ದೂರಾಗಿರುವೆ ನೀನು ಕಾರಣವೇನು,
ದೂರಗಲು ಕಾರಣ ನೀನಾ ನಾನಾ ನಿಂತಿಲ್ಲ ಜಿಜ್ಞಾಸೆ ಇನ್ನೂ,
ಕ್ಷಮಿಸು ತಪ್ಪಿದ್ದರೆ, ತಪ್ಪಿದ್ದು ದೂರಾಗಿದ್ದರೆ,
ನನಗೂ ತಿಳಿದಿದೆ ನಿನಗೂ ನಿನ್ನದೇ ಮನಸ್ಸಿದೆ, ಬದುಕಿದೆ, ಸ್ವಂತಿಕೆಯಿದೆ,
ಆದರೂ ಸ್ವಾರ್ಥ, ನೀನೆಂದು ನನ್ನ ತೊರೆಯಾಲಾರೆ ಎಂಬ ನಂಬಿಕೆಯ ಸಲುಗೆ,
ತಿಳಿಯೆನು ನಾ ದೂರಾಗಿ ಹೇಗಿರುವೆ ನೀನು,
ಅಳುತಿದೆ ಮನಸ್ಸು ಒಪ್ಪದೇ ದೂರಾಗಿರುವೆ ನೀನು ಎಂದು,
ಕಾಯುತಿದೆ ಕನಸು, ನೀ ಹಿಂದಿರುಗವೆ ಇರಲಾರೆ ನನ್ನನಗಲಿ ಎಂದು,
ತೋಚದೆ ಸೋತಿರುವೆ ತಿಳಿಸುವೆಯ ನಿಜ ನೀನು ಏನೆಂದು,
ಬೇಕಿಲ್ಲ ನನಗೆ ನನ್ನದೇ ಜಿಜ್ಞಾಸೆ,
ತೋರಿಸುವೆಯ ದಾರಿ ನಾನು ನಿನ್ನ ವಿಶ್ವಾಸಿ,
ಬರಲೇ ಬೇಕೆಂದೆನಿಲ್ಲ ಆದರೂ ಕಾಯುವೆ ನಿನ್ನ ದಾರಿ,
ನನ್ನ ಅರ್ಥಯಿಸಿ ಹಿಂದಿರುಗಿದರೇ ನಾ ನಿನಗೆ ಆಭಾರಿ,
ಏನಾದರೂ ಕೊನೆಯಲ್ಲಿ ಒಂದೇ ಹಾರೈಕೆ ಹರಕೆ ನಿನ್ನ ನಗು ಸಂತೋಷ ಎಂದೆಂದೂ ಬಾಡದಿರಲಿ,
ಆದರೂ ಬಂದು ಬಿಡು ಕೊನೆಯ ಬಾರಿ, ಕಾಯಲಾರೆ ನಿನ್ನನಗಲಿ ನಿನ್ನ ದಾರಿ
ಹೊತ್ತು ಮೂಡುವ ಮೊದಲೇ... ಎದ್ದು
ನೇಗಿಲನ್ನು ಹೆಗಲಿಗೇರಿಸಿಕೊಡು
ಕಟ್ಟಿರುವ ಏರನ್ನು ಬಿಚ್ಚಿ ಹಿಡಿದು ನಡೆದು
ಭೂಮಾತೆಯ ಸೇವೆ ಮಾಡಲು ಹೊರಟಿರುವವನನ್ನು,
ಕಾದು ಕುಳಿತಿರುವ ಜಗದೊಡೆಯನಾದ
ಸೂಯ೯ದೇವನ,
ಜಗಬೆಳಗುವ ಬೆಳಕಿನ ಕಿರಣವು
ಮಣ್ಣು ಮುಟ್ಟುವ ಮೊದಲು ಎದೆಯೊಡ್ಡಿ
ತನ್ನ ಮುಖವನ್ನು ಬೆಳಗಿಸಿಕೊಳ್ಳುವವನು
ರೈತ, ಜಗತ್ತಿಗೇ ........ ಅನ್ನದಾತ.
ಬೆಳೆ ಎಂಬ ಕಲೆಯನ್ನು ಉತ್ತಿ... ಬಿತ್ತಿ...
ಒಕ್ಕಲುಮಾಡಿ ಸೃಷ್ಟಿಸುವ ಜಗತ್ತಿನ
ಮೊದಲ ನಿಜವಾದ ಕಲಾವಿದ
ನಮ್ಮ ರೈತ, ಜಗತ್ತಿಗೇ .....
ಅನ್ನದಾತ.