Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೀವನ

ಗೆಳೆಯರೇತಕೆ ಬೇಕು
ಒಬ್ಬಂಟಿ ಜೀವನವೇ ಸಾಕು
ಪ್ರೇಯಸಿ ಏತಕೆ ಬೇಕು
ಕನಸುಗಳೊಂದಿದ್ದರೆ ಸಾಕು
ಪೇಟೆಯ ಜಂಜಾಟ ಇಲ್ಲಿಗೆ ಸಾಕು
ನನ್ನೂರಿಗೆ ಮರಳುವೆನು ಇನ್ನು
ನಿದ್ದೆ ಕಾಣದ ಕಣ್ಣುಗಳು
ನನ್ನಮ್ಮನ ಮಡಿಲಲ್ಲಿ
ಮೈಮರೆತು ಮಲಗುವೆನು ಇನ್ನು

- HarshaHL

03 Jan 2017, 09:48 am

ಸ್ನೇಹಕೆ ಪ್ರೀತಿಯ ಸಿಂಚನ,

ಪ್ರೀತಿಗೆ ಭಾವನೆಗಳ ಸಿಂಚನ,
ಭಾವನೆಗಳಿಗೆ ಪದಗಳ ಸಿಂಚನ,
ಪದಗಳಿಗೆ ರಾಗದ ಸಿಂಚನ,
ರಾಗಕ್ಕೆ ಹಾಡಿನ ಸಿಂಚನ,
ಹಾಡಿಗೆ ಅಧರಗಳಿಂದ ಸಿಂಚನ,
ಅಧರಗಳಿಗೆ ಜೇನಿನ ಸಿಂಚನ,
ಜೇನಿಗೆ ಹೂವಿನ ಘಂಧದ ಸಿಂಚನ,
ಹೂವಿನ ಘಂಧಕೆ ದುಂಬಿಯ ಪ್ರೀತಿಯ ಚುಂಬನ,

kiran shruthi

- kiru

03 Jan 2017, 07:51 am

ಹನಿ..

ದಿನಚರಿ ಬರೆಯಲು
ದಿನಕರ
ಹೊಸ ಪುಟ ತೆರೆದ
ಬೆಳಗು ...

- Indushekar Chinivar

03 Jan 2017, 07:28 am

ಬದುಕಿಗೆ ಅರ್ಥ ಬೇಕು

----------------------------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು

- kiru

02 Jan 2017, 09:04 pm

ಇಲ್ಲಿ ಎಲ್ಲರೂ ಕಳ್ಳರೆ ! ಸ

ಇಲ್ಲಿ
ಎಲ್ಲರೂ ಕಳ್ಳರೆ !
ಸುಳ್ಳರೆ , ಮಾತಿನ ಮಲ್ಲರೆ !


ಇವರಿಗಿಂತ ಅವರು
ಅವರಿಗಿಂತ ಇವರು
ಒಬ್ಬರಿಗಿಂತ ಒಬ್ಬರು
ಮಾತಿನಲ್ಲಿ ಮಹಲು
ಕಟ್ಟಿಸಬಲ್ಲರು ,
ಕೆಡಿಸಬಲ್ಲರು
ಸುಟ್ಟು ಬಿಡಬಲ್ಲರು !

ಸತ್ಯವನ್ನು ಸುಳ್ಳಿನಂತೆ
ಸುಳ್ಳನ್ನು ಸತ್ಯದಂತೆ
ಹೇಳಬಲ್ಲರು !
ರಾಮನನ್ನು ಮೀರಿದ
ಭರತ ತಾನೆಂದು
ಕೊಚ್ಚಿ ಕೊಳ್ಳಬಲ್ಲರು !

ಅಸ್ತಿತ್ವಕ್ಕಾಗಿ
ಕುರ್ಚಿಯ ಕಾಲುಗಳಿಗೆ
ನೇಣು ಹಾಕಿಕೊಳ್ಳುವರು
ಸಮಾಧಿಯೊಳಗೂ ಇರಲೇ
ಬೇಕೆಂದು ಹಠ ಹಿಡಿವರು !

ನಮ್ಮ ನಿಮ್ಮನೆಲ್ಲ
ಮಂಕು ಮಾಡಿ
ಹಾದಿ ತಪ್ಪಿಸಬಲ್ಲರು
ನೀವು ನಾವು
ಒಟ್ಟಿಗೆ ಕಿತ್ತಾಡಿ
ಸಾಯುವುದರಲ್ಲಿ
ಜೀವನ ಮಾಡಿಕೊಳ್ಳಬಲ್ಲರು !

