Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

‌‌‌‍‍ಅನುಭವ

ಮುದ್ದಾಡುವಂತಹ ಮನಸ್ಸು
ಕದ್ದುಸೇರುವಂತಹ ವಯಸ್ಸು
ಈ ಸಂಭ್ರಮದ ದಿನವು
ಅನಂದದ ಅನುಭವವು
ನೋಡಾಲಾರಂಭಿಸಿದೆ ನೀನ್ನ ಮುಖವು
ತುಂಬಿ ತುಲಾಕಡುತಿತ್ತು ನೀನ್ನ ಒಲವು

ಅದರಿಂದ್ದ ಬವುದಿನಗಳ ನಂತರ ಒಂದು ಮಗುವು


ಧಮ೯

- Dharma

25 Dec 2016, 10:01 am

ಕನ್ನಡ ನಾಡು

ಹೋದರೆ ಹೋಗಲಿ ಯನ್ನ ಜೀವ
ಕನ್ನಡನಾಡಿನ ಮಣ್ಣೀನಲೆ ಯನ್ನ ದೇಹ

ಎಲ್ಲಿಯು ಇಲ್ಲ ಇಂತಹ ನಾಡು
ಇದ್ದರೆ ಆದೇ ಯನ್ನ ಕರುನಾಡು

ಹಸಿದು ಬಂದವರಿಗೆ ಅನ್ನದಾತೆ
ದನೀದು ಬಂದವರಿಗೆ ಗಂಗೇಮಾತೆ
ಪ್ರೀತಿ ವಾತ್ಸಲ್ಯಹ ತೋರವವರಿಗೆ ತಾಯಿಮಮತೆ

ಇಲ್ಲಿದೆ ಎಲ್ಲೋ ಇಲದ ಸೌಂದರ್ಯ
ಈ ನಾಡಿನ ಸಂಸ್ಕೃತಿ ಮಾದುರ್ಯ

Dharma

- Dharma

25 Dec 2016, 09:37 am

ಸ್ನೇಹಾಂಬರ...

ಮಂಜಿನಲಿ ಮಿಂದ
ಶ್ವೇತಾಂಬರವೆ...

ಸ್ಫಟಿಕ ಮನದ
ನೀಲಾಂಬರವೇ..

ಮುಗ್ಧ ನಗೆಯ
ಕನಕಾಂಬರವೇ..

ಭಾವ ಝರಿಯ
ಪೀತಾಂಬರವೇ..

ನನ್ನಕ್ಕರೆಯ
ಸ್ನೇಹಾಂಬರವೇ..

ಮರೆವಿನ ಸುಳಿಯಲಿ ಸಿಲುಕಿ
ಮರೆತೂ ಮರೆಯದ
ಅನುಬಂಧವು ನೀ...

ಮರೆತು ಮರೆತು
ನೆನಪಾಗುವ ನಲ್ಮೆಯ
ಭಾವಬಿಂದು ನೀ...

