Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನ ಭರವಸೆಯ ಬೆಳಕು.

ಸಿಕ್ಕರೆ ನಿಮ್ಮ ಮೊದಲ ಅಪ್ಪುಗೆಯ ಅಕ್ಕರೆ,
ಆಗ ನಾ ಪಡೆಯುವೆನು ನಿಮ್ಮ ತೋಳಿನ ಆಸರೆ.
ಕೇಳಿ ಪಡೆಯ ಬೇಕೆ ನಿಮ್ಮ ಒಲವ,
ಮನಸಿಗೆ ತಿಳಿಯದೆ ನನ್ನೆದೆಯ ವಾಸ್ತವ.
ನಿಮ್ಮ ಹರುಷದಲ್ಲಿ ನಾನಿರಲು ಬಯಸಿದರೆ,
ಮನದ ನೋವಾ ಮರೆಸಬಹುದು ನೀವ್ ನನ್ನ ಮಾತಿಗೆ ಸ್ಪಂದಿಸಿದರೆ.
ನಿಮ್ಮ ಪರಿಸ್ಥಿತಿಯು ಸೃಷ್ಟಿಸಿದೆ ನನಗೆ ಪ್ರಶ್ನೆಗಳ ಕಂದರ,
ಕವಿದ ಮೋಡಕ್ಕೆ ಕಂಬನಿಗರೆದು ಬೇಡುತ್ತಿರುವ ನನಗೆ
ನಿಮ್ಮಿಂದ ಸಿಕ್ಕಿಲ್ಲ ಉತ್ತರ.
ಅನಾಥ ಭಾವಕೆ ಸಿಲುಕಿಸೋ ನಾಳೆಗಳ ನಾ ಕಾಯಬೇಕೆ,
ನಿಮ್ಮ ಮನಸಾಗಿರೋ ನನಗೆ ನಿಮ್ಮ ಜೊತೆಗಿರೋ ಯೋಗ ಕೂಡದು ಏಕೆ?
ನಿಮಗೆ ನನ್ನ ನೆನಪಾದರು ಮರೆತು ಮುನ್ನಡೆವ ಪ್ರಯತ್ನವೇಕೆ?
ನಿರೀಕ್ಷಿಸದೆ ನಿಮ್ಮ ಕಾಳಜಿ ಸಿಗಬೇಕೆಂಬ ನನ್ನ ಹೆಬ್ಬಯಕೆಗೆ.
ಮುಂದೆಂದು ಸಂಭವಿಸಬಾರದು ನಮ್ಮಿಬ್ಬರ ನಡುವೆ ಜಗಳ,
ಇಂದು, ಸ್ನೇಹ ಭರವಸೆಯ ಬೆಳಕಾಗಿ ಸದಾ ಬೆಳಗುತ್ತಿರಲಿ ನಮ್ಮ ಮನದಂಗಳ.

- nagamani Kanaka

01 Jan 2023, 07:55 pm

ಹೊಸ ವರ್ಷ

ಇದೇ ಹೆಸರಿನಿಂದ ನಮ್ಮ ಜೀವನ
ಮುಂದುವರೆಯಲಿದೆ,
ಬೇಡವಾಗಿ ಮರೆತು ಹೋದವರ ಮರೆಯಾಗಿ,
ಏನೇ ಆಗಲಿ ಜೊತೆ ಇರುವೆ ಎಂದವರ ಜೊತೆಯಾಗಿ,
ತೀರಿ ಹೋಗುತ್ತಿರುವ ಈ ವರ್ಷದ ಜೊತೆ
ಕಳೆದ ದಿನಗಳು ನೆನಪಾಗಿ,
ಈ ವರ್ಷ ನಿಂತಂತಿದೆ ನಮ್ಮ ಮುಂದೆ...
ಜೀವನವೆಂಬ ಪುಸ್ತಕದ ಪಾಠದಂತೆ;
ಭಾವನೆಗಳ ಅಕ್ಷರಗಳನ್ನು ಮೂಡಿಸಿಕೊಳ್ಳುವ
ಕುತೂಹಲದಿಂದ,
ವಿಧಿಲಿಖಿತ ಬಲ್ಲವರಿಲ್ಲವೇ.....!
ಸಾಗಬೇಕು ಸನ್ನಿವೇಶ ಎಂತಹದೆ ಎದುರಾದರು....
ಮುಂದೆ ಬರುವ ಯುಗಾದಿಯ ಇನ್ನು
ಹರುಷದಿಂದ ಆಚರಿಸೋಣ....°-°
ಈ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ..

