Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳೆತನ...

ನನ್ನ ಹೃದಯವು ಬೆಂದು ಹೋಗುತ್ತಿದೆ, ಒಳಗೊಳಗೆ ನಿಂಗೆ ಕಾಣದಿದ್ದರೇನು... ಬೆಂದ ಹೃದಯದ ವಾಸನೆಯೂ ಬರಲಿಲ್ಲವೇ ಗೆಳೆಯಾ......!

- ಹರೀಶ್. ಚಾಮರಾಜನಗರ

18 Jan 2017, 10:21 pm

ಬರೆದೆನು ನನ್ನ ಹೆಸರ

ಸಾಗರದ ತೀರದ ಮೇಲೆ
ಬರೆದೆನು ನನ್ನ ಹೆಸರ
ಸಾಗರವು ಉಕ್ಕಿ
ಸಾಗರದ ಅಲೆಗಳು,ನನ್ನ ಹೆಸರಿಗೆ ಮುತ್ತಿಕ್ಕಿ
ಕಳೆದುಕೊಂಡವು ತಮ್ಮ ಬೇಸರ.

- ಮುತ್ತು

18 Jan 2017, 09:23 pm

ನಕ್ಷತ್ರಗಳು-೧೮.

ನಕ್ಷತ್ರಗಳ
ಬೆಳಕಿಗೆ-ತಂಪಿದೆ
ನವಿರಿದೆ-ಕೋಮಲತೆಯ
ಕುಸುರಿದೆ.ಯಾಕೆಂದರೆ
ನಸುಕಿನ ಎಳೆ
ತಂಗಾಳಿಯ ಹದ
ಸುಳಿವಿಗೂ
ಆ ದೀಪಗಳ ಸಾಲು
ಸಾಲೇ ಮೌನವಾಗಿ
ಆರಿ ಹೋಗುತ್ತವೆ.

******************ಪದ್ಯಾಣ.

- padyana

18 Jan 2017, 07:55 pm

ನಕ್ಷತ್ರಗಳು-೧೭

ಅಮಾವಾಸ್ಯೆಯ ರಾತ್ರಿ
ಆಕಾಶದ ಅಂಗಳದಲ್ಲಿ
ನಕ್ಷತ್ರಗಳು
ಸಾಮೂಹಿಕ ಸಭೆ ಸೇರಿ
ದಿವಂಗತ ಚಂದಿರನ
ಆತ್ಮಕ್ಕೆ
ರಾತ್ರಿ ಇಡೀ ಶಾಂತಿ
ಕೋರಿ-ಮೌನವಾಗಿದ್ದಾವೆ.

*****************ಪದ್ಯಾಣ.

- padyana

18 Jan 2017, 07:44 pm

ಏಕೆ ಏಕಾಂತ ನನ್ನ ಸೇರೋ ಧಾವಂ

ಏಕೆ ಏಕಾಂತ ನನ್ನ ಸೇರೋ ಧಾವಂತ
ನಿನ್ನ ಎದುರಿಸಲು ನಾ ತುಂಬ ಅಶಕ್ತ
ನಿನ್ನ ಆಗಮನ ಕಂಡು ಮನಸಾಗಿದೆ ಭಯಭೀತ
ನಿನ್ನ ಈ ನಿರ್ಧಾರಕೆ ನನ್ನೊಳು ಸೃಷ್ಟಿಯಾಗಿದೆ ಉತ್ಪಾತ

ಏಕೆ ಏಕಾಂತ ನನ್ನ ಸೇರೋ ಧಾವಂತ
ದೂರ ನಿಲ್ಲು ನೀನು ನಾನಲ್ಲ ನಿನ್ನ ಸ್ವಂತ
ನಿನ್ನ ಆಕ್ರಮಣದಿಂದ ನಾನಾಗುವೆನು ಅನಾಥ
ಸಾವೇ ಸೊಗಸು ನೀ ಕೊಡುವ ನೋವಿಗಿಂತ

ಏಕೆ ಏಕಾಂತ ನನ್ನ ಸೇರೋ ಧಾವಂತ
ನಿನ್ನ ಇರುವಿಕೆಯು ಸೂತಕದ ಸಂಕೇತ
ದೂರ ನಿಂತೇ ಕೇಳು ನನ್ನ ಅಂತರಂಗದ ಸ್ವಗತ
ನೀ ತಿಳಿದಿರುವ ಹಾಗೆ ನಾನಲ್ಲ ಈಗ ಪ್ರೇಮೋನ್ಮತ್ತ

ಏಕೆ ಏಕಾಂತ ನನ್ನ ಸೇರೋ ಧಾವಂತ
ನಿಜವೇ ಅವಳು ನನ್ನನ್ನಗಲಿ ನಾನಾಗಿರುವೆ ದುಃಖತಪ್ತ
ಒಂದನ್ನು ನೆನಪಿಡು ಆ ದುಃಖ ಇರಲಾರದು ನನ್ನ ಜೀವನದಾದ್ಯಂತ
ನಂಬಿಕೆಯುಂಟು ನನ್ನಲಿ ಮತ್ತೆ ಬರುವಳವಳು ನಿನ್ನ ಹಿಮ್ಮೆಟ್ಟಿಸುತ್ತ


- ಏಕಾಂಗಿ ಶಶಿ ಕಿರಣ

- ಅಕವಿ

18 Jan 2017, 05:09 pm

ಪ್ರೀತಿಲಿ ನೊಂದ ಹೃದಯ

ನಿನ್ನ ಹೊರೆತು ನನ್ನ ಜೀವ ಬೇರೆ ಏನು ಕೇಳದೆ,
ಕೊಂಚ ನಿನಗೂ ನೆನಪು ಬಾರದೆ..
.ಖಾಲಿ ಹಾಳೆಯಂತೆ ಇದ್ದೆ ,ನಿನ್ನ ಹೆಸರು ಗೀಚಿದೆ ,ಕಣ್ಣ ನೀರಲ್ಲೇಕೆ ಹಳಿಸಿದೆ ...

