Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೇಸರನು ತನ್ನ ಸುಡುವ ನಾಲಿಗೆಯಿಂದ
ನೆಲವ ನೆಕ್ಕಿ ನಕ್ಕಾನ
ಹಸಿರು ಫಸಲ ನುಂಗಿ ತೇಗ್ಯಾನ
ಝುಳು ಝುಳು ಹರಿಯುವ ಜಲವನ್ನೆಲ್ಲ
ಹಿಂಗಿಸಿ ಕಿಸಿ ಕಿಸಿ ನಕ್ಕಾನ
ಚಿಲಿ ಪಿಲಿ ಗುಟ್ಟುವ ಹಕ್ಕಿಗಳ
ಕತ್ತು ಹಿಚಕ್ಯಾನ
ಮೂಕ ಪ್ರಾಣಿಗಳ ಒಡಲು ಬಗಿದಾನ
ಗಿಡ ಮರ ಬಳ್ಳಿಗಳ ಒಣಗಿಸಿ
ವಿಕೃತ ನಗಿ ಬೀರಾನ
ರಚಣೆ:ರೇವಣಸಿದ್ದ ಗೌಡರ
ರಬಕವಿ-೫೮೭೩೧೪
ಮೊ.೯೦೦೮೦೬೦೯೧೮
- Revanasidda Goudar
15 Dec 2016, 06:14 pm
ಮಸಿ ಕಾಣದ ಲೇಖನಿಯಲಿ
ಗೀಚಿದೆ ನೀ ಮೂಕಭಾವದಿ...
ಕಂಡೂಕಾಣದ ಪದಗಳ ಅರಸುತಾ
ಅಲೆದಿರುವೆ ನಾ
ಬದುಕ ಪುಟಗಳಲಿ...
- Indushekar Chinivar
15 Dec 2016, 04:41 pm
ಬತ್ತಿದ ಭಾವದಲ್ಲಿ
ಚಿತ್ತಾರ ಬಿಟ್ಟವಳೆ
ಎತ್ತ ಹೋದಯಾ...ನೀನು
ನನ್ನ ತೊರೆದೆಯಾ!
ಕಷ್ಟ ಕಾಲದಲ್ಲಿ
ಜೊತೆಯಲ್ಲಿ ಇರುವೆನೆಂದು
ಭಾಷೆಯನ್ನು ಕೊಟ್ಟ ನೀನು
ಬಿಟ್ಟು ಹೊರಟೆಯಾ....ಗೆಳತಿ!
ಏಳೇಳು ಜನ್ಮದಲ್ಲಿ
ನನ್ನಲ್ಲಿ ಇರುವೆನೆಂದು
ಭರವಸೆಯ ಭವನಕಟ್ಟಿ
ಒಂಟಿಯಾಗಿ ನನ್ನ ಬಿಟ್ಟು
ಹೊರಟು ಹೋದೆಯಾ...ಗೆಳತಿ!
ಏಕೆ ಹೀಗೆ ಮಾಡಿದೆ ನನಗೆ
ಮನಸ್ಸು ಹೇಗೆ ಬಂತು ನಿನಗೆ
ಘಾಸಿಗೊಳಿಸಿದೆ ನನ್ನ ಮನಸ್ಸಿಗೆ
ನಲಿವಾಗಿರಲಿ ನಿನ್ನ ಜೀವನ ಗಳಿಗೆ!
---------------------------------------------*ಬಸವಪ್ರಿಯ*
(ಬಲವಂತ ಮೋರಟಗಿ)
- ಬಲವಂತ ಮೋರಟಗಿ(ಬಸವಪ್ರಿಯ)
15 Dec 2016, 03:13 pm
"ಮಳೆ ಬಂತು ಮಳೆ
==============
ಮಳೆ ಬಂತು ಮಳೆ
ಬಿರಿ ಬಿಸಿಲಿನ ನಾಡಿಗೆ
ಬರಡು ಬರಿದಾದ ಬಯಲಿಗೆ
ಮಳೆ ಬಂತು ಮಳೆ
ಬಿರಕು ಬಿಟ್ಟ ಭೂಮಿಗೆ
ರಣಗುಡವ ರಣಾಂಗಣಕ್ಕೆ
ಮಳೆ ಬಂತು ಮಳೆ
ಉತ್ತಿ ಬತ್ತಿಹೋಗವ ನೆಲಕ್ಕೆ
ಕೈ ಹೊತ್ತು ಕುಳಿತ ಜನರ ಮನಕ್ಕೆ
ಮಳೆ ಬಂತು ಮಳೆ
ಧಗಧಗ ದಗಿಸುವ ಧರೆಗೆ
ಬಿಸಿಲು ಜಳ ಇರುವ ಇಳೆಗೆ
ಮಳೆ ಬಂತು ಮಳೆ
ಹಸಿವಿನಿಂದ ಬಳಲಿದ ಜನರಿಗೆ
ಬಿಸಿಲಿನಿಂದ ಕಂಗೆಟ್ಟ ದಾರಿಗೆ
ರಚನೆ* ಆನಂದ ಎಸ್ ಪೂಜಾರಿ
ರನ್ನ ಮುಧೋಳ
Ph. 8904215983
- ಆನಂದ ಪೂಜಾರಿ
15 Dec 2016, 03:08 pm
ಹುಡುಕ ಹೊರಟೆ
ನನಾರೆಂದು
ಎಲ್ಲಿಹೆನೆಂದು!
