Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ಹೃದಯಾ ♡ ಕೇಳಿದೆಯಾ

ನೀ ಹೇಳುತಿರುವೆ ನೆನಸದೆ
ಎಲ್ಲರ ಜೊತೆ ಬೆರೆತು
ಹಾಯಾಗಿರು ಎಂದು ...
ನಿನ್ನ ಮರೆಯಬಹುದು
ನಾ ಆದರೆ, ನಿನ್ನ ನೆನಪು
ಹೇಗೆ ಮರೆಯಲಿ ನಾ?
ನಿನ್ನ ಕಣ್ಣಗಳ ಮರೆಯಬಹುದು
ನಾ ಆದರೆ, ನಿನ್ನ ಕನಸು
ಹೇಗೆ ಮರೆಯಲಿ ನಾ?
ನಿನ್ನ ಮಾತು ಮರೆಯಬಹುದು
ನಾ ಆದರೆ, ನಿನ್ನ ದ್ವನಿ
ಹೇಗೆ ಮರೆಯಲಿ ನಾ?
ಮರೆತರು ಮರೆಯಲಾಗದ
ನೆನಪು ನೀನು....
ಅರಿತರು ಅರೆಯಲಾಗದ
ಒಲವು ನೀನು.......
ನಿನ್ನ ಹೇಗೆ ಮರೆಯಲಿ
ಹೇಳು ನಾನು...
ಮತ್ತೆ ನೆನಪಾಗಿ ಕಾಡದಿರು ನೀನು...
ಎಂದು ಹೇಳಿದರು...
ನನ್ನ ಹೃದಯದ ಪ್ರತಿ ಉಸಿರು
ನಿನ್ನ ಹೆಸರನೆ ಕನವರಿಸುತಿದೆ..
ನೀನು ಈ ಹೃದಯದ ಎಂದೂ
ಮರೆಯದಂತ ಉಸಿರಲಿ
ಉಸಿರಾಗಿ ಬೆರೆತಿರುವೆ...
ಹೇಳು ಒಲವೆ ನಿನ್ನ ನೆನಸದೆ
ಹೇಗೆ ಕಳೆಯಲಿ ಕಾಲ...
ಆಗದು ನನಗೆ ಬದುಕಲು
ಮರೆತು ನಿನ್ನ....

- Pb

03 Jan 2017, 11:55 am

ಪ್ರೀತಿಯ ಬೀತ್ತೋಣ....

ಪ್ರೀತಿಯ ಬಿತ್ತನೆ ಮಾಡೋಣ ಬನ್ನಿ
ಪ್ರೀತಿಯ ಬೀಜಗಳ ಮುಷ್ಠಿಯಲ್ಲಿ ಬಚ್ಚಿಟ್ಟು ತನ್ನಿ
ಕಳೆ ಬೆಳೆಯದಂತೆ
ಬರ ಬೀಳದಂತೆ
ಮಳೆಗೆ ಜೋಗು ಹಿಡಿಯದಂತೆ
ಕಾಪಾಡ ಬೇಕಿದೆ
ಎಲ್ಲರು ಸೇರಿ ದುಡಿಯೋಣ ಬನ್ನಿ
ಸುಗ್ಗಿಯ ಹಬ್ಬಕ್ಕೆ ಮನೆಯವರನ್ನೆಲ್ಲಾ
ಮರೆಯದೆ ಕರೆತನ್ನಿ
ಪ್ರೀತಿಯ ಬಿತ್ತನೆ ಮಾಡೋಣ ಬನ್ನಿ
ಪ್ರೀತಿಯ ಜಗಕೆಲ್ಲಾ ಹಂಚೋಣ
ಮರೆಯದೆ ಪ್ರತಿ ಒಬ್ಬರನ್ನು ಕರೆತನ್ನಿ....

- HarshaHL

03 Jan 2017, 10:23 am

ಅಜಯ್

ಸುಂದರವಾದ ಮುಂಜಾನೆಯಲಿ ......ಸೂರ್ಯನ ಕಿರಣಗಳು......ಚಲುತ್ತಿವೆ.......
ಸುಂದರವಾದ ನಿನ್ನ ಮುಗದಲೀ ನಗೆಯ
ನದಿ ಹರಿಯುತ್ತಿದೆ......

- Ajay

03 Jan 2017, 10:20 am

ಜೀವನ

ಗೆಳೆಯರೇತಕೆ ಬೇಕು
ಒಬ್ಬಂಟಿ ಜೀವನವೇ ಸಾಕು
ಪ್ರೇಯಸಿ ಏತಕೆ ಬೇಕು
ಕನಸುಗಳೊಂದಿದ್ದರೆ ಸಾಕು
ಪೇಟೆಯ ಜಂಜಾಟ ಇಲ್ಲಿಗೆ ಸಾಕು
ನನ್ನೂರಿಗೆ ಮರಳುವೆನು ಇನ್ನು
ನಿದ್ದೆ ಕಾಣದ ಕಣ್ಣುಗಳು
ನನ್ನಮ್ಮನ ಮಡಿಲಲ್ಲಿ
ಮೈಮರೆತು ಮಲಗುವೆನು ಇನ್ನು

- HarshaHL

03 Jan 2017, 09:48 am

ಸ್ನೇಹಕೆ ಪ್ರೀತಿಯ ಸಿಂಚನ,

ಪ್ರೀತಿಗೆ ಭಾವನೆಗಳ ಸಿಂಚನ,
ಭಾವನೆಗಳಿಗೆ ಪದಗಳ ಸಿಂಚನ,
ಪದಗಳಿಗೆ ರಾಗದ ಸಿಂಚನ,
ರಾಗಕ್ಕೆ ಹಾಡಿನ ಸಿಂಚನ,
ಹಾಡಿಗೆ ಅಧರಗಳಿಂದ ಸಿಂಚನ,
ಅಧರಗಳಿಗೆ ಜೇನಿನ ಸಿಂಚನ,
ಜೇನಿಗೆ ಹೂವಿನ ಘಂಧದ ಸಿಂಚನ,
ಹೂವಿನ ಘಂಧಕೆ ದುಂಬಿಯ ಪ್ರೀತಿಯ ಚುಂಬನ,

kiran shruthi

- kiru

03 Jan 2017, 07:51 am

ಹನಿ..