- Indushekar Chinivar

25 Dec 2016, 08:53 am

ಸರ್ವಂತರ್ಯಾಮಿ

ನರಮಾನವ ನೀನಾದೆ ನರ ಜನ್ಮವ ನೀ ತಳೆದೆ
ನರಕುಲ ಲೋಕಕೆ ನಾಕಲೋಕದ ನಗಾರಿಯಾದೆ
ನರಪಾಲನ ಶಿಶುವಾದೆ ನರಹರಿಯ ರೂಪವಾದೆ
ನಾನೆನ್ನುವ ನರಜಂತುವಿಗೆ ನರಕವ ತೋರಿದೆ
ನಿನ್ನನಾಮವ ನೆನೆಯುವ ನರನಿಗೆ ಮುಕ್ತಿಯ ನೀಡಿದೆ
ಭಕ್ತಿಯ ರೂಪವಾದೆ ಶಕ್ತಿಯ ತಿಲಕವಾದೆ,
ಸಪ್ತ ಋಷಿಗಳ ಸ್ವರೂಪನಾದೆ ಆದಿ ಅಂತ್ಯವಿಲ್ಲದ ಆಕಾರವಾದೆ ,
ಅಗ್ನಿ ಲೋಕದ ತಾಪವಾದೆ ಚಂದ್ರಲೋಕದ ಶೀತಲ ವಾದೆ ,ಮೃತ್ಯುಲೋಕಕೆ ಮೃತ್ಯುಂಜಯನಾದೆ ಸ್ವರ್ಗಲೋಕದ ಕಾಮಧೇನು ಪುಷ್ಪ ಪಾರಿಜಾತವಾದೆ,
ಸಪ್ತಲೋಕಗಳ ಸೂತ್ರಧಾರನಾದೆ ಅಷ್ಟದಿಕ್ಕುಗಳ ದಿಕ್ಪಾಲಕನಾದೆ,
ಸಹಸ್ರಬಾಹುಗಳ ಶಂಖ,ಚಕ್ರ ಗದಾಧಾರಿಯಾದೆ
ರುದ್ರತಾಂಡವದ ರುದ್ರಾಂಶವು ನೀನಾದೆ,
ಕರ್ಮನಿಷ್ಟನಿಗೆ ಕಾರುಣ್ಯದ ಸಿಂಧುವಾದೆ
ಯೋಗಿ ಬ್ರಹ್ಮರಿಗೆ ಯೋಗಾತ್ಮನಾದೆ,
ಸತ್ಯ ಧರ್ಮ ಪರಿಪಾಲಕನಿಗೆ ಧರ್ಮನಾಯಕನಾದೆ
ಕುಟಿಲ ಕ್ಷುದ್ರರಿಗೆ ಕಾಲಭಯಂಕರನಾದೆ,
ಸಾತ್ವಿಕ ಜೀವಿಗಳ ಸಚ್ಚಿದಾನಂದನಾದೆ
ಸರ್ವ ಬಲ್ಲವನಾಗಿ ಸರ್ವಜ್ಞನಾದೆ...

- Irayya Mathad

25 Dec 2016, 01:17 am

ಕಾಯುತಿರುವೆ ನಿನ್ನಯ ದಾರಿ

ದೂರಾಗಿರುವೆ ನೀನು ಕಾರಣವೇನು,
ದೂರಗಲು ಕಾರಣ ನೀನಾ ನಾನಾ ನಿಂತಿಲ್ಲ ಜಿಜ್ಞಾಸೆ ಇನ್ನೂ,
ಕ್ಷಮಿಸು ತಪ್ಪಿದ್ದರೆ, ತಪ್ಪಿದ್ದು ದೂರಾಗಿದ್ದರೆ,
ನನಗೂ ತಿಳಿದಿದೆ ನಿನಗೂ ನಿನ್ನದೇ ಮನಸ್ಸಿದೆ, ಬದುಕಿದೆ, ಸ್ವಂತಿಕೆಯಿದೆ,
ಆದರೂ ಸ್ವಾರ್ಥ, ನೀನೆಂದು ನನ್ನ ತೊರೆಯಾಲಾರೆ ಎಂಬ ನಂಬಿಕೆಯ ಸಲುಗೆ,
ತಿಳಿಯೆನು ನಾ ದೂರಾಗಿ ಹೇಗಿರುವೆ ನೀನು,
ಅಳುತಿದೆ ಮನಸ್ಸು ಒಪ್ಪದೇ ದೂರಾಗಿರುವೆ ನೀನು ಎಂದು,
ಕಾಯುತಿದೆ ಕನಸು, ನೀ ಹಿಂದಿರುಗವೆ ಇರಲಾರೆ ನನ್ನನಗಲಿ ಎಂದು,
ತೋಚದೆ ಸೋತಿರುವೆ ತಿಳಿಸುವೆಯ ನಿಜ ನೀನು ಏನೆಂದು,
ಬೇಕಿಲ್ಲ ನನಗೆ ನನ್ನದೇ ಜಿಜ್ಞಾಸೆ,
ತೋರಿಸುವೆಯ ದಾರಿ ನಾನು ನಿನ್ನ ವಿಶ್ವಾಸಿ,
ಬರಲೇ ಬೇಕೆಂದೆನಿಲ್ಲ ಆದರೂ ಕಾಯುವೆ ನಿನ್ನ ದಾರಿ,
ನನ್ನ ಅರ್ಥಯಿಸಿ ಹಿಂದಿರುಗಿದರೇ ನಾ ನಿನಗೆ ಆಭಾರಿ,
ಏನಾದರೂ ಕೊನೆಯಲ್ಲಿ ಒಂದೇ ಹಾರೈಕೆ ಹರಕೆ ನಿನ್ನ ನಗು ಸಂತೋಷ ಎಂದೆಂದೂ ಬಾಡದಿರಲಿ,
ಆದರೂ ಬಂದು ಬಿಡು ಕೊನೆಯ ಬಾರಿ, ಕಾಯಲಾರೆ ನಿನ್ನನಗಲಿ ನಿನ್ನ ದಾರಿ

