ಸ್ನೇಹವೇ ಬದುಕ ಸುಲಭವಾಗಿಸುವ ಜಗದಲ್ಲಿನ ಅತಿ ವಿಸ್ಮಯ,
ಎಂದೆಂದೂ ಕೊನೆಯಾಗದಿರಲಿ ಈ ಸುಂದರ ಬಂಧನ, ಇದಕ್ಕೆಂದೆಂದು ಇರಲಿ ಆ ದೇವರ ಅಭಯ,
ನೋವ ಮರೆಸಿ, ನಗುವ ಕಲಿಸಿ, ಮನವ ಕುಣಿಸಿ ಮಾಡುತಿಹುದು ಜಗವ ತನ್ಮಯ,
ದೂರದರೇನು ತನುವು, ಹೆಚ್ಚಾದರೇನು ಅಂತರ
ಸೋಲದಿರಲಿ ಮನಸುಗಳು, ಬಾಡದಿರಲಿ ಕನಸುಗಳು
ಎಂದೆಂದೂ ಮಿಡಿಯುತಿರಲಿ ಮನಸು,
ಬಯಸುತ ನಲ್ಮೆಯ ಸ್ನೇಹದ ಬಾಹುಬಂದನ,
ಸ್ನೇಹದ ಪರಿಧಿಯೊಳಗೆ ಎಲ್ಲರು ಸಮಾನ,
ಎಂದೆಂದೂ ಮೂಡದಿರಲಿ ಅಸಮಾಧಾನ,
ಕೊನೆಯಾಗದಿರಲಿ ಮಾತು ಮನಸ್ಸುಗಳ ಮಿಲನ,
ಎಂದೆಂದೂ ಸ್ನೇಹಕ್ಕಿರಲಿ ಎಲ್ಲರ ಅಭಿಮಾನ,
ಮತ್ತೆ ಮತ್ತೆ ಸೇರುತಿರಲಿ, ಕನಸಿನ ಬದುಕ ಹೊಸೆದು,
ಮತ್ತದೇ ಹಳೆಯ ಮುಗ್ಧ ನಗುವ ಹರಸಿ, ಬಯಸುತ ನಲ್ಮೆಯ ಸ್ನೇಹದ ಬಂಧನ
"ಅಪ್ಪ ಅಮ್ಮ ಬೇರೆ ಜಾತಿ
ನಾನು ಯಾವ ಜಾತಿ?"
ಪುಟ್ಟ ಕಂದನ ಪ್ರಶ್ನೆಗೆ
ಹೀನ ವ್ಯಕ್ತಿಗಳು ಹೇಳುತ್ತಾರೆ
ದೇವಾಲಯ ಗಂಟೆ ಬಾರಿಸಿದಂತೆ
ಮೇಲೆ -ಕೀಳು ಜಾತಿ.
ನಾನು ಜೇನು ಸವಿದಂತೆ
ಹಾಲು ಕುಡಿದಂತೆ
"ನೀನು ಧರಿಸಿದ ಬಟ್ಟೆ
ಅಪ್ಪನ ತರಹದ ಇದ್ದರೆ
ಅಪ್ಪನ ಜಾತಿ
ಅಮ್ಮನ ತರಹ ಇದ್ದರೆ
ಅಮ್ಮನ ಜಾತಿ"
"ನನ್ನನ ಏಕೆ ದೇವಾಲಯಕ್ಕೆ ಸೇರಸಲ್ಲ?"
"ದೇವಾಲಯದ ಹೊರಗಿರುವ ದೇವರು ನೀನು
ನಿನ್ನ ಪ್ರಕಾಶಮಾನ ಶಕ್ತಿಗೆ ಹೆದರಿ
ಅವರು ತಲೆ ಬಗ್ಗಿಸಿ ದೂರದಾಚೆ ಓಡವರು"
ಪುಟ್ಟ ಕಂದನು ಬಾಲ ಕೃಷ್ಣನಂತೆ ನಗುತಾ
"ಆಟಕ್ಕೆ ಸೇರಿದಂತೆ ತಡೆಯವರು"
ಕಣ್ಣಿಗೆ ಕಳ್ಳಿ ಹಾಲು ಹಾಕಿದಂತೆ
"ಪೈಪೋಟಿ ಎದುರಿಸಲು ತಾಕತ್ತವಿಲ್ಲದವರು
ನಿನ್ನ ದೂಡವರು"
"ಬರಿ ಮೈಯಲ್ಲಿ
ಒಪ್ಪತು ಊಟದಲ್ಲಿ
ಗುಡಿಸಲಿನಲ್ಲಿ
ಊರಿನಾಚೆಯಲ್ಲಿ
ಬದುಕುವರ ನಾವು ಏಕೆ?"
'ಸಾಯುಕ್ಕೆ ಮುಂಚೆ ನಾವು ಆಚೆಗೆ
ಸತ್ತ ನಂತರ ಬರುವರು ನಮ್ಮ ಕಡೆಗೆ'
ಮನಸ್ಸಿನಲ್ಲಿ ಒಣ ಕೆಮ್ಮುನಂತೆ ಗೊಣಗಿದೆ.
"ಶಿವನ ಭಕ್ತರು ನಾವು
ಪಾಪಿಗಳು ಅವರು
ಪಾಪದ ಕೊಡ ತುಂಬಿದ ಮೇಲೆ
ನಮ್ಮ ಹತ್ತಿರ ಬರವರು"
ಪುಟ್ಟ ಕಂದನಿಗೆ ಅರ್ಥವಾಗಲಿಲ್ಲಾ
"ಓದಿ ಬುದ್ದಿವಂತನಾಗೋಣ
ಇಲ್ಲಿ ಸ್ವರ್ಗ ನಿರ್ಮಾಣ ಮಾಡೋಣ
ಗಬ್ಬ ನಾತ ಗಾಳಿ ಬರದಂತೆ ತಡೆಯೋಣ
ಅಂದಕಾರ ಆಚಾರ - ವಿಚಾರ ಬಿಡೋಣ
ಹೊಸ ಜೀವನ - ವಿಜ್ಞಾನ ಕಲಿಯೋಣ
ನಿಜವಾದ ಮಾನವರಾಗಿ ಬದಕೋಣ"
ಪುಟ್ಟ ಕಂದ ದಿಟ್ಟಸಿ ನನ್ನನ ನೋಡತಿತ್ತು
ಅದು ಕತ್ತೆ ಮುಂದೆ ಕಿನ್ನರಿ ಬಾರಿಸುವಂತಿತ್ತು.