Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಮಣಿ

ಕನಸಿನ ಕಣ್ಮಣಿ ಎನೆಂದು ಹೆಸರಿಡಲೆ ನಿನಗೆ
ಆವ ಗುಣಕ್ಕಾಗಿ ಆವ ಹೆಸರಿಡಲಿ
ಮುಗ್ಧತೆಗೊ, ಮೌನಕೋ
ಚಂಚಲತೆಗೊ, ಚೆಂದಕೋ
ಬೆಡಗಿನ ಬಿನ್ನಣಕೋ........?
. . .
ಬರಿದೆ ಕಣ್ಮಣಿ ಎಂಬುದೆ ಸೊಗಸಲ್ಲವೇ...!

- ಶ್ರೀ

20 Jan 2017, 11:03 pm

ಅವ್ವ

ನಾ ಒಡಲಲ್ಲೆ ಇದ್ದೇನೆ ಎಂದಾಗ ಖುಷಿಪಟ್ಟಳು..ಒಡಲಲ್ಲೆ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ತಿನಿಸಿದಳು..
ತಾನು ಈಗ ಎರಡು ಹೃದಯದ ಒಂದೇ ದೇಹ ಎಂದು ಸಂತೋಷಪಟ್ಟಳು...
ನಾ ಉದರದಲ್ಲೆ ಒದ್ದರೂ,ಹೊಡೆದು-ಒದ್ದಾಡಿದರು ಸಹಿಸಿಕೊಂಡಳು..
ಭೂಮಿಗೆ ನಾ ಬರುವ ಮುಂಚೆಯೇ ಪ್ರೀತಿಸುತ್ತಿದ್ದಳು..
ಭೂಮಿಗೆ ಬಂದ ಮೇಲೆಯೂ ಪ್ರೀತಿಸುತ್ತಿರುವಳು..
ಭೂಮಿ ಬಿಟ್ಟು ಹೋದ ಮೇಲೆಯೂ ಪ್ರೀತಿಸುವಳು...
ಅವಳೇ ಅವ್ವ. ..ಅವ್ವನೇ ಎಲ್ಲಾ. .
ಅವಳಿಲ್ಪದಿದ್ದರೆ ಏನೂ ಇಲ್ಲಾ..

- ಮುತ್ತು

20 Jan 2017, 08:09 pm

ಬಯಲು ಮನಸು

ಅದೋ, ಕಣ್ಣ ಮುಂದಿಹುದು ಸವಿಸ್ತಾರ ಬಯಲು.
ಹಸಿರು ಮರಗಳೂ ಉಂಟು,
ಅಲ್ಲಿ ಒಣ ಭೂಮಿಯೂ ಉಂಟು.
ಕಲ್ಲು ಮುಳ್ಳುಕಂಟಿಗಳೂ ಉಂಟು.
ಹಣ್ಣು ಹೂವು ಪೊದೆಗಳೂ ಉಂಟು.

ಇದೋ, ನನ್ನೊಳ ಮನವೂ ವಿಶಾಲ ಬಯಲು. ನೋವೂ ಉಂಟು, ಅಲ್ಲುಂಟು ನಲಿವೂ.
ಕೆಡುಕೂ, ಒಳಿತೂ ನೂರೆಂಟು.
ಕಹಿಘಳಿಗೆಗಳೂ, ಸವಿನೆನಪುಗಳೂ ಹಬ್ಬಿವೆ.
ಸೋತಬಿಕ್ಕುಗಳೂ, ಗೆದ್ದಕೇಕೆಗಳೂ ತುಂಬಿವೆ

ಇರುವಂತೆ, ಕಲ್ಲು ಕಂಟಿಗಳ ಮುಳ್ಳುಪೊದೆಗಳ ನಡುವಲೇ ಒಂದು ಕಾಲುದಾರಿ,
ನನ್ನ ಮನದಲೂ ಇರುವುದು ಆ ಎಲ್ಲ ಗೊಂದಲ
ನಡುವಲೇ ಹಾದಿ, ಸೇರಲು ಗುರಿ.



ನನ್ನೊಳ ಮನವೂ ವಿಶಾಲ ಬಯಲು.

