ಎನ್ನ ಮನ ಮಿಡಿದ ಮಾತು
ಎದೆ ತುಂಬಿ ಬಂದಾಗ ಹಿಂದೆಂದೂ ನಾ
ಕಾಣದ ಭಾವನೆ ಪ್ರೀತಿಯೆಂದು ತಿಳಿದಾಗ
ಕಣ್ಣ ಮುಚ್ಚಿ ಕಂಡೆ ಹೊಸ ಲೋಕವ,ಸಖಿ.
ಕತ್ತಲೆಯ ಹುಡುಕಿ ಮಂಕಾದೆ
ಎಲ್ಲೆಲ್ಲೂ ಬೆಳಕು.
ಅಪರವ ಗೆಲ್ಲುವ ಶಕ್ತಿ ಮಿತಿಮೀರಿತ್ತು,
ಮನಸ ಪೋಣಿಸಿ ಹುಡಕಿದೆ
ಮುಗ್ಧನಾಗಿ....ಸಖಿ
ಅಮೃತದ ಬಿಂದು
ಎದೆಗೆ ಇಳಿದಿದೆ
ಎಲ್ಲವು ಹೊಚ್ಚ ಹೊಸ
ಜೊತೆಗೆ ನೀ ಇರಲು
ಬಲು ಹರುಷ
ಗಳಿಗೆಯಾಗಿ ಸಂದುವವು
ವರುಷ ವರುಷ
ನಿಜ ಹೇಳಲೆ ನಾನು
ಓ ಜಾನು
ನನ್ನೋಳು ನೀನು
ಸದಾ
ಜಿನುಗುವ ಜೇನು.....
ನಾಡಿನ ತುಂಬೆಲ್ಲಾ ಕನ್ನಡದ ಕಂಪು
ಕಾವ್ಯಧಾರೆಯಿಂದ ಮನಕ್ಕೆ ತಂಪು
ಕೇಳುವ ಕರ್ಣಕ್ಕೆ ಬಲು ಇಂಪು
ಸಾಹಿತ್ಯಧಾರೆ ಹರಿಸಿದರು
ರಾಷ್ಟ್ರಕವಿ ಕುವೆಂಪು!
ಪಾಂಚಜನ್ಯ ಮೊಳಗಿತು
ಶೂನ್ಯಮನ ಅರಳಿತು
ಯುವಶಕ್ತಿ ಗುಡುಗಿತು
ಶತೃಪಡೆ ನಡುಗಿತು!
ಮಲೆನಾಡಿನ ಮಣಿನಲ್ಲಿ
ಸಹಾದ್ರಿಯ ಶ್ರೇಣಿಯಲ್ಲಿ
ಜನ್ಮವೆತ್ತಿದ ಕುವರ
ಭಕ್ತಿಯಿಂದ ಎಳೆದರು
ಕನ್ನಡಾಂಬೆಯ ಥೇರ!
ರಾಷ್ಟ್ರಕವಿಯ ಸಾಹಿತ್ಯದ ರೀತಿ
ವಿಶ್ವಕ್ಕೆ ನೀಡಿತು
ಮಾನವ ಪ್ರೀತಿ
ಅಡಗಿದೆಯಲ್ಲಿ ಕನ್ನಡ ಸಂಸ್ಕ್ರತಿ
ಹೊಳೆಯಿತು ಬೆಳೆಗಿತು
ಕನ್ನಡದ ಜ್ಯೋತಿ!
ನಾಡಿನಲ್ಲಿ ಕಟ್ಟಿದ್ದೀರಿ
ಕನ್ನಡ ಸಾಹಿತ್ಯ ಕೂಟ
ಹುಡುಕಿ ಬಂತು ಕನ್ನಡಕ್ಕೆ
ಪ್ರಥಮ ಜ್ಞಾನಪೀಠ!
ಮಲೆನಾಡು ಕಾನನದಲ್ಲಿ
ಮಲ್ಲಿಗೆಯ ಕುಸುಮವಾಗಿ
ಹೊಳಪನಿತ್ತೀರಿ ಸಾಹಿತ್ಯ ಶಿಖರಕ್ಕೆ
ಹೊನ್ನಿನ ಕಳಸವಾಗಿ!
_____________________________
(ಕುವೆಂಪು ಜನ್ಮ ದಿನಾಚರಣೆಯ ಶುಭಾಶಯಗಳು)"ಬಸವಪ್ರಿಯ"