ಬದುಕೆಂಬ ಈ ಖಾಲಿ ಹಾಳೆಯಲಿ ಬರೆಯುವುದಾದರೂ ಏನನ್ನು...
ಆಸರೆಯ ಬಂಧನದೊಳಗಿನ ನಾಲ್ಕು ದಿನದ ಜೀವನ..
ಸ್ವಾರ್ಥದ ಬೇಹುದಿಯೊಳಗೆ ಬೆಂದು ಹೋದವರೆಷ್ಟೋ...
ಅಸತ್ಯದ ಕೂಪದೊಳಗೆ ಸತ್ತು ಬದುಕಿದವರೆಷ್ಟೋ..
ಬಚ್ಚಿಡಲು ಅದೇನು ಬಂಗಾರದ ಕಲಶವಲ್ಲ..
ಹಣವಿಲ್ಲದವನಿಗೆ ಕಾಸು ಮಾಡುವ ಹಂಬಲ ಒಂದೆಡೆಯಾದರೆ..
ಇದ್ದವನಿಗೆ ಅದನ್ನು ಹೇಗೆ ಬಚ್ಚಿಡಬೇಕೆಂಬ ಚಿಂತೆ...
ಮರ ಅದೆಷ್ಟೇ ಎತ್ತರಕ್ಕೆ ಹೋದರೂ ಜೋರಾಗಿ ಬೀಸುವ ಗಾಳಿಗೆ ತಲೆ ಒಡ್ಡಲೇಬೇಕು..
ಅಂತೆಯೇ ಮಾನವ ಸುಖದ ಸುಪ್ಪತ್ತಿಗೆ ಏರಿದ್ದರೂ ಒಂದು ದಿನ ಸಾವಿನ ಕುಣಿಕೆಗೆ ತಲೆಬಾಗಲೇಬೇಕು...
ಮನಸೆ ಮನಸೆ ಮೌನದೊಳಗಿನ ಮಾತು ತಿಳಿಯೆ ನಿನ್ನ ಮುಗುಳ್ನಗೆ ತದಿಂದೆ ಮನಸಲಿಂದು ಏಳು ಬಣ್ಣ, ನೂರೆಂಟು ಕಲಹ ,ನೊರೆ ಹಾಲಸ್ನೇಹ ನಿನ್ನ ನೋಟ, ಕದ್ದು ನೋಡಲು ಚೆನ್ನ ನಿನ್ನ ಮಾತು ..,ಸವಿಗಾನ ಸಿಹಿಯಾನ.
ವಿದ್ಯಾರ್ಥಿ ಪರೀಕ್ಷೆಯಲ್ಲಿ ಬರೆದನು ಬರೆದನು
ಎಲ್ಲಾ ಹಾಳೆಗಳಲ್ಲಿ
ಮೌಲ್ಯಮಾಪಕರು ಹುಡುಕಿದರು ಹಡುಕಿದರು
ಉತ್ತರಗಳು ಎಲ್ಲಿ
ಕಾಲೇಜ್
ಪಂಚೇಂದ್ರಿಯಗಳಿಗೆ ಕಾಣಲಿಲ್ಲ ಕಾಲೇಜ್
ಮನಸ್ಸಿಗೆ ಕೊಡಲಿಲ್ಲ ಓದವ ಕ್ರೇಜ್
ಕಾಲವೇ ಮುಗಿಸಿತು ನಮ್ಮ ಟೀನೇಜ್
ಜೀವನ ತಿಳಯವಷ್ಟರಲ್ಲಿ ನಮಗೆ ಸಾಯವ ಏಜ್
ಇಂದಿನ ಬೆಡಗಿ
"ಗೆಳತಿ ನಿನ್ನ ಮಾತು ಸಂದರ
ನಿನ್ನ ರೂಪ ಅತಿ ಮಧುರ"
"ನನ್ನ ಮಾತಿಗೆ ನಿನ್ನ ನಯನ ಭಯಂಕರ
ನಿನ್ನ ಮುಷ್ಟಿ ಕೊಟ್ಟಿತು ನನ್ನ ಮುಖಕ್ಕೆ ಓಂಕಾರ"
ಸುಳ್ಳಿನ ಕಂತೆ
ಪಂಚಾಂಗ ಹೇಳಿತು
ನಾನು ಸಂಸಾರಕ್ಕೆ ಅಧಿಪತಿ
ಮದುವೆಯಾದಗ ತಿಳಿತು
ಪತ್ನಿಗೆ ನಾನು ಮಾರುತಿ
ಮುದಿತನ ಹುರುಪು
ಬಿಳಿ ಬಣ್ಣದ ಕೂದಲುಗಳ ಗಾಳಿಯಲ್ಲಿ
ತರಗಲೆಯಂತೆ ಹಾರಡತ್ತಿದ್ದವು
ಕಣ್ಣು ಕನ್ನಡಕದಲ್ಲಿ ಅಗೋಚರ ವಸ್ತುಗಳು
ಹುಡುಕತ್ತಿದ್ದವು
ಮುಖದಗೆರೆಗಳು ಸಾವಿನ ದಾರಿ ತೋರಿಸುತ್ತಿದ್ದವು
ಬಳ್ಳಿಯಂತೆ ದೇಹವು ಶಕ್ತಿ ಹೀನಾಯವಾಗಿತ್ತಿದ್ದವು ಹೃದಯ -ಮನಸ್ಸಿ ಮಾತ್ರ ಹೊಸತನಕ್ಕೆ ಮುನ್ನಗ್ಗಿತ್ತಿದ್ದವು