Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನವು ಆವರಿಸಿರಲು..!!?

ಹೇಳದ ಮಾತೊಂದ
ಗುನುಗಿದೆ ಈ ಹೃದಯ..
ತಪ್ಪಿಯಾದರು ಸಿಗುವೆಯಾ!!

ಬರೆಯದ ಓಲೆಯು
ತಿಳಿಸಲು ಕಾದಿದೆ ಈ ನಯನ..
ಕೋಡದೆಯೇ ಓದುವೇಯಾ!!

ಮೌನವು ಆವರಿಸಿರಲು..!!?

- ಬಾನು ಅಡಿಗಾರ್

19 Dec 2016, 05:22 pm

ನಾನು

ನನ್ನ ನಾ ಅರಿಯುವ ಮುನ್ನ
ಅರ್ಧ ಬದುಕು ಕಳೆದಾಯ್ತು

ಮನದ ಆಸೆ ನವಿಲಾಗಿ ನರ್ತಿಸೋ ಮುನ್ನ
ಸಂಸಾರಕ್ಕೆ ಕಾಲಿಟ್ಟಾಯ್ತು

ಸಂತೋಷವ ಸಂಭ್ರಮಿಸೋ ಮುನ್ನ
ಕರ್ತವ್ಯ ಪಾಲಿಸಿ ಆಯಿತು

ನಾ ಕನಸು ಕಾಣೋ ಮುನ್ನ
ಮಕ್ಕಳ ಆಸೆ ಮುಖ್ಯವಾಯ್ತು

ಮುಗಿಯಿತು ಜೀವನ ಅನ್ನೋ ಮುನ್ನ
ಮನದ ಮೂಲೆಯಲ್ಲಿದ್ದ ನಾನು
ಮತ್ತೆ ಇಣುಕಿ ಕವನ ಬರೆದಾಯ್ತು
ನನ್ನ ನಾ ಅರಿತಾಯ್ತು........
.......‌‌‌
ಕವಿರಾಜ

- kavita Rajesh

19 Dec 2016, 04:51 pm

ನೆನಪು

ಆ ನಿನ್ನ ನೆನಪು
ಮನಕೆ ನೀಡಿತು ತಂಪು
ಮರೆಯದ ಆ ಒಣಪು
ಸುಳಿದಂಗಾಯ್ತು ತಂಗಾಳಿ ತಂಪು!
- ಅಶೋಕ ಜಿ.ಕೆ ( ಶಾಂತಿಪ್ರಿಯ)

- "ಶಾಂತಿಪ್ರಿಯ"

19 Dec 2016, 03:03 pm

ಹೊಸ ವರುಷ

ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ
ಹಲವು ವಸಂತಗಳನ್ನು ದಾಟಿ
ಹಲವು ಋತುಗಳನ್ನು ದಾಟಿ
ಹೊಸ ವರುಷ ವು ಬರುತಿದೆ
ಹೊಸ ಹರುಷವ ತರುತಿದೆ

ಜ್ಞಾನದ ಜ್ಯೋತಿ ಬೆಳಗಲಿ
ಆಜ್ಞಾನದ ಅಂಧಕಾರ ತೋಲಗಲಿ
ಒಡೆದ ಮನಸ್ಸುಗಳು ಒಂದಾಗಲಿ
ಅನೇಕತೆಯಲಿ ಏಕತೆಯು ಮೂಡಲಿ
ಹೊಸ ವರುಷ ವು ಬರುತಿದ
ಹೊಸ ಹರುಷವ ತರುತಿದೆ

ತಾರ್ಕಿಕತೆಯು ಮನೆ ಮಾಡಲಿ
ಮೂಢ ನಂಬಿಕೆಯು ತೊಲ ಗಲಿ
ಬಡತನ ದಾರಿದ್ರ್ಯ ಅಳಿಯಲಿ
ಸಮೃದ್ಧಿ ಸಿರಿವಂತಿಕೆ ಮನೆಮಾಡಲಿ
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ

