Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

~¶ಪ್ರೀತಿಯ ಬೆಸುಗೆ¶~

ಎಷ್ಟು ಬೇಗ ಬೆಸೆಯಿತಲ್ಲ
ಹರೆಯ ಲತೆಯ ಜಾಜು ಪ್ರೀತಿ
ಚೈತ್ರದಿರುಳ ಮರುಳುಮಾಡಿ
ಮಿಂಚುಮಿನಿಗಿದಂತ ಪ್ರೀತಿ
ಹೂವ ಲತೆಯ ಬಳ್ಳಿಯಲ್ಲಿ
ಬಳುಕಿ ನಲಿಯುವಂತೆ ಪ್ರೀತಿ
ಪ್ರೇಮವೆಂಬ ಒಲವಿನಲ್ಲಿ
ಒರತೆ ತುಂಬಿದಂತ ಪ್ರೀತಿ

'ನಲ್ಲೆ ನಿನ್ನ ಹಾಲ್ಗೆನ್ನೆಯಲ್ಲಿ
ಕೆನೆಗಟ್ಟಿದ ಮುನಿಸು ಪ್ರೀತಿ'
ನಿನ್ನ ನಯನದಂಚಿನಲ್ಲಿ
ಮಿಂಚುತಿರುವ ಹರೆಯ ಪ್ರೀತಿ
ನೀಲಿ ಸೀರೆ ನೆರಿಗೆಯಲ್ಲಿ
ಕುಸುರಿ ಮಾಡಿದಂತ ಪ್ರೀತಿ
ನಗುವ ಸ್ವರದ ಮಾಧುರ್ಯದಲ್ಲಿ
ಪ್ರೇಮದೊಲವ ಕೊಟ್ಟ ಪ್ರೀತಿ

ದೇಹ ಬೆಸೆದು ತುಟಿಯು ಕಲೆತು
ಎದುರುಸಿರಿಗೆ ಎರಗಿದಂತ ಪ್ರೀತಿ
ಆದರಗಳದರ ಸೋಕಿದಾಗ
ಮೈ ಬಿಗಿತ ಬಿಗಿದ ಪ್ರೀತಿ
ಬಿಳಿಯ ಹಾಳೆ ಕಪ್ಪು ಮಸಿಯು
ಬೆರೆತು ಕವಿತೆಯಾದ ಪ್ರೀತಿ
ಭಾವಮಳೆಗೆ ಅರಳಿನಿಂತು
ಮನದ ಮಡಿಲ ತುಂಬು ಪ್ರೀತಿ

ಇರುಳ ಮುಸುಕ ಹರಿದು ಸರಿಸಿ
ಹುಣ್ಣಿಮೆ ಬೆಳಕ ತಂದ ಪ್ರೀತಿ
'ವಿಧಿಯ ಭಾಗ್ಯ ಲಿಖಿತದಲ್ಲಿ
ನುಸುಳಿ ಬೆಳೆದ ಸಖಿಯ ಪ್ರೀತಿ'
ಋತುಗಳೆದೆಯ ಬಗೆದು ಬಸಿದು
ಹಸಿರನುಟ್ಟು ಚಿಗುರೊ ಪ್ರೀತಿ
ತಾರೆಗುಚ್ಚ ಕಚ್ಚಿ ಕಡಿದು ಮಿಡಿದ
ಸುಪ್ರಕಾಶಮಾನ ಪ್ರೀತಿ
ಸೂರ್ಯ-ಚಂದ್ರರಿರುವವರೆಗೆ
ಅಜರಾಮರ ನಮ್ಮ ಪ್ರೀತಿ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:51 pm