ದಿನಚರಿ ಬರೆಯಲು
ದಿನಕರ
ಹೊಸ ಪುಟ ತೆರೆದ
ಬೆಳಗು ...

- Indushekar Chinivar

03 Jan 2017, 07:28 am

ಬದುಕಿಗೆ ಅರ್ಥ ಬೇಕು

----------------------------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು

- kiru

02 Jan 2017, 09:04 pm

ಇಲ್ಲಿ ಎಲ್ಲರೂ ಕಳ್ಳರೆ ! ಸ

ಇಲ್ಲಿ
ಎಲ್ಲರೂ ಕಳ್ಳರೆ !
ಸುಳ್ಳರೆ , ಮಾತಿನ ಮಲ್ಲರೆ !


ಇವರಿಗಿಂತ ಅವರು
ಅವರಿಗಿಂತ ಇವರು
ಒಬ್ಬರಿಗಿಂತ ಒಬ್ಬರು
ಮಾತಿನಲ್ಲಿ ಮಹಲು
ಕಟ್ಟಿಸಬಲ್ಲರು ,
ಕೆಡಿಸಬಲ್ಲರು
ಸುಟ್ಟು ಬಿಡಬಲ್ಲರು !

ಸತ್ಯವನ್ನು ಸುಳ್ಳಿನಂತೆ
ಸುಳ್ಳನ್ನು ಸತ್ಯದಂತೆ
ಹೇಳಬಲ್ಲರು !
ರಾಮನನ್ನು ಮೀರಿದ
ಭರತ ತಾನೆಂದು
ಕೊಚ್ಚಿ ಕೊಳ್ಳಬಲ್ಲರು !

ಅಸ್ತಿತ್ವಕ್ಕಾಗಿ
ಕುರ್ಚಿಯ ಕಾಲುಗಳಿಗೆ
ನೇಣು ಹಾಕಿಕೊಳ್ಳುವರು
ಸಮಾಧಿಯೊಳಗೂ ಇರಲೇ
ಬೇಕೆಂದು ಹಠ ಹಿಡಿವರು !

ನಮ್ಮ ನಿಮ್ಮನೆಲ್ಲ
ಮಂಕು ಮಾಡಿ
ಹಾದಿ ತಪ್ಪಿಸಬಲ್ಲರು
ನೀವು ನಾವು
ಒಟ್ಟಿಗೆ ಕಿತ್ತಾಡಿ
ಸಾಯುವುದರಲ್ಲಿ
ಜೀವನ ಮಾಡಿಕೊಳ್ಳಬಲ್ಲರು !

ಇಲ್ಲಿ
ಎಲ್ಲರೂ ಕಳ್ಳರೆ !
ಸುಳ್ಳರೆ , ಮಾತಿನ ಮಲ್ಲರೆ !
ಹಣಕಾಗಿ ,
ಹೃದಯ
ಹರಾಜಿಗಿಟ್ಟು
ಹಪಹಪಿಸುವವರು !

ಇರುವುದೆರಡೇ ಆಯ್ಕೆ

ಕಳ್ಳನಾಗು
ಇಲ್ಲ
ಕಳ್ಳತನ ಸಹಿಸಿಕೊ !


dj

- ಧನಂಜಯ ಕೆ ಎಸ್

02 Jan 2017, 08:52 pm

ಅರಮನೆ

ಮನುಷ್ಯನಿಗೆ
ಅರಮನೆ ಕಟ್ಟುವಂತ
ಸಿರಿತನ ಇಲ್ಲದಿದ್ದರೂ ಏನಂತೆ
ಕಣ್ಣೀರೋರೆಸುವ ಗೆಳೆತನ
ಇದ್ದರೆ ಸಾಕು....

ಬಿ.ಹೇಚ್.ಕೆಂಪೇಗೌಡ

- ಬಿ.ಹೆಚ್.ಕೆಂಪೇಗೌಡ

02 Jan 2017, 08:04 pm

ನನ್ನ ಕನಸು

ನಾನೊಬ್ಬ ಕನಸುಗಾರ,
ಕನಸಲ್ಲಿ ಹತ್ತಿದ್ದೇ ನಾ ಹೆಲಿಕಾಪ್ಟರ,
ಕನಸು ಕನಸೆನ್ನುವಸ್ಟರಲ್ಲಿ,
ಸಾಗಿದ್ದೆ ದೂರ,ಹೆಚ್ಚರ ವಾದಾಗ
ಅನಿ‌ಸಿತ್ತು ಜೀವನ ಬರೀ ನಶ್ವರ..

ಬಿ.ಹೆಚ್.ಕೆಂಪೇಗೌಡ

- ಬಿ.ಹೆಚ್.ಕೆಂಪೇಗೌಡ

02 Jan 2017, 07:48 pm