Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕನಸಿನ ಕಣ್ಮಣಿ ಎನೆಂದು ಹೆಸರಿಡಲೆ ನಿನಗೆ
ಆವ ಗುಣಕ್ಕಾಗಿ ಆವ ಹೆಸರಿಡಲಿ
ಮುಗ್ಧತೆಗೊ, ಮೌನಕೋ
ಚಂಚಲತೆಗೊ, ಚೆಂದಕೋ
ಬೆಡಗಿನ ಬಿನ್ನಣಕೋ........?
. . .
ಬರಿದೆ ಕಣ್ಮಣಿ ಎಂಬುದೆ ಸೊಗಸಲ್ಲವೇ...!
- ಶ್ರೀ
20 Jan 2017, 11:03 pm
ನಾ ಒಡಲಲ್ಲೆ ಇದ್ದೇನೆ ಎಂದಾಗ ಖುಷಿಪಟ್ಟಳು..ಒಡಲಲ್ಲೆ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ತಿನಿಸಿದಳು..
ತಾನು ಈಗ ಎರಡು ಹೃದಯದ ಒಂದೇ ದೇಹ ಎಂದು ಸಂತೋಷಪಟ್ಟಳು...
ನಾ ಉದರದಲ್ಲೆ ಒದ್ದರೂ,ಹೊಡೆದು-ಒದ್ದಾಡಿದರು ಸಹಿಸಿಕೊಂಡಳು..
ಭೂಮಿಗೆ ನಾ ಬರುವ ಮುಂಚೆಯೇ ಪ್ರೀತಿಸುತ್ತಿದ್ದಳು..
ಭೂಮಿಗೆ ಬಂದ ಮೇಲೆಯೂ ಪ್ರೀತಿಸುತ್ತಿರುವಳು..
ಭೂಮಿ ಬಿಟ್ಟು ಹೋದ ಮೇಲೆಯೂ ಪ್ರೀತಿಸುವಳು...
ಅವಳೇ ಅವ್ವ. ..ಅವ್ವನೇ ಎಲ್ಲಾ. .
ಅವಳಿಲ್ಪದಿದ್ದರೆ ಏನೂ ಇಲ್ಲಾ..
- ಮುತ್ತು
20 Jan 2017, 08:09 pm
ಅದೋ, ಕಣ್ಣ ಮುಂದಿಹುದು ಸವಿಸ್ತಾರ ಬಯಲು.
ಹಸಿರು ಮರಗಳೂ ಉಂಟು,
ಅಲ್ಲಿ ಒಣ ಭೂಮಿಯೂ ಉಂಟು.
ಕಲ್ಲು ಮುಳ್ಳುಕಂಟಿಗಳೂ ಉಂಟು.
ಹಣ್ಣು ಹೂವು ಪೊದೆಗಳೂ ಉಂಟು.
ಇದೋ, ನನ್ನೊಳ ಮನವೂ ವಿಶಾಲ ಬಯಲು. ನೋವೂ ಉಂಟು, ಅಲ್ಲುಂಟು ನಲಿವೂ.
ಕೆಡುಕೂ, ಒಳಿತೂ ನೂರೆಂಟು.
ಕಹಿಘಳಿಗೆಗಳೂ, ಸವಿನೆನಪುಗಳೂ ಹಬ್ಬಿವೆ.
ಸೋತಬಿಕ್ಕುಗಳೂ, ಗೆದ್ದಕೇಕೆಗಳೂ ತುಂಬಿವೆ
ಇರುವಂತೆ, ಕಲ್ಲು ಕಂಟಿಗಳ ಮುಳ್ಳುಪೊದೆಗಳ ನಡುವಲೇ ಒಂದು ಕಾಲುದಾರಿ,
ನನ್ನ ಮನದಲೂ ಇರುವುದು ಆ ಎಲ್ಲ ಗೊಂದಲ
ನಡುವಲೇ ಹಾದಿ, ಸೇರಲು ಗುರಿ.
ನನ್ನೊಳ ಮನವೂ ವಿಶಾಲ ಬಯಲು.
