ಗೆಳೆಯ,
ಹೊಳೆಯ ದಂಡೆಯ ಮೇಲಿನ
ನೀರಲ ಹಣ್ಣು ತಿಂದ ನೆನಪು
ಊರ ಮುಂದಿನ ಹೊಲದಿ
ಪೆರಲ ಹಣ್ಣು ತಿಂದ ನೆನಪು
ಹಳ್ಳದ ದಂಡ್ಯಾಗ
ಜೇನು ಬಿಡಿಸಿ ತಿಂದ ನೆನಪು
ಗೌಡರ ಹೊಲದಾಗ ಮಾವು
ಕದ್ದ ತಿಂದ ನೆನಪು
ಎಂತಹ ಚಂದಿತ್ತ ಬಾಲ್ಯ
ಸಣ್ಣ ಸಣ್ಣ ಸಾಫಲ್ಯ
ಕಳಕೊಂಡಿವಿ ನಾವು ಬಾಳ
ಉಳಕೊಂಡಿದ್ದು ಹಿಡಿ ದೂಳ
ಆ ಕಾಲ ಹೋಯ್ತು
ಈಗ ಓಡತೈತಿ ಜಗತ್ತು
ಮರತ ಮನಸಿನ ಕಿಮ್ಮತ್ತ.
ಕರೆದರೆ ಬರದು ಕಲಕಿದರೆ ಕರಗದು ಭಾವಗಳ ಮಥಿಸಿ ಮನಸುಗಳ ಮೇಳೈಸಲು ಹೊಟ್ಟೆಯ ಒಳಗಿನ ಮಗು ಹುಟ್ಟಿ ಬರುವಂತೆ ಮೊಟ್ಟೆಯೊಡೆದು ಮರಿ ತಾನು ಬರುವಂತೆ ನನ್ನ ಎದೆಯೊಳಗಿಂದ ಒಲವಿನಿಂದೊಡಗೂಡಿ ಓಡೋಡಿ ಬಂದಿದೆ ನನ್ನ ಕವಿತೆ ಸುಮಾತನಯ
ಬರೆಯತ್ತಿಹನು ನಿನ್ನ ಕಂಡ
ಮರು ಕ್ಷಣದಿಂದ,
ಅದು ಕವನ ಕವಿತೆ ಗಳಾಗಿ
ಹೊರಹೊಮ್ಮುತಿವೆ.
ನಾ ನಿನ್ನ ಬಣ್ಣಿಸಲು
ಆ ಸೊರ್ಯ ಚಂದ್ರ,
ಆಕಾಶ ನಕ್ಷತ್ರಗಳೆ ಮರೆತು
ಹೋಗಿವೆ.
ಪ್ರಕೃತಿ ನಿನ್ನ ಸೌಂದರ್ಯಕ್ಕೆ
ಮನಸೋತ,
ತಂಗಾಳಿಯಂತೆ ನಿನ್ನ ಸುತ್ತ
ಸುತ್ತುತಿದೆ, ನಿನ್ನಂದವ ಕಾಪಾಡಲು..
ಮಲ್ಲು...
ಕನಸು ಅಂದರೇನು
ಕೇಳಿದ್ದೆ ನಾನು
ಇಂದು ಕಣ್ಣು ಮುಚ್ಚಲು ನಿನ್ನ ಮನಸ್ಸಲ್ಲಿ
ಮೂಡುವ ಮೊಗ
ನಾಳೆ ನಿನ್ನ ಕನಸು ಎಂದಿದ್ದಳು ಅವಳು
ನಿಜ..!
ಇಂದು ಅವಳು ನನ್ನವಳು!
ಕೇವಲ ಕನಸ್ಸಲ್ಲಿ ಮಾತ್ರ..!