ಹಾಯಾಗಿ ಆಕಾಶದಲ್ಲಿ
ಹಾರಾಡುವ ಅರಗಿಣಿಯೇ
ಎಲ್ಲಿಗೆ ಹೊರಟಿರುವೆ
ಅಷ್ಟು ಜೋರಾಗಿ
ಹೇಳಿ ಹೋಗಮ್ಮ ಸ್ವಲ್ಪ ಮೆದುವಾಗಿ.
ಸಮ್ರುದ್ದೀ ಸಂಕೇತ ಹಸಿರನ್ನು ಮೈದುoಬಿಕೊoಡು
ಎಲ್ಲಿ ಹಾರಾಡುತ್ತಿರುವೆ ಸ್ವಚoದವಾಗಿ .
ನೀನಿದ್ದರೆ ಕಣ್ಮುಂದೆ...
ಸಂತೋಷಕ್ಕೆ ಪಾರವೇ ಇಲ್ಪದಂತೆ,
ಆ ಮರದಲ್ಲಿರುವ ಕೋಗಿಲೆ ಹಾಡುವುದಿಲ್ಲವೆ?,
ನೀನಿದ್ದರೆ ಕಣ್ಮುಂದೆ...
ಎಲ್ಲ ಹಕ್ಕಿಗಳು ನಿನ್ನ ಜೊತೆ ಮಾತನಾಡಲೆಂದು ನಾ ಮುಂದು ತಾ ಮುಂದು ಎನ್ನುತ್ತ ಚಿಲಿಪಿಲಿಯ ಧ್ವನಿಯೊಂದಿಗೆ ಜಗಳವಾಡುವುದಿಲ್ಲವೆ?,
ನೀನಿದ್ದರೆ ಕಣ್ಮುಂದೆ...
ಕಡಲದಲ್ಲಿನ ಅಲೆಗಳು ಕುಣಿದು ಕುಪ್ಪಳಿಸಿ,
ತೀರಕ್ಕೆ ಬಂದು ನಿನ್ನ ಹೆಜ್ಜೆಯನ್ನು ಸ್ಪರ್ಶಿಸಿ
ಹೋಗುವುದಿಲ್ಲವೆ?,
ನೀನಿದ್ದರೆ ಕಣ್ಮುಂದೆ...
ಆ ಹೂವುಗಳು ನಾಚಿ ತಲೆದೂಗುವುದಿಲ್ಲವೆ?,
ಗೆಲ್ಲಲಾಗದ ನಗರದ ಹತ್ತು ತೇರಿನ ಗಾಲಿಗಳ
ಏಳು ಹೊರಳಿನಲಿ ಭೂಮಿಗಿಳಿದ ಮರ್ಯಾದೆ ಪುರುಷ
ಜೊತೆಗೆ ಭೂಮಿಯ ಭಾರ ಹೊತ್ತವನ ಶೇಷಾಂಶ !
ಮತ್ತೊಂದು ಮಂಥನದ ಸುತ್ತಿನುರುಳಿಗೆ ಅರಸೊತ್ತಿಗೆ ಬಿಟ್ಟು-
ಕೊಟ್ಟು ನಡೆದ,ಕಾಡಿನತ್ತ....ಸಂತೋಷದಿಂದಲೇ. ಜೊತೆಗೆ
ಹಿಡಿದ ಉತ್ತ ಮಣ್ಣಗೆರೆಯಂಥ ದಾರಿ!
ಕಾಡಿನೆಡೆಗಿನ ನಡೆಯಲ್ಲಿ ಕಾಡಿತ್ತು,-ಋಷಿ ಮುನಿಗಳ
ಜಾಡಿತ್ತು-ಹಾಡಿತ್ತು.ಐದು ಮರಗಳ ತೋಪಲ್ಲಿ
ಬೇಡಿತ್ತು.ಅಗಲ ಉದ್ದದುಗುರ ಹೆಣ್ಣು.ಕಾಮದ ಕಣ್ಣು,
ಮೂಗ ಹುಣ್ಣು-ಎದೆಯ ಬೆನ್ನು!
