Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡಿಗ

ಅಚ್ಚ ಕನ್ನಡಿಗನ
ಸ್ವಚ್ಚ ಮನಸ್ಸನ್ನು
ಹುಚ್ಚಾಗಿ ಪೀತಿಸಿ
ಬಚ್ಚಿಟ್ಟಳು ಹೃದಯದಲಿ
... ವೀರು

- ವೀರು

27 Dec 2016, 06:33 pm

ಆತ್ಮವಿಶ್ವಾಸ

ಮನೆ ಸಣ್ಣದಾದರೂ ಮನಸ್ಸು
ದೊಡ್ಡದಿರಲಿ.
ಹೃದಯ ಮುಷ್ಠಿಯಷ್ಟಿದ್ದರೂ ಪ್ರೀತಿ,
ಸ್ನೇಹ ಬೆಟ್ಟದಷ್ಟಿರಲಿ.
ಹಣದಲ್ಲಿ ಬಡತನ ಇದ್ದರೂ
ಗುಣದಲ್ಲಿ ಶ್ರೀಮಂತಿಕೆ ಇರಲಿ.

ದಾರಿಗಳಲ್ಲಿ ಸಾವಿರಾರು ಅಡೆತಡೆಗಳಿದ್ದರೂ
ಚಿಮ್ಮುವ ಆತ್ಮವಿಶ್ವಾಸ ಇರಲಿ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

27 Dec 2016, 03:34 pm

ನಿನದೇ ನೆನಪು

ಎಷ್ಟು ದೂರ ಇದ್ದರೇನು...
ನೀನಿರುವ ಊರು...??? ✈
ನನ್ನ ಜೊತೆಯಿಲ್ಲವೇನು
ನಿನ್ನ ನೆನಪುಗಳು ನೂರು...!!!!

ನಿದ್ರೆಗೆ ಜಾರಿದರೆ ನಿನ್ನ ಕನಸುಗಳದೇ
ಜಾತ್ರೆ ಬಲು ಜೋರು..
ಮನದ ಬೀದಿಯುದ್ದಕೂ ಸಾಗಿದೆ
ನಿನ್ನ ನೆನಪಿನದೇ ತೇರು..

- Ugnil

27 Dec 2016, 02:04 pm

ವಾಸ್ತವ

ಬಿರುಕು ಬಿಡುತಿದೆ ಮಡಿಲಿಗೆ,
ಕೊಡಲಿ ತಗಲುತಿದೆ ಒಡಲಿಗೆ,
ದುಃಖ ದುಮ್ಮಾಲೆಗಳು ಬಡವರಿಗೆ,
ಸವಿಜೇನ ಸಿಹಿ ಸಿರಿವಂತರಿಗೆ..

ಕೊರಗುವಾ ದನಿಯೆಲ್ಲಾ
ನರಳಿ ನರಳಿ ನಶಿಸುತಿದೆ..
ಕುಣಿದು ಕುಪ್ಪಳಿಸುವವರ
ಅಹಂ ಇನ್ನು ಹೆಚ್ಚುತಿದೆ..

ಮನಸಿನ ಸಿರಿ ಹೊಂದವರ ಮನ
ಕುಸಿ ಕುಸಿದು ಬೀಳುತಿದೆ..
ಹಣವಂತರ ತುಳಿದಾಟಕೆ
ಮನ ಚೂರು ಚೂರಾಗುತಿದೆ..

ಬಡತನ-ಸಿರಿತನದ ಬೇಧ
ದಿನ ದಿನವೂ ಬೆಳೆಯುತಿದೆ..
ಎರಡು ತನದ ತೂಕದಲಿ
ಬಡತನವೇ ನೋಯುತಿದೆ..

ಬದುಕಿನುದ್ದ ಹಣೆಬರಹ
ಬಡವರ ಕಿತ್ತು ತಿನ್ನುತಿದೆ..
ಅನ್ನ ನೀಡೊ ರೈತರ ಬದುಕು
ಸುಟ್ಟು ಕರಕಲಾಗುತಿದೆ..

ಭಾಷಣವಾ ಬಿಗಿಯುವ
ಭಂಡರಿಗೆ ಜಯ ದೊರಕುತಿದೆ..
ಜಯವ ದೊರೆತ ಕ್ರಿಮಿಗಳೆಲ್ಲ
ಬಡವರ ಬಲಿ ಹಾಕುತಿದೆ.
ಬಡವರ ರಕ್ತ ಹೀರುತಿದೆ..