"ಯಾಕೆ ಸುಮ್ಮನೆ ಕುಳಿತೆ ಸೀತೆ

ಜನಕಾ ರಾಯನು ತೊರೆದು
ಶ್ರೀರಾಮಚಂದ್ರನ ಮಡಿಲರಸಿ
ಸೂರ್ಯವಂಶದ ಪಟ್ಟದರಸಿಯಾದೆ
ನರಕದ ನಾಕಕ್ಕೆ ಬಲಿಯಾದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಪಟ್ಟಧರಿಸಿಯಾದೆ ಕಾನನದ ಪಾಲಾದೆ
ಪತಿ ಜೊತೆ ನಡೆದಾಡಿದ ದಾರಿಯಲಿ
ಕಲ್ಲು ಮುಳ್ಳುಗಳುಡುಕದೆ ಮೌನದಿ ನಡೆದೆ
ಏಕಪತ್ನಿ ವ್ರತಸ್ಥನ ಒಂದು ಮಾತು ಕೇಳದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ರಾವಣದ ಕಪಡದಲ್ಲಿ ಪತಿ ಜೀವಕ್ಕಂಜಿ
ಬಲಿಯಾದೆ ನೀ ಅನಾಟದ ಪಗಡೆಯಲಿ
ಅಶೋಕವನದ ತಳಿರಿನ ತಂಪಿನಲಿ
ಮೌನದ ಕಂಗಳ ತುಂಬ ಶೋಕದ ನೆರಳಿನಲಿ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಅವನ ಸಂಹಾರ ಮರುಹುಟ್ಟು ಪಟ್ಟಧರಸಿ
ಮತ್ತೊಮ್ಮೆ ಸೀಡಿಲು ಬಡಿಯಿತೆ ಅಗ್ನಿಯ ದಾಳಕೆ
ಪರಪುರುಷನ ಸೊಕಲಾರದ ಮೈ ಪರಿಕ್ಷೇಯಲಿ
ಅಗ್ನಿಯ ತೆಕ್ಕೆಗೆ ನೋಕಿದಾಗಲು ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಎಲ್ಲಾವು ಮುಗಿಯಿತು ರಾಜ್ಯ ವೈಭೋಗದಿ
ನೆಮ್ಮದಿಯ ನಿಟ್ಟುಸಿರಿಗೆ ಮಡಿಲಲ್ಲಿ ತುಂಬಿತ್ತು
ತುಂಬು ಗರ್ಭಿಣಿಯ ಮನವರಸಿತು ವನ ತಂಗಾಳಿ
ಅಲ್ಪಾಗಸನ ನುಡಿಗಲ್ಲಿ ಬಲಿಯಾದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಲವ-ಕುಶರ ಜನನ ಸಂತಸದ ಜೀವನ
ಮಕ್ಕಳೊಳಗೂಡಿ ವಾಲ್ಮಿಕಿಯ ಆಶ್ರಮ
ಅಶ್ವಮೇಗದ ಯಾಗ ಕುದುರೆಯ ಕಟ್ಟಿ
ತಂದೆಯೊಂದಿಗೆ ಮಕ್ಕಳು ಯುದ್ದಕ್ಕಿಳಿದಾಗ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಜಗದ ನೋಟದಲಿ ಪತಿರ್ವತೆ ನೀನಾದೆ
ಶ್ರೀರಾಮಚಂದ್ರನು ಆದರ್ಶ ಪತಿಯಾದ
ಹೆಣ್ಣೆ ನೀ ಗಂಡಿನ ತೆಕ್ಕೆಯಲಿ ಪಳಗಿಬಿಟ್ಟೆಯಾ?
ಮರು ಮಾತನಾಡದೆ ಅವನಿಟ್ಟಡಿಯಲ್ಲಿಟ್ಟೆ
ಯಾವ ಸಂತೊಕ್ಕಾಗಿ ಕಷ್ಟವನುಂಡೆ ಹೇಳು ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:48 pm

~¶ಮಿನುಗಬೇಕು ಕವನದ ಸಾಲು¶~

ಹೊಸದೊಂದು ಶಬ್ದಕೋಶ ಬಳಸಬೇಕಿದೆ ನಾನಿಂದು
ಬಳಸಿದ ಅಕ್ಷರಗಳನೆ ಬಳಸಿ ಬಳಸಿ
ಸಾಕಾಗಿದೆ ಕವಿತೆಗಳಿಗೆ
ಕಡಲ ಜಿಗಿದು ಒಡಲ ಬಗೆದು
ಸಾಹಿತ್ಯದ ಭಂಡಾರ ಕದಿಯಬೇಕು ನಾನು

