Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕುಳಿ

ಕೆನ್ನೆ ಮೇಲೆ ಜಾರುತಿರುವೆ
ಸ್ವಲ್ಪ ನಿನ್ನ ನಗು ನಿಲ್ಲಿಸು
ಕುಳಿಯಲಿ ಬೀಳುವ ಭಯ ನನ್ನದು....

- PSK

20 Dec 2016, 07:54 am

ಒಳಗೆ ...

* ಒಳಗೆ *

ನವರಸಗಳ ನೋಟ ಬಣ್ಣದೊಳಗೆ
ಬಣ್ಣಗಳ ನೋಟ ಕಣ್ಣಿನೊಳಗೆ
ಕಣ್ಣು ಬಣ್ಣಗಳೆರಡು ಬುದ್ಧಿಯೊಳಗೆ
ಬುದ್ಧಿ ಮನಸ್ಸು ನಮ್ಮೊಳಗೆ

ಸೂರ್ಯನ ಬೆಳಕು ಭೂಮಿಯೊಳಗೆ
ಭೂಮಿಯ ಆಕಾರ ಬೆಳಕಿನೊಳಗೆ
ಬೆಳಕು ಭೂಮಿಗಳೆರಡು ಸೂರ್ಯನೊಳಗೆ
ಸೂರ್ಯ ಕಿರಣಗಳು ಭೂಮಿಯೊಳಗೆ

ಬರವಣಿಗೆಯ ಅಕ್ಷರ ಲೇಖನಿಯೊಳಗೆ
ಲೇಖನಿಯ ಮಸಿ ಮನಸ್ಸಿನೊಳಗೆ
ಅಕ್ಷರ ಲೇಖನಿಗಳೆರಡು ವಿಷಯದೊಳಗೆ
ವಿಷಯ ಅಕ್ಷರಗಳು ಭಾವದೊಳಗೆ

ಬದುಕಿನ ಅಂದ ಇರುವಿಕೆಯೊಳಗೆ
ಇರುವಿಕೆಯ ನಡೆ ಸ್ಪಷ್ಟತೆಯೊಳಗೆ
ಅಂದ ನಡೆಗಳೆರಡು ಧ್ಯಾನದೊಳಗೆ
ಇರುವಿಕೆ ಸ್ಪಷ್ಟತೆ ಕಾಲದೊಳಗೆ

ವಾಯುವಿನ ಜೀವ ಜೀವಿಯೊಳಗೆ
ಜೀವಿಗಳ ಜೀವ ಪ್ರಕೃತಿಯೊಳಗೆ
ಪ್ರಕೃತಿ ಜೀವಿಗಳೆರಡು ಮಂಡಲದೊಳಗೆ
ವಾಯು ಜೀವಗಳು ನಮ್ಮೊಳಗೆ

- ಈಶ, ಎಂ.ಸಿ.ಹಳ್ಳಿ

- ಈಶ

20 Dec 2016, 07:34 am

ಕವಿಯಾದೆ ಕಲಿಯುಗದಲ್ಲಿ!

ಕವಿಯಾದೆ ಕಲಿಯುಗದಲ್ಲಿ,
ಪುಸ್ತಕದ ಹಾಳೆಯು ಸಿಗದಿಲ್ಲಿ;

ಕಾವ್ಯಾಸಕ್ತಿಯ ಕಲೆ ಎಲ್ಲಿ,
ಓದುವ ಹವ್ಯಾಸ ಕಾಣದಿಲ್ಲಿ.

ಮೊಬೈಲ್ ಎಂಬ ಕಲಾರಂಗದಲ್ಲಿ!
ಬಂದಿಗಳಾಗಿರುವ ಖೈದಿಗಳಿಲ್ಲಿ.

ಕವಿಯ ಕಲೆ ಹಳದಿಯಾಗಿ ಕಾಣುತಿದೆ ಇಲ್ಲಿ;
ಈ ಆಧುನಿಕ ರಂಗದಲ್ಲಿ.

- ವೇಣು ಆರ್ ಚಿನ್ನದೂರು

20 Dec 2016, 12:39 am

ಪರ್ಯಾಯ

ಹೊಗಳುಭಟನಾಗಿಹೆನು ಅನ್ಯಾಯವಾಗಿ
ಪ್ರೀತಿಸುವ ಕೆಲಸ ಕೊಡು ಪರ್ಯಾಯವಾಗಿ..!

- ಜೀವಿ

19 Dec 2016, 09:51 pm

ನೈಜ ನೈತಿಕತೆ

ಆಚರಣೆ ಎಂಬುದು ಆಡಂಬರದ
ಆಗರವಾಗದೆ ಅರಿವಿನ
ಅರಮನೆಯಾದರೆ ಲೇಸು
ಶೋಷಣೆಯ ನಿತೈನೆಮ,
ವ್ರತಗಳೆ ನಿತ್ಯ ಆಚರಣೆಗಳಾಗದೇ
ದಯೆ,ದ್ರರ್ಮ,ನೈಜ ನೈತಿಕತೆಯ
ವ್ರತ ನಿಯಮಗಳಾಗಬೇಕು ಎಂದಾತ
ನಮ್ಮ ಗುರು ಮಹಾದೇವ.