- ಶ್ರೀಕಾವ್ಯ

24 Dec 2016, 10:41 pm

ನೆನಪು

ಹೊಂಗನಸಿನ ಸವಿ ಸುಖದ ಹಾಗೆ
ಹೊಂಬಿಸಿಲಿಗೆ ಮೊಗ ಅರಳಿ
ನಗುತಿರಲಿ ಮುಂಜಾವಿಗೆ ತಂಗಾಳಿ
ನೆನಪ ತಂದು ಬೆಳಗಬೇಕಲ್ಲವೆ.

- kasturi pattar

24 Dec 2016, 07:51 pm

ಮನಸು

ನಿನ್ನ ಕಾಣದೆ ನೊಂದು
ಬೇಯುವುದು ನನ್ನ ಮನಸು
ಅದನು ಅರಿತೂ ಕೂಡ ನೀನು
ಒಡೆಯುವುದೇಕೋ ಕನಸು

ಅಳಿಸುವುದರಲ್ಲಿ ನಿನಗೇನೋ
ಸಿಗುವುದು ಸಂತಸ
ಅದಕ್ಕಾಗೇ ನಾ ತೋರುವೆ
ನಿನ್ನಲ್ಲಿ ಮುನಿಸು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

24 Dec 2016, 03:46 pm

ನೀನು

ಬದುಕಿರುವಸ್ಟು ದಿನ
ತಾನು ತಮ್ಮದು ಎಂಬ ಜನ!!
ಸತ್ತ ಮೇಲೆ ಆಗುವರು
ಯಾರಿಗೂ ಬೇಡದ ಹೆಣ!!

ಬದುಕಿರುವಾಗ ಆದೆ
ಸಾವಿರಾರು ಕೋಟಿಗೆ ಅಧಿಪತಿ!!
ಸತ್ತ ಮೇಲೆ ಕೊಂಡು ಹೋಗಲು
ನಿನ್ನಲ್ಲಿ ಉಳಿಯುವುದಾದರೂ ಏನು!!

ಕೋಟಿ ಗಳಿಸಿ ಕೋಟೆ ಕಟ್ಟಿದರೂ
ಅದು ನಿನ್ನ ಪಾಲಿಗಲ್ಲ!!
ನಿನ್ನ ಪಾಲಿಗೆ ದೊರೆಯುವುದು ಒಂದೇ
ಭೂತಾಯಿ ಮಡಿಲಲ್ಲಿ ಆರಡಿ ಮೂರಡಿ!!

ಕಾಮ ಕ್ರೋಧ ಲೋಭ ಮೋಹ
ಮದ ಮಾತ್ಸರ್ಯದಲ್ಲ ನೀನು!!
ಮೈ ಮರೆತು ಮಾಡಿದ್ದು ಏನು
ಯಾವುದೂ ಉಳಿದಿಲ್ಲ ಇನ್ನು!!

ಕಣ್ಣೀರ ಹರಿಸಿ ಹೋಗುವರೂ ಎಲ್ಲ
ನಿನ್ನೊಂದಿಗೆ ಬರಲು ಯಾರು ಇಲ್ಲ!!
ಜಡವಾಗಿ ಬಿದ್ದಿರುವೆ ನೀನು
ಸಿರಿ ಸಂಪತ್ತು ನಿನಗಿದ್ದರೇನು!!

ಬರುವಾಗ ಏನೂ ಇಲ್ಲ
ಹೋಗುವಾಗಲೂ ಏನೂ ಇಲ್ಲ!!
ಬದುಕಿರುವಸ್ಟು ದಿನ ತಾನು ತನ್ನದು
ಎಂಬ ಸ್ವಾರ್ಥದಿಂದೇನು ಫಲ!!

