Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಕನಸು

ಪ್ರೀತಿಯ ಬಲೆಯೊಳಗೆ ನಾನು,
ಇದು ಬದುಕೋ ಬಂಧನವೋ ಅರಿಯೆನು,
ಮನದ ಮನೆಯೊಳಗೇ ನೂರಾರು ಕನಸ ಹೊತ್ತು ತಂದಿಹುದು ಪ್ರೀತಿ,
ಕಾಣುವುದೇ ನಿನಗೆ ಕನಸು ನನಸಾಗುವುದೆಂಬ ನಂಬಿಕೆಯಲಿ ನಾ ಬದುಕುತಿರುವ ರೀತಿ,
ನನ್ನ ಕನಸಿನ ನನಸಿಗೆ ಉತ್ತರವು ನೀನು,
ಬಂದು ನೀನು ಮನದ ಕಗ್ಗಂಟನು ಬಿಡಿಸುವೆಯೇನು.


ತಿಳಿಯೆನು ನಾನು ಮಾಯೆಯು ಪ್ರೀತಿಯೋ ಇಲ್ಲ ನೀ ನನ್ನ ಸೆಳೆದ ರೀತಿಯೋ,
ಈಗ ನಿನ್ನ ಪ್ರೀತಿಯ ಬಾಹುಬಂಧನದಲ್ಲಿ ನಾನು,
ನನ್ನ ನೋವು ನಲಿವುಗಳಿಗೆ ಸಹಪಾಠಿ ನೀನು,
ನಾ ತೋರುವ ಒಲುಮೆಯನ್ನು ಸ್ವೀಕರಿಸುವೆಯೇನು,
ನನ್ನ ಕನಸುಗಳ ದಾರಿಗೆ ಜೊತೆಯೂ ನೀನು,
ನನಸುಗಳ ಹಾದಿಗೆ ದೀವಟಿಗೆಯ ಬೆಳಕನ್ನು ತೋರಲು ಬರುವೆಯೇನು.


ನೀ ನಗುತಾ ಬದುಕಿರಲು ನನ್ನೊಂದಿಗೆ, ಕಷ್ಟ ದುಃಖಗಳಿಗೆ ನಾ ಎದುರುವೆನೇನು,
ನಿನ್ನ ನಂಬುಗೆ ಮಮತೆಯ ಪ್ರೀತಿಯ ಬಿಟ್ಟು ಬೇರೇನೂ ಕೇಳೆನು ನಾನು, ನೀ ಕೊಡುವೆಯೇನು,
ನಿನ್ನ ಸೋಲು ಗೆಲುವುಗಳಿಗೆ ನಿನ್ನಡಗೂಡಿದ ಪಯಣಿಯು ನಾನು,
ನನ್ನ ಏಳು ಬೀಳುಗಳ ಜೊತೆ ಪ್ರೀತಿಯಿಂದ ಸೇರುವೆಯ ನೀನು,

ಹಿತವಾದ ಪ್ರೀತಿಯಲಿ, ಒಬ್ಬರನ್ನೊಬ್ಬರು ಸೋಲಿಸದ ರೀತಿಯಲಿ, ಜಗವ ನೋಡುತ ಜೊತೆಯಲಿ, ಸಿಹಿಗನಸ ಹೆಣೆಯುತ ಬದುಕಲಿ, ನಗುತಿರಲು ಜೊತೆಯಲಿ ಸೋಲಿಹುದೆ ನಮಗೆ ಜಗದಲಿ!
ಕೇಳುತಿಹುದು ಮನಸು, ಅರಸುತಿಹುದು ಕನಸು,
ಬೇಗ ಬಂದು ಸಂಥೈಸುವೆಯ ಇದು ಆಗುವುದೆಂದು ನನಸು.

- ಶ್ರೀಕಾವ್ಯ

22 Dec 2016, 10:16 pm

ಹನಿ..

