Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಜಾರಿ ಬೀಳುವವರೆಗಾದರೂ..!
ಮುಂಗುರುಳು ಮಂಜಾನೆಯ
ಮಂಜನು ಇಷ್ಟಪಟ್ಟ ಮಂದಾರ ಹೂವೇ..
ಮರೆಯಬಾರದೀ ಮಂಜ ಹನಿಯ..
ನಿನ್ನ ಎಸಳಿನಿಂದ ಜಾರಿ ಬೀಳುವವರೆಗಾದರೂ..!
- arun c sankannavar
10 Jan 2017, 10:20 pm
ಕತ್ತಲು ಅಂದರೆ ಅಂಧಕಾರವಲ್ಲ ಅದು ಬೆಳಕಿನ ಮೌನ.
ಸೋಲು ಅಂದರೆ ಅಂತ್ಯವಲ್ಲ ಅದು ಗೆಲುವಿಗೆ ಬೇಕಾದ ಸಾಧನ
ಕನಸು ಅಂದರೆ ಬರೀ ಹಂಬಲವಲ್ಲ ಮನಸು ಎಂಬ ಕಾದಂಬರಿಗೆ ಬರೆದ ಮುನ್ನುಡಿ.
- Manju
10 Jan 2017, 08:31 pm
ಸದ್ದಿಲ್ಲದ ಮನಸಲಿ ಸದ್ದಾಗಿದೆ ಇಂದು
ನನಗೆ ಗೋತ್ತಾಗಲ್ಲಿ ಅಸದ್ದು ನನ್ನ ಪ್ರೀತಿಯೆಂದು
ಅವಳೆಂದಳು ನಾ ನಿನ್ನ ಗೇಳತಿಯೆಂದು
ಆಗ ತೀಳಿಯಿತು ಅದೆ ನನ್ನ ಮೋದಲ ಪ್ರೇಮವೆಂದು
sureshm suri
- sureshm
10 Jan 2017, 07:28 pm
ಸಹಿಸಲಾರದಷ್ಟು ಭಾರವಾಗಿದೆ ಹೃದಯ
ಹೇಳು?
ತೆಗೆದಿಟ್ಟು ನಿರಾಳವಾಗಲೆ?
ಅಥವಾ,
ಹಾಗೆಬಿಟ್ಟು ಅಸುನೀಗಲೆ?
- ಶಶಿಕಿರಣ
- ಅಕವಿ
10 Jan 2017, 04:19 pm
ಓ ನನ್ನ ನಲ್ಲೆ ಪ್ರಯಾಣಿಸುತಿರುವೆನು
ದೂರದೂರಿಗೆ ಹೊರಟಿರುವೆನು
ನೆನೆಯುತ ನಿನ್ನನು ಮನದಲಿ
ಮಾತನಾಡುತಿರುವೆನು ಮೌನದಲಿ
ಸುಮ್ಮನೆ ಕುಳಿತಿರಲು
ಕಿಟಕಿಯ ಹೊರ
ಪ್ರಪಂಚವನ್ನು ದಿಟ್ಟಿಸುತ್ತಾ....
ಕ್ಷಣದಲ್ಲಿ ಬದಲಾಗುವ
ಪ್ರಕೃತಿಯ ಚಿತ್ರಗಳ ಸವಿಯುತ್ತಾ...
ಎಲ್ಲವನ್ನು ಅನುಭವಿಸುತ
ಮುನ್ನಡೆದಿದೆ ಬದುಕಿನ ಪಯಣ
ಒಂದು ನಿಲ್ದಾಣದಿಂದ ಮತ್ತೊಂದಕ್ಕೆ
ನಿಲ್ಲದೇ ನಡೆದಿದೆ ಬಸ್ಸಿನ ಪಯಣ
ನೀ ಜೊತೆಗಿದ್ದರೆ ಸಮಯವೇ ಸಾಲದು
ಭಾವನೆ ಬದಲಾಯಿಸೋ
ನೋಟವು ನಿನ್ನದು
ಪ್ರೀತಿಯ ಅರಿವಾಗಿದೆ
ನಿನ್ನ ನೆನದು ನನಗಿಂದು
ಕಣ್ಣಮುಚ್ಚಿ ಕುಳಿತರು
ನನ್ನ ಕಾಡುವೆ ಏಕೆ ನೀ ಬಂದು
ಪದಗಳೆ ಸಿಗದು ಕವನವ ಬರೆಯಲು
ಮನಸಿಗೆ ಆಗದು ನಿನ್ನಯ ಮರೆಯಲು
ನೀ ನಿಲ್ಲದ ಆ ಕ್ಷಣ ನಾನಿಲ್ಲ ನನ್ನಲಿ
ಕೊಲ್ಲುತಿರು ಹಾಗೆ ಸುಮ್ಮನೆ
ನನ್ನನು ನಿನ್ನಯ ಕಣ್ಣಲಿ
ನೀನು ನನ್ನ ಬಿಟ್ಟಿರಲಾರೆ
ನಾನು ನಿನ್ನ ಬಿಟ್ಟಿರಲಾರೆ
ಆದರೂ ನಮ್ಮ ದಾರಿ ಬೇರೆ ಬೇರೆ.
