ಮನಸ್ಸು ಗೆದ್ದವಳು ನೀನು
ಮನಸ್ಸು ಸೋತವನು ನಾನು
ಕನಸ್ಸು ಕೊಟ್ಟವಳು ನೀನು
ಕನಸ್ಸು ಕಂಡವನು ನಾನು!
ದೇಹ ನನ್ನದು
ಆತ್ಮ ನಿನ್ನದು
ಹಾಡು ನನ್ನದು
ಭಾವ ನಿನ್ನದು!
ಭತ್ತಿ ನಾನು
ಜ್ಯೋತಿ ನೀನು
ಕತ್ತಲೆ ನಾನು
ಬೆಳಕು ನೀನು!
ನೀನಿಲ್ಲದೆ ನಾನಿಲ್ಲ
ನಾನಿಲ್ಲದೆ ನೀನಿಲ್ಲ
ನಾವಿಬ್ಬರೂ ಒಂದೂಗೂಡದ್ದರೆ
ಬದುಕಿಗೆ ಅರ್ಥವಿಲ್ಲಾ!
_____________________________
*ಬಸವಪ್ರಿಯ*
ಮಾಯಾಲೋಕವಿದು
ಬಡವರಿಗೆ ಒಂದು
ಶ್ರೀಮಂತರಿಗೆ ಇನ್ನೊಂದು
ಬಲ್ಲೆನೆಂದರೆ ಒಂದು
ಗೊತ್ತಿಲ್ಲ ಎಂದರೆ ಒಂದು
ಆಹಾರವಿಲ್ಲದೆ ಉಪವಾಸ ಹಲವರದು
ಆಹಾರವಿದ್ದರೂ ಉಪವಾಸ ಕೆಲವರದು
ಜೇಬುಗಳು ಭರ್ತಿ
ಮನಸುಗಳು ಖಾಲೀ
ಇದೊಂದು ರಂಗ ಮಂದಿರ
ಕೆಲವರು ಅತ್ತರೂ ನಗಬೇಕು
ಕೆಲವರು ನಕ್ಕರೂ ಅಳಬೇಕು
ಮಾಯಾಲೋಕವಿದು
ಇದರ ಮರ್ಮ ವಿಧಿಯೇ ಬಲ್ಲದು
ಓಡುವ ನದಿಯ ಆಲೆಯಲ್ಲಿ
ಯಾಕೋ ಮೌನದ ಚಿತ್ರಣ
ಕಾಣುವೆ ನಾನು ನನ್ನದೇ ಮುಖ
ಕನ್ನಡಿ ತಾನಾಗಿ ತೋರುವದಾಗ
ಹಿಂದೆ ಯಾರೊ ಇಣುಕಿದಂತೆ
ಮಾಯವಾಗುವುದು ಮತ್ತದೆ ಏಕಾಂತ
ತೇಜನು ಜಾರುತಿಹನು
ಮೋಡಣದೂರಿನ ಹಿಳಿಜಾರಿನಲಿ
ಚಂದಿರನು ಇಣುಕುತಿಹನು
ಪಡುವಣ ಬಾನಂಗಳದಲಿ
ಸುಳಿವಿಲ್ಲ ಅಲ್ಲಿ ನಿನ್ನ ಕಾಲ್ಗೆಜ್ಜೆ ನಾದ
ಅನಿಸುವುದು ಒಮ್ಮೊಮ್ಮೆ ಕಿವುಡನೆ ನಾನೆಂದು!
ಅದ ಮಾಡಿ ಕಾಯುತಿರುವೇ ವೀಣೆಯನು
ವೈಣಿಕನಾಗಿ ದಣಿವಿಲ್ಲದೆ ನುಡಿಸಬೇಕಿದೆ ನಾನು
ನರ್ತಿಸಲು ನೀ ಜೊತೆ ಇಲ್ಲದ ಕೊರಗೊಂದೆ
ವಿರಹದ ಕವಿತೆಯ ಬರೆದು ಧ್ವನಿ ಗೂಡಿಸುತಿದೆ
ಮೌನಕೆ ವಶವಾಗುತಿದೆ ಹೃದಯ ವೀಣೆ
ನೀ ಇಲ್ಲದ ಗುಡಿಯಲಿ ನಿಶ್ಯಬ್ಧ ತಬ್ಬುತಿದೆ
ವಿರಹದ ಅಲೆಯು ಧುಮ್ಮಿಕ್ಕಿದೆ ಕಡಲು
ನಿನ್ನ ನೆನಪಿನಲಿ ಸೋರಗುತಿದೆ ಒಡಲು
ಕಾಡುವುವು ಜೊತೆ ಕಳೆದ ನೆನಪುಗಳು
ಒಲವುಕ್ಕುವ ನಿನ್ನ ಪ್ರೇಮದ ಫಸಲು
ಹಸಿರಿನ ಪೊಟರಿನಲಿ ನುಲಿಯುತಿದೆ ಕಘಗಾನ
'ನಲ್ಲೆ ನೀ ಇಲ್ಲದೆ ಭಿಮ್ಮೆನ್ನುತಿದೆ ರಮ್ಮೂಧ್ಯಾನ'