Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನು...

ಭಾವ ಬಿಂದಿಗೆಯ ತುಂಬೆಲ್ಲಾ ನಿನ್ನೊಲವಿನ ತಿಳಿ ನೀರು
ಸ್ಪೂರ್ತಿ ಪಾತ್ರೆಯಲೂ ಗೆಳತಿ ಭರ್ತಿ ನೀನೇ ನೀನು
ಕಣ್ಮುಚ್ಚಿಕೊಂಡರೆ ಕನಸಲಿ ಬರ್ತಿ ನೀನು
ಕಣ್ತುಂಬಿ ಬಂದಾಗ ಕಣ್ಣಂಚಿನ ಹನಿಯಲೂ ಇರ್ತಿ ನೀನು...

- basavarajsirnayakpreethu

24 Jan 2017, 03:22 pm

ಯಾರು ಯಾರನ್ನು

ಯಾರು ಯಾರನ್ನು

ಯಾರಿಂದ ಯಾರಿಗೆ

ಯಾವಾಗ ಎಲ್ಲಿ ಹೇಗೆ

ಬೇಕಾದ್ರು ದೂರ

ಮಾಡಬಹುದು

ಆದರೆ ಮನಸ್ಸಿಂದ ನೆನಪಿಂದ

ಪ್ರೀತಿಯಿಂದ ಯಾವತ್ತು

ದೂರ ಮಾಡೋಕ್ಕೆ ಆಗಲ್ಲ
ಮಂಜು

- ಮಂಜುM

24 Jan 2017, 02:35 pm

ಧರ್ಮದಲ್ಲಿ ಕಾಡವ ರಾಕ್ಷಸರ ನೆ

ಧರ್ಮ ದ ಬಿತ್ತನೆ
ಶಾಂತಿಯ ಕೆತ್ತನೆ
ಸಂದೇಶದ ತೆನೆ
ಸನ್ಮಾರ್ಗದ ಚಿಂತನೆ
ಆದರೆ.........

ಮೂಡನಂಬಿಕೆ-ಕಂದಚಾರ ಸುಳಿಯಲ್ಲಿ
ಬೆಂದವು
ವರ್ಗಗಳ ಮಾಡಿ ಅಮಾನವೀಯತೆಯಲ್ಲಿ
ಕಂಡವು
ಕರ್ಮ -ಮರ್ಮ ತೋಳಿನ ಬಲದಲ್ಲಿ
ರ್ಜಜರಿತರಾದವು
" ದೇವರ ಪುರಾಣ" ದಲ್ಲಿ ಕಾಣಲಿಲ್ಲ
ಭೇದ ಭಾವ

ಅನೀತಿ ಅನ್ಯಾಯದ ವಿರುದ್ಧ ಮಂಡನೆ
ಸಾರ್ವಜನಿಕರ ನಡುವೆ ನೇತುಹಾಕವರ ಹಗ್ಗದಕೂನೆ
ಕಪ್ಪು ಪರದೆಯಲ್ಲಿ ಹೆಣ್ಣಿನ ಶೋಷಣೆ
ಅಸತ್ಯದ ವಿರುದ್ದ ಹೋರಾಟ್ದವರಿಗೆ ಮರಣದಂಡನೆ
ನಿತ್ಯ ನೀಲಿ ರಕ್ತದ ಭಯೋತ್ಪಾದನೆ
"ಓದಿರಿ"ಪುಸ್ತಕದಲ್ಲಿ ಬರೆದಿಲ್ಲಾ ಘರ್ಷಣೆ.

ಮೋಜು -ಮಸ್ತಿ -ಮದ್ಯಗಳಲ್ಲಿ ದೇಹ ಕುಣಿಯಿತು
ಸ್ವೇಚ್ಛೆ- ಸ್ವಾತಂತ್ರ್ಯದಲ್ಲಿ ಅನೈತಿಕತೆ ಶುರುವಾಯಿತು
ನೆರೆ ಹೊರೆಯನ್ನು ಪ್ರೀತಿಸದೆ ದ್ವೇಷಸಿತು
"ಪವಿತ್ರ ಗಂಥ"ದಲ್ಲಿ ಪಠಿಸಿದ ಒಳ್ಳೆಯ ವಾಕ್ಯಗಳು ನುಂಗಿತು.

