Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕ್ಷಮೆ

ನಿನ್ನ ಮನಸ್ಸು ನೋಯಿಸಿದ್ದಕ್ಕೆ
ನಿನ್ನ ಮೇಲೆ ಕೋಪಿಸಿಕೊಂಡಿದ್ದಕ್ಕ
ನಿನ್ನೊಂದಿಗೆ ಸರಿಯಾಗಿ ಮಾತನಾಡದ್ದಕ್ಕೆ
ನಿನಗೆ ಬೇಸರಿಸದ್ದಕ್ಕೆ
ಈ ಪುಟ್ಟ ಹೃದಯದ
ಕ್ಷಮೆ ಇರಲಿ.


✍ರಾಜು ಹಗ್ಗದ✍

- ರಾಜು ಹಗ್ಗದ

21 Dec 2016, 10:25 pm

"ನಾನು-ನೀನು" ____________

ಮನಸ್ಸು ಗೆದ್ದವಳು ನೀನು
ಮನಸ್ಸು ಸೋತವನು ನಾನು
ಕನಸ್ಸು ಕೊಟ್ಟವಳು ನೀನು
ಕನಸ್ಸು ಕಂಡವನು ನಾನು!
ದೇಹ ನನ್ನದು
‌‌‌ ಆತ್ಮ ನಿನ್ನದು
ಹಾಡು ನನ್ನದು
ಭಾವ ನಿನ್ನದು!
ಭತ್ತಿ ನಾನು
ಜ್ಯೋತಿ ನೀನು
ಕತ್ತಲೆ ನಾನು
ಬೆಳಕು ನೀನು!
ನೀನಿಲ್ಲದೆ ನಾನಿಲ್ಲ
ನಾನಿಲ್ಲದೆ ನೀನಿಲ್ಲ
ನಾವಿಬ್ಬರೂ ಒಂದೂಗೂಡದ್ದರೆ
ಬದುಕಿಗೆ ಅರ್ಥವಿಲ್ಲಾ!
_____________________________
*ಬಸವಪ್ರಿಯ*

- ಬಲವಂತ ಮೋರಟಗಿ(ಬಸವಪ್ರಿಯ)

21 Dec 2016, 08:31 pm

ಮಾಯಾಲೋಕ

ಮಾಯಾಲೋಕವಿದು
ಬಡವರಿಗೆ ಒಂದು
ಶ್ರೀಮಂತರಿಗೆ ಇನ್ನೊಂದು
ಬಲ್ಲೆನೆಂದರೆ ಒಂದು
ಗೊತ್ತಿಲ್ಲ ಎಂದರೆ ಒಂದು
ಆಹಾರವಿಲ್ಲದೆ ಉಪವಾಸ ಹಲವರದು
ಆಹಾರವಿದ್ದರೂ ಉಪವಾಸ ಕೆಲವರದು
ಜೇಬುಗಳು ಭರ್ತಿ
ಮನಸುಗಳು ಖಾಲೀ
ಇದೊಂದು ರಂಗ ಮಂದಿರ
ಕೆಲವರು ಅತ್ತರೂ ನಗಬೇಕು
ಕೆಲವರು ನಕ್ಕರೂ ಅಳಬೇಕು
ಮಾಯಾಲೋಕವಿದು
ಇದರ ಮರ್ಮ ವಿಧಿಯೇ ಬಲ್ಲದು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