- MADHUPRINCE

18 Jan 2017, 12:14 pm

ಹೆಣ್ಣಿನ ಬದುಕು

ಹೆಣ್ಣು ತಾಯಿ
ಹೆಣ್ಣು ಕ್ಷಮಯಾಧರಿತ್ರಿ
ಹೆಣ್ಣು ದೇವತೆ
ಹೆಣ್ಣೇ ಮಹಾರಾಣಿ ಇಲ್ಲಿ
ಕತ್ತಲ ಕೋಣೆಯಲಿಟ್ಟು ಹೆಣ್ಣ ಪೂಜಿಸುವರಿಲ್ಲಿ.
ಹೆಣ್ಣು ಕಣ್ಣೊಳಗಿನ ಕನಸುಗಳಿಗೆ ಜಡಿದಿಹಳು ಬೀಗವ ಮನಸೊಳಗಿಟ್ಟು.
ಎಲ್ಲರ ಕೂಡಿ ತಾನು ಆಟವಾಡೊ ಬಯಸುವ ಕಾಲಿಗೆ ಹಾಕಿಹಳು ಬೇಡಿಯ ತಾನು ಹೆಣ್ಣೆಂಬ ಕಾರಣವ ಕೊಟ್ಟು.
ರಾತ್ರಿಯಾಗುವ ಮೊದಲೇ ಮನೆಸೇರಬೇಕಿದೆ ಓಡು ಕಾಲೇ ಎನ್ನುವಳು ಬಾಲ್ಯದಲ್ಲಿ ಎತ್ತವರ ನೆನೆದು, ಯವ್ವನದಲಿ ತನ್ನ ಕೊರಳಲ್ಲಿ ಮಾಂಗಲ್ಯವ ಪಡೆದು, ಮುಪ್ಪಿನಲಿ ತಾನೇ ಹೆತ್ತವರಿಗೆ ಹೆದರಿ.
ಅವಳು ಅಂತರಿಕ್ಷಕ್ಕೆ ಹಾರಿ ಬಂದರೇನು ಸಿಗದು ಸಮಾನ ಸಹಭಾಗಿತ್ವ ಎತ್ತವರ ಪಡೆದವನ ಹಡೆದವನ ಮನದಲ್ಲಿ ,ಅವಳು ಎಂದೆಂದೂ ಹೆಣ್ಣು.
ತನ್ನ ತನು ಮನವ ತನ್ನದೆಂದು ಬದುಕಲಾಗದವಳು, ತನ್ನ ಕನಸುಗಳ ಯಾರ ಹಂಗಿಲ್ಲದೆ ಹಾರಲು ಬಿಡಲಾಗದವಳು.
ಹುಟ್ಟು ಸಾವಿನವರೆಗೂ ಯಾರದೋ ಹಂಗು , ಯಾರದೋ ಭಾವ ಬದುಕಿಗೆ ,
ಯಾರೋ ಹಾಕಿದ ಅಧಿಕಾರದ ಕಟ್ಟಪ್ಪಣೆಗಳಿಗೆ , ಯಾರೋ ಯಾರಿಗಾಗಿಯೋ ಎಳೆದ ಅಂಕೆಯ ರೇಖೆಯ ಅಳಿಸಲಾಗದು ಶತ ಶತಮಾನಗಳೇ ಕಳೆದರೂ ಇಲ್ಲಿ.

- ಶ್ರೀಕಾವ್ಯ

18 Jan 2017, 12:04 pm

ಹನಿ...

ಮುಗಿಲ ಮೆತ್ತೆಯಲಿ
ಕುಳಿತು ರವಿತೇಜ ,
ಅವನಿಯ ಅರಸಿ
ಹೊರಟ ಬೆಳಗು...

- Indushekar Chinivar

18 Jan 2017, 07:24 am

ವಿಶ್ರಾoತಿ

ಕವನದ ಕಣ್ಣಲ್ಲಿ ಇಣುಕಿ ನೋಡಿದ
ಚಂದಿರನು ನಗು ನಗುತ್ತಾ ಕೇಳುವನು
ನನಗೆ ನಿದ್ದೆ ಬಂದರು ನೀನಿನ್ನು
ಮಲಗಿಲ್ಲವೆoದು.

ಆಗ ಕವನ ಮುಗುಳ್ನಗೆಯಿಂದ
ಹೇಳಿತು ನಿನಗೆ ಸಮಯಕ್ಕೆ ನಿದ್ದೆ ಬರುತ್ತೆ ,
ಆದ್ರೆ ನನ್ನ ಕವನ ಲೋಕದಲ್ಲಿ ವಿಶ್ರಾoಗೆ
ಸಮಯವಿಲ್ಲವೆoದು.

- ಚುಕ್ಕಿ

17 Jan 2017, 10:43 pm

ಕೊಳಲು

ಮೈ ತುoಬ ರಂದ್ರವೀರಲು ಹಾಡುವೆನು ನಾನು
ಸಾವಿರ ಸ್ವರಗಳ ಸಂಗೀತ ನಾನು
ನಾನು ಕೊಳಲು ಮಾತ್ರವಲ್ಲ
ಸoಗೀತದ ಉಸಿರು ನಾನು .

- ಚುಕ್ಕಿ

17 Jan 2017, 10:43 pm