ಮನುಕುಲದ ಕಷ್ಟಗಳು ದೂರಾಗಲಿ
ಮನೆ-ಮನಗಳಲ್ಲಿ ಶಾಂತಿ ನೆಲೆಸಲಿ
ವಿಶ್ವಾಸಹೋದರತೆಯು ಬೆಳೆಯಲಿ
ಪ್ರೀತಿ ವಿಶ್ವಾಸ ಸರ್ವ ಮನಗಳಲ್ಲಿ ನೆಲೆಸಲಿ
ವಿಶ್ವಶಾಂತಿಯು ಮೂಡಲಿ
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

19 Dec 2016, 02:47 pm

ಭೂತಾಯಿಯ ತೊಳೆವ ಮಳೆಯೇ

ಇಳೆಯ ಕೊಳೆಯ ತೊಳೆಯುತಿರುವ ಮಳೆಯೇ,
ನೀ ಸುರಿಯಲು ಶುಭ್ರವೂ ಆಕಾಶವು,
ಕೊಳೆಯ ತೊಳೆದು ಕಳೆಯ ಪಡೆದು ನಲಿಯುತಿಹುದು ಪ್ರಕೃತಿಯೂ.

ನೋಡಲೋಂದು ಸೊಬಗು ನೀ ಸುರಿದು ತೊಳೆದ ಭೂಗಗನ,
ನೋಡಿ ನಲಿಯುತಿಹುದು ಈ ನನ್ನ ಮನ.

ಸುರಿದು ಮನುವಿನ ತನುವ ತೊಯ್ವ ಮಳೆಯೇ,
ಮನದ ಕೊಳೆಯನು ತೊಳೆಯಲಾರೆಯೆ!?

ರಕ್ತ ಸಂಬಂದಿಗಳೆ ದ್ವೇಷಿಗಳಿಲ್ಲಿ,
ಸ್ನೇಹಿತರೆ ಬೆನ್ನ ಹಿಂದೆ ಇರಿಯುವರಿಲ್ಲಿ,
ಕಂಡವರೇ ಹೀಗಾದರೆ ಕಾಣದವರ ಕಥೆ ಇನ್ನೆಲ್ಲಿ.

ಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಮೋಹಗಳೇ ಮನುಷ್ಯನ ಆಳುತಿರಲು
ನಿಜವೇ ಪ್ರೀತಿ, ಮಮತೆ, ಕರುಣೆಗಳಿಗೆ ಇನ್ನೂ ಜಾಗವಿರಲು ಜಗದಲಿ,

ಮನುಜನೇ ಮನುಜನ ಕೊಂದು ಬದುಕುತಿರಲು,
ಸಾಧ್ಯವೇ "ಬದುಕಿ ಬದುಕಲು ಬಿಡಿ " ಎನ್ನುವ ಮಾನವತವಾದವಿರಲು.

ಮನಸ್ಸೆಂಬುದೇ ಇಲ್ಲದೇ ಬದುಕುವವ ಮನಸಾಕ್ಷಿಗೆಂದಿಗೂ ತಲೆಬಾಗುವುದಿಲ್ಲವೆಂಬುದೂ ನಿಜ.

ಮಳೆಯೇ,
ಈ ಪವಿತ್ರ ಭೂತಾಯಿಯ ತೊಳೆದರೇನು ಬಂತು ಫಲ ,
ಮನುಷ್ಯನ ಕಲ್ಮಶ ಮನಸ ತೊಳೆದು ತೋರಿಸು, ನೀನು ಆಗ ಸಫಲ.

ಮನದ ಕೊಳೆಯ ತೊಳೆದು ನೋಡು ಇಳೆಯ,
ಆಗ ನೀನು ಕಾಣುವೆ ಅತಿ ಸುಂದರ ಸೊಬಗಿನ ಭೂತಾಯಿಯ.

- ಶ್ರೀಕಾವ್ಯ

19 Dec 2016, 11:02 am

ಒಣ ಗುಲಾಬಿಗಿಡ

ಮನದ ತೋಟದಲೊಂದು
ವಿಫಲಪ್ರೇಮದ ಗುಲಾಬಿಗಿಡ.
ಹೂವೇ ಬಿಡಲಿಲ್ಲ.

ಭಾವಝರಿಯ ಸೆಲೆ ಬತ್ತಿಹೋಗಿ,
ಹಸಿರು ಸವಿಕ್ಷಣಗಳು ಒಣಗಿ
ಉದುರಿ ಹೋದವು.