ವಿಣೆಯಲಿ ಸ್ವರವು ಚಿಮ್ಮಿ ಮೈ ಮನಗಳನು ಕುಣಿಸುವಂತೆ
ಸಾಗರದ ಅಲೆಗಳು ಹುಣ್ಣಿಮೆಯ ಕಂಡು ಉಕ್ಕುವಂತೆ
ಅಪ್ಸರೆಯರ ನಾಟ್ಯಶಾಸ್ತ್ರದ ಭಾವ ಭಂಗಿಯಂತೆ
ಶಬ್ದಗಳು ತಾವೆ ತಾವಾಗಿ ಹೊಮ್ಮುವಂತೆ
ನನಗೇನೋ ಹೊಸತನದ ಸ್ಪರ್ಷ ಬೇಕಾಗಿದೆ

ಮಿನುಗಬೇಕು ಕವನದ ಸಾಲು
ನಕ್ಷತ್ರಗಳ ಮಿಂಚಿನಂತೆ
ಸ್ವರಮಾಲೆಯ ಹಗೆದು ಬಗೆದು
ಎಣೆಯಬೇಕು ಬಲೆಯಂತೆ
ಮಾಯಾ ಲೋಕದ ಸ್ವಪ್ನ ಸುಂದರಿಯ
ಹಂಸನಡಿಗೆ ಲಾಸ್ಯದಂತೆ
ರಂಭೆ, ಊರ್ವಶಿ, ಮೇನಕಿಯರ ಬೆಡಗು
ಭಿನ್ನಾಣಗಳ ಕಡೆದು ಮಾಡುವಂತೆ

ಪ್ರತಿ ಮಾತುಗಳು ಮುತ್ತಿನ ಮಳೆಯಾಗಬೇಕು
ಪ್ರತಿ ಸಾಲುಗಳು ಬಳುಕಿ ಹರಿವ ನದಿಗಳಾಗಬೇಕು
ಕವಿತೆಗಳೆಲ್ಲ ಕಲೆತು ಸಾಗರವದ ಅಲೆಯಾಗಿ
ಮನಸುಗಳ ದಡಕಪ್ಪಳಿಸಿ
ರೊಮಾಂಚನದ ಸಂಚಲನೆ ಮೋಡಿಸಬೇಕಿದೆ ನಾನು...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:46 pm

ತಿರುಗಿ ಬರಲಾರೆ ನಾ ಆ ನಿನ್ನ

ಮರಳಿ ಬಾರದಷ್ಟು ದೂರಕ್ಕೆ ಬಂದಿರುವೆ
ಮತ್ತೆ ಕೂಗದಿರು ನಲ್ಮೆಯ ಒಲವೇ
ತಿರುಗು ಬರಲಾರೆ ನಾ ಆ ನಿನ್ನ ತೆಕ್ಕೆಗೆ;

ಮನಸನೊಪ್ಪಿಸಿದೆ ಸಾಕೆನ್ನಲಿಲ್ಲ
ಮೈಯನೊಪ್ಪಿಸಿದೆ ದಾಹ ತಿರಲಿಲ್ಲ
ಬದುಕನ್ನೊಪ್ಪಿಸಿದೆ ಬೇಡವೆಂದು ಎಂದು ಹೇಳಲಿಲ್ಲ
ಎಲ್ಲವು ನಿನಗೊಪ್ಪಿಸಿ ನಿರ್ಲಿಪ್ತ ನೆರಳು
ಮೌನದ ನೋವಿನ ಕಣಿವೆಯಲಿ ಸಾಗುತಿದೆ
ಎಲ್ಲರನು ದೂರವಿರಿಸಿದೆ ಮೊದಲು
ಕೊನೆಗೆ ನಡು ನೀರಿನಲ್ಲಿ ಕೈಬಿಟ್ಟ ಛಲವೇ,
ಮತ್ತೇಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬಾರಲಾರೆ ನಾ ಆ ನಿನ್ನ ತೆಕ್ಕೆಗೆ;