ತಾರಾಮಂಜರಿ ಉರುಳಿ
ನಿನ್ನೀ ಜುಮುಕಿಯ
ಅಲಂಕರಿಸಿದ ಇರುಳು...

- Indushekar Chinivar

22 Dec 2016, 09:17 pm

ಜೀವನ

ಕಳೆದು ಹೋಗುವುದು ಬಾಲ್ಯ
ಕಳೆದು ಹೋಗುವುದು ಯೌವ್ವನ
ಕಳೆದು ಹೋಗುವುದು ಮುಪ್ಪು
ಊಳಿಯುವುದೊಂದೆ ನೆನಪು
ಉಳಿಯುವುದೊಂದೆ ಅನುಭವ
ಉಳಿಯುವುದೊಂದೆ ಹೆಸರು
ಸಾಗುತಲಿರಲಿ ಜೀವನ

ಜೀವನದಲ್ಲಿ ಆಗುವುದು ಅರುಣೋದಯ

- ಕನ್ನಡಿಗ ಅರುಣ್

22 Dec 2016, 09:10 pm

ಹಸಿವನ್ನು ವರ್ಣಿಸುವ ನಾನು

* ಹಸಿವನ್ನು ವರ್ಣಿಸುವ ನಾನು *

ಹಸಿವನ್ನು ವರ್ಣಿಸುವ ನಾನು!
ಓಲೆಯ ಬೆಂಕಿ ಹಚ್ಚಲಿಲ್ಲ
ಮಾಷಣದಲ್ಲಿ ಬೆಂಕಿ ಇಟ್ಟೆ
ಮಡಿಕೆಯಲಿ ಬೂದಿ ಕೊಟ್ಟೆ.

ನಿರ್ಗತಿಕರ ಹಾಡು ಹೇಳುವ ನಾನು!
ನೆರಳಿನ ಪಾಯ ಹಾಕಲಿಲ್ಲ
ವರುಣನಾ ನೆತ್ತಿ ಮೇಲೆ ಬಿಟ್ಟೆ
ಕರುಳಿಗೆ ಕೊಚ್ಚೆ ನೀರ ಕೊಟ್ಟೆ.

ತತ್ವ ಸಿದ್ಧಾಂತ ಬೋಧಿಸುವ ನಾನು!
ಸಿದ್ಧಾಂತದ ಮಂಟಪ ಕಟ್ಟಲಿಲ್ಲ
ಪುಸ್ತಕದ ಅಳೆ ಖಾಲಿ ಬಿಟ್ಟೆ
ಹತ್ತು ಬೆರಳ ಅತಂತ್ರ ಕಾಲು ಕೊಟ್ಟೆ.

ಹೆಣ್ಣನ್ನು ಪೂಜಿಸುವ ನಾನು!
ಹೆತ್ತವಳ ಜಗನ್ಮತೆಯಂತೆ ಕಾಣಲಿಲ್ಲ
ಕಾಮದ ಕಣ್ಣಿನ ಬಾಣ ಬಿಟ್ಟೆ
ಶೋಷಣೆಯ ಸೆರಮನೆ ಕಟ್ಟಿ ಇಟ್ಟೆ.

ಎಲ್ಲವು ನನ್ನದಲ್ಲ ಎಂದು ಹೇಳುವ ನಾನು
ಮನೆ ಮಠ ಮಣ್ಣ ಬಿಡಲಿಲ್ಲ
ಭೋಗದ ಬಾಗಿಲ ಬಡಿಗಿಯಾಗಿ ಬಿಟ್ಟೆ
ನಾನು ನನ್ನದೆಂಬ ಬಾವಿಯ ತೆಗೆದುಕೊಂಡೆ....

-ಈಶ, ಎಂ.ಸಿ.ಹಳ್ಳಿ

- ಈಶ

22 Dec 2016, 09:09 pm

ನನ್ನದೇಯ ಭಾವ ವೀಣೆ...