ಕಹಿನೆನಪುಗಳು ಮಾತ್ರ ಇವೆ.
ಒಣಗಿದರೂ;
ಉದುರದೇ ಉಳಿವ
ಮುಳ್ಳುಗಳಂತೆ....

ಮುಟ್ಟಿದರೆ ಚುಚ್ಚುತ.
ನೋವ ನೀಡುತ.

- Ugnil

19 Dec 2016, 10:55 am

ನನ್ನೊಡತಿ ಕಾವೇರಿ

ಮನಸ್ಸು ಮಲ್ಲಿಗೆ,
ಮಗುವಿನ ನಗು,
ಚಂದ್ರನಂತೆ ಹೊಳಪು,
ಸೂರ್ಯನಂತೆ ಪ್ರಜ್ವಲತೆ,
ವಿಧ್ಯಾದೇವತೆ,
ಕನಸಿನ ಕುವರಿ,
ಸಹೃದಯಿ ಸಂಪನ್ನೆ,
ಹೃದಯದೈಸಿರಿ,
ನನ್ನ ಮನದರಸಿ,
ನನ್ನ ಬಾಳಸಂಗಾತಿ,
ಅವಳೆ ನನ್ನ
ಧರ್ಮಪತ್ನಿ
ನನ್ನೊಡತಿ ಕಾವೇರಿ.

- ರಾಜು ಹಗ್ಗದ

19 Dec 2016, 10:51 am

ತಪ್ಪು=ಸಾವು(100%)

ನಾ ಮಾಡಿದ ತಪ್ಪಿಗೆ,
ನನಗರಿವಾಗುವ ಹೂತ್ತಿಗೆ,
ನಾ ಹೂತ್ತಿದ್ದೆ,ಪಾಪಗಳ ಪೆಟ್ಟಿಗೆ,
ಬಂದಿತ್ತು,ಸಾವೆಂಬ ಕರಿನೆರಳು ಕುತ್ತಿಗೆಗೆ,
ನಾ ಶರಣಾದೆ ನೇಣಿಗೆ!

- ರಾಜೇಶ್ ಎ.ಎಸ್

19 Dec 2016, 10:38 am

ಕಾಣದ ಭಕ್ತಿ

ದೇವ ನಿನ್ನ‌ ನಂಬಿ ಬಂದೆ
ನಾನು ಇಲ್ಲಿಗೆ!!
ಅದೇಕೆ ನೀನು ಕಾಣದಾದೆ
ನನ್ನ ಕಣ್ಣಿಗೆ!!

ನಿನ್ನ ಅರಸಿ ಹೊರಡಲೀಗ
ನಾನು ಎಲ್ಲಿಗೆ!!
ಹೇಳು ದೇವ ನನ್ನ ಮೇಲೆ
ಕೋಪ ಏತಕೆ!!

ಭಕ್ತಿಯಿಂದ ವರವ ಬೇಡ
ಬಂದೆ ಇಲ್ಲಿಗೆ!!
ನಾ ಬರುವ ಮೊದಲೇ ದೇವ
ನೀನು ಹೋದೆ ಎಲ್ಲಿಗೆ!!

ಕಾಯುತಿರುವೆ ನಿನ್ನ ಗುಡಿಯ
ದ್ವಾರದ ಎದುರಿಗೆ!!
ಹಿಂದಿರುಗಿ ನೀನು ಬರಲೇ ಬೇಕು
ದೇವ ಇಲ್ಲಿಗೆ!!

- ಪಿ.ಜಿ.ಜ್ಯೋತಿ

19 Dec 2016, 10:30 am

ನೋವು

ಕೇಳದೇ ಬರುವುದು,
ಕಣ್ಣೀರ ತರುವುದು,
ನೆಮ್ಮದಿ ಕೆಡಿಸುವುದು,
ಸಂತಸ ಹಾಳಾಗುವುದು,
ಸುನಾಮಿಯಂತೆ ಬರುವುದು,
ಸಮುದ್ರದಂತೆ ಪ್ರಶಾಂತವಾಗುವುದು.

- ರಾಜು ಹಗ್ಗದ

19 Dec 2016, 08:52 am