21 Dec 2016, 07:19 pm

ಹರೆಯದ ಹಳಿ ತಪ್ಪಿಸಿದವಳು

***
ಹಸರಗಿಡದಾಗ ಕುಂತ ಗಿಳಿಮರಿಯಹಂಗ
ಹಗಲ್ಯಾಲ ಕತ್ತತಿರುವಿ ನೋಡ್ತಿದ್ದಿ. ನಾ
ಹಾಳಾಗಿಹೋದಮ್ಯಾಲ ನೀನೂ ಹಳ್ಳದಕಡೆ ಹಾಳಾಗಿ
ಹೋಗ್ತಿನಂದಿದ್ದಿ. ಈಗ
ಹಳ್ಳದ ದಂಡಿಮ್ಯಾಲ ನಿಂತು ಮತ್ತ ಮತ್ತ ನನ್ನ ಮಾರಿ
ಹೊಳ್ಳಿ ನೋಡಿದರ ನಾ
ಹೆಂಗ ಮಾಡ್ಲಿ??
ಹೇಳು ನಿನ್ನ ತಿರುಗಿ ನೋಡೋ ನೋಟದಾಗದೇನ
ಹಂತಾ ಮಾಟೈತಿ
ಹಳಿನೆನಪ್ಯಾಕ ಮತ್ತ ಮತ್ತ ಕೆದಕ್ತಿ? ಕೆದ್ಕಬ್ಯಾಡ ನನ ಗೆಳತಿ
ಹೇಳಿದರ ನಿನಗೆಲ್ಲಿ ತಿಳಿತೈತಿ ನನಗ
ಹಳ್ಳದ ಕಡೆಗೆ ಹೊಳ್ಳಿ ಹೊಳ್ಳಿ ನೋಡಾಂಗಾಕ್ಕೈತಿ.