ನನ್ನದೇಯ ಭಾವವೀಣೆ
ಹೃದಯಾಂತರದಲ್ಲಿ ಮೀಟಿದೆ.
ನನ್ನವಳ ರೂಪರಾಶಿ ಮನದಲ್ಲಿ
ಮೂಡಿದೆ.
ಆ ದೇವ ನೀಡಿದ ಪ್ರೇಮ ಕಾಣಿಕೆ
ನೀನು. ಅಳಿಸಲಾಗದ ಮೂರ್ತಿ
ಚಿತ್ರ.ಕಳೇದು ಹೋಗದಿರು ಇನ್ನಾರಿಗೂ
ಮನವೇ ನನ್ನವಳ ಹೊರತು
ಇನ್ನಾರ್ ಹತ್ರ
*ಗೌಡ್ರುಸರ್ಕಾರ್*

- ಗೌಡ್ರುಸರ್ಕಾರ್

22 Dec 2016, 07:32 pm

ಬಾಲ್ಯದ ನೆನಪು?

ಅಂದು ಬಳಪ ಕೊಡಿಸಲಿಲ್ಲ ಎಂದು ಅತ್ತ ನೆನಪು:
ಇಂದು ಮೊಬೈಲ್ ಕೊಡಿಸಲಿಲ್ಲ ಎಂದು ರೇಗಾಡಿದ ನೆನಪು!

ಚಿಕ್ಕಂದಿನಲ್ಲಿ ಸ್ಕೂಲಿಗೆ ಹೋಗಲು ಹೆದರಿ ಅಮ್ಮನ ಸೀರೆಯ ಕೊಂಗು ಸುತ್ತಿಕೊಂಡ ನೆನಪು,
ಹದಿಹರೆಯದಲ್ಲಿ ಅಮ್ಮ ಕಾಲೇಜಿಗೆ ಬಂದಾಗ ಮುಜುಗರ ಪಟ್ಟು ಅಮ್ಮನನ್ನು ಕಳುಹಿಸಿದ ನೆನಪು.

ಹೊಸ ವರುಷಕೆ ಹೊಸ ಬಟ್ಟೆಯ ತೊಟ್ಟು ಅಪ್ಪನ ಹಿಂದೆ ಗಾಡಿ ಏರಿ ಹೊರಟ ನೆನಪು;
ಇಂದು,ಹೊಸ ವರುಷಕೆ ಹೊಸ ಬಟ್ಟೆಯ ತೊಟ್ಟು
ಗಾಡಿ ಏರಲು ಹಿಂದು-ಮುಂದು ನೋಡಿದ ನೆನಪು.

ಸಿಹಿಯಾದ ಬಾಲ್ಯದ ಬೆಳದಿಂಗಳ ನೆನಪು,
ಯೌವ್ವನದ ಅಹಂಕಾರದ ಹರುಪು.

ಸಿಹಿಯಾದ ಬಾಲ್ಯದ

- ವೇಣು ಆರ್ ಚಿನ್ನದೂರು

22 Dec 2016, 06:02 pm

ಕೊನೆಯ ಸಂದೇಶ

ನೋಡುತ ನಿನ್ನಯ ಕೊನೆಯ ಸಂದೇಶ ಸುಮ್ಮನೆ ನಾನು ಕುಳಿತಿರುವೆ
ಮುಖದೊಳಗಿದ್ದರು ಮಂದಹಾಸವು ಮನದೊಳಗೇ ನಾನಳುತಿರುವೆ...
ಪ್ರೀತಿ ಪಯಣದ ಕೊನೆಯ ನಿಲ್ದಾಣ ನೀನೆ ಇಂದು ತೋರಿರುವೆ
ನೋವಾದರು ತುಸು ಹೆಚ್ಚೇ ಪ್ರೀತಿಸಿ ನೆನಪಲೆ ನಿನ್ನಯ ಜೊತೆಗಿರುವೆ...