- laxmi

31 Dec 2022, 08:20 pm

ಹೊಸ ವರ್ಷದ ಶುಭಾಶಯಗಳು

ಮುಕ್ತಾಯವೆಂದರೆ ಮುಕ್ತಾಯವಲ್ಲ,
ಹೊಸತನದ ಹೊಸ ಆರಂಭ, ಹಳೆಯ
ಕಹಿ ಕ್ಷಣಗಳೆಲ್ಲ ಅಳಿಯಲಿ, ಜಾರಿದ ಸಿಹಿ
ಕ್ಷಣಗಳೆಲ್ಲ ಮರಳಿ ಕೈಸೆರಲಿ, ಎಲ್ಲರ ಬಾಳ
ಅಂಧಕಾರ ಕಳೆಯಲಿ, ನವ ವಸಂತವು
ಸರ್ವರ ಬಾಳು ಬೆಳಗಲಿ......

ಹೊಸ ವರ್ಷವು ಎಲ್ಲರ ಬಾಳಲ್ಲಿ ಬೆಳಕಾಗಲಿ
ಹೊಸ ವರ್ಷದ ಶುಭಾಶಯಗಳು 2023


ಸ್ವಾತಿ S...............

- Swati S

31 Dec 2022, 07:41 pm

ಬಡವ..

ನಾನೇಕೆ ಬಡವ : ಮನೆಯ ಮಹಾಲಕ್ಷ್ಮಿ ಸಂಗಾತಿ ನೀ ಜೊತೆಯಿರುವಾಗ..!

ನಾನೇಕೆ ಬಡವ : ಮಾತಿನಲೇ ಧೈರ್ಯ ತುಂಬುವ ಅಪ್ಪನೇ ಜೊತೆಯಿರುವಾಗ...!

ನಾನೇಕೆ ಬಡವ : ಹಸಿವೇ ಇಲ್ಲದಂತೆ ನೋಡಿಕೊಳ್ಳುವ ಅಮ್ಮ ನೀ ಜೊತೆಯಿರುವಾಗ..!

ನಾನೇಕೆ ಬಡವ : ನನ್ನ ಕವನವಾ ಓದುವ ತುಂಬು ಬಳಗವೇ ಜೊತೆಯಿರುವಾಗ...!

@GIRISH SHARMA TUMKUR@

- Girish Sharma Tumkur

30 Dec 2022, 08:45 pm

ವಾಸ್ತು..

ವಾಸ್ತು ವಾಸ್ತು ವಾಸ್ತು ಎಂದು ವಾಸ್ತವವನು ಮರೆತು, ಹಿರಿಯರು ಹರಸಿ ಕಟ್ಟಿದ ಮನೆಯನ್ನೂ
ಕೆಡುಹಿದೆ..!

ಹಣವಿಲ್ಲವೆಂದು ಕತ್ತೆ ಕುದುರೆಯಾ ಚಿತ್ರವಾ ಹಾಕಿದೆ..!
ಕೈ ಮುಗಿಯುತ್ತಾ ಮನೆಯಲ್ಲಿ ಸುಮ್ಮನೆ ಸೋಮಾರಿಯಾಗಿ ಕೂತೆ..!