ಕೆಟ್ಟ ಚರಿತ್ರೆ ಮರೆಯಾಗಿ ಬೇಕಿದೆ!
ಹಿಂಸೆ ಕೊನೆಗಾಣಿಸ ಬೇಕಿದೆ!
ಸಹಬಾಳ್ವೆ ನೆಡಸಬೇಕಿದೆ!

ಧರ್ಮದ ರಾಕ್ಷರ ನೆರಳಿನ ಕೊರಳಿಗೆ
"ಮಾನವೀಯತೆ" ಹೂವಿನ ಹಾರ ಹಾಕಿರಿ
ಬನ್ನಿರಿ ನಾವೆಲ್ಲರೂ ಸೇರಿ ಹಿಡಿಯೋಣ ವಿಜ್ಞಾನದ ದೀವಿಗೆ
ಇದು ಆಧುನಿಕ ವಿಚಾರದ ಶಾಂತಿಯ ಮಂತ್ರಗೆ

- Shinan

24 Jan 2017, 01:39 pm

ಓ ಗೆಳೆಯನೇ......

ನನ್ನ ಬಾಳದೀಪ ಬೆಳಗಲು ಬಂದ ಬಂಗಾರದ ಜ್ಯೋತಿ ನಿನಾಗಿರುವೆ..
ನಿನ್ನ ಸಾಗರದಷ್ಟು ಪ್ರೀತಿಗೆ ನಾ ಮರುಳಾಗಿರುವೆ...
ನಿನ್ನ ಮಾತುಗಳು ಕಿವಿಯಲಿ ಹಕ್ಕಿಗಳ ಚಿಲಿಪಿಲಿ ಸದ್ದಿನಂತೆ ಕೇಳುತ್ತಿದೆ...
ನೀ ನಡೆದು ಬಂದರೆ ನನ್ನ ಎದೆಯ ಬಡಿತ ಜೋರಾಗುತ್ತಿದೆ....
ನನ್ನ ಉಸಿರಲ್ಲಿ ಉಸಿರಾಗಿ ಬಾಳ ಬೆಳಗಲು ಬಂದಿರುವ ಇನಿಯನು ನೀನು..
ಕೈ ಹಿಡಿದು ಮುನ್ನಡೆಸಲು ಬಂದಿರುವ ಬಾಳ ಸಂಗಾತಿ ನೀನು......
- ನಮಿತ ಗಟ್ಟಿ

- ನಮಿತ ಗಟ್ಟಿ

24 Jan 2017, 01:25 pm

ಹನಿ..

ತಾರಾಮಂಜರಿ ಉರುಳಿ
ನಿನ್ನೀ ಜುಮುಕಿಯ
ಅಲಂಕರಿಸಿದ ಇರುಳು...

- Indushekar Chinivar

23 Jan 2017, 10:40 pm

ಪ್ರೀತಿ

ನೀನು ನನಗೆ ಮೋಸ ಮಾಡಬಹುದು
ಆದರೆ...............................
ನಿನ್ನ ಪ್ರೀತಿ ಎಂದೂ ನನಗೆ
ಮೋಸ ಮಾಡದು..............

ನೀನು ನನ್ನನ್ನು ಅವಮಾನಿಸಬಹುದು
ಆದರೆ................................
ನಿನ್ನ ಪ್ರೀತಿ ಎಂದೂ ನನ್ನ
ಅವಮಾನಿಸದು.................

ನೀನು ನನ್ನಿಂದ ದೂರ ಹೋಗ ಬಹುದು
ಆದರೆ.................................
ನಿನ್ನ ಪ್ರೀತಿ ಎಂದೂ ನನ್ನಿಂದ
ದೂರ ಹೋಗಲಾರದು..........