ಹುಟ್ಟಿದ ಮೇಲೆ ಸಾವು ನಿಶ್ಚಿತ
ಎಂದು ತಿಳಿದಿದ್ದರೂ ನೀನು!!
ಸ್ವಾರ್ಥಿಯಾಗಿ ಮಾಡಿದ್ದಾದರೂ ಏನು
ಯಾವುದೂ ಉಳಿದಿಲ್ಲ ಇನ್ನು!!

ನಿರ್ಜೀವ ಆಗಿರುವ ಈ ನಿನ್ನ ತನುವೀಗ
ಯಾರಿಗೂ ಬೇಡದ ಒಂದು ಜಡದೇಹ!!
ಸಾಗಲೇಬೇಕು ಮಸಣದ ಕಡೆಗೆ
ಆಗಲೇಬೇಕು ಪಂಚಭೂತದಿ ವಿಲೀನ!!

- ಪಿ.ಜಿ.ಜ್ಯೋತಿ

24 Dec 2016, 12:46 pm

ಅನ್ನದಾತ

ರೈತ ನೀ ಸುರಿಸುತಿಹೆ,
ಬೆವರು ಹನಿ ಮುತ್ತು...
ಅದರಿಂದಲೇನಯ್ಯಾ!
ನಮಗೆ ತುತ್ತು!!

ನಾತಿನ್ನುವೀಯನ್ನದ
ಗುಳಗುಳಿನಲ್ಲೂ,
ಕಂಗೊಳಿಸುತಿದೆ ಮಿತ್ರ...
ನಿನ್ನ ಮೊಹರು!
ಲೆಕ್ಕಿಸದೆ, ನಿನ್ನ ಕೈಗಾದರೂ...ಕೆಸರು,
ನಮ್ಮ ಬಾಯಿಗೆ ಎಂದೂ!
ನೀಡುತಿಹೆ ಮೊಸರು!

ನಿನ್ನ ನಿಸ್ವಾರ್ಥಕ್ಕೆ,ನಿನ್ನ ಜಗದೊಲವಿಗೆ, ಮಾಳ್ಪೆನಯ್ಯಾ! ನಿನಗೆ ನಮನ ನೂರು,
ಅನ್ನದಾತನೆ! ನಿನ್ನ ಬಾಳ ಹಸಿರಾಗಿಡಲಿ,
ಈರೇಳು ಜಗದೊಡೆಯ,ಆ...ದೇವರು!!
*

- ಮಲ್ಲಿಭಾಗವತ್ ಗುಡಿಬಂಡೆ

24 Dec 2016, 12:44 pm

ಜಗತ್ತಿನ ಮೊದಲ ಕಲಾವಿದ

ಹೊತ್ತು ಮೂಡುವ ಮೊದಲೇ... ಎದ್ದು
ನೇಗಿಲನ್ನು ಹೆಗಲಿಗೇರಿಸಿಕೊಡು
ಕಟ್ಟಿರುವ ಏರನ್ನು ಬಿಚ್ಚಿ ಹಿಡಿದು ನಡೆದು
ಭೂಮಾತೆಯ ಸೇವೆ ಮಾಡಲು ಹೊರಟಿರುವವನನ್ನು,
ಕಾದು ಕುಳಿತಿರುವ ಜಗದೊಡೆಯನಾದ
ಸೂಯ೯ದೇವನ,
ಜಗಬೆಳಗುವ ಬೆಳಕಿನ ಕಿರಣವು
ಮಣ್ಣು ಮುಟ್ಟುವ ಮೊದಲು ಎದೆಯೊಡ್ಡಿ
ತನ್ನ ಮುಖವನ್ನು ಬೆಳಗಿಸಿಕೊಳ್ಳುವವನು
ರೈತ, ಜಗತ್ತಿಗೇ ........ ಅನ್ನದಾತ.

ಬೆಳೆ ಎಂಬ ಕಲೆಯನ್ನು ಉತ್ತಿ... ಬಿತ್ತಿ...
ಒಕ್ಕಲುಮಾಡಿ ಸೃಷ್ಟಿಸುವ ಜಗತ್ತಿನ
ಮೊದಲ ನಿಜವಾದ ಕಲಾವಿದ
ನಮ್ಮ ರೈತ, ಜಗತ್ತಿಗೇ .....
ಅನ್ನದಾತ.

- ರಘುವಿಜಯ ಕಸ್ತೂರಿ

24 Dec 2016, 12:44 pm