ಅಣ್ಣ ತಮ್ಮರಾ ಪ್ರೀತಿ ವಾತ್ಸಲ್ಯವಾ ಮರೆತೇ..!
ಅಕ್ಕ ತಂಗಿಯರಾ ಮುದ್ದು ಮಮತೆಗೂ ಕೊರತೆ..!

ನವಮಾಸ ಹೊತ್ತು, ಜನ್ಮವಿತ್ತ ಅಮ್ಮನ ಉದರದಲ್ಲಿತ್ತೇ ವಾಸ್ತು..!
ಮೇಲೆ ಕೂರಿಸಿ ಲೋಕವಾ ತೋರಿದ ಅಪ್ಪನಾ ಹೆಗಲಿಗಿತ್ತಾ ವಾಸ್ತು..!

ಸತ್ತಾಗ ಸುಡುವ ಚಿತೆಯ ಅಗ್ನಿಗೆಲ್ಲಿ ವಾಸ್ತು..!
ಮಣ್ಣಲ್ಲಿ‌ ಮುಚ್ಚುವರು ಕೇಳುವುದಿಲ್ಲಾ
ಭೂಮಿಯಾ ವಾಸ್ತು‌..!

ಆದರೂ ಮಾನವ ಸಂಬಂಧದಾ ಅನುರಾಗ ಮರೆತು, ಬಂಧದ ಮೋಹಕೆ ಸಿಲುಕಿ ಹುಡುಕವನು ಎಲ್ಲಿ ..?ವಾಸ್ತು ವಾಸ್ತು ವಾಸ್ತು...!

@GIRISH SHARMA TUMKUR @

- Girish Sharma Tumkur

30 Dec 2022, 08:44 pm

ನವೋದಯದ ದೃವತಾರೆ.

ಹಿರೇ ಕೊಡುಗೆಯಲ್ಲಿ ನವೋದಯದ ಧ್ರುವತಾರೆಯ ಜನನ,
ತುಂಗೆಯ ಮಡಿಲಲ್ಲಿ ಕಿಂದರ ಜೋಗಿಗಳ ಜೊತೆ ಪ್ರಕೃತಿಯ ಆಲಿಂಗನ.
ಕುಪ್ಪಳ್ಳಿಯ ಪುಟ್ಟಪ್ಪ ತೀರ್ಥಹಳ್ಳಿಯಲ್ಲಿ ಮುಗಿಸಿದರು ಮಾಧ್ಯಮಿಕ ಶಿಕ್ಷಣ,
ಅವರ ಉನ್ನತ ವ್ಯಾಸಂಗಕ್ಕೆ ನೆಲೆಯಾಯಿತು ಮೈಸೂರು ಪಟ್ಟಣ.
ಆರಂಭಿಸಿದರು ಕುವೆಂಪು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ,
ಕೊಳಲ ನಾದದಿ ನವಿಲಂತೆ ನರ್ತಿಸುತ್ತಿವೆ ಪುಟ್ಟಪ್ಪನವರ ಪ್ರೇಮ ಕಾವ್ಯಗಳ ಸೃಜನೆ.
ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯದ ಬದುಕಿಗೆ ಬುನಾದಿಯಾಗಿರುವ ಕವಿಯ ಪಂಚಮಂತ್ರ,
ನೆನಪಿಸಲಿ ನಮಗೆ ನಾಡ ನುಡಿಗೆ ಶ್ರಮಿಸುವ ಕರ್ತವ್ಯದ ಪಾತ್ರ.
ಕರುನಾಡ ಕುವರನ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಲಭಿಸಿತು ಜ್ಞಾನಪೀಠ ಪ್ರಶಸ್ತಿ,
ರಾಷ್ಟ್ರಕವಿಯ ಮುಡಿಯೇರಿವೆ ಪಂಪ, ಡಾಕ್ಟರೆಟ್, ಕರ್ನಾಟಕ ರತ್ನ, ಪದ್ಮ ವಿಭೂಷಣ ದಂತಹ ಪುರಸ್ಕಾರಗಳು ತಿಳಿಸುತ್ತಿವೆ ಅವರ ಸಾಹಿತ್ಯ ಲೋಕದ ಸಾಧನೆಯ ಉನ್ನತಿ.
ನೆನಪಿನ ದೋಣಿಯಲ್ಲಿ ಜಗವೇ ಪಯಣಿಸುತ್ತಿದೆ ವಿಶ್ವಮಾನವನ ಸಾಲುಗಳ ನೆನೆಯುತ,
ಉದಯ ರವಿಗೆ ಜನುಮದಿನಕ್ಕೆ ಶುಭ ಕೋರುವೆ ನನ್ನ ಪುಟ್ಟ ಕವನವ ಅರ್ಪಿಸುತಾ.