ಏಕಾಂಗಿ ಪಯಣ ಸಾಕೆನಿಗೆ
ನಿನ್ನ ಮಧುರ ನೆನಪಿನ ಗಾನ
ಅಂತರಂಗದ ಕುಲುಮೆಯೋಳಗೆ
ಸೋಲೆಂಬ ಜ್ವಾಲಾಮುಖಿಯ ಸಂಗಮ
ಸಂಗಾತಿ ಸಂಪ್ರಿತಿ ಸಂಕೋಲೆಯ ಸುಪುತ್ರಿ
ಏ ಒಲವೇ ನೀನೆಷ್ಟು ಕ್ರೂರಿ ನನ್ನೊಳಗೆ
ಸಾಕು ಮಾಡಿನ್ನು ಹೃದಯ ಹೊಡೆಯುವ ಪಾಠ
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;

ಮನದ ಮಹಲನು ಕೊಳ್ಳೆಯೊಡೆದ ಮೂಹಿನಿ
ಬದುಕನ್ನು ನರಕವಾಗಿಸಿದ ಯಾಮಿನಿ
ಪ್ರೇಮದ ಮುಖವಾಡವನೊತ್ತ ಅಂತರ್ಯಾಮಿ
ಯುವ ಮನಸುಗಳ ಕೊಂದ ನೋವಿನ ಧಮನಿ
ಮತ್ತೆ ಹೂ ಅರಳುವುದೆಂದು ಹಂಬಲಿಸದಿರು
ಮರುಭೂಮಿಯಲಿ ಸಿಡಿಲೊಡೆದು ಒಣಗಿ ನಿಂತ
ಏಕಾಂಗಿ ಮರ ನಾನು ಬಯಸದಿರು ಮತ್ತೆಂದು
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;

ಸಾವಿರ ಕನಸುಗಳನು ಕೂಡಿಸಿಟ್ಟಿ ಅಂದು
ಎಲ್ಲವನು ಕೊಂದು ಹೊರಟೊದೆ ಇಂದು
ಜೀವ ಪಡೆಯಲು ನೀನಗ್ಯಾವ ಅಧಿಕಾರವಿಲ್ಲ
ಇದನ್ನೆಂದು ನಾ ನಿನ್ನ ಪಾಲಾಗಲು ಬಿಡುವುದಿಲ್ಲ
ನೆನಪುಗಳ ಜೋಳಿಗೆಗೆ ದಾಸನಾಗಿರುವೇ ಅಷ್ಟೇ;
ಯುವ ಮನಸುಗಳ ತೆಕ್ಕೆಯಲಿ ಮಗ್ಗಲು ಬದಲಿಸುವ
ವ್ಯೆಬಿಚಾರವನ್ನೆ ಅಧಿಕಾರವೆನ್ನುವ ವ್ಯೆಶ್ಯೆಯೇ
ಮತ್ತೆ ಕೂಗದಿರು ನಲ್ಮೆಯ ಒಲವೇ
ಮತ್ತೆಂದು ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ

ನಿನ್ನಿಂದ ಪಡೆದ ನೆನಪುಗಳನೆ ಹೂತು
ಕವಿತೆಗಳ ಫಲ ಪಡೆದು ನಿನ್ನದೇ ಹೆಸರಿಡುವೇ
ಸ್ತಬ್ಧವಾದ ನನ್ನೆದೆಯ ಹೃದಯ ವೀಣೆಗೆ ಕಲಿಸಿ
ಒಲವೇ ನಿನ್ನ ರಂಗ ಮಂದಿರದ ಲೀಲೆಗಳನು
ಜಗತ್ತಿನ ಮುಂದೆ ವೈಣಿಕನಾಗಿ ಫಲಿಕಿಸುವೆ
ನವಬಾವದಲಿ ನವೂದಯದ ಕಿರಣವನ್ನು
ಮತ್ತೊಮ್ಮೆ ತೆರೆದಿಡುವೆ ಕೆಂಬಣ್ಣದೊಕಳಿಯಲ್ಲಿ
ಕರೆದರು ಕೇಳಿಸದಂತೆ ಸಾಗುವೇನು ಬಿಮ್ಮನೆ
ನಡೆಯಲಾರದು ಇನ್ನು ನಿನ್ನಾಟ ಮುಗಿಸಿಬೀಡು ಸುಮ್ಮನೆ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:44 pm