- Pb
10 Jan 2017, 10:24 am
ಹೃದಯಕೂ
ತುಟಿಗಳಿಗೂ
ಅದೆಷ್ಟು
ಯೋಜನೆಗಳ
ಅಂತರವೋ
ಅಥವಾ
ಅದೆಷ್ಟೆತ್ತರದ
ಗೋಡೆಯಿದೆಯೋ
ಅಥವಾ
ಅದಾವಾಳದ
ಕಂದರವಿದೆಯೋ,
ಮನದಾಳದ
ಮಾತುಗಳು
ತುಟಿಯಂಚಿಗೆ
ಬಾರದಾಗಿವೆ,
- RAjESH D
10 Jan 2017, 08:21 am
ಬರಿಮಾತಿಗೆ ಹಾಕಿ
ಮೂಗುದಾರ
ಇಲ್ಲದಿದ್ದರೆ....
ಸಂಬಂಧಗಳು ಏರುಪೇರ!
ಮಾತಿನಲ್ಲಿರಲಿ ಸಂಸ್ಕಾರ
ಆಚಾರ ವಿಚಾರ
ಇಲ್ಲದಿದ್ದರೆ.....
ಬಾಳಿನ ನೆಮ್ಮದಿಗೆ
ಸಂಚಕಾರ!
____ _______________
ಬಸವಪ್ರಿಯ
- ಬಲವಂತ ಮೋರಟಗಿ(ಬಸವಪ್ರಿಯ)
09 Jan 2017, 09:14 pm
ಈ ನಿನ್ನ ಕೇಶರಾಶಿಯನ್ನು ಕಂಡು
ಕಂಡು ಕರಗದೆ ಇರಲು ಸಾಧ್ಯವೇ
ಆ ನಿನ್ನ ಮುಂಗುರುಳ ನರಿಸಿ ನೋಡದಿರು
ನೋಡಿದರೆ ನಾನು ಕಳೆದು ಹೋಗದೆ ಇರುವೆನೆ.
-ಸಾಗರ್
- sagar chamali
09 Jan 2017, 08:44 pm
ಅಕ್ಕರೆಯಿಂ ಅಕ್ಕರವಂ ನುಡಿಸಿದವಗೆ
ಎನ್ನೊಳಗಿನ ಎನ್ನಂ ಬಿಡಿಸಿದವಗೆ
ಒಲವಿನಿಂ ತಿದ್ದಿ ತೀಡಿದ ಯೋಗಿಗೆ
ಎನ್ನನುದ್ಧರಿಸಿದ ಆ ದಿವ್ಯ ಚೇತನಕೆ
ಅಜ್ಞಾನದಿಂ ಸುಜ್ಞಾನದೆಡೆಗೆ ಕರೆತಂದವಂಗೆ
ಸರ್ವವಂ ಧಾರೆ ಎರೆದ ತ್ಯಾಗಮೂರ್ತಿಗೆ
ತನ್ನಂ ಮರೆತು ಮಾಡುವ ನಿಸ್ವಾರ್ಥ ಸೇವೆಗೆ
ಜೀವನವಂ ತೋರಿದ ಮಾರ್ಗದರ್ಶಕನಿಗೆ
ಶಿಷ್ಯನೋಳ್ ತಾ ಮೆರೆದ ಸಾತ್ವಿಕನಿಗೆ
ಅರಿವಂ ಪೊಸಯಿಸುವ ಮೇಧಾವಿಗೆ
ಜ್ಞಾನಭಂಡಾರದ ಒಡೆಯನಿಗೆ
ಶ್ರೀ ಸರಸ್ವತಿಯ ವರಪುತ್ರನಿಗೆ
ತಮದಿಂ ಕರೆತಂದ ದಿವ್ಯ ಜ್ಯೋತಿಗೆ
ಜಗದ ಕೀರ್ತಿಗೆ ಪಾತ್ರನಾದ ಪರಮಜ್ಞಾನಿಗೆ
ಸಮಾನತೆಯಂ ತೋರಿದ ಸಾರ್ಥಕತೆಗೆ
ಮೌಲ್ಯಗಳಂ ತುಂಬಿದ ಮಾನವತೆಗೆ
ವಿಶ್ವವಂ ಪರಿವರ್ತಿಸಬಲ್ಲ ಆ ಶಕ್ತಿಗೆ
ಮಣಿಯುವೆನು ನಾನೆಂದು ಚಿರಮುಕ್ತಿಗೆ
ಏನ ನೀಡಲಿ ನಾನು ಗುರುಭಕ್ತಿಗೆ?
ಇನ್ನಾವುದೆಣೆಯುಂಟು ಆ ಪ್ರೀತಿಗೆ
ಪೊರೆದು ಬೆಳೆಸಿದ ಎನ್ನೆಲ್ಲ ಪ್ರಿಯ ಗುರುವಿನ ಚರಣಕಮಲಗಳಿಗೆ
ಈ ನಿಮ್ಮ ಪ್ರಿಯ ಶಿಷ್ಯನ ಅನಂತ ಅನಂತ ಅನಂತ ವಂದನೆ
- Kumara.C
09 Jan 2017, 07:57 pm
ಎಷ್ಟು ಚಂದ ಶಿಕ್ಷೆ
ಬಯಸಲು ಪ್ರೀತಿ ಓಲುಮೆ
ನೀ ನನ್ನವಳೆನ್ನುವುದು ಹಿರಿಮೆ
- Pavan
09 Jan 2017, 06:24 pm