ಇದೇ ದಾರಿ ಹಿಡಿ ಹಿಡಿದು,
ರಾಜಕೀಯ ಬೆಳೆಯುತಿದೆ..
ಕೀಚಕ ಜನರ ಕೈ ಕೆಳಗೆ,
ಬಡವರ ಬದುಕಿದು
ಬಲಿಯಾಗುತಿದೆ...

ಪ್ರಶ್ನೆಗಳ ಸರಪಳಿಯು
ಎಳೆದೆಳೆದು ಸಾಗುತಿದೆ..
ಗೊತ್ತಿದ್ದೂ ಗೊತ್ತಿಲ್ಲದ ಹಾಗೆ
ಉತ್ತರವು ಸಾಯುತಿದೆ..

ನ್ಯಾಯ ಕರಗಿ ನೀರಾಗುತಿದೆ..
ಅನ್ಯಾಯ ಮೆರೆದು ಬೀಗುತಿದೆ..

- ವಿ.ತ್ರಿವೇಣಿ ಪಾಂಡವಪುರ

- ವಿ. ತ್ರಿವೇಣಿ ಪಾಂಡವಪುರ

27 Dec 2016, 01:53 pm

ಸ್ಫೂರ್ತಿ

ಹಾಡುವ ಕೋಗಿಲೆಗೆ ಕಂಠವೆ ಸ್ಪೂರ್ತಿ..!!
ನರ್ತಿಸುವ ನವಿಲಿಗೆ ತುಂತುರು ಹನಿಯೆ ಸ್ಪೂರ್ತಿ...!

ಹಾರುವ ಚಿಟ್ಟೆಗೆ ಹೂಗಳೆ ಸ್ಪೂರ್ತಿ..!!
ಅರಳುವ ಹೂಗಳಿಗೆ ಹೊಂಬಿಸಿಲೆ ಸ್ಪೂರ್ತಿ...!!

ಈಜುವ ಮೀನಿಗೆ ರೆಕ್ಕೆಯೆ ಸ್ಪೂರ್ತಿ..!!
ನಾಚುವ ಗಿಳಿಗೆ ಮೈಬಣ್ಣವೆ ಸ್ಪೂರ್ತಿ...!!

ಸುರಿವ ಮಳೆ ಹನಿಗೆ ಮೋಡವೆ ಸ್ಪೂರ್ತಿ..!!
ಚಿತ್ತಾರ ಬಿಡಿಸಿರುವ ಕಾಮನ ಬಿಲ್ಲಿಗೆ ಬಿಸುಲು ಮಳೆಯೆ ಸ್ಪೂರ್ತಿ...!!

ಹವಳವು ಸೃಶ್ಟಿಯಾಗಲು ಸಾಗರವೆ ಸ್ಪೂರ್ತಿ..!!

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

27 Dec 2016, 12:59 pm

ಜೀವನ

Novirada Jevana
Naguvirada Manasu
Poorthi halagde poorthi udharanu agde iro manshya
Saddu idrenu ildidrenu
Bhrame ne jeevna anta badutkiro baddentavu
Havanisidarenu Bantu sahiskondre en Bantu
Ellaa soooonya
Jeeevana saaaaaaswata

- BN

27 Dec 2016, 11:36 am

ನನ್ನ ಕೊಳಲು ನಾದ

ಸ್ವಾತಂತ್ರ್ಯದ ಹೋರಾಟದಲ್ಲಿ
ಹಿಂಸ/ಅಹಿಂಸೆ ಗೋಳಾಟದಲ್ಲಿ
ಸ್ವಾತಂತ್ರ್ಯ ಕಾಲಿಗೆ ಬಡಿಯಿತು
ಬಾವುಟ ಹಕ್ಕಿಯಂತೆ ಹಾರಾಡಿತು.

ಸಂತೋಷಕ್ಕೆ ಮೂರು ಗೇಣು !!
ನಿತ್ಯ ನೆಡಯುತ್ತದೆ ಜಾತಿಯತೆ ನೇಣು.

ರಾಜಕೀಯ-ಪೊಲೀಸ್-ರೌಡಿ
ರಕ್ತದೋಕಳಿಯಲ್ಲಿ ಮಿಂದು
ನಮ್ಮ ಸ್ವಾತಂತ್ರ್ಯ ಕಿತ್ತು ತಿಂದು
ರಕ್ತ ನಿದ್ರೆಯಲ್ಲಿ ಲಾಲಿ ಹಾಡಿ.