ದೇವರು ಹಚ್ಚಿದ ಹಣತೆ

ಅಂತರಂಗದ ಪ್ರೇಮ ಗುಡಿಯ ಅಂಗಳದಲಿ
ಹಾರದೆ ಉರಿಯಲಿ ದೇವರರು ಹಚ್ಚಿದ ಹಣತೆ
ತಮಂದ ಪಯಣಕೆ ನಿರ್ಮಲ ಬೆಳಕನು
ಚಲ್ಲುತ ಸಾಗಲಿ ನವೂದಯದ ಪ್ರಣತಿ

ಅದಿ-ಅಂತ್ಯಕೂ ನೋವು-ನಲಿವಿಗೂ
ಇರಲಿ ಬೇದವಿಲ್ಲದ ಪ್ರೀತಿಯ ಸಮತೆ
ಬಯಸಂಶಯಗಳ ಸಂಕೋಲೆಯಲಿ
ಬದುಕಿಗೆ ಸಾರಲಿ ಒಲುಮೆಯ ಘನತೆ

ಕೊಲ್ಲಲು ಎತಿದೆ ಕೈಗೂ ಗೊತ್ತಿದೆ
ಒಲುಮೆಯ ಬೆಚ್ಚನೆ ಅಪ್ಪುಗೆಯ ಪ್ರೀತಿ
ಚುಚ್ಚುವ ಮುಳ್ಳಿನ ನಡುವೆ ನಗುವುದು
ಗುಲಾಬಿ ಹೂವಿಗದು ಬದುಕಿನ ನೀತಿ

ಜ್ವಾಲಮುಖಿಯನು ಚಿಮ್ಮುವ ಒಡಲಲು
ಚಿಗುರದೇ ಚೆಲುವಲಿ ಹಸುರಿನ ಗರಿಕೆ?
ಸುನಾಮಿ ಅಲೆಯಲು ಅಡಗಿ ಕುಳಿತಿದೆ
ಶಾಂತತೆಯ ಮಧುರ ಮಂಥನದ ಮಹಿಮೆ

ದ್ವೇಷವ ಸಾರುವ ಮನಸಿನ ಕೊಳದಲು
ಚಿಮ್ಮಲಿ ಸಿಹಿ ನಲ್ಮೆಯ ಪನ್ನಿರಿನ ಒರತೆ
ಜಾತಿ-ಮತಗಳ ಮಂದಿರದಲ್ಲು ಇರಲಿ
ಏಕರೀತಿಯ ಮನುಜ ಪ್ರೇಮದ ಅಳತೆ

ಸುಡುವ ಸೂರ್ಯನು ತಂಪು ಚಲ್ಲುವ
ಸಂಜೆಯ ಕರಪಿನ ರಂಗಿನ ಬಾನಿನಲಿ
ಉರುಳುವ ಚಂದಿರನು ನಗುವನು
ಏಕಾಂತದಲಿ ಅದುವೆ ಅವನಿಗೆ ಸ್ಪೂರ್ತಿ

ವಿವಿಧತೆಯಲಿ ಏಕತೆ ಸಾರುತಿಲಿರವ
ಕಾಣದ ದೇವನೆ ಇದುವೇ ನಿನ್ನಯ ರೀತಿ
ಅಳುಸುವೆ-ನಗಿಸುವೆ ಕೋಡಿಸಿ ಒಲಿಸುವೆ
ನಿನಗದು ಬದುಕಿನ ಭರವಸೆಯ ನೀತಿ

ಬೆಳಗುವ ಹಣತೆಯ ಹೃದಯದಿ ಹಚ್ಚುವೆ
ಸುಡುವುದಕದನು ಬಳಸುವದು ಆನೀತಿ
ಸುಟ್ಟರು ನರಳದೆ ಸಾಗುವುದನು ಕಲಿಸುವೆ
ಸಾವಿಗೂ-ನೋವಿಗು ಕಾರಣ ನೀನಾಗಿರುವೆ
ನತ್ಮಯ ದೇವನೆ ನಿನ್ನ ಲಿಲೇಗೆ
ಚಿನ್ಮಯ ನಾ ನಿನ್ನನು ಸೇರುವ ಹೊತ್ತಗೆ...

