Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಂದುಬಿಡು ಗೆಳೆಯ

ಬದುಕೆಂಬ ಗಾಳಿಗೋಪುರ
ಉರುಳಿ ಹೋಗುವ ಮುನ್ನ
ಬಂದುಬಿಡು ನೀ ಗೆಳೆಯ
ಒಮ್ಮೆ ಈ ಬದುಕಲಿ!!

ಬರವಸೆಯ ದಾರಿಯನ್ನು
ಕಾಯುತ್ತ ಕುಳಿತರೆ
ಉರುಳುವ ಕಾಲವದು
ಮತ್ತೆ ಮರಳದು!!

ಕಡಲ ತೀರದಿ ಮರಳ
ಮನೆಯ ಮಾಡಿದರೆ
ಅಲೆಯು ಬಂದಳಿಸಿ
ಹೋದಂತೆ ಜೀವನ!!

ಉರುಳುವ ಜೀವನ ಚಕ್ರದ
ಅಡಿಯಲ್ಲಿ ಮತ್ತೆ
ಮರಳುವುದೇ ಈ ಯವ್ವನ
ಬಂದುಬಿಡು ಗೆಳೆಯ ಬದುಕಲಿ!!

- ಪಿ.ಜಿ.ಜ್ಯೋತಿ

19 Jan 2017, 04:18 pm

ಮುಳ್ಳಿಲ್ಲ ದ ಗುಲಾಬಿ ನನ್ನ ಹ

ನನ್ನ ಎದೆಯೆಂಬ ತೋಟದಲ್ಲಿ
ಬೆಳೆದ ಗಿಡದಿಂದ ಕಿತ್ತುಕೊಟ್ಟೆ
ಮುಳ್ಳಿಲ್ಲದ ಗುಲಾಬಿಯೆಂಬ ಹೃದಯವನ್ನ
ನೀ ಮುಡಿಯದೆ ತಿರುಗಿ ನನಗೆ ಮುಡಿಸಿದೆ
ತಲೆ ಮೇಲೆ ಅಲ್ಲ ಕಿವಿಯ ಮೇಲೆ.

- ಮುತ್ತು

19 Jan 2017, 03:03 pm

ಅನಾಮಿಕ

ನಾನೊಬ್ಬ ಅನಾಮಿಕ ನಿಮ್ಮ ಅಭಿಮಾನಿ

ದೂರದಲ್ಲಿ ಕೂತು ಬರೆಯಬೇಕೆಂದಿರುವೆ ನಿಮಗೂಂದು ಕಹಾನಿ

ಪದಗಳೆ ಸಿಗದೆ ನಾ ಕುಳಿತಿರುವೆ ಸುಮ್ಮನೆ
ಸಿಗದ ಪದಗಳ ಹುಡುಕುತ
ನೆನೆಯುತಿರುವೆ ನಿಮ್ಮನೆ

ಸಾಹಿತ್ಯದ ಱನವ ಹೊಂದಿರದ ನನಗೆ
ಹಾಡೊಂದನ್ನು ಬರೆಯಲು ಹೊರಟಿರುವೆ ನಿಮಗೆ

ಹೆಸರು ಇಡದ ಈ ನನ್ನ ಮುಗ್ದ ಕವಿತೆಗೆ
ನಾಮಕರಣ ಮಾಡುವಿರಾ?

- chetankumar

19 Jan 2017, 11:51 am

ವೀರ ಕಂದ

ಮರಳಿ ಬಾ ಎಂದೆನ್ನ
ನಾಡು ಕರೆದಿಹುದು
ಅನುಮತಿಯ ನೀಡಮ್ಮ
ನಾ ಹೊರಡಲೀಗ!!

ಸುತ್ತ ಸೈನ್ಯವ ಕಟ್ಟಿ
ಬದುಕಿದವನು ಗಟ್ಟಿ
ನಾಡ ಸೇವೆಗೆ ಈ ತನುವು
ಮುಡಿಪಾಗಿ ಇಹುದಮ್ಮ!!

