Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದಾಳದ ಮಾತು

ಮೌನದಲ್ಲೆ ಹೇಳುವೇ ಮನದಾಳದ ಮಾತೋಂದು.....
ಕೆಳುವೇಯಾ ನೀನಿಗ ಮೌನದ ಸ್ವರಒಂದನ್ನು...
ಮನದೊಂದಿಗೆ ಹೇಳಿಕೊಳ್ಳುವೆ ಮನದಾಳದ ಮಾತೋಂದು ನೊಡಬಲ್ಲೆಯಾ ನನ್ಞ ಅಂತರಂಗವನ್ನು...
ಪ್ರಿತಿಯ ಹೃದಯದಲ್ಲಿ ಕಟ್ಟುವೇ ಸ್ನೆಹದ ಗೂಡೋಂದನ್ನು ...
ಸ್ನೆಹಿತನಹಾಗೆ ಸ್ಪಂದಿಸೂವೆಯಾ ಈ ಹೃದಯಕ್ಕೆ ನೀನಿನ್ನು......
ಅಂದುಕೊಂಡಿದಕ್ಕೆ ವಿರೋಧವಾಗಿಯೆ ಸಾಗುತಿತ್ತು ವಿದಿಯೊಂದು .....
ಅದಾವ ಪೂಣ್ಯದಿಂದಲೋ ನೀ ಬಂದೆ ಜೊತೆಗಿಂದು....
ಇನ್ನು ಹೆದರಲಾರೆ ಯಾವ ಕಷ್ಟಕ್ಕೂ ನಾನೆಂದು ....
ನಿನ್ನ ಪ್ರಿತಿ ಜೋತೆಗಿದ್ದರೆ ಮಾತ್ರ ಎಂದೇಂದು...

- Roopa

29 Dec 2016, 02:03 pm

ನೀನ್ಯಾರು

ನೀನು ನನ್ನ ಹ್ರುದಯ ಅಲ್ಲ
ನೀನು ನನ್ನ ದೇಹ ಅಲ್ಲ
ನೀನು ನನ್ನ ಮಾತಲ್ಲ
ನೀನು ನನ್ನ ಮೌನ ಅಲ್ಲ
ಇದೆಲ್ಲ ಕೇಳಕ್ಕೆ ನಾನು
ಈಗ ನನ್ನಲ್ಲೇ ಉಳಿದಿಲ್ಲ
........ಭವ್ಯಶ್ರೀ

- ಚುಕ್ಕಿ

29 Dec 2016, 11:50 am

ಸ್ನೇಹ

ಸ್ವರ್ತವಿಲ್ಲದ ಪ್ರೀತಿ ಇದು
ಬಯಕೆ ಇಲ್ಲದ ಬಂದುವಿದು
ಎರಡು ದೇಹಗಳ ಆತ್ಮವಿದು
ಎಂದಿಗೂ ಕೈ ಬಿಡದ ತಾಯಿಯಾಗಿಹುದು.

- ಚುಕ್ಕಿ

29 Dec 2016, 11:50 am

ಕ್ಷಮಿಸಿಬಿಡು

ರೆಪ್ಪೆಮುಚ್ಚದೆ ಹುಡುಕುತ ಬಂದರೂ..
ಮಾಯವಾಗಬೇಡ...
ಅಪ್ಪಿತಪ್ಪಿ ತಪ್ಪನು ನುಡಿದರೆ..
ಮೌನಿಯಾಗಬೇಡ...
ಕಣ್ಣಲ್ಲಿನ ಕನಸುಗಳೆಲ್ಲಾ..
ನಿನಗಾಗಿಯೇ ಮುಡಿಪು ಗೆಳತಿ..
ಎದೆಯಲ್ಲಿನ ಮಾತುಗಳೆಲ್ಲಾ...
ನಿನಗಾಗಿಯೇ ಮಿಡಿದಿವೆ ಗೆಳತಿ..
ಮೌನವ ಮುರಿದು ಒಮ್ಮೆ ಮಾತಾಡು.....

(....Hamsakanthu...)

- Hamsakanthu

29 Dec 2016, 11:42 am

ಅಳಿಯದ ನೆನಪುಗಳು

ನೆನಪಿನ ದೋಣಿಯಲ್ಲಿ ಸಾಗುವರಾರು,
ನಿಲ್ಲದ ಕಾಲ ಸಾಲದು ನೆನೆಯಲು.
ಅಳಿದುಳಿದ ಹಚ್ಚುಗಳು,ಬೇವು-ಬೆಲ್ಲ.
ನಾ ಬಯಸುವೆ ಮತ್ತೊಮ್ಮೆ ತಾ ಆ ದಿನಗಳು
ಸವಿಯುವ ಬಯಕೆಯುಂಟು ಎನಗೆ
ಓ ಕಾಲವೇ ಕಾದಿರುವೆ ನಿನಗಾಗಿ.
ವಿ.ಸಿ.

- śsș

29 Dec 2016, 11:27 am

ತಾಯಿ

ಕರುಣೆಯ ಕಡಲು ತಾಯಿಯ ಒಡಲು ಕಂದನು ನಗಲು ದೂರ ಆಕೆಯ ದಿಗಿಲು ಮಗುವಿಗಾಗಿ ಅವಳ ಜೀವ ಮೀಸಲು ಹಾಗಾಗಿ ಅವಳು ದೇವರಿಗಿಂತ ಮಿಗಿಲು.