=ಎಲ್ಲಾರ್_ಸೂರ್ಯ*

- ಸುರೇಶ ಎಲ್.ರಾಜಮಾನೆ

21 Dec 2016, 07:16 pm

~~~¶ಬೆಸರದ ಸಂಜೆ¶~~~

ಪ್ರತಿ ದಿನವೂ ಬೆಸರದ ಅದೆ ಸಂಜೆ
ನನ್ನೂರಿನ ದಿಬ್ಬದಲಿ ಅದೆ ಏಕಾಂತ
ಮುಸ್ಸಂಜೆಯ ಕೆಂಬಣ್ಣದೊಕಳಿ
ಬಾನಂಗಳದ ಅಂದರದ ಮೇಲೆ
ಕಿರಣ ಲೀಲೆಯ ಸೊಬಗು
ಭೂ ಮಡಿಲ ಕುಟಿರದ ಒಳಗೆ

ಹಚ್ಚನೆ ಹಸುರಿನ ತಲಿರೆಲೆಯ ಮೇಲೆ
ಮುತ್ತಿಕ್ಕುತಿದೆ ಕಿರಣ ಕಾಂತಿ
ಮಣ್ಣನೆ ಹೊನ್ನಗಿಸುತಿರುವ
ಸಂಜೆಯ ಹೊಳಪಿನ ಕಂಪಿಗೆ
ತರುಲತೆಯ ವಿರಹದಾಟ
ಪ್ರೆಕೃತಿಯ ಮಡಿಲಿನಲಿ ಮೌನದ ಛಾಯೇ

ಓಡುವ ನದಿಯ ಆಲೆಯಲ್ಲಿ
ಯಾಕೋ ಮೌನದ ಚಿತ್ರಣ
ಕಾಣುವೆ ನಾನು ನನ್ನದೇ ಮುಖ
ಕನ್ನಡಿ ತಾನಾಗಿ ತೋರುವದಾಗ
ಹಿಂದೆ ಯಾರೊ ಇಣುಕಿದಂತೆ
ಮಾಯವಾಗುವುದು ಮತ್ತದೆ ಏಕಾಂತ

ತೇಜನು ಜಾರುತಿಹನು
ಮೋಡಣದೂರಿನ ಹಿಳಿಜಾರಿನಲಿ
ಚಂದಿರನು ಇಣುಕುತಿಹನು
ಪಡುವಣ ಬಾನಂಗಳದಲಿ
ಸುಳಿವಿಲ್ಲ ಅಲ್ಲಿ ನಿನ್ನ ಕಾಲ್ಗೆಜ್ಜೆ ನಾದ
ಅನಿಸುವುದು ಒಮ್ಮೊಮ್ಮೆ ಕಿವುಡನೆ ನಾನೆಂದು!

ಅದ ಮಾಡಿ ಕಾಯುತಿರುವೇ ವೀಣೆಯನು
ವೈಣಿಕನಾಗಿ ದಣಿವಿಲ್ಲದೆ ನುಡಿಸಬೇಕಿದೆ ನಾನು
ನರ್ತಿಸಲು ನೀ ಜೊತೆ ಇಲ್ಲದ ಕೊರಗೊಂದೆ
ವಿರಹದ ಕವಿತೆಯ ಬರೆದು ಧ್ವನಿ ಗೂಡಿಸುತಿದೆ
ಮೌನಕೆ ವಶವಾಗುತಿದೆ ಹೃದಯ ವೀಣೆ
ನೀ ಇಲ್ಲದ ಗುಡಿಯಲಿ ನಿಶ್ಯಬ್ಧ ತಬ್ಬುತಿದೆ

ವಿರಹದ ಅಲೆಯು ಧುಮ್ಮಿಕ್ಕಿದೆ ಕಡಲು
ನಿನ್ನ ನೆನಪಿನಲಿ ಸೋರಗುತಿದೆ ಒಡಲು
ಕಾಡುವುವು ಜೊತೆ ಕಳೆದ ನೆನಪುಗಳು
ಒಲವುಕ್ಕುವ ನಿನ್ನ ಪ್ರೇಮದ ಫಸಲು
ಹಸಿರಿನ ಪೊಟರಿನಲಿ ನುಲಿಯುತಿದೆ ಕಘಗಾನ
'ನಲ್ಲೆ ನೀ ಇಲ್ಲದೆ ಭಿಮ್ಮೆನ್ನುತಿದೆ ರಮ್ಮೂಧ್ಯಾನ'

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

21 Dec 2016, 06:03 pm

ಪ್ರೀತಿ

ಆಸೆಗಳ ಸರಮಾಲೆ
ಕನಸುಗಳ ಸರೆಮನೆ
ಭಾವನೆಗಳ ಭಲೆ
ಮನಸ್ಸುಗಳ ಸೆಲೆ
ಹೃದಯಗಳ ಸಂಗಮ

✍ರಾಜು ಹಗ್ಗದ✍

- ರಾಜು ಹಗ್ಗದ

21 Dec 2016, 05:35 pm

ಕುಸುಮಬಾಲೆ ..

ಕೈಗೆಟುಕಿದ ಮರೀಚಿಕೆ
ಕೈಹಿಡಿದ ಮಾಯಾ ಜಿಂಕೆ..
ಮನದಾಳದ ಆಸೆ
ಮನದೊಳಗಿನ ಒತ್ತಾಸೆ ..
ಹೊಳಪು ಕಣ್ಣಂಚಿಗೆ
ಬೆಳಕು ಕಣ್ಣೊಳಗೆ ...
ಗಗನ ಕುಸುಮವೆ
ಗಿಡದ ಹೂವಾಗಿ ನಗುತಿರುವೆ..
ಎಲ್ಲವೂ ನೀನೇ ಆಗಿಹೆ
ನೀಡಲೇನು ನಿನಗೆ ಎಂದೆ ..
ನನದೊಂದು ಕೋರಿಕೆ
ಬರೆದು ಹಾಡು ಕವಿತೆ
ಮನವಿಟ್ಟು ಕೇಳುವ ಬಯಕೆ
ಎಂದಳು ಕುಸುಮಬಾಲೆ ...

---ಭಾರತಿ

- Bharavi

21 Dec 2016, 02:57 pm

ಶೂನ್ಯ

ಶೂನ್ಯದ ಸುತ್ತ ಸುತ್ತಬಾರದು ಮನಸ್ಸು
ಸುತ್ತಿದರೆ,! ಶೂನ್ಯದಿಂದಲೆ ಸಂಪದಿಸಬೇಕು
ಹೊಸತೊಂದರ ಸೃಷ್ಟಿಗೆ....

- ಈಶ

21 Dec 2016, 02:53 pm

ಅಷ್ಟೇ

ಪದೆ ಪದೆ ಕಾಡುತ್ತಿರುವುದು
ನೀನಲ್ಲ,ನಿನ್ನ ಪ್ರೀತಿ ಅಲ್ಲವೇ ಅಲ್ಲ
ನೀ ನುಣುಚಿಕೊಂಡು ಹೋದ ರೀತಿ ಅಷ್ಟೇ

- prajna

21 Dec 2016, 02:48 pm

ಆ ರಾತ್ರಿ

ನನ್ನ ನೀ ಬಿಟ್ಟು ಹೋದ ಆ ರಾತ್ರಿ
ಚೂರಾದ ಹೃದಯವನು
ಎಲ್ಲಿ ಬಚ್ಚಿಡುವುದು ತಿಳಿಯದೆ
ಕಣ್ಣ ಚೀಲದಡಿಗೆ ಅಡಗಿಸಿಟ್ಟೆ

- prajna

21 Dec 2016, 12:44 pm