ಅವಳು ನನ್ನವಳು ಎಂದಿತು ಸೂರ್ಯ
ನಿದ್ದೆ ಮಂಪರಿನಲ್ಲಿದ್ದ ಚಂದಿರ ಕೋಪಗೊಂಡಿತು..
ಸಾಕು ಸುಮ್ಮನಿರು ನೀನು ಬಳಿ ಬಂದರೆ ಆಕೆ ಸುಟ್ಟು ಹೋಗುವಳು ,ಆಕೆ ನನ್ನ ಸ್ವತ್ತು..
ಆಗ ಆರ್ಭಟಿಸುತ ತನ್ನ ಕೆನ್ನಾಲಿಗೆಯನು ಚಾಚುತ್ತ ರವಿ ಭುಸುಗುಟ್ಟಿದ..
ನಿನಗೆಲ್ಲೋ ತಲೆಕೆಟ್ಟಿರಬೇಕು ಸುಮ್ಮನೆ ಅರಚುತ್ತಿರುವೆ ಎಂದಿತು ರವಿ..
ನನ್ನನ್ನು ಸುಮ್ಮನೆ ಜರಿಯುವುದು ನಿನಗೆ ತರವಲ್ಲ ಓ ದಿವಾಕರನೇ....
ನಮ್ಮಿಬ್ಬರಲಿ ಯಾರು ಶ್ರೇಷ್ಟರೆಂಬುದನು ಆಕೆಯಲ್ಲಿ ಕೇಳೋನವೆಂದಾಗ ರವಿ ಸಮ್ಮತಿಸಿದ...
ಓ ಭುವನ ಸುಂದರಿ ಕೇಳುವಂತವಳಾಗು,ನಿನಗೆ ಯಾರು ಬೇಕೆಂದು ನೀನೇ ಹೇಳು...
ಆಗ ನಾಚಿಕೊಳ್ಳುತ್ತಾ ಬಳುಕುತ್ತಾ ಬಂದ ಪೃಥ್ವಿ ಹೀಗಂದಳು ..
ನೀವಿಬ್ಬರೂ ನನ್ನೆರಡು ಕಣ್ಣುಗಳಂತೆ.. ರವಿ ಇಲ್ಲದೆ ನಾನಿಲ್ಲ ..ನಾನಿಲ್ಲದೆ ನೀ ಇದ್ದೂ ಅರ್ಥವಿಲ್ಲ ಓ ಕಲಾನಿಧಿಯೇ...
ನಾವು ಮೂವರೂ ಒಂದೇ ದೋಣಿಯಲ್ಲಿ
ಪ್ರಯಾಣಿಸುತ್ತಿರುವವರು..
ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರೆವು...
ರವಿ ಮುನಿಸಿಕೊಂಡರೆ ನನ್ನ ಉಸಿರು ನಿಂತಂತೆ... ನೀನಿರದೆ ನಾ ಬದುಕಿದ್ದು ಸತ್ತಂತೆ...
ನೀವಿರದ ಈ ಜಗದೊಳು ನಾ ಕಾಣ ಬಯಸುವುದಾದರೂ ಏನನ್ನು...
ನನಗಾಗಿ ನಿಮ್ಮಿಬ್ಬರ ಭಾಂದವ್ಯ ಹಳಿ ತಪ್ಪುವುದು ಸರಿಯಲ್ಲ ...
ಜೊತೆಯಾಗಿ ಬಂದವರು ನಾವು,ಜೊತೆಯಾಗಿಯೇ ಬಾಳಬೇಕಾದವರು ನಾವು ಎನ್ನುತ ಪೃಥ್ವಿ ಕಣ್ಣೀರು ಹಾಕಿತು....
ಮನ: ಕರಗಿದ ಚಂದ್ರ-ಸೂರ್ಯ ಇಬ್ಬರೂ ಇಳೆಯಲ್ಲಿ ಕ್ಷಮೆ ಕೇಳಿದರು...
ತರುವಾಯ ತಮ್ಮ ನಿತ್ಯದ ಕಾರ್ಯದಲಿ ನಿರತರಾದರು...
ಸೂರ್ಯ ಅಸ್ತಂಗತನಾದ,ಚಂದ್ರ ಮೋಡದ ಹಿಂದೆ ಮರೆಯಾದ...!!!
