Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಂಕ್ರಮಣದ ಸಂಭ್ರಮ.

ಬೇವು- ಬೆಲ್ಲಗಳ ಮಿಶ್ರಣ
ಸಿಹಿ- ಕಹಿಗಳ ತೋರಣ
ಸರಿದೂಗಿಸುವ ಈ ಸಂಕ್ರಮಣ
ಸಂಭ್ರಮದಿಂದ ಆಚರಿಸೋಣ
ಹಗೆ- ಹೊಗೆ ತೊರೆದು ನಲಿಯೋಣ
ಮಾದುಲಿಯ ರುಚಿ ಸವಿಯೋಣ
ಭಾವೈಕ್ಯತೆಯನು ಜಗಕೆ ಸಾರೋಣ
ಭಾರತಾಂಭೆಯ ಅಡಿಗೆ ನಮಿಸೋಣ.
:
- ಎ.ಜಿ.ಕಮತಗಿ.(ಶಾಂತಿಪ್ರಿಯ)

- "ಶಾಂತಿಪ್ರಿಯ"

12 Jan 2017, 03:56 pm

ನೋವು

ಮನಸ್ಸಿನಲ್ಲಿ ಕುಳಿತು
ಕನಸ್ಸಿನಲ್ಲಿ ಬೆರೆತು
ಉಸಿರಲ್ಲಿ ಬೆಸತು
ಈಗ ನೀ ಕೈ ಬಿಟ್ಟರೆ
ನನ್ನ ಹ್ರದಯಕ್ಕೆ ಯಾರಿಲ್ಲ ಆಸರೆ
=dev=

- j s

12 Jan 2017, 03:48 pm

ನಿದ್ರಾ ದೇವಿ..............

ಒಂದೊಂದು ಸಾರಿ ನಾನು ಬೇಡ ಅಂದ್ರು
ಅವಳಾಗೆ ನನ್ನ ಬಳಿ ಬರುತ್ತಾಳೆ
ಕೆಲವೊಮ್ಮೆ ನಾನೆ ಕರೆದ್ರು ಅವಳು
ಬರೋಕೆ ಹಿಂದೆ ಮುಂದೆ ನೋಡುತ್ತಾಳೆ
ಅವಳನ್ನ ಹೆಂಗೆ ಅರ್ಥಮಾಡ್ಕೊ ಬೇಕು
ಅನ್ನೋದು ಇನ್ನು ತಿಳಿದಿಲ್ಲ ಈ ಮುಗ್ಧ ಜೀವಿಗೆ
ಹೇಳಿಬಿಡು ನಿದ್ರಾದೇವಿ ನಿನ್ಯಾರು ಅಂತ
ಕೆಲವೊಂದು ಬಾರಿ ನನಗೆ ಅನ್ಸಿದ್ದು ಉಂಟು
ನಿ ಮಾಯಾವಿ ಎಂದು............

- ಒಳ್ಳೆ ಹುಡ್ಗ ಅಭಿ

12 Jan 2017, 01:21 pm

ಜೀವನ

ಮರಳುಗಾಡಿನಂತೆ ಜೀವನ
ಮರಳುಗಾಡು ದಾಟಿ ಹೋಗಲೇ ಬೇಕೆಂಬ ಹಂಬಲ.
ಕನಸೆಂಬ ಬಾಯಾರಿಕೆಯ ತಣಿಸಲು
ನೀರಿಗಾಗಿ ಹುಡುಕಾಡುವುದೇ ನಿಜ ಕಾಯಕವಿಲ್ಲಿ
ಸಿಕ್ಕೇ ಬಿಟ್ಟಿದೆ ನೀರು ಸಮೀಪಿಸೆ ಬಿಟ್ಟಿರುವೆ ನೀರಾಡಿಕೆಯ ತನಿಸಿಕೊಳ್ಳುವ ಕ್ಷಣವ ಎಂದುಕೊಳ್ಳುತ್ತಲೇ ನೀರ ಸಮೀಪಕೆ ಓಡುತ್ತಲೇ ಇರಲು
ಅರಿವಾಗುವುದು, ಓಡಿ ಬಂದಿರುವೆನು ನಾನು ಮರಿಚಿಕೆಯೇ ನೀರೆಂದು ಹರಸಿ

