Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾವ್ಯ ಕನ್ನಿಕೆ

ಸ್ನಿಗ್ಧ ರೂಪಿನ ಚೆಲುವೆ
ಹಾಡಲೆ ನಿನಗೆ ಭಾವಗೀತೆ ..
ಸೂಜಿಗಲ್ಲಿನ ನಿನ್ನ ಸೆಳೆತಕೆ
ಹಾಡಬೇಕೆನಿಸಿದೆ ಮಧುರಗೀತೆ..
ಸುಶ್ರಾವ್ಯ ಸುಪ್ತ ಸ್ವರಕೆ
ಗುಣುಗುಣಿಸಿದೆ ಹೃದಯಗೀತೆ..
ಕಾವ್ಯ ಕನ್ನಿಕೆ ನೀನೇ
ನನ್ನಂತರಂಗದ ಮೌನ ಗೀತೆ ...

_ಭಾರತಿ

- Bharavi

17 Dec 2016, 07:14 am

ನೆನಪು

ನೆನಪ್ಪಿನ ಮನೆ ಕಟ್ಟಿರುವೆ..
ನಿನ್ನ ಜೋತೆಗಿನ ಮಧುರಕ್ಷಣಗಳೊಂದಿಂಗೆ
ನೀ ಸಿಕ್ಕರೂ ಸಿಗದಿದ್ದರೂ
ನೀನೇ ನನ್ನ ಉಸಿರೂ!!

- Ranganath KS

17 Dec 2016, 07:10 am

ದೇವರ..? ಯಾತನೆ-ಯಾಚನೆ..!

ನಾನು ಶಿವ..,ಶಿವ
ನಾನೇ ವಿಷ್ಣು, ನಾನೇ ಬ್ರಹ್ಮ
ಮಹಾಗ್ರಂಥ,ಕಾವ್ಯ,ವೇದಗಳೆಂಬ
ಪಹಣಿ-ಪಟ್ಟಗಳಲ್ಲಿ
ದಾಖಲಾಗಿರುವೆನು ನಾನು
ನಾಮಾಕವಾಸ್ತೆಗೆ ಜಗದೊಡೆಯನೆಂದು..


ಹೊನ್ನ ಕಳಸವ ಹೊತ್ತ,
ಬಂಗಾರದ ಬಾಗಿಲಿನ
ಕತ್ತಲ ಕೋಣೆಯ ಒಳಗೆ(ಗರ್ಭಗುಡಿ)
ಕೂಡಿ ಹಾಕಿರುವರು ನನ್ನ,
ಬದುಕಲಾರೆನು ನಾನು, ಇಲ್ಲಿ
ಹೊರಗೆ ತನ್ನಿರಿ ಬೇಗ,
ಯಾಚಿಸುವೆನು ನಿಮ್ಮ.

ಧೂಪ-ದೀಪ,ಅಗರಬತ್ತಿಗಳ ಕೆಟ್ಟ ಹೊಗೆ
ಕುಡಿದು ಅಸ್ತಮವಾಗಿದೆ ನನಗೆ.
ಶಂಖ-ಜಾಗಟೆಗಳ ಶಬ್ದಗಳಲ್ಲದೆ
ಬೇರೆ ಕೇಳಿಸದು ಕಿವಿಗೆ,
ಅಭಿಷೇಕಗಳಲ್ಲಿ ಮುಳುಗಿದ್ದರಿಂದ ಶೀತ,ಚರ್ಮರೋಗ.
ಸಿಹಿಯಡುಗೆ ನೈವೇದ್ಯವ ಉಂಡು ಡಯಾಬಿಟಿಸು,
ವಡೆ,ಕಡುಬು,ಮೊದಕಗಳ ತಿಂದು,
ಅಂಡು ದೊಡ್ಡದಾಗಿದೆ ನಡೆಯಲಾಗುತ್ತಿಲ್ಲ.

ನಿಮ್ಮ ಪರಿಚಿಯದ ವಿಳಾಸ ಕೊಡಿ
ಬದುಕಲಾರೆನು ನಾನು ಇಲ್ಲಿ,
ಹೊರಗೆ ತನ್ನಿರಿ ಬೇಗ,
ಯಾಚಿಸುವೆನು ನಿಮ್ಮ.