- Ugnil
20 Jan 2017, 06:44 pm
ಅರಳಲಿ ಕನ್ನಡ
ಜನಮನ ವನದಲಿ
ಗೀತೆಯಾಗಲಿ ಕನ್ನಡ
ಗಾಯಕರ ಕೊರಳಲಿ
ಮಂತ್ರವಾಗಲಿ ಕನ್ನಡ
ಮಕ್ಕಳ ನಾಲಿಗೆಯಲಿ
ಮಾತೆಯಾಗಲಿ ಕನ್ನಡ
ನಾಡಿವಾಸಿಗಳ ಮನದಲಿ
ಬೆಳಗಲಿ ಕನ್ನಡ
ಸರ್ವರ ಹೃದಯ ದೇಗುಲದಲಿ!
_________________________
ಬಸವಪ್ರಿಯ
- ಬಲವಂತ ಮೋರಟಗಿ(ಬಸವಪ್ರಿಯ)
20 Jan 2017, 06:23 pm
ನೂರು ಆಸೆ ಹೊತ್ತು
ಒಡಲು ತುಂಬಿ ಬಂತು
ನಗೆಯು ನೋವ ತಿಂತು
ಮಡಿಲು ಲಾಲಿ ಅಂತು
- shree
20 Jan 2017, 06:16 pm
ನಿನ ಬಟ್ಟಲು ಕಂಗಳು ಮನವನು ಸೆಳೆದು
ಭಾವವೀಣೆಯ ತಂತಿಗಳ ಎಳೆದೆಳೆದು,
ಅನುರಾಗದ ಹೊಸರಾಗವೊಂದು ಮೊಳೆದು,
ಜೀವನಕೊಂದು ಹೊಸ ಅರ್ಥ ಹೊಳೆದು,
ಶತಮಾನಗಳ ಒಂಟಿತನ ಹೋಯಿತೇ ಕಳೆದು.
- Ugnil
20 Jan 2017, 05:25 pm
ಪ್ರತಿ ಪುಟ್ಟ ಹುಡುಗಿಯಲ್ಲೂ
ಒಬ್ಬ ತಾಯಿ ಇರುತ್ತಾಳೆ
ಪ್ರತಿ ಪ್ರೌಢ ಮಹಿಳೆಯಲ್ಲೂ
ಒಬ್ಬ ಪುಟ್ಟ ಹುಡುಗಿ ಇರುತ್ತಾಳೆ
ಮಗುವಿಗೆ ಜನ್ಮ ಕೊಟ್ಟ ನಂತರ
ಹೆಣ್ಣು ತಾಯಿ ಆಗುತ್ತಾಳೆ
- basavarajsirnayakpreethu
20 Jan 2017, 02:25 pm
ನೋಡಲು ಕಣ್ಣಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವನು ಆ ಭಗವಂತ.
ಎಷ್ಟು ಜನ ಗೆಳೆಯರು ಇದ್ದರೇನು ಕಷ್ಟ ಕಾಲವೇ ತೋರಿಸುವುದು, ನಿನ್ನ ಆಪ್ತರು ಯಾರಂತ.
- basavarajsirnayakpreethu
20 Jan 2017, 02:24 pm
ಇಚ್ಚಿಸಿದ್ದು ಸಿಗಲಿಲ್ಲ ಅಂದ್ರೆ
ಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೇ ಇರಬೇಕು
ಯಾಕೆಂದರೆ ..
ಅದನ್ನು ಪಡೆಯುವ ಆತುರದಲ್ಲಿ
ತುಂಬಾನೇ ಕಳೆದುಕೊಂಡು ಬಿಡ್ತೀವಿ..
- basavarajsirnayakpreethu
20 Jan 2017, 02:23 pm
ಸಹನೆ ಅಂದ್ರೆ ಮೌನವಾಗಿರುವುದಲ್ಲ
ಮೌನ ಅಂದ್ರೆ ಎಲ್ಲವನ್ನು ಸಹಿಸಿಕೊಳ್ಳವುದಲ್ಲ.
- basavarajsirnayakpreethu
20 Jan 2017, 02:20 pm