ಹೃದಯದೂರಿನಾ ಗೌಡತಿ ನೀನು ಎಲ್ಲಾ ನಿಂದೆ ನಿರ್ಧಾರ
ಕಣ್ಣ ನೀರಿಗೂ ಕ್ಷಾಮ ಬಂದಿದೆ ಬಂದು ನೀ ನೀಡು ಪರಿಹಾರ...
ಕೊನೆಯ ಬಾರಿ ನಾ ಕೇಳುವೆ ನಿನ್ನ ಮಾಡುವೆಯಾ ಒಂದುಪಕಾರ
ಸಾಯಿಸಿ ನನ್ನನು ದೂರ ಹೋಗು ನೀ
ಅದುವೆ ಬಹುದೊಡ್ಡ ಸಹಕಾರ...

ಕೈ ಮುಗಿದು ನಾ ಬೇಡುವೆ ಹೇಳು ನಾ ಮಾಡಿದ ಆ ತಪ್ಪೇನು
ಒಮ್ಮೆ ಕೇಳಿಕೊ ಅಂತರಾತ್ಮವ
ನೀ ಮಾಡಿದ್ದು ಸರಿಯೇನು...?
ನಿನ್ನಾಣೆಗು ನಿಜ ಆರಾಧಿಸಿದೆ ದೇವತೆಯಂತೆ ನಾ ನಿನ್ನ
ಕಂಡು ಕಾಣದ ಹಾಗೆ ಕಾಲಲಿ ಒದ್ದು ಹೋದೆಯಾ ನೀ ನನ್ನ...

ನನಗೂ ಕೂಡ ಬರುವುದು ಕೋಪ ನಿನ್ನ ನೆನೆದಾಗ ಒಮ್ಮೊಮ್ಮೆ
ಸುಮ್ಮನಾಗುವೆ ಮನಸಲೆ ನೆನೆದು ನಿನ್ನ ನಸುನಗುವ ಮತ್ತೊಮ್ಮೆ...
ಕ್ಷಮಿಸು ಎನ್ನನು ತಪ್ಪಾಗಿದ್ದರೆ ಒಮ್ಮೆ ನಾಲಿಗೆಯ ತೊದಲಿಂದ
ಸಮ್ಮತಿ ಕೊಟ್ಟರೆ ಮರಳಿ ಪ್ರೀತಿಸುವೆ ಮಗದೊಮ್ಮೆ ನಿನ ಮೊದಲಿಂದ...

- ಜೀವಿ

22 Dec 2016, 05:56 pm

ಮಣ್ಣಲ್ಲಿ ಮಣ್ಣಾಗುವ ಮುನ್ನ..

ಮರದಲ್ಲಿ ಹುಟ್ಟಿ ಬೆಳೆದ ಹಣ್ಣನ್ನು
ಮರವೇ ಸೇವಿಸಿದ್ದರೆ?
ಮೋಡದ ಉದರದಲಿ ಹುಟ್ಟಿದ ಮಳೆ ನೀರನ್ನು
ಮೋಡವೇ ಕುಡಿದಿದ್ದರೆ?
ಹಾಲು ಕೊಡುವ ಕಲ್ಪೃಕ್ಷ ತನ್ನ ಹಾಲನ್ನು
ತಾನೇ ಕುಡಿದಿದ್ದರೆ?
ಫಸಲು ಕೊಡುವ ನೆಲ ಫಸಲನ್ನು
ತಾನೇ ಉಂಡಿದ್ದರೆ?
ಗಾಳಿಯನು ಹುಟ್ಟಿಸಿದ ಗಿಡ ಗಾಳಿಯನ್ನು
ತಾನೇ ಸೇವಿಸಿದ್ದರೇ?
ಮಣ್ಣಲ್ಲಿ ಮಣ್ಣಾಗುವ ಮುನ್ನ
ಇದನ್ನರಿತು ನನ್ನದು ನನ್ನಿಂದ ಎಂಬ ಜಂಬ ಬೇಡೆಂದ
ಬಸವ ಪ್ರಿಯ ರೇವಣಸಿದ್ದ.