ರವಿಯ ಉದಯವನು ಕಾಯುತಿದ್ದವು
ಹಳದಿ ಹೂವಿನ ಮೊಗ್ಗು ಗಳು
ಮುಚ್ಚಿದವು ಅದನು ಪತ್ರ ಗಳು
ಎಸಳುಗಳು ಅರಳಿದವು ದಿನಕರನ ಆಗಮನಕೆ
ಬಂಗಾರದ ಗೊಂಚಲುಗಳು ಮರದ ರೆಂಬೆಗಳಲಿ
ತೂಗುತ್ತಿದಂತೆ ಕಾಣುತ್ತಿದ್ದುವು
ಸೌಂದರ್ಯವ ಲೋಕ್ಕಿತ್ತು
ತನ್ನಲ್ಲಾದ ಕರ್ಮವ ಮಾಡಿ
ದಿನದ ಜೀವನವ ಮುಗಿಸಿ
ಬಾಡಿ ಉದುರಿದವು ಅರಳಿದ ಹೂವು.
ಯಾರೂ ಕಾಣದ ಸುಂದರ ಕನಸೊಲು ಬಂದವ ನೀನು....
ಮಮತೆಯ ಕಡಲೊಲು ಮಿಂದು ಬಂದಷ್ಟು ಸಂತೋಷ ...
ವರ್ಣನೆಗೆ ನಿಲುಕದಷ್ಟು ಹೆಜ್ಜೆಗಳ ಹಾದಿ..
ಮನವೀಗ ಮರುಳಾಗಿದೆ ನಿನ್ನ ಮಧುರ ಧ್ವನಿಗೆ...
ಕನಸಲ್ಲೂ ಪರಿತಪಿಸುವಂತಾಗಿದೆ ಆ ನಿನ್ನ ಹೆಸರಿಗೆ....
ಕೈ ಹಿಡಿದು ನಡೆಸುವೆಂದುಕೊಂಡೆ ಆದರೆ ಮನವ ಮುರಿದು ಹೋದೆ.....
ಧರೆಗಿಳಿದು ಬಂದ ದೇವರೆಂದುಕೊಂಡೆ ಆದರೆ ವರ ನೀಡದೆ ಮೂಕನಾಗಿಬಿಟ್ಟೆ...
ಗೋಗರಿಯುವ ಹೃದಯ ನನ್ನದಲ್ಲ, ಕೇಳಿಸಿಕೊಳ್ಳುವ ಮನಸ್ಸು ನಿನಗಿಲ್ಲ ...
ಬಿಟ್ಟು ಹೋದ ದಾರಿಯ ಕಾಯುವುದು ತಪ್ಪಿಲ್ಲ..
ಕಣ್ಣೀರಿನ ಮಳೆಯೂ ಇಳೆಯ ತನಿಸಿಲ್ಲ....
ಮೌನ ಮುರಿದು ಮಾತಾಡಿದರೂ ನೀ ಸುಮ್ಮನಿರುವೆ....
ಕಾಯುವೆನು ನೀ ಬರುವ ದಾರಿಯನು...
ಮತ್ತೊಮ್ಮೆ ಹುಟ್ಟಿ ಬರುವೆಯಾ... ಓ ಮನಸೇ ಕೇಳುವೆಯಾ ......!!
ನಿನ್ನ ಮೊಗವ ಕಾಣದೆ....
ಕತ್ತಲಿನಲ್ಲಿರುವನು ಸೂರ್ಯ ಮೋಡದಲಿ ಮರೆಯಾಗಿ,
ನಿನ್ನ ಪಾದ ಚುಂಬನವಿಲ್ಲದೆ....
ಸೌಂದರ್ಯ ಕಳೆದುಕೊಂಡು ಬರಡಾಗಿದೆ ಈ ಭೂಮಿ,
ನಿನ್ನ ಸ್ಪರ್ಶಕ್ಕಾಗಿ ಉಸಿರು ಬಿಗಿ ಹಿಡಿದು....
ಕಾದು ಕುಳಿತಿದೆ ಸದ್ದಿಲ್ಲದೆ ಈ ಗಾಳಿ,
ನಿನ್ನ ಭೇಟಿಗಾಗಿ ಕಾದು,ಕಾದು....
ಸ್ಥಬ್ಧವಾಗಿ ನಿಂತಿದೆ ಸಾಗರ,
ಸಾಗರದ ಅಲೆಗಳ ಮೂಲಕ ನೀರಿಲ್ಪದೆ
ಬಾಯಾರಿ ಬಳಲಿದೆ ತೀರದ ಮರಳು,
ನನ್ನ ಪ್ರೀತಿ ಒತ್ತಟ್ಟಿಗಿರಲಿ....
ಆ ಸೂರ್ಯ, ಈ ಭೂಮಿ,ಗಾಳಿ ಪ್ರಕೃತಿ ನಿನ್ನ
ಮೇಲಿಟ್ಟಿರುವ ಪ್ರೀತಿಗಾದರೂ ನೀನು ಬರುವೆಯಾ?.