- nagamani Kanaka

29 Dec 2022, 11:52 pm

ತಂದೆ ತಾಯಿ ಪ್ರೀತಿ

ಆಕಾಶದಲ್ಲಿ ಮಿನುಗುವ ನಕ್ಷತ್ರ
ಭೂಮಿಯ ಮೇಲೆ ತಂದ
ತಾಯಿಗಳ ಸುಕ್ಷೇತ್ರ...

ತಾಯಿ ಎಂಬ ಪ್ರತ್ಯಕ್ಷ ದೈವ
ತಂದೆಯ ಕಾಣದ ಪ್ರೀತಿಯ
ವಾಸ್ತಲ್ಯ ....

ಮನೆಯ ಏಳಿಗೆಗೆ ತಾಯಿಯ
ಮಮತೆ ...
ಮನೆಗೆ ಆಧಾರ ಸ್ಥಂಬ ತಂದೆಯ
ಶ್ರಮತೆ ...

ತಾಯಿ ನೀಡುವ ಪ್ರೀತಿಯ ಕೈ
ತುತ್ತು...
ತಂದೆ ನೀಡುವ ನುಡಿ
ಮುತ್ತುಗಳ ತಾಕತ್ತು...

ತಂದೆ ತಾಯಿಯ ಪ್ರೀತಿಯ ಸಾಟಿ
ಇಲ್ಲ...
ತಂದೆ ತಾಯಿಯ ಮನ
ನೋಯಿಸಿದವರಿಗೆ ನೆಮ್ಮದಿ
ಇಲ್ಲ...

ದೇವರ ನಿಜ ರೂಪ
ತಂದೆ ತಾಯಿ

ಭಾರ್ಗವಿ ...

- bhargavi

29 Dec 2022, 07:36 pm

ಬೀಗಬೇಡ...

ಒಂಭತ್ತು ತಿಂಗಳು ಹೆತ್ತು ಹೊತ್ತೆ ಎಂದು ಬೀಗಬೇಡ..!
ಕಣ್ಣು ಬಿಡುವ ಮುಂಚೆಯೇ ಭ್ರೂಣ ಹತ್ಯೆ ಮಾಡಿದವರನ್ನು ನೋಡಿದ್ದೇನೆ..!

ನನ್ನ ಮಗ ದೊಡ್ಡ ಹುದ್ದೆಯಲ್ಲಿದ್ದಾನೆ ಎಂದು ಬೀಗಬೇಡ..!
ಸಾಕುವ ಅರ್ಹತೆ ಇಲ್ಲದ ಅನಾಥಾಶ್ರಮಕ್ಕೆ ಬಿಟ್ಟು ಬಂದದ್ದನ್ನು ನೋಡಿದ್ದೇನೆ..!

ನನ್ನ ಮಗಳು ಮನೆಯ ನಂದಾ ದೀಪ ಎಂದು ಬೀಗಬೇಡ..!
ಬೇರೆ ಮನೆಗೆ ಹೋಗಿ ಬೆಂಕಿ ಹಚ್ಚಿದ್ದನ್ನು ನೋಡಿದ್ದೇನೆ..!