- Ugnil

20 Jan 2017, 06:44 pm

"ನಮ್ಮ ಕನ್ನಡ" ____________

ಅರಳಲಿ ಕನ್ನಡ
ಜನಮನ ವನದಲಿ
ಗೀತೆಯಾಗಲಿ ಕನ್ನಡ
ಗಾಯಕರ ಕೊರಳಲಿ
ಮಂತ್ರವಾಗಲಿ ಕನ್ನಡ
ಮಕ್ಕಳ ನಾಲಿಗೆಯಲಿ
ಮಾತೆಯಾಗಲಿ ಕನ್ನಡ
ನಾಡಿವಾಸಿಗಳ ಮನದಲಿ
ಬೆಳಗಲಿ ಕನ್ನಡ
ಸರ್ವರ ಹೃದಯ ದೇಗುಲದಲಿ!
_________________________
ಬಸವಪ್ರಿಯ

- ಬಲವಂತ ಮೋರಟಗಿ(ಬಸವಪ್ರಿಯ)

20 Jan 2017, 06:23 pm

ತಾಯಿ

ನೂರು ಆಸೆ ಹೊತ್ತು
ಒಡಲು ತುಂಬಿ ಬಂತು
ನಗೆಯು ನೋವ ತಿಂತು
ಮಡಿಲು ಲಾಲಿ ಅಂತು

- shree

20 Jan 2017, 06:16 pm

ಕಳೆಯಿತು ಶತಮಾನಗಳ ಒಂಟಿತನ.

ನಿನ ಬಟ್ಟಲು ಕಂಗಳು ಮನವನು ಸೆಳೆದು
ಭಾವವೀಣೆಯ ತಂತಿಗಳ ಎಳೆದೆಳೆದು,
ಅನುರಾಗದ ಹೊಸರಾಗವೊಂದು ಮೊಳೆದು,
ಜೀವನಕೊಂದು ಹೊಸ ಅರ್ಥ ಹೊಳೆದು,
ಶತಮಾನಗಳ ಒಂಟಿತನ ಹೋಯಿತೇ ಕಳೆದು.

- Ugnil

20 Jan 2017, 05:25 pm

ಹೆಣ್ಣು ತಾಯಿ

ಪ್ರತಿ ಪುಟ್ಟ ಹುಡುಗಿಯಲ್ಲೂ
ಒಬ್ಬ ತಾಯಿ ಇರುತ್ತಾಳೆ
ಪ್ರತಿ ಪ್ರೌಢ ಮಹಿಳೆಯಲ್ಲೂ
ಒಬ್ಬ ಪುಟ್ಟ ಹುಡುಗಿ ಇರುತ್ತಾಳೆ
ಮಗುವಿಗೆ ಜನ್ಮ ಕೊಟ್ಟ ನಂತರ
ಹೆಣ್ಣು ತಾಯಿ ಆಗುತ್ತಾಳೆ

- basavarajsirnayakpreethu

20 Jan 2017, 02:25 pm

ಸ್ನೇಹ

ನೋಡಲು ಕಣ್ಣಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವನು ಆ ಭಗವಂತ.

ಎಷ್ಟು ಜನ ಗೆಳೆಯರು ಇದ್ದರೇನು ಕಷ್ಟ ಕಾಲವೇ ತೋರಿಸುವುದು, ನಿನ್ನ ಆಪ್ತರು ಯಾರಂತ.

- basavarajsirnayakpreethu

20 Jan 2017, 02:24 pm

ತ್ಯಾಗ

ಇಚ್ಚಿಸಿದ್ದು ಸಿಗಲಿಲ್ಲ ಅಂದ್ರೆ
ಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೇ ಇರಬೇಕು
ಯಾಕೆಂದರೆ ..
ಅದನ್ನು ಪಡೆಯುವ ಆತುರದಲ್ಲಿ
ತುಂಬಾನೇ ಕಳೆದುಕೊಂಡು ಬಿಡ್ತೀವಿ..

- basavarajsirnayakpreethu

20 Jan 2017, 02:23 pm

ಮೌನ

ಸಹನೆ ಅಂದ್ರೆ ಮೌನವಾಗಿರುವುದಲ್ಲ
ಮೌನ ಅಂದ್ರೆ ಎಲ್ಲವನ್ನು ಸಹಿಸಿಕೊಳ್ಳವುದಲ್ಲ.

- basavarajsirnayakpreethu

20 Jan 2017, 02:20 pm