Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ರೆಪ್ಪೆಮುಚ್ಚದೆ ಹುಡುಕುತ ಬಂದರೂ..
ಮಾಯವಾಗಬೇಡ...
ಅಪ್ಪಿತಪ್ಪಿ ತಪ್ಪನು ನುಡಿದರೆ..
ಮೌನಿಯಾಗಬೇಡ...
ಕಣ್ಣಲ್ಲಿನ ಕನಸುಗಳೆಲ್ಲಾ..
ನಿನಗಾಗಿಯೇ ಮುಡಿಪು ಗೆಳತಿ..
ಎದೆಯಲ್ಲಿನ ಮಾತುಗಳೆಲ್ಲಾ...
ನಿನಗಾಗಿಯೇ ಮಿಡಿದಿವೆ ಗೆಳತಿ..
ಮೌನವ ಮುರಿದು ಒಮ್ಮೆ ಮಾತಾಡು.....
(....Hamsakanthu...)
- Hamsakanthu
29 Dec 2016, 11:42 am
ನೆನಪಿನ ದೋಣಿಯಲ್ಲಿ ಸಾಗುವರಾರು,
ನಿಲ್ಲದ ಕಾಲ ಸಾಲದು ನೆನೆಯಲು.
ಅಳಿದುಳಿದ ಹಚ್ಚುಗಳು,ಬೇವು-ಬೆಲ್ಲ.
ನಾ ಬಯಸುವೆ ಮತ್ತೊಮ್ಮೆ ತಾ ಆ ದಿನಗಳು
ಸವಿಯುವ ಬಯಕೆಯುಂಟು ಎನಗೆ
ಓ ಕಾಲವೇ ಕಾದಿರುವೆ ನಿನಗಾಗಿ.
ವಿ.ಸಿ.
- śsș
29 Dec 2016, 11:27 am
ಕರುಣೆಯ ಕಡಲು ತಾಯಿಯ ಒಡಲು ಕಂದನು ನಗಲು ದೂರ ಆಕೆಯ ದಿಗಿಲು ಮಗುವಿಗಾಗಿ ಅವಳ ಜೀವ ಮೀಸಲು ಹಾಗಾಗಿ ಅವಳು ದೇವರಿಗಿಂತ ಮಿಗಿಲು.
- Thimmaraja. h
29 Dec 2016, 11:14 am
ಮರದ ಕೆಳಗೆ ನಿದ್ದೆ ಚಂದ ತಾಯಿಯ ಮಡಿಲಿನ ಮಮತೆ ಅಂದ ತಾಯಿಗಿಂತ ದೇವರು ಬೇಕೆ ಮಿತ್ರರಿಗಿಂತ ಬಂದು ಬೇಕೆ ತುತ್ತು ತಿನಿಸಬೇಕಾದರೆ
ತಾಯಿ ಬೇಕು ಮುದ್ದು ಮಾಡಬೇಕಾದರೆ ತಾಯಿ ಬೇಕು ಸಾಕಿ ಬೆಳಸಬೇಕಾದರೆ ತಾಯಿ ಬೇಕು ಆದರೆ ಬೇರೆಯವಳು ಬಂದಾಗ ತಾಯಿನೇಕೆ ಬಿಡಬೇಕು .
-ಸುಹಾಸ್.ಹೆಚ್. ಎಸ್.
- suhas
29 Dec 2016, 10:25 am
#
ಕಿರಣ ಚಾಚಿ ಆದಿತ್ಯ ,
ಮಂಜಿನ ತಂಪನು
ಆಸ್ವಾದಿಸುವ
ಬೆಳಗು...
- Indushekar Chinivar
29 Dec 2016, 07:41 am
ಸಂತಸದ ಹಬ್ಬ
ಸಡಗರದ ಹಬ್ಬ
ಸಿಹೀತಿನಿಸು ಮಾಡಿ
ಮನೆಯವರೆಲ್ಲ ಸೇರಿ
ಎತ್ತು ಬಂಡಿ ಹೂಡಿ
ಹೊಲ ಗದ್ದೆಗಳಿಗೆ ಹೋಗಿ
ಸಂಪ್ರದಾಯದಂತೆ ಪೂಜೆ ಮಾಡಿ
ಸವಿ ಊಟವನ್ನು ಚಪ್ಪರಸಿ
ಕುಟುಂಬದವರೆಲ್ಲ ನಲಿದಾಡಿ
ಕುಣಿದಾಡಿ ಸಂಬ್ರಮಿಸುವ
ಉತ್ತರಕರ್ನಾಟಕದ ಪ್ರಮುಖ ಹಬ್ಬ
ಎಳ್ಳಾಮವಾಸೆ.
- ರಾಜು ಹಗ್ಗದ
29 Dec 2016, 07:15 am
ಶುಭರಾತ್ರಿ ಶುಭಾಶಯ ತಿಳಿಸುವಳೆಂದು
ಅವಳ ಕರೆಗಾಗಿ ಕಾದಿರಿವೆ
ಕೊನೆಗೂ , ಅವಳ ಉತ್ತರ
ಬಾರದೆ, ಮನ ನೊಂದಿದೆ ಇಂದು..