ಉದಯಿಸುವ,ಮುಳುಗವ ಸೂರ್ಯನ ನೋಡಬೇಕಿದೆ ನಾನು.
ಹಕ್ಕಿಗಳೊಂದಿಗೆ ಸೇರಿ ಲೋಕ ಸಂಚರಿಸಬೇಕಿದೆ ನಾನು.
ಮಕ್ಕಳೊಂದಿಗೆ ನಕ್ಕು- ನಲಿದು ಆಟವಾಡಬೇಕಿದೆ ನಾನು.
ಅಳುವ ನನ್ನವರ ಕಣ್ಣ ಒರೆಸಬೇಕಿದೆ,
ಬಡವನುಣ್ಣುವ ಅನ್ನದೊಳಗೆ ಅಡಗಿ ಕುಳಿತು ಹಸಿವ ತಣಿಸಬೇಕಿದೆ ನಾನು.

ಬದುಕಲಾರೆನು ಇಲ್ಲಿ,
ಹೊರಗೆ ತನ್ನಿರಿ ಬೇಗ,
ಯಾಚಿಸುವೆನು ನಿಮ್ಮ.

ಬನ್ನಿ,ಬನ್ನಿರಿ ಬೇಗ,
ಮಡಿ-ಮೈಲಿಗೆಗಳಿಗೆ ಕಿವಿಗೊಟ್ಟು,
ಅಸ್ಪೃಷ್ಯನಂತೆ ನೋಡ ಬೇಡಿರಿ ನನ್ನ.
ಕೈಮುಗಿದು ಬೇಡುವೆನು.
ಸ್ವೀಕರಿಸಿ ನನ್ನ ನಿಮ್ಮ ಮನದೊಳಗೆ.

ನಾನು ಶಿವ...ಶಿವ
ನಾನೇ ವಿಷ್ಣು, ನಾನೇ ಬ್ರಹ್ಮ.
ಬದುಕಲಾರೆನು ನಾನು ಇಲ್ಲಿ
ಬದುಕಿಸ ಬನ್ನಿರಿ ನನ್ನ.
ಹೊರಗೆ ತನ್ನಿರಿ ಬೇಗ.
ಯಾಚಿಸುವೆನು ನಿಮ್ಮ...



ಪ್ರವೀಣ್ ವಿಪ್ರ

- ವಿಪ್ರ

16 Dec 2016, 11:40 pm

ವಿಪರ್ಯಾಸ

ಏನಿದೀ ವಿಪರ್ಯಾಸ..
ಕಾವೇರಿ ತಾಯಿಗೆ ಸಾಲು ಸಾಲಿನ ಸಂಕಟ..

ಬೇಧ- ಭಾವಗಳ ಸುಳಿವಿರಬಾರದೆಂದು
ನ್ಯಾಯ ದೇವತೆಯು ತನ್ನ ಕಣ್ಣ
ಬಟ್ಟೆಯೊಳಗೆ ಸೆರೆ ಮಾಡಿಕೊಂಡಳು...
ನ್ಯಾಯಕ್ಕೆ ಮುಸುಕು ಹಾಕಿಹರಿಲ್ಲಿ,
ಅನ್ಯಾಯಕ್ಕೆ ಗೆಲುವ ಉಣಬಡಿಸಲು..

ಏನಿದೀ ವಿಪರ್ಯಾಸ,
ಕಾವೇರಿಗೇ ಕೇಸಾ???

ಬತ್ತಿ ಹೋಗುತಿದೆ,
ಕಾವೇರಿಯ ಒಡಲು...
ಸತ್ತು ಬರಿದಾಗುತಿದೆ,
ಕಾವೇರಿಯ ಮಡಿಲು..

ಆದರೂ ಕರುಣೆಯಿಲ್ಲ,
ಸರಕಾರವು ಮಿಡಿಯಲೇ ಇಲ್ಲ.. //2//

ಶಾಂತಿಯ ಪಾಲಿಸಿದರೆ ನ್ಯಾಯದ ಕೊಲೆ,
ಪೈಪೋಟಿಗೆ ನಿಂತರಲ್ಲೇ ರಕುತದಾ ಹೊಳೆ..

ಕಾವೇರಿ ಮಡಿಲು ಬರದೊಳ ಬೀಳುತಿದೆ..