ಇಲ್ಲಿ
ಎಲ್ಲರೂ ಕಳ್ಳರೆ !
ಸುಳ್ಳರೆ , ಮಾತಿನ ಮಲ್ಲರೆ !
ಹಣಕಾಗಿ ,
ಹೃದಯ
ಹರಾಜಿಗಿಟ್ಟು
ಹಪಹಪಿಸುವವರು !

ಇರುವುದೆರಡೇ ಆಯ್ಕೆ

ಕಳ್ಳನಾಗು
ಇಲ್ಲ
ಕಳ್ಳತನ ಸಹಿಸಿಕೊ !


dj

- ಧನಂಜಯ ಕೆ ಎಸ್

02 Jan 2017, 08:52 pm

ಅರಮನೆ

ಮನುಷ್ಯನಿಗೆ
ಅರಮನೆ ಕಟ್ಟುವಂತ
ಸಿರಿತನ ಇಲ್ಲದಿದ್ದರೂ ಏನಂತೆ
ಕಣ್ಣೀರೋರೆಸುವ ಗೆಳೆತನ
ಇದ್ದರೆ ಸಾಕು....

ಬಿ.ಹೇಚ್.ಕೆಂಪೇಗೌಡ

- ಬಿ.ಹೆಚ್.ಕೆಂಪೇಗೌಡ

02 Jan 2017, 08:04 pm

ನನ್ನ ಕನಸು

ನಾನೊಬ್ಬ ಕನಸುಗಾರ,
ಕನಸಲ್ಲಿ ಹತ್ತಿದ್ದೇ ನಾ ಹೆಲಿಕಾಪ್ಟರ,
ಕನಸು ಕನಸೆನ್ನುವಸ್ಟರಲ್ಲಿ,
ಸಾಗಿದ್ದೆ ದೂರ,ಹೆಚ್ಚರ ವಾದಾಗ
ಅನಿ‌ಸಿತ್ತು ಜೀವನ ಬರೀ ನಶ್ವರ..

ಬಿ.ಹೆಚ್.ಕೆಂಪೇಗೌಡ

- ಬಿ.ಹೆಚ್.ಕೆಂಪೇಗೌಡ

02 Jan 2017, 07:48 pm

ಕನ್ನಡಿಗನೇ ಸಾರ್ವಭೌಮ...

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ತಿಳಿದು ಬದುಕು ನಡೆಸೋ ಓ ನನ್ನ ಅಣ್ತಮ್ಮ...!!

ಗೌರವಿಸಬೇಕು ನಾವು ಎಲ್ಲ ಭಾಷೆ
ಪ್ರೀತಿಸಬೇಕು ನಮ್ಮ ಮಾತೃಭಾಷೆ.....!!

ಕನ್ನಡ ಕಲಿಯಲು ತುಂಬಾ ಸರಳ
ಆದರೆ ಕಲಿಯುತ್ತಿರುವವರು ವಿರಳ
ಕಲಿಯದೇ ಇರಬೇಡವೋ ನೀ ದುರುಳ....!!

ಬೆರೆತು ಜೊತೆಯಾಗಿ ಬಾಳು ನೀ ನಮ್ಮ ಸಂಗಡ
ಕಲಿತು ಉಳಿಸಿ ಬೆಳೆಸು ನೀ ನಮ್ಮ ಕನ್ನಡ
ಎಂದೂ ಅನ್ನಬೇಡ ನೀ ಎನ್ನಡ..ಎಕ್ಕಡ..!!

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

02 Jan 2017, 04:40 pm

ಹೊಸ ಕಾವ್ಯ

ಹಳೆಯ ವಿಷಯ ಹೊಸ
ಕಾವ್ಯವಾಗಿ ಮೂಡಿ
ರಸಕಾವ್ಯವಾದ
ಕನಸು ಕಾಣುತಿದೆ
ಬತ್ತದಂತೆ ಕಾಫನಿಟ್ಟು
ಪಲವ ಕೂಡುವ ಕೆಲಸದಲಿ
ನಿರತವಾಗಿ ಸಾಗಿದೆ

- kasturi pattar

02 Jan 2017, 01:51 pm

ಹ್ರುದಯದರಸಿಯ / ಹ್ರದಯವ ಅರಸಿ

ಅವಳೇ ನನ್ನ ಜೀವ
ಅರಿಯದೆ ಹೂದಳು ನನ್ನ ಭಾವ
ಓ ದೇವರೇ ಕೆಳದೆ ನನ್ನಿ ನೂವ
ಅವಳು ಪ್ರತಿ ಕ್ಷಣ ಸುಖವಾಗಿರಲಿ ದೇವ

. . . . . . . . . . . . . . .ಯಲ್ಲು ಗೌಡ - ಬಿರಾದಾರ

- ಯಶ್ ಗೌಡ - S.B

02 Jan 2017, 01:22 pm