,-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:42 pm

ಹೋಗಿಬಿಟ್ಟಳವಳು

ಹೋಗಿಬಿಟ್ಟಳವಳು ತಿರುಗಿ ನೋಡದೆ
ಕನಸುಗಳ ರಾಶಿಗೆ ಬೆಂಕಿಯ ಸುರಿದು
ಧಗಧಗನೆ ಹತ್ತಿ ಉರಿಯುತಿವೆ ಜ್ವಾಲೆಯಲಿ;
'ನನ್ನ ಅಂತಿಮ ಯಾತ್ರೆಯ ದಾರಿಯಲಿ'
'ಹೂಗಳ ಚಲ್ಲಿರಿ, ಅವಳು ಬಂದರು ಬರಬಹುದು'
ಬೂದಿಯಾಗುವ ಭಾವನೆಗಳ
ಅಂತಿಮ ಸಂಸ್ಕಾರದ
ಕೊನೆಯ ಕಾರ್ಯಕ್ಕೆ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:41 pm

ಮುಗುಳು ನಗೆ

ನಲಿವಿನ ಮುನ್ನ ಸುಳಿದಾಡುವೆ
ನಗುವಿನ ಸಾರಥಿ ನೀನಾಗಿರುವೆ
ಮೌನವ ತಬ್ಬಿದ ಮೊಗದೊಳಗೆ
ನಲ್ಮೆಯ ಕಂಪನ ನೀ ತರುವೆ
ಹೇಳಿಬೀಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಪ್ರೇಮ ಸಮ್ಮತಿಗೆ ಮುನ್ನುಡಿ ಬರೆವೆ
ವಿರಹದಲು ನೆನಪುಗಳ ಕಲರವವಾಗುವೆ
ನಲ್ಲೆಯ ಅಂತಿಮ ನಿರ್ಗಮನದಲಿ
ನೋವಿಗ ಚರಿತೆಗೆ ಬೆನ್ನುಡಿ ಬರೆವೆ
ಹೇಳಿಬಿಡು ಮುಗುಳುನಗೆ
ನೀ ಯಾರ ಸ್ವತ್ತೆಂದು ನನಗಿಂದು

ಮುದುಡಿದ ತಾವರೆಯಲು ಇರುವೆ
ಅರಳುವ ಗುಲಾಬಿಯಲು ನಲಿವೆ
ಜನನಕೂ-ಮರಣಕೂ ನಿನ್ನದೇ ಸ್ವಾಗತ
ಮೊಗದಲಿ ಸಂಚರಿಸುವ ಸುಧೆಯೇ
ಹೇಳಿಬಿಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಮಳೆ ಹನಿ ತುಂತುರು ಮೈದಡಿವಿರಲು
ಮುತ್ತಿನ ಮಾಲೆಯ ಅದು ಹೆಣೆದಿರಲು
ಮುಂಜಾವಿನ ಸೋನೆಯು ನಿನಾಗಿರಲು
ಭುವಿಯ ಕಂಪನ ನನ್ನೆದೆ ಚುಂಬನ
ಹೇಳಿಬಿಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಬರೆಯು ಕವಿತೆಯ ಸಾಲಿನಲಿವಿತು
ವೀಣೆಯ ಮಿಟುವ ವೈಣಿನೊಳಗು
ಸ್ವರವನು ಬೆರೆಸುವ ಗಾಯಕನಲ್ಲು
ಕೇಳುವ ರಸಿಕನ ನಗೆ ಮೋಗದಲ್ಲು
ಚಿಮ್ಮುವ ಚಿನಕುರುಳಿ ಹೇ ಮುಗುಳು ನಗೆ
ಹೇಳಿಬಿಡು ನೀ ಯಾರ ಸ್ವತ್ತೆಂದು ನನಗಿಂದು

ನವಿನಲಿ ನಾಟ್ಯಕೆ ಜೊತೆ ಇರುವೆ
ಕೋಗಿಲಿ ಸ್ವರದಲೂ ಅಡಗಿರುವೆ
ಅರಿಯು ನೀರಲು ಕಲರವ ನಿನ್ನದೇ
ಪ್ರಕೃತಿ ಸ್ವಭಗನು ಕಂಡೊಡೆ ಜನಿಸುವೇ
ಹೇಳಿಬಿಡು ಮುಗುಳು ನಗೆ
ನೀ ನನ್ನ ಸ್ವತ್ತೆಂದು ನನಗಿಂದು...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:38 pm

ಕವಿತೆ ಹಳೆಯದಾದರೇನು?