- kasturi pattar

19 Dec 2016, 09:25 pm

ತಪ್ಪು ಯಾರದು???

ಮಳೆ ಬಂದರೆ ಎಲೆ ನಡುಗುವುದು
ನೀ ಬಂದರೆ ಎದೆ ಗುಡುಗುವುದು
ತಪ್ಪು ಯಾರದು ಗೆಳತಿ.....???

- PSK

19 Dec 2016, 09:05 pm

ಒಂದಾಗಿರಲಿ ಕರ್ನಾಟಕ

ಒಂದಾಗಿರಲಿ ಎಂದೆಂದಿಗೂ ಕರ್ನಾಟಕ
ಮೂಡದಿರಲಿ ಭಿನ್ನತೆಯ ಭಾವ
ಬೆಳೆಯದಿರಲಿ ಅಂತರದ ಕಂದಕ
ನೆಲ, ಜಲ, ನಾಡು, ನುಡಿ ಒಂದಾಗಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?

ಜನ ಮನ ಒಂದಾಗಿರುವಾಗ
ರಕ್ತವು ಒಂದಾಗಿರುವಾಗ
ಕನಸುಗಳು ಒಂದಾಗಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?

ಮನು ಕುಲ ನೀತಿ ಒಂದಾಗಿರುವಾಗ
ಅನೇಕ ಹೋರಾಟಗಳಿಂದ
ರಕ್ತಪಾತಗಳಿಂದ ನಾಡನ್ನು ಕಟ್ಟಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?

ಹಲವಾರು ಸೀಮೆಗಳ ನ್ನು ದಾಟಿ
ಹಲವು ಹರಕುತನಗಳನ್ನು ಕಳೆದು
ಕರುನಾಡ ಕಟ್ಟಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?

ಒಂದಾಗಿರಲಿ ಎಂದೆಂದಿಗೂ ಕರ್ನಾಟಕ
ಒಂದಾಗಿರಲಿ ಎಲ್ಲಾ ಮನಸ್ಸುಗಳು
ಬಾರಿಸಲಿ ಕನ್ನಡದ ಝೇಂಕಾರ
ಎಂದೆಂದಿಗೂ ಬೆಳಗಲಿ ಕನ್ನಡದ ದೀಪ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

19 Dec 2016, 08:06 pm

ಮೌನವು ಆವರಿಸಿರಲು..!!?

ಹೇಳದ ಮಾತೊಂದ
ಗುನುಗಿದೆ ಈ ಹೃದಯ..
ತಪ್ಪಿಯಾದರು ಸಿಗುವೆಯಾ!!

ಬರೆಯದ ಓಲೆಯು
ತಿಳಿಸಲು ಕಾದಿದೆ ಈ ನಯನ..
ಕೋಡದೆಯೇ ಓದುವೇಯಾ!!

ಮೌನವು ಆವರಿಸಿರಲು..!!?

- ಬಾನು ಅಡಿಗಾರ್

19 Dec 2016, 05:22 pm

ನಾನು

ನನ್ನ ನಾ ಅರಿಯುವ ಮುನ್ನ
ಅರ್ಧ ಬದುಕು ಕಳೆದಾಯ್ತು

ಮನದ ಆಸೆ ನವಿಲಾಗಿ ನರ್ತಿಸೋ ಮುನ್ನ
ಸಂಸಾರಕ್ಕೆ ಕಾಲಿಟ್ಟಾಯ್ತು

ಸಂತೋಷವ ಸಂಭ್ರಮಿಸೋ ಮುನ್ನ
ಕರ್ತವ್ಯ ಪಾಲಿಸಿ ಆಯಿತು

ನಾ ಕನಸು ಕಾಣೋ ಮುನ್ನ
ಮಕ್ಕಳ ಆಸೆ ಮುಖ್ಯವಾಯ್ತು

ಮುಗಿಯಿತು ಜೀವನ ಅನ್ನೋ ಮುನ್ನ
ಮನದ ಮೂಲೆಯಲ್ಲಿದ್ದ ನಾನು
ಮತ್ತೆ ಇಣುಕಿ ಕವನ ಬರೆದಾಯ್ತು
ನನ್ನ ನಾ ಅರಿತಾಯ್ತು........
.......‌‌‌
ಕವಿರಾಜ

- kavita Rajesh

19 Dec 2016, 04:51 pm

ನೆನಪು

ಆ ನಿನ್ನ ನೆನಪು
ಮನಕೆ ನೀಡಿತು ತಂಪು
ಮರೆಯದ ಆ ಒಣಪು
ಸುಳಿದಂಗಾಯ್ತು ತಂಗಾಳಿ ತಂಪು!
- ಅಶೋಕ ಜಿ.ಕೆ ( ಶಾಂತಿಪ್ರಿಯ)

- "ಶಾಂತಿಪ್ರಿಯ"

19 Dec 2016, 03:03 pm