"ಗೆಳತಿ...
ನಿನಗೆ ಬೇಸರ ಪಡಿಸುವ ಉದ್ದೇಶ ನನ್ನದಲ್ಲ..
ನಿನ್ನ ಜೀವನ ನಿನ್ನ ಕೈಯಾರೆ ಹಾಳಾಗಬಾರದೆಂಬ
ಚಿಕ್ಕ ಹಂಬಲ..
ಯಾರ್ ಯಾರನ್ನೋ ನಂಬಿ ಮುರ್ಖಳಾಗಬೇಡ
ಅವರು ನಿನಗೆ ತಿಳಿಯದ ಹಾಗೆ ನಿನ್ನ ಬಗ್ಗೆ
ಅಪಪ್ರಚಾರ ಮಾಡುವರು ನೆನಪಿನಲ್ಲಿರಲಿ..
ಕೆಟ್ಟದ್ದೆಂದು ಗೊತ್ತಾಗಿಯೂ ಕೂಡ
ಮತ್ತೆ ಮತ್ತೆ ಅದೇ ತಪ್ಪನ್ನು ಮುಂದುವರೆಸಿದರೆ
ನಿನ್ನ ಬದುಕು ಹಾದಿತಪ್ಪಿ ಹೋಗುತ್ತದೆ...?"
ಎಮ್.ಎಸ್.ಭೋವಿ...✍️
ನೀನು ನನ್ನ ಜೀವನಕ್ಕೆ ಬಂದಾಗ
ಎಲ್ಲೋ ನಾ ಕಳೆದುಕೋಂಡಿದ್ದೆಲ್ಲ
ನಿನ್ನಿಂದ ನನಗೆ ಸಿಗುತ್ತೆ ಅನ್ಕೊಂಡೆ..
ಆದರೆ ಈಗ ನಾನು ಬಯಸಿದ್ದು ಸೀಗದೆ ಹೋದ್ರು..
ನಾನು ಯೋಚಿಸದೆ ಇರೋದೆಲ್ಲ
ಒಮ್ಮೇಲೆ ಸಿಕ್ಕಿ ಬಿಡ್ತು..
ನೀನು ಕೂಡ ನನಗೆ ಶಾಶ್ವತವಾಗಿಲಿಲ್ಲ..
ಮೊದಲೆ ಇದ್ದ ನೋವಿನ ಜೊತೆ
ಇದು ಒಂದು ನೋವಾಗಿ ಸೇರಿಕೊಳ್ತು ಅಷ್ಟೆ..
ನೋವುಗಳನ್ನ ಅನುಭವಿಸೋದಕೊಸ್ಕರನೇ
ಹುಟ್ಪಿದಿನಿ ಅನ್ಸುತ್ತೆ...
ನಿನ್ನನ್ನ ನನ್ನ ಜೀವನದಲ್ಲಿ ಉಳಿಸಿಕೊಳ್ಳೋದಕ್ಕೆ
ನನಗೆ ಯೋಗ್ಯತೆ ಇಲ್ಲ ಬಿಡು..
ಎಲ್ಲವನ್ನು ಪಡೆದುಕೊಂಡು ಬಂದಿರ್ಬೇಕು....
ಎಮ್.ಎಸ್.ಭೋವಿ...✍️
ಬೇಡವೆಂದರೂ ನೀನೆ ಬೇಕು
ಎಂದು ಬರುವುದು ನೋವು..
ಸಾಕು ಎಂದರು ಬಿಟ್ಟು ಹೋಗದೆ
ಜೊತೆಯಲೇ ಇರುವುದು ನೋವು..
ಬಿಟ್ಟು ಹೋಗಬಹುದು ಒಮ್ಮೆಯಾದರು
ದೇಹಕ್ಕೆ ಆದ ನೋವು,
ಬಿಟ್ಟು ಹೋಗದೆ ಕೊನೆವರೆಗೂ
ಉಳಿಯುವುದು ಮನಸ್ಸಿಗಾದ ನೋವು..
ನಲಿವಿನ ಸುಳಿವಿಲ್ಲದೆ ಹಗಲಿರುಳು
ಕಾಡುತ್ತಿದೆ ನೋವು..
ಜೀವದ ಪರದಾಟ ಕಂಡು
ಕೈ ಬೀಸಿ ಕರಿಯುತ್ತಿದೆ ಸಾವು..
