ಹೊತ್ತು ಮೂಡುವ ಮೊದಲೇ... ಎದ್ದು
ನೇಗಿಲನ್ನು ಹೆಗಲಿಗೇರಿಸಿಕೊಡು
ಕಟ್ಟಿರುವ ಏರನ್ನು ಬಿಚ್ಚಿ ಹಿಡಿದು ನಡೆದು
ಭೂಮಾತೆಯ ಸೇವೆ ಮಾಡಲು ಹೊರಟಿರುವವನನ್ನು,
ಕಾದು ಕುಳಿತಿರುವ ಜಗದೊಡೆಯನಾದ
ಸೂಯ೯ದೇವನ,
ಜಗಬೆಳಗುವ ಬೆಳಕಿನ ಕಿರಣವು
ಮಣ್ಣು ಮುಟ್ಟುವ ಮೊದಲು ಎದೆಯೊಡ್ಡಿ
ತನ್ನ ಮುಖವನ್ನು ಬೆಳಗಿಸಿಕೊಳ್ಳುವವನು
ರೈತ, ಜಗತ್ತಿಗೇ ........ ಅನ್ನದಾತ.
ಬೆಳೆ ಎಂಬ ಕಲೆಯನ್ನು ಉತ್ತಿ... ಬಿತ್ತಿ...
ಒಕ್ಕಲುಮಾಡಿ ಸೃಷ್ಟಿಸುವ ಜಗತ್ತಿನ
ಮೊದಲ ನಿಜವಾದ ಕಲಾವಿದ
ನಮ್ಮ ರೈತ, ಜಗತ್ತಿಗೇ .....
ಅನ್ನದಾತ.
ಋಣ ಮುಗಿದಾ ಕ್ಷಣ
ಕಡಿದುಕೊಂಡಿತೆ ನಮ್ಮ ಯಾನ
ಕರೆದಿತೆ ಕೈ ಬೀಸಿ ದೂರದ ಪಯಣ
ಇನ್ನೆಲ್ಲಿ ನಿನ್ನ ನಿತ್ಯ ಸ್ಪಂದನ ..
ದಿನವೂ ಹೊಸ ಮುನ್ನುಡಿ
ದಣಿವ ಆರಿಸುವ ಮೌನದ ನುಡಿ
ನಲಿವಿಗೂ ನೀನಾದೆ ಕೈಪಿಡಿ ..
ಇನ್ನೆಲ್ಲಿ ನಿನ್ನ ಬಾವ ಲೇಖನಿ...
ನಿನ್ನ ಬೆಳೆಸಿದ ಕೈಗಳಲೆ
ನಿನ್ನಅವಶೇಷವ ಕಿತ್ತೊಗೆಯಬೇಕೆ
ನಿನ್ನ ಮರೆತು ಮುಂದೆ ಸಾಗಬೇಕೆ ...
ಇನ್ನೆಲ್ಲಿ ವೈಭವ ಈ ಅಂಗಳಕೆ ...
ಬಂಡಿಯಲೊಂದು ಬದುಕು
ಸಾಗಲೊಂದು ದಾರಿ
ನಿನ್ನದೇ ನೆನಪಿನ ಬುತ್ತಿ
ಪಾರಿಜಾತೆ ಮಾಸದೆ ನಿನ್ನ ನೆನಪು
ಇನ್ನುಳಿದ ಹಾದಿಯಲಿ ಬರಿದೆ
ನೀ ಚೆಲ್ಲಿದ ಪರಿಮಳದ ನೆನಹು ...
ಮೂಕ ಮನಸಿನ ರೋದನೆ
ಯಾರಿಗೂ ಹೇಳಲಾಗದ ವೇದನೆ,,
ಯಾರಿಗೇಳಲಿ ಮನದೊಳಗಿನ ನೋವು
ನಾ ಆಶಿಸಿರುವುದು ಆ ನೋವಿನ ಸಾವು,,
ಸಾಂತ್ವನ ಹೇಳುವ ಮನಸಿಗಾಗಿ ಕಾದಿರುವೆ
ಆ ಮನಸ ಹೊಂದಿರುವ ಹುಡುಗಿ ನೀ ಎಲ್ಲಿರುವೆ...