ನನ್ನ ಸೊಸೆ ದೊಡ್ಡ ಶ್ರೀಮಂತರ ಮನೆಯವಳೆಂದು ಬೀಗಬೇಡ..!
ಅತ್ತೆ ಮಾವರಿಗೆ ಒಪ್ಪತ್ತು ಊಟ ಹಾಕದೇ, ಮೂಲೆಗೆ ನೂಕಿದವರನ್ನು ನೋಡಿದ್ದೇನೆ..!

ನನ್ನ ಅಳಿಯ ಲಕ್ಷ ದ ಅಧಿಪತಿ ಎಂದು ಬೀಗಬೇಡ..!
ನಿನ್ನ ಮಗಳನ್ನು "ಅಲಕ್ಷ್ಯ " ಮಾಡಿದ್ದನ್ನೂ ನೋಡಿದ್ದೇನೆ..!


ದೇವರು ನಾನು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾನೆಂದು ಬೀಗಬೇಡ..!
ಕೊಟ್ಟಿದ್ದೆಲ್ಲವನ್ನು ಕಿತ್ತುಕೊಂಡಿದ್ದನ್ನೂ ನೋಡಿದ್ದೇನೆ...

@GIRISH SHARMA TUMKUR@

- Girish Sharma Tumkur

29 Dec 2022, 04:47 pm

ಬಡವ

ನಾನೇಕೆ ಬಡವ : ಮನೆಯ ಮಹಾಲಕ್ಷ್ಮಿ ಸಂಗಾತಿ ನೀ ಜೊತೆಯಿರುವಾಗ..!

ನಾನೇಕೆ ಬಡವ : ಮಾತಿನಲೇ ಧೈರ್ಯ ತುಂಬುವ ಅಪ್ಪನೇ ಜೊತೆಯಿರುವಾಗ...!

ನಾನೇಕೆ ಬಡವ : ಹಸಿವೇ ಇಲ್ಲದಂತೆ ನೋಡಿಕೊಳ್ಳುವ ಅಮ್ಮ ನೀ ಜೊತೆಯಿರುವಾಗ..!

ನಾನೇಕೆ ಬಡವ : ನನ್ನ ಕವನವಾ ಓದುವ ತುಂಬು ಬಳಗವೇ ಜೊತೆಯಿರುವಾಗ...!

@GIRISH SHARMA TUMKUR@

- Girish Sharma Tumkur

29 Dec 2022, 04:46 pm

ಹಣೆಬರಹ..

ಬ್ರಹ್ಮ ಬರೆದ ಹಣೆಬರಹ ಸರಿಯಿಲ್ಲವೆಂದು ತಿಳಿದು..!
ಹೊರಟೆ ಹೊಸದಾಗಿ ಬರೆಯುವೆನೆಂದು ಲೇಖನಿಯಾ ಹಿಡಿದು..

ತಿದ್ದಲೋ ಅಥವಾ ಅಳಿಸಿ ಹೊಸದಾಗಿ ಬರೆಯಲೋ ಎಂಬ ಅರಿವೇ ಇಲ್ಲದೇ...
ದೇವರನ್ನೇ ಕೇಳಿದೆ , ಹೇಗೆ ಬರೆಯಲಿ ಏನು ಮಾಡಲಿ ಎಂದು..!
ದೇವರು ಹೇಳಿದ...
ಹುಚ್ಚಪ್ಪಾ !
ಬ್ರಹ್ಮ ಬರೆದ ಹಾಳೆಯಲಿ ಅಂತ್ಯವೇ ಇಲ್ಲ..! ಬರೆದದ್ದು ಅಳಿಸೋಕೆ ಅವನಿಗೇ ಆಗಲ್ಲ..!
ಕಾರಣ
ಅವನ ಹಣೆಬರಹ ಅವನಿಗೇ ತಿಳಿದಿರಲಿಲ್ಲ..!

@GIRISH SHARMA TUMKUR@

- Girish Sharma Tumkur

29 Dec 2022, 04:42 pm