ನನ್ನ ಹೆಜ್ಜೆಯ ಗುರುತು ಸಾಗುತಿವೆ
ನದಿ ದಡದಲ್ಲಿ ಜೀವವಿಲ್ಲದ ಮರುಳಿನ ಮೇಲೆ
ನಿನ್ನ ಸೇರಲೆoದು .
ನನ್ನ ಮನಸು ಅಲೆಗಳ ಜೊತೆ ಗಗನದೆಡೆಗೆ
ಹಾರುತ್ತಿದೆ ನಕ್ಷತ್ರಗಳ ನಡುವೆ ನಿನ್ನ ಹುಡುಕಲೇನ್ಡು.
ಕಾಣದ ಒಲವೇ ಕೇಳೆ
ನಿನಗಾಗಿ ಬರೆದಿರುವೆ ಈ ಕವನ
ಓ ಒಲವೇ ....
ನಿನ್ನ ಮತ್ತೆ ಸೇರುವುದೆಂದು..?
ನೀನೆಲ್ಲಿರುವೆ ನನ್ನ ಚೆಲುವೆ
ಕೂತಲ್ಲಿ ನಿಂತಲ್ಲಿ ಕನಸಲ್ಲಿ ನನಸಲ್ಲಿ
ಎಲ್ಲೆಲ್ಲೂ ನಿನ್ನ ನೆನಪುಗಳೆ
ನನ್ನ ಕಾಡುತಿವೆಯಲ್ಲ
ಕಾಣದಂತೆ ನೀ ಏಕೆ ಹೀಗೆ
ಮರೆಯಾಗಿ ಕುಳಿತಿರುವೆ
ಏನೆಂದು ತಿಳಿಸಲಿ ಒಲವೇ
ನನ್ನ ಮನದ ಹಂಬಲವ
ಕಳೆಯ ಬಯಸಿದೆ ಮನಸ್ಸು
ನಿನ್ನೊಡನೆ ಒಂದು ಭವ್ಯ ಸಂಜೆಯ
ನಿನ್ನೆದೆಗೆ ಒರಗಿ ನನ್ನೆದೆಯ
ಬಡಿತವ ಕೇಳಬೇಕೆನಿಸಿದೆ
ಜಗವನೆಲ್ಲ ಮರೆತು ನಿನ್ನ
ಸೇರುವ ಆಸೆಯಾಗಿದೆ..
ನನ್ನೆದೆಯ ಮಿಡಿತಗಳಿಗೆ
ನೀ ಬಡಿತವಾಗಿ
ನಿನ್ನೊಳಗೆ ನೀನಿರದೆ
ನನ್ನೊಳಗೆ ನೀ ಸೇರು..
ನಿನ್ನಿಂದ ನಾ ಎಂದಿಗೂ
ದೂರಾಗದಂತೆ
ನನ್ನಲ್ಲಿ ಬೆರೆತು ನನ್ನೊಳಗೆ
ನೀನಾಗು, ನಿನ್ನೊಳಗೆ ನಾನಾಗಿ
ಮತ್ತೆ ಸೇರುವಾಸೆ ನಿನ್ನಲಿ
ಜಗವನು ಮರೆಯುವಾಸೆ
ನಮ್ಮಿಬ್ಬರ ಮಿಲನದಲಿ...!
ಏಕೆಂಬ ಪ್ರಶ್ನೆಗೆ ನನ್ನಲಿ ಉತ್ತರವಿಲ್ಲ
ಆದರೆ ನಾ ನಿನಗೊಲಿದ ಕ್ಷಣ ಮರೆಯಲಾಗೊಲ್ಲ
ಅದನು ಮರೆತದ್ದೆ ಆದರೆ
ನನ್ನ ಜೀವನಕೆ ಅರ್ಥವಿರುವುದಿಲ್ಲ..................
ಇದು ನೀನೆ ಬರೆದ ಕವಿತೆ ಆದರಿಂದು ನನ್ನ ಜೀವನದಲ್ಲಿ ಈ ಕವಿತೆ ಮಾತ್ರ ಉಳಿದಿದೆ ಬರೆದವಳು ನೀನೆ ಇಲ್ಲವಲ್ಲ.....ಏಕಿಷ್ಟು ಕಾಯಿಸುವೆ...... ನಿನ್ನ ಇನ್ನೂಂದು ಕವಿತೆಗೆ ಮನ ಹಾತೊರೆಯುತ್ತಿದೆ ....ಎಂದು ಬರೆಯುವೆ ದಯವಿಟ್ಟು ತಿಳಿಸು
- ಇಂತಿ ನಿನ್ನ ಸದಾ ವಿರಹಿ ಶಶಿ ಕಿರಣ