ಶರೀರವೇ ನಾನೇನು?
ಒಳದನಿ ಹೇಳಿತು
ಶರೀರ ನನ್ನದೆಂದು
ಯಾರದು ಹೇಳಿದ್ದು
ಮನವೇ? ಬುದ್ಧಿಯೆ?
ಭ್ರಮೆಯೆ?
ಒಳಗಿರುವ ದಿವ್ಯ
ಚೇತನವೇ? ಹೇಳು
ನೀನಾರೆಂದು?
ನಾನು ನಾನೇ ಎಂದು
ಬಡಬಡಿಪನಾರೆಂದು?
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
15 Dec 2016, 10:17 am
ಜೀವ ಹೋದ ಮೇಲೆ ದೇಹ ಮಣ್ಣು ಪಾಲು,
ಅಸ್ಥಿಗಳು ಗಂಗೆ ಪಾಲು, ವಸ್ತ್ರಗಳು ಅಗಸನ ಪಾಲು, ಆಸ್ಥಿಗಳು-ಮುಂದೆ ಕೂತು ಅಳುವವರ ಪಾಲು, ಮಗನು ಹಾಕುವ ಪಿಂಡ ಕಾಗೆಯ ಪಾಲು, ಅರಿಯದ ಈ ಜೀವ ಯಮನ ಪಾಲು,ನೀ ಮಾಡಿದ ಸೇವೆ ದಾನ-ಧರ್ಮ ಮಾತ್ರ ನಿನ್ನ ಪಾಲು.
- kiran
15 Dec 2016, 09:59 am
ಮಾತುಮಾತಿನಲ್ಲೂ ಮೇಳೈಸಿದೆ ಮೌನದ ಮೆರವಣಿಗೆ
ನಡೆದಿದೆ ಪಯಣವು ಕೋರೈಸುವ ನಿನ್ನ ಪ್ರಕಾಶದೆಡೆಗೆ
ಒಲಿದುಬಂದಿರುವೆ ನಾನೆ ನಿನ್ನೆಡೆಗೆ
ನಿನ್ನ ಮೌನವೆ ಹೇಳಿದೆ ಮಿಡಿಯಲಾರದ ಆ ಮಿಡಿತವನು,
ಹೂ ಅರಳಿದಂತ ಸದ್ದನು, ಪ್ರತಿ ಹೆಜ್ಜೆಯಲ್ಲಿ ನಿನ್ನದೇ ಗುಂಗಲಿ
ಪ್ರತಿಯೊಂದು ಮಾತಿನಲ್ಲಿ ಅನುರಣಿಸಿದೆ ಸೋಜಿಗದ ಶೃಂಗಾರ
ಶೃತಿಗೂಡಿದ ಹಾಡಿನಲಿ ಕರಣಗಳು ಆಲಿಸಿದ ಧನಿ ಗಂಭೀರ,
ಕಣ್ಣೋಟಕೆ ಕಾಣದಾಯಿತು ಮನದ ದಾರಿ,ಮರಣಿಸಲೆ ಒಂದು ಅವಧಿ
ಮುಳುಗಿಹೋಗೋಣ ಒಲವ ಜೀವನದಿ,ತೇಲುತ ಹರಿಯುವ ಪ್ರೇಮಶರಧಿ
- veerabhadra
15 Dec 2016, 09:40 am
ಪರಿಪರಿಯಾಗಿ
ಮೊರೆ ಹೋದರೂ
ಮನ ಕರಗದ
ದೇವರಂತೆ ಅನಿಸುವ ನೀನು ,,..
ವಿಧ ವಿಧವಾಗಿ ಅರಳುವ
ಮನ ಸೂರುವ
ಹೂಗಳಲಿ
ಪ್ರತ್ಯಕ್ಷವಾಗಿ ವರವನೀವನೊ ನೀನೇ .
...ಭಾರತಿ
- Bharavi
15 Dec 2016, 09:40 am
ನಿನ್ನ ಕಣ್ಣ ಕನ್ನಡಿಯಲಿ ಪ್ರತಿಪಾಲಿಸಲು,
ನಾ ಕಾಯುವೇನು ಹಗಲಿರುಳು
ನೀ ಎದುರಾಗೊ ಸಮಯವನು..
ನೀ ಕಂಡ ಕ್ಷಣದಲಿ
ಧ್ವನಿ ಬರದೆ ಹೋಗಲು
ಮೌನ ರಾಗದಿ ನಿವೇದಿಸುವೆ
ನನ್ನ ಪ್ರೀತಿಯ ನಿನ್ನೆದುರಲಿ...
- ಬಾನು ಅಡಿಗಾರ್
15 Dec 2016, 09:39 am
ಅಡಿಗಡಿಗು ರಂಗನು ಚೆಲ್ಲುತಾ
ಉಲ್ಲಾಸದಿ ನಕ್ಕ ಬಾನಂಗಳದಿ
ಕೈ ನೀಡಿದ ನೇಸರ ಜೊತೆಗೂಡಲು
ಹೊಸ ಪುಟವ ತೆರದು ಬಾಳಲಿ...
- Indushekar Chinivar
15 Dec 2016, 05:45 am