ಯುಧ್ಧ ಸಾರಲೂ ಬಹುದು
ಕಪಟದಿಂದಲಿ ಹೊಂಚು
ದಾಳಿ ನಡೆಸಲೂ ಬಹುದು
ಗೆದ್ದು ಬಾ ಎಂದೆನ್ನ ಹರಸಮ್ಮ!!

ಸಲಹಿದ ತಾಯಿನಾಡು
ಕೈ ಬೀಸಿ ಕರೆದಿಹುದು
ಹೊರಡಲನುಮತಿಯ ನೀಡಿ
ನನ್ನ ಹುರಿದುಂಬಿಸಮ್ಮ!!

ಮತ್ತೆ ಮರಳುವೆ ತಾಯಿ
ನಾ ಹಿಡಿದು ವಿಜಯ ಪತಾಕೆಯ
ವೀರ ತಿಲಕವನಿಟ್ಟು
ನನ್ನ ಆಶೀರ್ವದಿಸಮ್ಮ!!

ನಾಡ ಸೇವೆಗೆ ನನ್ನ
ಪ್ರಾಣ ಹೋದರೂ ಸರಿಯೇ
ವೀರ ಮರಣದಿ ಮರಳಿ
ನಾ ಧೀರನಾಗುವೆನಮ್ಮ!!

- ಪಿ.ಜಿ.ಜ್ಯೋತಿ

19 Jan 2017, 10:12 am

ಹನಿ..

ರವಿಯ ನಿರೀಕ್ಷೆಯಲ್ಲಿ
ಅವನಿ ದುಗುಡದಿ
ಕೆಂಪಾದ ಬೆಳಗು...

- Indushekar Chinivar

19 Jan 2017, 08:14 am

ವಿಜಯ

ವಿಜಯದ ಹಿoದಿನ ಶ್ರಮ ಪಟ್ಟವರಿಗೆ ಗೊತ್ತು .
ನಗುವಿನ ಹಿoದಿನ ನೋವು ಅನುಬವಿಸಿದವರಿಗೇ ಗೊತ್ತು .
ನಿಮ್ಮ ಪ್ರತೀ ನೋವಿನ ಹಿoದೆ ಒಂದು ಕಾರಣ
ಇದ್ದಹಾಗೆ ನಿಮ್ಮ ಜೊತೆ ಆ ನೋವಲ್ಲಿ ಕೈ ಬಿಡದೆ
ಜೊತೆಗಿದ್ದವರು ಇರುತ್ತಾರೆ.
ಅಂತಹವರನ್ನು ಎಂದಿಗೂ ಮರೆಯಬೇಡಿ.
........ಭವ್ಯಶ್ರೀ

- ಚುಕ್ಕಿ

19 Jan 2017, 07:40 am

ದೂರವಾ(ದ)ಣಿ ಗೆಳತಿ....

ಜೀವಕಿಂತ ಹೆಚ್ಚು ಪ್ರೀತಿಸಿದೆ,
ಪ್ರೀತಿ ನೆಪದಲಿ ಮನಸ ಆವರಿಸಿದೆ..
ಮನದ ತುಂಬ ಪ್ರೀತಿ ಹಂಚಿದೆ,
ಪ್ರೀತಿ ಕನಸಲಿ ಬಿಡದೆ ಕಾಡಿದೆ..
ಪ್ರೀತಿ ಮೋಹದಲಿ ಸ್ನೇಹಿತರ ದೂರ ಮಾಡಿದೆ,
ಪ್ರೀತಿ ನೀಡದೆ ನೀನೂ ಮೋಸ ಮಾಡಿದೆ..
ದೂರದೂರಿನ ದೂರವಾಣಿ ಕರೆ,
ಪ್ರೀತಿ ಹೆಸರಲಿ ಹಾಕಿದ ಬರೆ..
ಮನಸಲೀಗಲೂ ಉಳಿದಿದೆ ಆ ಕಪ್ಪು ಕಲೆ,
ಎಷ್ಟೇ ಪ್ರಯತ್ನಿಸಿದರು ಹೊರಬಿಡುತ್ತಿಲ್ಲ ನೀ ಹಾಕಿದ ಬಲೆ..