ರಚಣೆ: ರೇನಣಸಿದ್ದ ಗೌಡರ
ರಬಕವಿ-೫೮೭೩೧೪
ಮೊ:೯೦೦೮೦೬೦೯೧೮

- Revanasidda Goudar

22 Dec 2016, 04:49 pm

ಜೀವನದ ಲೆಕ್ಕಾಚಾರ

ಗುಣದಿಂದ ಗುಣಿಸಿ
ಭಾವನೆಯಿಂದ ಭಾಗಿಸಿ
ರ್ದುನಡತೆಯನ್ನು ಕಳೆದು
ಧರ್ಮವನ್ನು ಕೂಡಿದರೆ
ಸಿಗುವುದು ವ್ಯಕ್ತಿಯ ಲೆಕ್ಕ

ಕಳೆಯಲು ಕಷ್ಟವಾದರೆ ಭಾಗಿಸಿ
ಕೂಡಲು ಸಂಕಷ್ಟವಾದರೆ ಗುಣಿಸಿ
ಭಾಗಿಸಿ, ಗುಣಿಸಿಕೊಂಡರೆ
ಜೀವನದ ಲೆಕ್ಕ ಪಕ್ಕಾ

- ವೆಂಕಟೇಶ್ ದೈಶಿ ವೇಮಗಲ್

22 Dec 2016, 03:07 pm

"ಶ್ರೀಲಕ್ಷ್ಮೀ"

ಲಕುಮಿ ನೀನು ಚಂಚಲೆ
ಯಾರಿಗೂ ತಿಳಿಯಲಿಲ್ಲ
ನಿನ್ನ ವಿಚಿತ್ರ ಲೀಲೆ
ವ್ಯಾಮೋಹ ವಿಪರೀತ
ಸರ್ವರಿಗೂ ನಿನ್ನಮ್ಯಾಲೆ!
ಸೋಮಾರಿಗಳಿಗಿಲ್ಲ ನಿನ್ನ ಪ್ರೀತಿ
‌ಶ್ರಮಿಕರಿಗೆ ನೀನೆ ಒಡತಿ
‌‌ ಭಕ್ತಜನಗಳಿಗೆ ನೀನು ದೇವತೆ
ನಿನ್ನಲ್ಲಿವುದು ಸರ್ವದೇವತೆಗಳ
‌‌‌ ‌ ‌ ‌ ‌‌ಶಕ್ತಿ!
ನೀನಿದ್ದರೆ ಮನೆಯಲ್ಲಿ
ಸಂತಸದ ಚಿಲುಮೆ
ಮನೆಯ ಮೂಲೆ-ಮೂಲೆಯಲ್ಲಿ
ಸಂಭ್ರಮದ ಸೆಲೆ
ಮನೆಯವರ ಮನದಲ್ಲಿ!
ಸಂಪನ್ನರಿಗೆ ನೀನು ಸಂಗಾತಿ
ನಿನ್ನಿಂದಲೆ ಸರ್ವರಿಗೂ ಸಂತೃಪ್ತಿ
ನಿನ್ನವಾಸದಿಂದ ಮನ:ಶಾಂತಿ
ಸಕಲಕಾರ್ಯಕ್ಕೆ ನೀನೆ ಒಡತಿ!
___________________________
*ಬಸವಪ್ರಿಯ*
(ರಾಹುಲ್ ನಿಮ್ಮ ಕೋರಿಕೆ ಗಾಗಿ)

- ಬಲವಂತ ಮೋರಟಗಿ(ಬಸವಪ್ರಿಯ)

22 Dec 2016, 01:58 pm