*
ಮಣ್ಣಮಗಳಿಗೆ ಚಿನ್ನ ಮೃಗದ ಆಸೆ
ಚಿನ್ನದೂರವಗೆ ಮಣ್ಣ ಸೇರುವಾಸೆ!
ಮಾಯಾಮೃಗದ ಓಟದ ದಾರಿ ಉತ್ತರದ
ದಿಕ್ಕ ಬದಲಿಸಿತು.ಹೊರಳಿಸಿತು-ಉರುಳಿಸಿತು.
ದಕ್ಷಿಣದ ಹತ್ತುತಲೆ ಹುಳ ಉತ್ತರಕೆ ಹತ್ತುತಲೆ ಇತ್ತು
ಮಣ್ಣು ತಿನ್ನಲು ಕಾತರಿಸುತ್ತಲೆ ಇತ್ತು.
ಉತ್ತ ಮಣ್ಣಿನ ಗೆರೆ ದಾರಿ-ತಪ್ಪಿ ಶೇಷ ಗೆರೆ ದಾಟಿ...ದಾಟಿ...
ಪ್ರಕೃತಿ,ಪುರುಷನ ದಾಟಿ...ಪಕ್ಷಿ ಹೃದಯವ ಮೀಟಿ...
ಮಣ್ಣಿನ ಧೂಳನು ಹೊಕ್ಕಿಸಿತು-ಹತ್ತು ತಲೆ ಹುಳ
ಚಿನ್ನದೂರಿಗೆ ಮುಸುಕಿಸಿತು-ಸಂಕಟದ ಜಾಲ.
...
ಪ್ರಕೃತಿಹೀನಗೆ ಗಾಳಿ-ಬೆಳಕುಗಳ ಅಂಶ ಸಾಂಗತ್ಯ
ಹಣ್ಣು ಹಣ್ಣು ಮುದುಕಿಯ ಎಂಜಲ ಹಣ್ಣ ಆತಿಥ್ಯ!
ಬಾಲ ಬಲಿಗೆ ವನಧರ್ಮದ ಪಾಠ-ಅನುಗ್ರಹದ ಶಿಕ್ಷೆ!
ಬೆಳಕ ಅಂಶಕ್ಕೆ ಸುವಚನದ ಕಂಠಕ್ಕೆ ಗೆಳೆತನದ ದೀಕ್ಷೆ!
ದುಃಖವಿಲ್ಲದ ಕಾಡಲ್ಲಿ ಕಾಡಲೆಳಸಿದ
ಹತ್ತುತಲೆಹುಳದಬ್ಬರಕೆ-ಶೃಂಗಾರದಾಭಾಸಕ್ಕೆ
ಒಮ್ಮೆ ಕಂಪಿಸಿದ ಭೂಮಿ,ಬಾನಂತೆ ಗುಡುಗಿತ್ತು ಮತ್ತೊಮ್ಮೆ!
ಗಾಳಿ-ನೀರನು ದಾಟಿ,ಭೂಮಿಯನು ಸಂತೈಸಿ
ಪುರುಷ ವೃತ್ತಾಂತವನು ಅಗ್ನಿ ಸಾಕ್ಷೀಕರಿಸಿತು.
ಗೆಲ್ಲಲಾಗದ ನಗರದ ಮರ್ಯಾದೆ ಪುರುಷನಿಗೆ ಸಿದ್ಧವಾಗಿತ್ತು
ಯುದ್ಧಭೂಮಿ,ಚಿನ್ನದೂರಿನಲ್ಲಿ!ಮಣ್ಣಿಗಾಗಿ!
ಹೆಣ್ಣಿಗಾಗಿ!ಸ್ತ್ರೀಕುಲದ ಕಣ್ಣಿಗಾಗಿ!ಪ್ರಕೃತಿಗಾಗಿ!