- ಪಿ.ಜಿ.ಜ್ಯೋತಿ

23 Jan 2017, 08:25 pm

ತಪಸ್ಸಿನ ಫಲವೊ

ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನಿನ್ನನು ಹುಡುಕುತ ಹುಡುಕುತ
ನಿನ್ನೊಳಗೆ ನನ್ನ ನಾ ಕಳೆದುಕೊಂಡಿರುವೆ
ಹಗಲು ಇರುಳು ಒಂದು ಅರಿಯದೆ
ನೀ ನನಗೆ ಸಿಕ್ಕ ಕ್ಷಣದಿಂದ
ಗುರುತೇ ಸಿಗದಂತೆ ಕಳೆದೋಗಿರುವೆ

ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನೀ ಸಿಕ್ಕ ಘಳಿಗೆಯ
ಪ್ರತಿ ರಾತ್ರಿ ಕಾಣುವ ಕನಸಿನಲ್ಲೂ
ನಿನ್ನ ಮುಖವನು ಮಾತ್ರ ಕಾಣುವೆ
ನಿನ್ನ ಹೊರತು ಬೇರೇನೂ
ನನಗೀಗ ಕಾಣದಾಗಿ
ಜಗತ್ತನ್ನೆ ಮರೆತು ಬಿಟ್ಟಿರುವೆನು

ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನಿನ್ನ ಭೇಟಿಮಾಡಿದ ಕ್ಷಣವ ನೆನೆದು ನೆನೆದು
ಪದಗಳೇ ಸಿಗದಂತಾಗಿದೆ
ನನ್ನ ಸಂಭ್ರಮವ ವರ್ಣಿಸಲು
ಮನಸ್ಸು ಬಿಚ್ಚಿ ನಾ ನುಡಿದಿರುವೆ
ನನ್ನ ಭಾವನೆಗಳ ನೂರು , ...
ನಿನಗಿಷ್ಟವಾದರೆ ಮನಸಿನ 
ಭಾವನೆಗಳೆ ಈ ನನ್ನ ಕವನ ...