ಮತ್ತೆ ಮತ್ತೆ ಮರಳುಗಾಡು ದಾಟಿ ಗೆಲ್ಲಲೇ ಬೇಕೆಂಬ ಬಯಕೆ
ಮತ್ತದೇ ಪಯಣದ ಮುಂದುವರಿದ ಭಾಗ
ಮತ್ತದೇ ನೀರಿಗಾಗಿ ಹುಡುಕಾಟ
ಮತ್ತೆಷ್ಟೋ ಮರೀಚಿಕೆಯ ಭೇಟಿ
ಮತ್ತೆಷ್ಟೋ ಕಾಲ ಬಾಯಾರಿಕೆಯ ಸಂಕಟ
ಸಿಕ್ಕ ನೀರು ಕೂಡ ಮರೀಚಿಕೆಯೇನೋ ಎನ್ನುವ ಆತಂಕ
ಮೊಗೆದು ಕೊಳ್ಳಲು ಹೆಜ್ಜೆ ಹಾಕಲು ಹಿಂಜರಿಯುವ ಮನಸು
ಎಲ್ಲವ ದಾಟಿ ನೀರು ಹುಡುಕಾಡಿ, ಮೊಗೆದು ಕುಡಿದು ಬಾಯಾರಿಕೆಯ ತಣಿಸಿ ಮರಳುಗಾಡು ದಾಟಿ
ಗೆದ್ದ ಕ್ಷಣವ ಸಂಭ್ರಮಿಸಿದಾಗಲೇ ನಿಜವಾದ ಸಂತಸ

- ಶ್ರೀಕಾವ್ಯ

12 Jan 2017, 11:16 am

ಹುಚ್ಚುಮನಸ್ಸು...

ಕಣ್ಣೊಳಗಿನ ಕನಸನ್ನು ಕದಿಯಬೇಡ
ಮನದೊಳಗಿನ ಮನಸ್ಸಿನ ಮಾತನ್ನು ಮರೆಯಬೇಡ .
ಹೃದಯದ ಭಾವನೆಗಳನ್ನು ನಾ ಹೇಳಲು ಬಂದಾಗ
ಮರೆಯಾಗಿ ಹೋದೆಯಾ ಈ ನನ್ನ ಪುಟ್ಟ ಹೃದಯದ ಮೌನವನ್ನು ಅರಿಯದೆ ...
(ಅಮ್ಮು ಎಸ್)...

- anilsajjan

12 Jan 2017, 12:28 am

ಮನದಲ್ಲಿ ಒಂದು ಮನವಿ

ಪ್ರಶ್ನೆಗಳು ಪ್ರಶ್ನಗಳಾಗಿಯೇ ಬದುಕಿರಲ್ಲಿ ಬಿಡು ಸುಳ್ಳು ಸಮರ್ತನಗಳ ನೆಪದಲ್ಲಿ ಅವುಗಳ ಉತ್ತರ ಕ್ರಿಯೆ ಆಗೋದು ಬೇಡ

- ಪ್ರದೀಪರಾಜ್

11 Jan 2017, 11:48 pm

‌‌‌ "ದೃಷ್ಟಿ" ______

ಅವನಿಗೆ ಅವಳಿಷ್ಟವಾದರೆ...
ಅವಳು ಚಂದ್ರನಖಿ ಪ್ರಾಣಸಖಿ..
ಅವಳಿಗಿಷ್ಟವಾಗದಿದ್ದರೆ ........
ಅವಳು ಸೂರ್ಪನಖಿ ತಾಟಿಕಾ ರಾಕ್ಷಸಿ....!
____ ______
ಬಸವಪ್ರಿಯ

- ಬಲವಂತ ಮೋರಟಗಿ(ಬಸವಪ್ರಿಯ)