- Thimmaraja. h

29 Dec 2016, 11:14 am

ಅಮ್ಮನ ಮಮತೆ.

ಮರದ ಕೆಳಗೆ ನಿದ್ದೆ ಚಂದ ತಾಯಿಯ ಮಡಿಲಿನ ಮಮತೆ ಅಂದ ತಾಯಿಗಿಂತ ದೇವರು ಬೇಕೆ ಮಿತ್ರರಿಗಿಂತ ಬಂದು ಬೇಕೆ ತುತ್ತು ತಿನಿಸಬೇಕಾದರೆ
ತಾಯಿ ಬೇಕು ಮುದ್ದು ಮಾಡಬೇಕಾದರೆ ತಾಯಿ ಬೇಕು ಸಾಕಿ ಬೆಳಸಬೇಕಾದರೆ ತಾಯಿ ಬೇಕು ಆದರೆ ಬೇರೆಯವಳು ಬಂದಾಗ ತಾಯಿನೇಕೆ ಬಿಡಬೇಕು .
-ಸುಹಾಸ್.ಹೆಚ್. ಎಸ್.

- suhas

29 Dec 2016, 10:25 am

ಹನಿ...

#
ಕಿರಣ ಚಾಚಿ ಆದಿತ್ಯ ,
ಮಂಜಿನ ತಂಪನು‌
ಆಸ್ವಾದಿಸುವ
ಬೆಳಗು...

- Indushekar Chinivar

29 Dec 2016, 07:41 am

ಎಳ್ಳಾಮವಾಸೆ.

ಸಂತಸದ ಹಬ್ಬ
ಸಡಗರದ ಹಬ್ಬ

ಸಿಹೀತಿನಿಸು ಮಾಡಿ
ಮನೆಯವರೆಲ್ಲ ಸೇರಿ
ಎತ್ತು ಬಂಡಿ ಹೂಡಿ
ಹೊಲ ಗದ್ದೆಗಳಿಗೆ ಹೋಗಿ
ಸಂಪ್ರದಾಯದಂತೆ ಪೂಜೆ ಮಾಡಿ
ಸವಿ ಊಟವನ್ನು ಚಪ್ಪರಸಿ
ಕುಟುಂಬದವರೆಲ್ಲ ನಲಿದಾಡಿ
ಕುಣಿದಾಡಿ ಸಂಬ್ರಮಿಸುವ
ಉತ್ತರಕರ್ನಾಟಕದ ಪ್ರಮುಖ ಹಬ್ಬ
ಎಳ್ಳಾಮವಾಸೆ.

- ರಾಜು ಹಗ್ಗದ

29 Dec 2016, 07:15 am

ಶುಭರಾತ್ರಿ ಶುಭಾಶಯ (ಓ ಹೃದಯಾ .....ಕೇಳಿದೇಯಾ)

ಶುಭರಾತ್ರಿ ಶುಭಾಶಯ ತಿಳಿಸುವಳೆಂದು
ಅವಳ ಕರೆಗಾಗಿ ಕಾದಿರಿವೆ
ಕೊನೆಗೂ , ಅವಳ ಉತ್ತರ
ಬಾರದೆ, ಮನ ನೊಂದಿದೆ ಇಂದು..
ನನ್ನವಳು ನನ್ನನು ಮರೆತು..!
ಸಂಗೀತ ಮನರಂಜನೆಯಲ್ಲಿ
ಭಾಗಿ ಆಗಿರುವಳು, ಇಂದು..!
ಬಹುಶಃ......
ಅವಳಿಗೆ ತಿಳಿಯದಾಯಿತೆ..!
ಅವಳಿಂದ ಇರುಳು, ಅವಳಿಂದ ರಾತ್ರಿ
ಅಂದುಕೊಂಡಿದ್ದ ನನಗೆ,
ಕರಾಳದಿನವಾಯಿತು ಇಂದು.
ಹೇಗೊ ಇದ್ದೆ, ಎಲ್ಲೊ ಇದ್ದೆ
ಅವಳ ಪ್ರೀತಿಯನು ಕಣ್ಮರೆ ಮಾಡಿ...
ಗೊತ್ತಿದ್ದು , ಗೊತ್ತಿದ್ದು....
ಎದೆಯಾಳದಲ್ಲಿ ಬಚ್ಚಿಟ್ಟ...
ಪ್ರೀತಿಯನು ನನಗೆ ತಿಳಿಯದೆ ,
ಬಡಿದೆಬ್ಬಿಸಿದಳು ಅವಳು.
ಅವಳೆ ,ಇಂದು....ನನಗೆ ಶುಭರಾತ್ರಿ
ಶುಭಾಶಯ ಕೋರುವದು
ಮರೆತು ಬಿಟ್ಟಳು...
ಅವಳಿಗೆ ತಿಳಿಯದಾಯಿತೆ..!
ನನ್ನ ಒಲವು ನನ್ನ ಉಸಿರು
ಅವಳೆ...ಎಂದು....

- Pb

29 Dec 2016, 05:35 am