಾವ ಭಿನ್ನವಾಗಿದೆ!!
ಪಂಜರದಲ್ಲಿ ನಿನ್ನ ಬಂಧಿ ಮಾಡಿಬಿಟ್ಟರು
ಮಾತಿನಲ್ಲಿ ನನ್ನ ಬಂಧಿ ಮಾಡಿಬಿಟ್ಟರು!!

ಯಾಕೀತರವೇ ಮೌನ ಸರಿಯೇ
ಮಾತಾಡದೆಯೇ ನಾವು ಸೆರೆಯೇ!!
ಹೇಳು ಗಿಣಿಯೇ ಇದುವೇ ವಿಧಿಯೇ
ನನಗೂ ನಿನಗೂ ಈ ಬಂಧನವೇ!!

ಹಗಲು ಇರುಳು ಸಾಲು ಕಂಬಿ
ಸುತ್ತ ಇಹುದು ಅದುವೇ ನಿನದು!!
ಬರಿದೇ ಹೆಣೆದೆ ಸಾಲು ಕಂಬಿ
ಸುತ್ತ ನಾನೇ ನಡುವೆ ನೊಂದು!!

- ಪಿ.ಜಿ.ಜ್ಯೋತಿ

01 Feb 2017, 12:22 pm

ಮಧ್ಯಂತರ

ಆಕಾಶಕೂ ಈ ಭೂಮಿಗೂ
ಇರುವ ಅಂತರ ಅಗಾಧವು!!
ಆಕಾಶದ ಆ ಮೌನವು
ಈ ಭೂಮಿಗೆ ಸಾಕಾದವು!!

ಮಳೆಯ ತಾ ಕಾಣದೆ
ಇಳೆಯು ದಂಗಾಗಿದೆ!!
ಇನಿಯನ ಮೌನದಿ
ಇಳೆಯು ತಾ ನೊಂದಿದೆ!!

ಆ ಬಾನಿಗೆ ಕೈ ಚಾಚುತ
ಈ ಮೌನವು ಸಾಕೆಂದಿದೆ!!
ಸವಿ ಪ್ರೀತಿಯ ಸಂದೇಶವ
ಸಂತೋಷದಿ ನೀಡೆಂದಿದೆ!!

ಆಕಾಶದೀ ಸಂದೇಶವ ಆ ನೇಸರ
ಕಿರಣದಂತೆ ಭೂವಿಗೆ ಚೆಲ್ಲಿದ!!
ಈ ಭೂಮಿಯ ಜಲರಾಶಿಯ
ಆವಿ ಮಾಡಿ ಕೊಂಡು ಹೋದನು!!

ಆಕಾಶನು ಈ ಭೂಮಿಯ
ತಂಪಾದ ಒಲವ ಬಾಚಿ ತಬ್ಬಿದ!!
ಮಧ್ಯಂತರ ಮೋಡವ ಮಾಡಿ
ಪ್ರೀತಿಯ ಹನಿಗಳ ಭೂವಿಗೆ ಚೆಲ್ಲಿದ!!

ಈ ಭೂಮಿಗೆ ವಸಂತವು
ಇಳೆಯೆಲ್ಲವೂ ತಂಪಾದವು!!
ಜಲರಾಶಿ ಮೈದುಂಬಿ ವನವೆಲ್ಲ ಹಸಿರಾಗಿ
ವಿರಹದ ಬೇಗೆ ಮರೆಯಾದವು!!

- ಪಿ.ಜಿ.ಜ್ಯೋತಿ

01 Feb 2017, 11:42 am

ಸಮಾಧಿಗಳ ಸುಳಿಯಲ್ಲಿ.......

ಜೀವಿಗಳ ಒಡನಾಡಿಯಲ್ಲಿ
-ದ್ದಾಗ ಜೀವ,
ಪ್ರಾಣವಿಲ್ಲದ ಬಳಿಕ ಶವ
ಬದುಕಿರುವಾಗ ಹೆಸರಿತ್ತು
ಉಸಿರೇ ಇರಲಿಲ್ಲ....

ವೇದಿಕೆಯ ರಂಗದ ಪ್ರತಿನಡಿಗೆಯಲ್ಲೂ ವಿಧಿಯ ನಿಶ್ಯಬ್ದ ಕಿರುಚಾಟ,ಹಣೆಬರಹದ
ಅಣುಕು ಮೋರೆಯ
ಹಾಸ್ಯದ ಕರತಾಡನ..

ಪಾಪ,ಪುಣ್ಯಗಳು
ಪ್ರಾಮಾಣಿಕ,ಅನಿವಾರ್ಯತೆಯ ಸಂಘರ್ಶಗಳು,
ತೀರಿದ ನಂತರ ಬರುವವು ಅವೊಂದೆ..

ದೌರ್ಜನ್ಯಗಳ ವಿಸ್ಮಯ,ಅಟ್ಟಹಾಸಗಳ ರಿಂಗಣ,ಬವಣೆಗಳ ಸುನಾಮಿಯಂತ ದೈತ್ಯ ನರ್ತನ
ಭಾವಭಂಗಿಯ ಮೂಕ ರೋದನ,ಕೊನೆಗೆ ಜೊತೆಯಿಲ್ಲದ ಪಯ....ಣ ಸಮಾಧಿಗಳ ಸುಳಿಯಲಿ

- ನಕ್ಷtra

31 Jan 2017, 11:37 pm