ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು
ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ
ನೀ ತುಂಬಿದೆ
ಬೆಳಕೊಂದೆ ನಿನ್ನಿಂದ
ನಾ ಬಯಸಿದೆ
ಎಲ್ಲಾ ಕಳೆದುಕೊಂಡರು
ಇನ್ನೂ ಏನೋ
ನನ್ನ ಜೊತೆ ಇರುವಂತೆ
ಕಣ್ಣುಗಳ ಮುಚ್ಚಿ ಕೇಳಲು
ಬಡಿತವು ಪಿಸುಗುಟ್ಟಿತು
ಅದು ನಿನ್ನ ಉಸಿರೆಂದು
ಹಸಿರಾಗಿ ಇನ್ನೂ ಈ ಕಣ್ಣೊಳಗೆ
ಕಾರಂಜಿಯಾಗಿ ಕಂಡಿದೆ ಇಂದು....
ನೂರಾರು ಭಾರಿ
ಸಾವಿರ ದಾರಿ ಹುಡುಕಿದರೂ
ಮತ್ತೆ ಕಂಡಿಲ್ಲ ನಿನ್ನನು
ನೀನು ಬರುವೆ ಎಂಬ
ಸಣ್ಣ ಆಸೆಯಿಂದ
ಬಡಿಯುವ ಈ ಹೃದಯದ ಜೊತೆ
ದಾರಿ ಕಾಯುತ ಕುಳಿತಿರುವೆ
ನಿನ್ನ ಸವಿಗನಸಲ್ಲಿ ಇಂದು....
ಹೇಳಬೇಕಾಗಿದ್ದ ಮಾತು
ಮನದಲ್ಲೇ ಉಳಿದಿತ್ತು ...
ಈಗ ತಾನೇ ಅರಳಿದ ಪ್ರೀತಿ
ಮೊಳಕೆಯೊಡೆಯುವ ಮುಂಚೆ
ಸತ್ತು ಹೋಗಿತ್ತು ....
ಮಾತು ಮೌನಕ್ಕೆ ತಿರುಗಿತ್ತು
ಅರಿವೇ ಇಲ್ಲದಂತೆ
ಮನದಲಿ ಏನೊ ದುಗುಡ
ಹೇಳಲಾಗದ ತಳಮಳ ... !!!
ಕೈಗೆ ಸಿಗುವ ಮೊದಲೇ
ಹಾರಿ ಹೋದ ಗಿಣಿಮರಿಯಂತೆ
ಕಂಡೆ ನೀನು......
ಬರಿದಾದಂತೆ ತೋರುತಿದೆ
ನನ್ನ ಕೈಗಳು
ಖಾಲಿ ಕೈಯನ್ನೇ
ನೋಡುತ್ತಾ ಕುಳಿತೆ ...
ಅದು ನಿನಗಾಗಿ ಬರೆದಿತ್ತು
ಈ ಕೊನೆಯ ಕವನ .........
ನಮ್ಮ ಹೆತ್ತು ಹೊತ್ತು ಬೆಳೆಸಿದ ಮಾತಾಪಿತೃಗಳಿಗೆ,
ನಮ್ಮೊಂದಿಗೆ ಸಂತಸದಿಂದಿದ್ದ ಸಹೋದರ ಸಹೋದರಿಯರಿಗೆ,
ನಮ್ಮ ಬದುಕಿಗೆ ಆಸರೆಯಾದ ಬಂಧುಗಳಿಗೆ,
ನಮ್ಮ ಸಂತಸಕ್ಕೆ ಕಾರಣರಾದ ಬಾಲ್ಯದ ಸ್ನೇಹಿತರಿಗೆ,
ನಮಗೆ ತಿದ್ದಿ ಬುದ್ದಿ ಹೆಳಿದ ಸಮಸ್ತ ಗುರುವೃಂದಕ್ಕೆ,
ಹೊಸ ಪರಿಚಯವಾಗಿ ಚಿರಪರಿಚಿತರಾಗಿ ಉಳಿದ ಎಲ್ಲ ಸಹೃದಯಿ ಜೀವಗಳಿಗೆ,
ನಮ್ಮ ನಗುವಿಗೆ ಕಾರಣರಾದವರಿಗೆ,
ನಮಗೆ ಕಷ್ಟ ಕೊಟ್ಟ ಪುಣ್ಯವಂತರಿಗೆ,
ಕಣ್ಣೀರು ತರಿಸಿದ ಜೀವಗಳಿಗೆ,
ನಗು ತರಿಸಿದ ಮುಗ್ದ ಜೀವಗಳಿಗೆ,
ನಮ್ಮೊಂದಿಗೆ ಬಾಳಿನುದ್ದಕ್ಕೂ ಸಾಗುವ ನನ್ನ ಹೆಂಡತಿಗೆ,
ನಮ್ಮ ಜೀವನದ ಪ್ರತೀಘಳಿಗೆಗೂ ಸಹಾಯ ಮಾಡಿದ ಸಮಸ್ಥ ಪ್ರೀತಿಯ ಸಹೃದಯಿ ಸ್ನೇಹಜೀವಿಗಳಿಗೆಲ್ಲ