ನಾನು ಬರೆಯುವೆ ಒಂದು ಕವಿತೆ
ಹಳೆಯದೇರಡು ಸಾಲು ಸಾಲ ಪಡೆದು
ನವ ಭಾವನೆಯ ಎರಕಹೋಯ್ದು
ಹಳೆತು ಹೊಸತು ಕಲೆತು ಬೆರೆತು
ಸೃಜಿಸುತಿಹುದು ಹೊಸ ಚೈತನ್ಯದ ಕವಿತೆ
ವಸಂತಾಗಮನದ ನವ ಚಿಗುರಿನಂತೆ

ಹಳೆತು ಮುಖಕೆ ನವತು ಬಣ್ಣದಿ ಶೃಂಗರಿ
ಎಣೆಯುವೆ ನನ್ನೆದೆಯ ಹೃದಯದೊಲೆ
ಹಳೆಯ ಹಾಡು ಆದರೇನು? ಹೊಸತು ಪಾಡು ಬೇಡವೇನು?
ನವೂದಯದೊಂಬಣ್ಣ ಬದಲಾಗಲಾರದೆಂದು
ಕವಿಯ ಮನವು ಅಷ್ಟೆ, ಭಾವದ್ವೇತ್ಯಾಸವನ್ನು ನೋಡು
ಅಂದು ಇಂದು ಕವಿತೆಯೊಂದೆ ಭಾವ ಬೇರೆ ಅಲ್ಲವೇನು?

ಯಾರು ಏನೆಂದರು ನನಗೇನು ಮನವೇ
ಓದುವವರಿಹರಲ್ಲ ಸಾಕು ಇಂದೇನಗೇ
ನವತು ಕವಿತೆ ಬರೆಯಲಿಲ್ಲಿ ಬಿಡದೆ ಬರೆದು
ಮುಗಿಸಿದರೆಲ್ಲ ನಮ್ಮ ಹಿರಿಯ ಕವಿಗಳು
ನಾನೆನೆಂದು ಬರೆಯಲಿ? ಅದನೆ ಮತ್ತೆ ಬರೆಯುವೆನು
ನಗುವವರು ನಗಲಿ, ಮುಖ ತಿರುಗಿಸುವವರು ತಿರುಗಿಸಲಿ;

ಹಳೆಯ, ನಡು, ನವೂದಯವನೊಮ್ಮೆ ನೋಡು
ಎಲ್ಲರು ಅದನೆ ಬರೆದರು ಅವರದೇ ಮೋಡಿಯಲ್ಲಿ
ಕನ್ನಡ ಸಾಹಿತ್ಯ ವೀಣೆಯು ಒಂದೆ ಇರಬಹುದು
ವೈಣಿಕರ ಬೆರಳುಗಳು ಒಂದೆ ಅಲ್ಲ ಕೇಳು
ನುಡಿಸುವವನ ಮನವು ಭಾವ ತುಂಬಿ ಹಾಡಲು
ಕೇಳುಗನೆದೆಯಲಿ ನೋವು ತುಂಬಿದರೇಗೆ ಹೇಳು?

ಹಿರಿಯ-ಕಿರಿಯ ಎನ್ನಲೇಕೆ ತಾಯಿ ಒಬ್ಬಳಲ್ಲವೇನು?
ಮಾಡುವೆನು ಸೇವೆಯನು ಹಿರಿಯರು ಮಾಡಿದಂತೆ
ಬೇಡವೇನೆಗೆ ಬಿರುದು ಸನ್ಮಾನಗಳ ಹಿರಿಮೆ
ಬಡವ ನಾನು ದುಡಿದಷ್ಟು ಊಣಬಡಿಸುವೇ
ವಲ್ಲದ ಭೋಜನದಲಿ ಕಲ್ಲು ಹುಡುಕಬೇಡಿರಿ
ಕನ್ನಡಮ್ಮನ ಪಾದದಲ್ಲಿ ನನದೊಂದು ಹೂ ಇರಲಿ ಬೀಡಿ....,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:37 pm