ಮಣ್ಣ ತಿನ್ನಲೆಳಸಿದ ಹುಳ ತಾನೆ ಮಣ್ಣಲ್ಲಿ ಮಣ್ಣಾಯಿತು!
ಗಾಳಿ ದಾರಿಯಲಿ ಹೂವ ತೇರನು ಏರಿ
ಪ್ರಕೃತಿ-ಪುರುಷರ-ಗೆಲ್ಲಲಾಗದ ನಗರದತ್ತಣ ಪಯಣ
ಇದು ರಾಮನ ದಾರಿ! ಇದುಪುರುಷನ ದಾರಿ!ಹೆಸರಿದಕೆ ರಾಮಾಯಣ!
ಇನ್ನೆಲ್ಲ ಪ್ರಶ್ನೆಗಳೆ ಹುಟ್ಟಿಕೊಂಡ
ಪ್ರಕೃತಿಯ ಉತ್ತರಕಾಂಡ!
ರಾಜ್ಯಸುಖದನುಭೂತಿ ಪ್ರಕೃತಿ- ಪುರುಷರಿಗೆ
ಪ್ರಜಾವರ್ಗಕ್ಕೆ, ತಳದಿಂದ ಉಪ್ಪರಿಗೆ.
ರಾಜಧರ್ಮದ ಕ್ಷಿತಿಜ ವಿಸ್ತರಿಸೆ--ಯಶದ ಖಜಾನೆ ತುಂಬಿ
ತುಂಬಿ ತುಳುಕಾಡಿತು.
ಇಂತೆಲ್ಲ ಸುಖದಿ ಮುಗಿಯಿತೆಂಬ ಕಾಲಕ್ಕೆ.....
ಚಿಗುರೆರಡು ಮೊಳೆತು ಪ್ರಕೃತಿ ತುಂಬಿದ ಕಾಲಕ್ಕೆ-
ಸುಖದ ರಾಜ್ಯದ ತಳದ ಬದುಕಿನ ತಳಮಳ
ಉಪ್ಪರಿಗೆಯ ಹಂತಕ್ಕೆ ದಾಂಪತ್ಯ ಜಗಳ
ಅರಸ-ಅಗಸರಿಲ್ಲಿ ನಿರಾಕರಣದಲ್ಲಿ ಸಮಬಲ, ನಿರಾಕರಣ ಕಾರಣ ಒಂದಕ್ಕೊಂದು ತಳುಕು
ಪ್ರಕೃತಿ-ಪುರುಷರ ದಾರಿಯಲಿ ಬಿರುಕು,
ಪುನಃ ಪ್ರಕೃತಿ ದಾರಿಯಲಿ ಶೇಷ ಸಹಕಾರ ಪಯಣ
ತುಂಬು ಪ್ರಕೃತಿಯ ಮೇಲು ಶೂನ್ಯ ಪುರುಷಕರುಣ!
ಇಲ್ಲಿ ಶೇಷಾಂಶ ಗೆರೆ ಎಳೆಯಲೆ ಇಲ್ಲ,,!ಎಲ್ಲ ಮುಕ್ತ..ಮುಕ್ತ....
***** *****
ಹುತ್ತ ಕಟ್ಟಿದ ಮಣ್ಣ ಒಳಗಣ್ಣ ಕವಿಋಷಿಗೆ
ಉತ್ತ ಮಣ್ಣ ಗೆರೆಯ ಹೆಣ್ಣ ನೋವಿನಲು ಖುಷಿಗೆ
ಆಸರೆಯಾಗುವ ಕಾರುಣ್ಯಮನಸು,
ಸಾಕಾರ ಕ್ರೌಂಚ ವಿಯೋಗದ ಕನಸು.
ಬದುಕ ದ್ವಂದ್ವಕೆ ಸ್ಪಂದ-ಕುಶಲವಾದ ಫಲಸಿದ್ಧಿ
ಪುತ್ರಕಾಮೇಷ್ಟಿಯಿಲ್ಲದೆ ರವಿಕುಲದ ವೃದ್ಧಿ...ವೃದ್ಧಿ.