- Pb

23 Jan 2017, 04:25 pm

ಪ್ರೀತಿ

ಪ್ರೀತಿಯೆಂಬುದು ಅಂತರಂಗದ ಭಾವನೆ

ಶತ್ರುವನ್ನು ಗೆಲ್ಲ ಬಹುದಾದ ದೋಡ್ಡ ಸಾದನೆ

ಪ್ರೀತಿಯೆಂಬುದೇ ನಾಡು

ಪ್ರೀತಿಯಿಲ್ಲದು ಬಂಜರು ಕಾಡು

 ಏನನ್ನಾದರೂ ಸಾದಿಸಲು ಬೇಕು ಪ್ರೀತಿ ಬಾವನೆ

ಪ್ರೀತಿ ಪ್ರತೀ ಜೀವಿಗೂ ಸಿಗಬೇಕೇನ್ನುವುದು ನನ್ನ ಕಾಮನೆ

ತನ್ನ ಋತುಚಕ್ರದ ಸೃಷ್ಠಿಯಲ್ಲಿ

ಪ್ರೀತಿಯೇ ದೇಶದ ಪಾಡು

ಪ್ರೀತಿ ಎಂದಿಗೂ ಸೋತ್ತಿಲ್ಲ , ಸೋಲುವುದೂ ಇಲ್ಲ

ಪ್ರೀತಿಸಿದವರು ಸೋತರು ಸಿಗದ ಪ್ರೀತಿಯ ಮುಂದೆ,

- ರಾಜೇಶ್

23 Jan 2017, 12:28 pm

ಅಮ್ಮ

ನನ್ನ ಪ್ರತಿ ಉಸಿರಿನ ಹೆಸರು ಅಮ್ಮ

ನನ್ನ ಪ್ರತಿ ಕನಸು ನನಸಾಗಲು ನೀ ಬೇಕಮ್ಮ

ನನ್ನ ಹ್ರುದಯದ ಬಡಿತವು ನೀನಮ್ಮ

ನನ್ನ ನೇತ್ತರು ಹನಿ ಹನಿಯಲ್ಲೂ ನೀನುರುವೆಯಮ್ಮ

ನಾ ಬಿದ್ದರೂ ದನಿಯಲ್ಲೂ ಕೂಗುವೆ ಅಮ್ಮ

ನಾ ಅತ್ತರು ಕಣೆರಿನಲ್ಲಿ ನೀನುರುವೆಯಮ್ಮ

ನನ್ನ ಕರುಣೆಯ ದೇಗುಲ ನೀನಮ್ಮ

ನನ್ನ ಜೋತೆಯಲ್ಲಿರುವ ಪಾಠ ಶಾಲೆ ನೀನಮ್ಮ

ನಿನ್ನ ಪಡಿಯಲು ಯಾವುದೊ ಜನ್ಮದಲ್ಲಿ ತಪಸ್ಸು ಮಾಡಿದ್ದನಮ್ಮಾ

ನೀ ಜೋತೆಯಲ್ಲಿರಲು ಯಾವ ವರವು ಬೇಡಮ್ಮ

ನನ್ನ ಪ್ರತಿ ಯಶಸ್ಸಿಗೆ ನೀ ಬೇಕಮ್ಮಾ

ನಾ ಸತ್ತರೂ ಕೋನೆಯಲ್ಲಿ ನಿಮ್ಮ

ಮಡಿಲಿಗೆ ಬಂದು ಸೇರುವೆನಮ್ಮ

ನೀ ಇಲ್ಲದಿದ್ದರೆ  ಈ ಭೂಮಿಯನ್ನು ನಾ ನೋಡುತ್ತಿರಲಿಲ್ಲಮ್ಮ 

ಸುತ್ತುತಿರುವ ಭೂಮಿಯ ಮೇಲೆ ಸುತ್ತದ ಭೂಮಿ ನೀನಮ್ಮ 

- ರಾಜೇಶ್

23 Jan 2017, 12:27 pm

ನಗುವಾಸೆ

ಮನೆಯ ಮುಂದಿರುವಗಿಡದ ಹೂವಾಗಿ
ಪರಿಮಳವ ಪಸರಿಸುವಾಸೆ....
ಕಡಲ ನೀರನಲಿ ಮೀನಾಗಿ ಈಜಾಡಿ
ಆಳಕ್ಕಿಳಿಯುವಾಸೆ....
ಹಕ್ಕಿಯಾಗಿ ಬಾನಲಿ ಹಾರಾಡಿ ಮುಗಿಲ ಮೇಲೇರಿ
ಧರೆಯ ನೋಡುವಾಸೆ....
ಉರಿವ ದೀಪದಲಿ ಬೆಳಕಾಗಿ ತೋರುವಾಸೆ....
ಭೋರ್ಗರೆವ ಜಲಪಾತದಿ ನೀರಾಗಿ
ಹಾರಿ ನದಿಯ ಕಡಲ ಸೇರಿ
ಆವಿಯಾಗಿ ಮೋಡದಿ ಮಳೆಯಾಗಿ
ಭೂಮಿಗೆ ಧುಮುಕುವಾಸೆ.....
ಮುಂಜಾವಿನಲಿ ಮಂಜಿ ಹನಿಯಾಗಿ
ಇಳೆಗೆ ಇಳಿದು ಹುಲ್ಲಿನ ತುದಿಯಲ್ಲಿ
ವಜ್ರದಂತೆ ಹೋಳೆಯುವಾಸೆ....
ಹಲವ್ ನೋವ್ಗಳ ನಡುವೆ
ಮನವ ಹಿಡಿಯಲಿ ಹಿಡಿದು
ಹಸುಕಂದ ನಂತೆ ನಗುವಾಸೆ....

ಅರುಣ್.ಕೆ.ಗಟ಼಼ಿ.ಕಾಪಿಕ್ಕಾಡ್

- ಅರುಣ್. ಕೆ. ಗಟ್ಟಿ. ಕಾಪಿಕಾಡ್

23 Jan 2017, 11:45 am