ಮಾಗಿಯ ಚಳಿ

ಮಾಗಿಯ ಚಳಿಯು ಮೈದಡವುತಿರಲು
ಸೋನೆ ಮಳೆಯು ಜೊತೆಗೂಡಿರಲು
ಧರಣಿಯ ಒಡಲಲಿ ಕಂಪನದಾವಳಿ
ನನ್ನದೇ ಗೂಡಿಲಿ ವಿರಹದ ಕರಾವಳಿ

ನಲ್ಲೆಯ ಚುಂಭನ ಬಯಸಿದ ಮನಸಿದು
ಆಲಿಂಗನದ ಬಿಸಿಗಂಬಲಿಸಿದ ತನಿವಿದು
ನಿನ್ನೆದೆ ತನುವಲಿ ಉದುಗಲೆಂದೆನೋ
ನನ್ನೆದೆಯ ಕಡಲು ಅಬ್ಬರಿಸುತಿದೆ

ಜಿಟಿಜಿಟಿ ಹನಿಹನಿ ಕಲರವದಲ್ಲು
ಬಿಸಿಲನು ಮರೆಸುತ ಸಾಗಿದೆ ಈ ಮಳೆ
ಭುವಿಯನು ತಾಕಿ ಚಿಮ್ಮುವ ಹನಿಯಲಿ
ಕಂಡೆನು ನಲ್ಲೆ ನಿನ್ನಯ ಕಾಲ್ಗೆಜ್ಜೆಯನು

ಮಳೆ ಹನಿ ಚಿಮ್ಮುವ ಚೆಲುವಲಿ
ನಿನ್ನಯ ಪಾದದ ನರ್ತನದಾವಳಿ
ಚುಮುಚುಮು ಚಳಿಯು ನಗೆ ಬಿರುತಿದೆ
ನನ್ನೊಳಗದು ಮೈದೋರಿ ನಿಲ್ಲುತಿದೆ

ಬಿಡದೆ ಸೋ ಎಂದು ಸುರಿಯುವ ಸೋನೆಗೆ
ತಿಳಿಯಿತೇನೊ ನೀ ಬಳಿ ಇರದ ಸುಳಿವು
ಕಾಡುತಿರುವಿಬ್ಬರು ನಲ್ಲೆ ಭಲ್ಲೆಯ ನೀನು
ಬಳಿ ಇರಬೇಕಿತ್ತು ನೀ ಈ ಸಮುದಲ್ಲಿ

ನಡುಗುವ ಮೈ ಮನ ಸೀತದ ಗಾಳಿಗೆ
ನಿನ್ನಯ ನೆನಪಿನ ಚಿತ್ರಾವಳಿಯಲು
ಚುಂಭನದಬ್ಬಲ ಬಯಸಿದೆ ಬಯಲು
ನಡುಗುವ ತುಟಿಯು ಕಾಡಿದೆ ಅಸಲು

ಸೋನೆಯು ಮಾಗಿಯು ಜೊತೆ ಸಾಗಿರಲು
ಮಿಲನದ ಸಂಭ್ರಮ ನನ ಕಾಡುತಿರಲು
ತಪ್ಪು ಎನಬೇಡವೇ ಸಖಿ ಇದು ಮಾಗಿಯ ಕಾಲ
ಬಂದು ಬಿಡು ಒಮ್ಮೆ ಮುಖಾಮುಖಿ
ಇಬ್ಬರು ಒಂದಾಗಬೇಕಿದೆ ಸಖಾಸಖಿ...

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:34 pm

ಬದುಕು

ಒಬ್ಬಂಟಿಯಾಗಿ ಇಲ್ಲಿಯವರೆಗು ಬಂದಿರುವೆ
ಹಿಂತಿರುಗಿ ನೋಡಿದರೆ ಹೆಜ್ಜೆ ಗುರುತುಗಳು
ಬೀರುಗಾಳಿಯಲಿ ಮಾಸುತಿವೆ
ನಶಿಸುವ ಮನುಜನಿಗೆ ಹೆಜ್ಜೆಯ ಗುರುತುಗಳೆ ಆಧಾರ
ಅವೆ ಇಲ್ಲವಾಗುತಿವೆ ನನ್ನ ಬದುಕಿನಲಿ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:33 pm