- jp R

19 Jan 2017, 04:34 am

ವೇಶ್ಯೆಯು-ನಾ

ಕಾಮವದು ಪ್ರಕೃತಿಯ ನಿಯಮ,
ಸಂಸ್ಕೃತಿಯದ್ದು ಪ್ರೇಮವು..!

ಕಾಮವನು ಪ್ರೇಮಕ್ಕೆ ಮುಡಿಪಿಟ್ಟು,
ಪ್ರಕೃತಿಯನು ಮನದಾಳಕ್ಕೆ ಹುದುಗುವ
ನೀವೆಲ್ಲ ಸಭ್ಯರೊಂದೆಡೆ..!

ಪ್ರಕೃತಿಗು, ಪ್ರೇಮಕ್ಕು ಬೇಧವರಿಯದೆ
ಕಾಮವನೆ ಅಪ್ಪಿ, ಅದರಲ್ಲಿ
ಪ್ರೇಮವಂ ಹುಡುಕುವರೊಂದೆಡೆ..!

ಪ್ರೇಮವು ಮರೀಚಿಕೆ ನನಗದು,
ನಾನೆಂದೂ ಸಮೀಪಿಸೆನದನು
ಹಸಿವಿಗಾಗಿ ಸೆರಗನ್ಹಾಸುವವಳು ನಾ..!

- ಶ್ರೀ

19 Jan 2017, 12:13 am

ಮರೆವು

ನನ್ನ ಮೆದುಳಿಗೆ ಮರೆವು ಕೊಟ್ಟ
ಭಗವಂತ ಮನಸಿಗೆ ಮರೆಯುವುದು
ಹೇಳಿಕೊಡಲು ಮರೆತುಬಿಟ್ಟ .

ನನ್ನನ್ನು ನಾನೆ ಮರೆತುಹೋದರು
ನಿನ್ನ ನೆನಪು ನನ್ನಲ್ಲೇ ಉಳಿಸಿಬಿಟ್ಟ .
ಆದ್ರೂ ನನ್ ಕನ್ನಿರಿಗೇನು ಗೊತ್ತು
ನಿನ್ನ ಮೆರೆಯಬೇಕೆoದು.

ನಿನ್ನ ನೋಡಲು ಬಯಸಿದ ಪ್ರತೀ
ಕ್ಷಣ ಹೊರಬಂದು ಎಲ್ಲರಿಗೂ
ಕಾಣಬಾರದೆoದು .....!!!!!

- ಚುಕ್ಕಿ

18 Jan 2017, 11:06 pm

ಪಾಡು....

ಯಾರು ಸುರಿದರೀ ಸಂದರ ಜಗದೋಳು
ಮೇಲು ಕೀಳೆಂಬ ಅಪನೀತಿ.
ಕೊಚ್ಚೆಯೊಳು ನೂಕಿ
ಚಪ್ಪಲಿಯಲ್ಲಿ ಮುಖಕ್ಕೆತ್ತಿ ಮಂಗಳಾರತಿ
ತಾನೂ ಮನುಷ್ಯನೇ ಎಂಬುದ ಮರೆತು
ಬೆಲೆ ಇಲ್ಲದೆ ಅವನ ಪಾಡು.....
ಮಾರಾಟಕ್ಕಿಟ್ಟರಲ್ಲ....
ಮನಸು ನೇಣಿನ ಗೆಳೆಯ ಪರಸ್ಪರ....

- ಅದ್ಯತನ

18 Jan 2017, 10:24 pm