ಎಮ್.ಎಸ್.ಭೋವಿ...✍️
ನನ್ನೆಲ್ಲಾ ಭಾವನೆಗಳಿಗೆ ಜೊತೆಯಾದ ಜೊತೆಗಾರ
ನನ್ನ ಕವನಗಳಿಗೆ ಸ್ಫೂರ್ತಿಯಾದೆ ನೀ ನಿರಂತರ
ಮೌನದ ಒಳಗಿದ್ದ ನೋವ ತಿಳಿದೆ ನೀ
ನನ್ನ ಸಂತೋಷವನ್ನೇ ಬಯಸುತ್ತ ಸನಿಹವಾದೆ ನೀ
ನಿನ್ನ ಮಾತುಗಳ ಮತ್ತೆ ಮತ್ತೆ ಕೇಳುವಾಸೆ ನನಗೆ
ನಿನ್ನ ನಗುವಿನ ಸದ್ದು ಇಂಪು ಕಿವಿಗೆ
ಸ್ನೇಹವೆಂದರೆ ಹೀಗೂ ಇರಬಹುದೆಂದು ತಿಳಿದಿರಲಿಲ್ಲ ನನಗೆ
ಸಮಯ ಸಾಗುವುದೇ ತಿಳಿಯದು ನೀ ಇರಲು ಜೊತೆಗೆ
ಎಲ್ಲಿದ್ದೆ ನೀ ಇಷ್ಟು ವರುಷ
ಮನಸಿನ ಭಾರವ ದೂರ ಮಾಡಿದ ಸ್ನೇಹಿತ
ನಿನ್ನೊಡನೆ ಮಾತನಾಡಲು ಹಾತೊರೆಯುವುದು ಮನ
ನಿನ್ನ ಸಂದೇಶಗಳಿಗಾಗಿ ಕಾದಿರುವೆ ನಾ....
ಪ್ರೀತಿಯಂಬ ಗಿಡವ ನೆಟ್ಟು
ನಗುವು ಎಂಬ ಹಸಿರ ತೊಟ್ಟು
ಸ್ನೇಹವೆಂಬ ನೀರ ನೆರೆದು
ಬದುಕು ಎಂಬ ನಗೆಯ ಹೂ ಬಿಟ್ಟು
ಮತ್ತೆ ನಿನ್ನ ಮುಡಿ ಸೇರಬೇಕೆಂಬ
ಹೊಸ ಕಾವ್ಯವೊಂದು
ಮನದಲಿಂದು ಮೂಡಿದೆ
ಮನದಲಿಂದು ಮೂಡಿದೆ
ನಾ ಕಾಯುತ್ತಿರುತ್ತೆನೇ ಕೇಳಲು
ನಿನ್ನ ಮಾತುಗಳನ್ನು...
ಮಾತನಾಡದೆ ನೋವಿಸಬೇಡ
ನನ್ನ ಮನಸ್ಸನ್ನು...!
ನಿನಗಾಗಿ ಮೀಸಲಿಟ್ಪಿರುವೆನು
ನನ್ನ ಸಮಯವನ್ನು...
ನಿನ್ನ ಸ್ವಲ್ಪ ಸಮಯವು
ಬೇಕಾಗಿದೆ ನನಗಿನ್ನೂ...!
ಇರಲಾಗುವುದಿಲ್ಲ ನಿನ್ನ ಬಿಟ್ಟು
ತುಂಬಾ ಘಳಿಗೆ...
ಸದಾ ನಿನ್ನ ನೋಡುವಾಸೆ
ನನ್ನ ಕಣ್ಣುಗಳಿಗೆ...!
ಎಮ್.ಎಸ್.ಭೋವಿ...✍️
.
.
ನಿನ್ನ ನೆನಪು ಪದೆ ಪದೆ ಕಾಡುವುದು ಗೆಳೆಯ
ನನ್ನ ಸಂದೇಶವನ್ನು ನಿನಗೆ ಹೇಗೆ ಹೇಳಲಿ..?
ಯಾರ ಮೂಲಕ ನಿನಗೆ ಈ ವಿಚಾರಗಳನ್ನು ತಿಳಿಸಲಿ..?
ಒಂದು ಬಾರಿ ಚಂದ್ರನನ್ನು ನೋಡು
ಅವನ ಬಳಿ ನನ್ನ ಸಂದೇಶವನ್ನು ಹೇಳಿರುವೆ
ಇಲ್ಲಿಂದ ಬೀಸಿ ಬರುವ ಗಾಳಿ ಒಮ್ಮೆ ನಿನ್ನ ಸೋಕಿದರು
ಸಾಕು
ಅದರಲ್ಲಿ ನನ್ನ ಭಾವನೆಗಳನ್ನು ನಿರೂಪಿಸಿರುವೆ..
ಇದು ಸಾಧ್ಯವಿಲ್ಲವಾದರೆ ನಾನು ದಾರಿಗೆ ವಿಷಯವನ್ನು
ತಿಳಿಸಿರುವೆ
ಆ ದಾರಿ ನೀನು ಇರುವಲ್ಲಿಗೂ ಸೇರಿರುವುದರಿಂದ
ನಾನು ಹೇಳ ಬಯಸುವ ವಿಷಯ, ಸಂದೇಶ ಎಲ್ಲವೂ
ನಿನಗೆ ತಲುಪುವುದು
ಆ ತೃಪ್ತಿಯಲ್ಲೆ ನಾನಿರುವುದು...