ಧರ್ಮ ದ ಬಿತ್ತನೆ
ಶಾಂತಿಯ ಕೆತ್ತನೆ
ಸಂದೇಶದ ತೆನೆ
ಸನ್ಮಾರ್ಗದ ಚಿಂತನೆ
ಆದರೆ.........
ಮೂಡನಂಬಿಕೆ-ಕಂದಚಾರ ಸುಳಿಯಲ್ಲಿ
ಬೆಂದವು
ವರ್ಗಗಳ ಮಾಡಿ ಅಮಾನವೀಯತೆಯಲ್ಲಿ
ಕಂಡವು
ಕರ್ಮ -ಮರ್ಮ ತೋಳಿನ ಬಲದಲ್ಲಿ
ರ್ಜಜರಿತರಾದವು
" ದೇವರ ಪುರಾಣ" ದಲ್ಲಿ ಕಾಣಲಿಲ್ಲ
ಭೇದ ಭಾವ
ಅನೀತಿ ಅನ್ಯಾಯದ ವಿರುದ್ಧ ಮಂಡನೆ
ಸಾರ್ವಜನಿಕರ ನಡುವೆ ನೇತುಹಾಕವರ ಹಗ್ಗದಕೂನೆ
ಕಪ್ಪು ಪರದೆಯಲ್ಲಿ ಹೆಣ್ಣಿನ ಶೋಷಣೆ
ಅಸತ್ಯದ ವಿರುದ್ದ ಹೋರಾಟ್ದವರಿಗೆ ಮರಣದಂಡನೆ
ನಿತ್ಯ ನೀಲಿ ರಕ್ತದ ಭಯೋತ್ಪಾದನೆ
"ಓದಿರಿ"ಪುಸ್ತಕದಲ್ಲಿ ಬರೆದಿಲ್ಲಾ ಘರ್ಷಣೆ.
ಮೋಜು -ಮಸ್ತಿ -ಮದ್ಯಗಳಲ್ಲಿ ದೇಹ ಕುಣಿಯಿತು
ಸ್ವೇಚ್ಛೆ- ಸ್ವಾತಂತ್ರ್ಯದಲ್ಲಿ ಅನೈತಿಕತೆ ಶುರುವಾಯಿತು
ನೆರೆ ಹೊರೆಯನ್ನು ಪ್ರೀತಿಸದೆ ದ್ವೇಷಸಿತು
"ಪವಿತ್ರ ಗಂಥ"ದಲ್ಲಿ ಪಠಿಸಿದ ಒಳ್ಳೆಯ ವಾಕ್ಯಗಳು ನುಂಗಿತು.
ಕೆಟ್ಟ ಚರಿತ್ರೆ ಮರೆಯಾಗಿ ಬೇಕಿದೆ!
ಹಿಂಸೆ ಕೊನೆಗಾಣಿಸ ಬೇಕಿದೆ!
ಸಹಬಾಳ್ವೆ ನೆಡಸಬೇಕಿದೆ!
ಧರ್ಮದ ರಾಕ್ಷರ ನೆರಳಿನ ಕೊರಳಿಗೆ
"ಮಾನವೀಯತೆ" ಹೂವಿನ ಹಾರ ಹಾಕಿರಿ
ಬನ್ನಿರಿ ನಾವೆಲ್ಲರೂ ಸೇರಿ ಹಿಡಿಯೋಣ ವಿಜ್ಞಾನದ ದೀವಿಗೆ
ಇದು ಆಧುನಿಕ ವಿಚಾರದ ಶಾಂತಿಯ ಮಂತ್ರಗೆ
ನನ್ನ ಬಾಳದೀಪ ಬೆಳಗಲು ಬಂದ ಬಂಗಾರದ ಜ್ಯೋತಿ ನಿನಾಗಿರುವೆ..
ನಿನ್ನ ಸಾಗರದಷ್ಟು ಪ್ರೀತಿಗೆ ನಾ ಮರುಳಾಗಿರುವೆ...
ನಿನ್ನ ಮಾತುಗಳು ಕಿವಿಯಲಿ ಹಕ್ಕಿಗಳ ಚಿಲಿಪಿಲಿ ಸದ್ದಿನಂತೆ ಕೇಳುತ್ತಿದೆ...
ನೀ ನಡೆದು ಬಂದರೆ ನನ್ನ ಎದೆಯ ಬಡಿತ ಜೋರಾಗುತ್ತಿದೆ....
ನನ್ನ ಉಸಿರಲ್ಲಿ ಉಸಿರಾಗಿ ಬಾಳ ಬೆಳಗಲು ಬಂದಿರುವ ಇನಿಯನು ನೀನು..
ಕೈ ಹಿಡಿದು ಮುನ್ನಡೆಸಲು ಬಂದಿರುವ ಬಾಳ ಸಂಗಾತಿ ನೀನು......
- ನಮಿತ ಗಟ್ಟಿ
ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನಿನ್ನನು ಹುಡುಕುತ ಹುಡುಕುತ
ನಿನ್ನೊಳಗೆ ನನ್ನ ನಾ ಕಳೆದುಕೊಂಡಿರುವೆ
ಹಗಲು ಇರುಳು ಒಂದು ಅರಿಯದೆ
ನೀ ನನಗೆ ಸಿಕ್ಕ ಕ್ಷಣದಿಂದ
ಗುರುತೇ ಸಿಗದಂತೆ ಕಳೆದೋಗಿರುವೆ
ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನೀ ಸಿಕ್ಕ ಘಳಿಗೆಯ
ಪ್ರತಿ ರಾತ್ರಿ ಕಾಣುವ ಕನಸಿನಲ್ಲೂ
ನಿನ್ನ ಮುಖವನು ಮಾತ್ರ ಕಾಣುವೆ
ನಿನ್ನ ಹೊರತು ಬೇರೇನೂ
ನನಗೀಗ ಕಾಣದಾಗಿ
ಜಗತ್ತನ್ನೆ ಮರೆತು ಬಿಟ್ಟಿರುವೆನು
ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನಿನ್ನ ಭೇಟಿಮಾಡಿದ ಕ್ಷಣವ ನೆನೆದು ನೆನೆದು
ಪದಗಳೇ ಸಿಗದಂತಾಗಿದೆ
ನನ್ನ ಸಂಭ್ರಮವ ವರ್ಣಿಸಲು
ಮನಸ್ಸು ಬಿಚ್ಚಿ ನಾ ನುಡಿದಿರುವೆ
ನನ್ನ ಭಾವನೆಗಳ ನೂರು , ...
ನಿನಗಿಷ್ಟವಾದರೆ ಮನಸಿನ
ಭಾವನೆಗಳೆ ಈ ನನ್ನ ಕವನ ...