ಹಕ್ಕುಗಳ ಸಂವಿಧಾನದಲ್ಲಿ ಕಮಲನಂತೆ ಅರಳಿದೆ
ನಮ್ಮ ಹೃದಯದಲ್ಲಿ ರಕ್ತದ ಚಿಲುಮೆನಂತೆ ಬತ್ತಿದೆ.

ಒಣಗಿದ ಮರದಂತೆ ಬಡಕಲ ದೇಹ ಮೂಲೆ ಹಿಡಿದಿದೆ
ಪಂಚ ಇಂದ್ರಿಯಗಳ ಒಣಗಿ ಹೋಗಿದೆ.

ಧರ್ಮ- ಜಾತಿ-ಲಿಂಗ ಹೆಸರುನಲ್ಲಿ ಕಿತ್ತಾಟ
ಸಂಸ್ಕೃತಿ- ಉಡುಗೆ-ಹೊಂದಾಣಿಕೆ ಮಾತಿನಲ್ಲಿ ಕೂಗಾಟ.

"ನಿಲ್ಲುವ ಸೂಚನೆ" ಅಶಯ ಕುಗ್ಗಿ ಹೋಗಿದೆ
"ನಾವೇ ಕೊಂದು" ಜೀವನ ಮುಗಿಸ ಬೇಕಿದೆ.

ಶಿವಕುಮಾರ್. ಎನ್
ಸರ್ಕಾರಿ ಪದವಿ ಪೂರ್ವ ಕಾಲೇಜು
ಗಾವಡಗೆರೆ
ಹುಣಸೂರು ತಾಲೂಕು
ಮೈಸೂರು.
7892977584

- Shinan

27 Dec 2016, 11:20 am

ಸುಮತಿ ನೀ ಕೈಗೆಟುಕೆ ...

ಚಳಿಗೆ ಕೊಂಕದೆ
ಬಿಸಿಲಿಗೆ ಬತ್ತದೆ
ನಿನ್ನತನವ ಮೆರೆವ
ಸುಕೋಮಲ ಪುಷ್ಪವೆ ..
ನೀ ಹೊತ್ತು ತರುವ
ಸಂದೇಶ ಇದೆ ಅಲ್ಲವೆ
ಕೈಲಾಸವೆಲ್ಲಿ ಆಲಸಿಗೆ
ಆಯಸಿಗೆ ಅಮೃತವೆ ..
ಸುಮಧುರ ಸುಮವೆ
ನಿನ್ನೊಲಿಸಲು ನಿನ್ನರಸಿ
ಮರಳಿ ಮರಳಿ ಬರುವೆ
ಎಂದಿಗಾದರು ನಿನ್ನಂತೆ
ನಾನಾಗುವ ಹಂಬಲವೆ
ಸುಮತಿ ನೀ ಕೈಗೆಟುಕೆ ...

- Bharavi

27 Dec 2016, 09:21 am

ಒಲವು

ಹೂವಿನ ಬಾಳು
ಒಂದೆ ದಿನ ಆದರೆ
ಮುದ ನೀಡುದ
ಒಲವು ಅನುದಿನ ವಲ್ಲವೆ

- kasturi pattar

26 Dec 2016, 11:56 pm

ಕನಸು

ನಿನ್ನ ಜೊತೆ ಕುಣಿಯೋ ಆಸೆ ,
ಆದ್ರೆ ನನಗೆ ಕುಣಿಯೋದಿಕ್ಕೆ ಬರೋಲ್ಲ
ಎಂಬುದೇ ನಿರಾಸೆ ,....
ನಿನ್ನ ಅಪ್ಪಿಕೊಂಡು ಮುದ್ದಾಡೋ ಆಸೆ ,
ಆದ್ರೆ ನನ್ನ ಸತಾಯಿಸಿ
ಮಾಡ್ತಿಯಲ್ಲೇ ನಿರಾಸೆ ......
ನೀ ಮಾಡೋ ಬಿರಿಯಾನಿ ತಿನ್ನುವ ಆಸೆ
ಆದರೆ ನಿನಗೆ ಮ್ಯಾಗಿ ಬಿಟ್ಟರೆ ಬೇರೆ
ಏನು ಮಾಡೋಕೆ ಬರಲ್ಲ
ಅನ್ನೋದೇ ನಿರಾಸೆ ....
ನಿನ್ನ ಜೊತೆಗೂಡಿ ಬಾಳೋ ಆಸೆ ,
ಆದರೆ
ನಾ ಇಲ್ಲಿಯವರೆಗೂ ಕಂಡಿದ್ದು ಕನಸು ಎಂಬುದೇ ನಿರಾಸೆ .....

- veda

26 Dec 2016, 09:38 pm