11 Jan 2017, 09:03 pm

ನಡೆ ಜಡೆ ಕನಸೆಡೆ

ಹುಡಗಿಯ ಅಂಕು-ಡೊಂಕಿನ ನಡೆ,
ಓಡಿಸಿತ್ತು ನನ್ನ ಮನಸ್ಸನ್ನು ಕನಸಿನ ಕಡೆ.
ಅವಳದೋ ತುಂಬಾ ಉದ್ದ ಜಡೆ,
ಆ ಜಡೆ ಇಣುಕುತಿತ್ತು ಅವಳ ಸೂಂಟದ ಕಡೆ.
ಅವಳ ಆ ಅಳುಕು-ಬಳುಕಿನ ನಡೆ,
ತೋರುತಿತ್ತು ಅವಳದೋ ಹಂಸದ ನಡೆ.
ಅವಳು ಬಂದರೆ ಕಾಲೇಜಿನ ಒಳಗಡೆ,
ಕ್ಯಾಂಪಸ್ಸಿನ ಹುಡುಗರೆಲ್ಲಾ ಅವಳ ಹಿಂದಗಡೆ. ಕೂರುತ್ತಿದ್ಲು ಯವಾಗ್ಲು ಬೆಂಚಿನ ಕಡೆ(ಕೂನೆ),
ನಾ ಮೆಲ್ಲನೆ ನೋಡುತ್ತಿದ್ದೆ ಅವಳ ಕಡೆ.
ನಾ ಕದ್ದು ನೋಡಲು ಮೆಲ್ಲನೆ ಅವಳೆಡೆ,
ನಾಚಿ ನರ್ತನ ಮಾಡುತ್ತಿದ್ದವು ಅವಳ ಕಂಗಳೆರಡೆ.
ಸರ್ರೆಂದರೆ ಲೋ ರಾಜೇಶ ನೋಡಲೋ ಈಕಡೆ,
ನಾಚಿ ಮುಗುಳ್ನಗುತ್ತಿದ್ದವು ತೊಂಡೆಹಣ್ಣಿನ ಅವಳ ತುಟಿಗಳೆರಡೆ.
ಆಗ ಖಾಲಿಯಾಗಿತ್ತು ನನ್ನ ಮಂಡೆ(ಬುದ್ದಿ),
ಈಗ ಖಾಲಿಯಾಗಿರುವುದು ನನ್ನ ಬುಂಡೆ.
ಇದನ್ನೆಲ್ಲಾ ನೆನೆದು ಕುಳಿತಿರಲು ನಾನೂಂದೆಡೆ,
ಕನಸ್ಸುಗಳು ಮಾಡಿದ್ದವು ನನಸಿನ ದರೋಡೆ.
ನಾ ಏನ ಮಾಡಲಿ ನೀವೇ ಹೇಳಿ,
ಗೆಳೆಯ-ಗೆಳತಿಯರೆ.

- ರಾಜೇಶ್ ಎ.ಎಸ್

11 Jan 2017, 10:57 am

ಮೊದಲ ಪ್ರೀತಿ ! ಯಲ್ಲು.

ಕಣ್ಣೆಂಬ ಆಗಸದಲ್ಲಿ

ಕನಸ್ಸೆಂಬ ಮೋಡಕವಿದು

ಮನಸ್ಸೆಂಬ ಭೂಮಿ ಮೇಲೆ

ಮಳೆಯಾಗಿ ಸುರಿದಾಗ

ಹೃದಯದಲ್ಲಿ ಮೊಳಕೆ

ಒಡೆಯುವುದೇ ಪ್ರೀತಿ

ಯಲ್ಲು ಅರವಳ್ಳಿ !

- ಯಲ್ಲು ಅರವಳ್ಳಿ !

11 Jan 2017, 09:07 am

ವರ್ಣನೆ

ಒ ನಲ್ಲೆ ನಿನಗೊಂದು
ಪ್ರೇಮವ ಪತ್ರವ ಬರೆಯುವ ಆಸೆ.

ನಿನ್ನ ಪಲ ಪುಷ್ಪ ಸುಗಂಧ
ದ್ರವ್ಯಗಳಿಗೆ ಹೊಲಿಸಲೆ,
ಪ್ರಕೃತಿಯ ಸೌಂದರ್ಯಕೆ
ನಿನ್ನ ಹೊಲಿಸಲೆ,
ನಿನ್ನ ಆ ಮೈಮಾಟಕೆ
ನಿನ್ನ ಆ ಸೌಂದರ್ಯಕೆ
ಈ ಭೂವಿಯಲ್ಲ
ನಿನ್ನ ವರ್ಣಿಸಲು ಪದಗಳೆ ಇಲ್ಲಾ.

ಒ ನಲ್ಲೆ ಒಮ್ಮೆ ಹೇಳು ನಿನ್ನ
ಬಣ್ಣಿಸಲೆಂಗ ನಾ,
ನಿನ್ನ ಹೊಗಳಲೆಂಗ ನಾ,
ಈ ನನ್ನ ಮನದಾಸೆಯನ್ನು
ಹೇಳಲೆಂಗ ನಾ ನಿನ್ನೆದರು..
ಮಲ್ಲು/..

- mallu

11 Jan 2017, 08:31 am