ನನ್ನವಳು ನನ್ನನು ಮರೆತು..!
ಸಂಗೀತ ಮನರಂಜನೆಯಲ್ಲಿ
ಭಾಗಿ ಆಗಿರುವಳು, ಇಂದು..!
ಬಹುಶಃ......
ಅವಳಿಗೆ ತಿಳಿಯದಾಯಿತೆ..!
ಅವಳಿಂದ ಇರುಳು, ಅವಳಿಂದ ರಾತ್ರಿ
ಅಂದುಕೊಂಡಿದ್ದ ನನಗೆ,
ಕರಾಳದಿನವಾಯಿತು ಇಂದು.
ಹೇಗೊ ಇದ್ದೆ, ಎಲ್ಲೊ ಇದ್ದೆ
ಅವಳ ಪ್ರೀತಿಯನು ಕಣ್ಮರೆ ಮಾಡಿ...
ಗೊತ್ತಿದ್ದು , ಗೊತ್ತಿದ್ದು....
ಎದೆಯಾಳದಲ್ಲಿ ಬಚ್ಚಿಟ್ಟ...
ಪ್ರೀತಿಯನು ನನಗೆ ತಿಳಿಯದೆ ,
ಬಡಿದೆಬ್ಬಿಸಿದಳು ಅವಳು.
ಅವಳೆ ,ಇಂದು....ನನಗೆ ಶುಭರಾತ್ರಿ
ಶುಭಾಶಯ ಕೋರುವದು
ಮರೆತು ಬಿಟ್ಟಳು...
ಅವಳಿಗೆ ತಿಳಿಯದಾಯಿತೆ..!
ನನ್ನ ಒಲವು ನನ್ನ ಉಸಿರು
ಅವಳೆ...ಎಂದು....
- Pb
29 Dec 2016, 05:35 am
ಒಂಟಿಯಾಗಿ ಸೋಮಾರಿಯಂತೆ
ಅರಸುತ್ತಾ ಬಾಳುವ ಕೋಗಿಲೆಗಿಂತ
ಸಂಗ ಜೀವಿ,ಕೋಳಿ ಕಾಗೆಯ ಹಾಗೆ
ಅವಿಭಕ್ತ ಕುಟುಂಬ ನೀತಿ ತಿಳಿದು
ಬಾಳುವುದು ಒಳ್ಳೆಯದಲ್ಲವೆ?
.ಕಸ್ತೂರಿ ಪತ್ತಾರ್
- kasturi pattar
28 Dec 2016, 09:45 pm
•••••••••••••••••••••••
*ಗುಣಿಸಿದರೆ ಗುಣಾಕಾರ*
*ಬಾಗಿಸಿದರೆ ಭಾಗಾಕಾರ*
*ಕೂಡಿಸಿದರೆ ಸಾವುಕಾರ*
*ಕಳೆದರೆ ಸಾಲಗಾರ*
*ನಮ್ಮ ಜೀವನದ ಲೆಕ್ಕಾಚಾರ*
•°•°•°•°•°•°•°•°•°•°•°•°
*ಗುಣದಿಂದ ಗುಣಿಸಿದರೆ ಗುಣವಂತ*
*ಭಾವನೆಯಿಂದ ಬಾಗಿದರೆ ಭಾಗ್ಯವಂತ*
*ಹಣದಿಂದ ಕೂಡಿಸಿದರೆ ಹಣವಂತ*
*ಇದ್ದದ್ದನ್ನು ಕಳೆದರೆ ಸಾಲವಂತ*
*ಇದುವೇ ನಮ್ಮ ಜೀವನ ಪಂಥ*
°°°°°°°°°°°°°°°°°°°°°
- shaan
28 Dec 2016, 07:39 pm
ಮಮತೆಯ ಮಾಧುರ್ಯಕೂ ಸೋಲಾಯ್ತು!
ನಾ ಸೋತಿದ್ದಲ್ಲ
ನಿಸ್ವಾರ್ಥ ಪ್ರೇಮಕೂ ಸಾವಿದೆ ಎಂದೇ ತಿಳಿಯಿತು
ನಾ ಸತ್ತಿದ್ದಲ್ಲ!
ಆ ದೈವ ರಾಮನೂ ಒಮ್ಮೆ ಸತ್ತು
ಹನುಮ-ಸಂಜೀವಿನಿಯೊಂದಿಗೆ
ಮತ್ತೆ ಉಸಿರಾಡಿದ!
ನಾನೂ ಕಾಯುತಿರುವೆ!
ನನ್ನ ಹನುಮನ?
ಮತ್ತವ ತರಲಿರುವ ಸಂಜೀವಿನಿಯ?
..............................................ಗರಿಮಾಮ
- Prasanna kumar K S
28 Dec 2016, 07:33 pm