ಬೇಡದ ಮನಸಿನಲ್ಲಿ ಕಾವೇರಿ,
ಕೆ.ಆರ್.ಎಸ್ ಗೆ ವಿ.ಆರ್.ಎಸ್
ಕೊಡುವ ಸಂಭವ ಮೂಡಿದೆ.

ಯಾರೋ ದೋಚುತಿಹರು
ಕನ್ನಡದ ಆಸ್ತಿಯಾ..
ಸುಮ್ಮನೆ ಬಿಡಬೇಕೆ
ಈ ದುರಾಸೆಯಾ..

ಕಾವೇರಿ ಬೆಡಗು ಸೊರಗಿ ಹೋಯಿತಿನ್ನು,
ಮರುಕವೇ ಬಾರದೆ!! ನರಕವೇ ರೈತರಿಗಿನ್ನು..

- ವಿ.ತ್ರಿವೇಣಿ ಪಾಂಡವಪುರ

- ವಿ. ತ್ರಿವೇಣಿ ಪಾಂಡವಪುರ

16 Dec 2016, 11:31 pm

ಕನ್ನಡ ಕ ಲಿ

ಏನ ಬರೆಯಲಿ ಎಲ್ಲ ಬರೆದಾಗಿದೆ,
ಮುಂದಿನ ಕೋಟಿ ಯುಗಕ್ಕಾಗುವಷ್ಟು,
ಬರೆದದ್ದು ಓದದೇ.................... ಹೋಗಿಬಿಟ್ಟರೆ,
ಜೀವಂತ ಹಡೆದರೂ ಹೋದ ಮಗುವಿನಂತೆ,
ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ,
ಬರೆದವನಿಗೂ ಪಾಠಕನಿಗೂ ಹಿಂಸೆ,
ಹಾಗೆಂದು ಸುಮ್ಮನಿರಲು ಭಾಷೆ ಬಿಡದಲ್ಲಾ,
ವಿಚಾರಗಳ ಸಂತೆಯಲಿ,
ಬಡಬಡಿಕೆಯ ವ್ಯಾಪಾರ,
ಮೌನವಂತೂ ಬಹು ತುಟ್ಟಿ,
ಅದಕ್ಕೇ ಬರೆದೇ'ಬಿಡು'ವೆ, ನೀ ಓದಿ 'ಬಿಡು,'
ಇಬ್ಬರೂ ಬಿಟ್ಟು ನೋಡೋಣ
ಭಾಷೆ ಹೇಗೆ ಓಡುತ್ತದೆಂದು,
ಕೊನೆಗೆ ನೀನೂ ಬರೆದು ’ಬಿಡು’
ನಾನೂ ಓದಿ ’ಬಿಡುವೆ’.
ಬಿಟ್ಟು ಹಿಡಿದು ಬಿಟ್ಟು ಹಾರಿಸುವ
ಕನ್ನಡದ ಬಾವುಟ,
ಜೈ ಭಾರತ ಜನನಿಯ ತನುಜಾತೆ,
ಜೈ ಹೇ ಕರ್ನಾಟಕ ಮಾತೆ.

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

16 Dec 2016, 11:27 pm

ಅರಿಕೆ

ಪ್ರತಿ ಕ್ಷಣವೂ ಹುಟ್ಟು
ಜೊತೆಗೆ
ಸುಖ-ದುಃಖ
ಕಷ್ಟ-ಸುಲಭ
ನೋವು-ನಲಿವು
ದ್ವಂದಗಳಾಚೆ
ಬೆಳೆವುದೇ
ಜೀವನ
ಆಜೀವನದೊಡತಿ/ಒಡೆಯ
ನೀನಾಗು

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

16 Dec 2016, 11:22 pm

ಫಾತಿಮಾ ಅಲ್ಲ ಪ್ರತಿಮಾ

ಮುದ್ದಾಗಿ ನಾ ಕರೆಯುವೆ ನಿನ್ನ ಫಾತಿಮಾ
ನೀ ನನ್ನ ಅರಿತು ಮುದ್ದು ಮಾಡು ನನ್ನ ಪ್ರತಿಮಾ
ನೀನೇ ಕನಸು , ನೀನೇ ಮನಸು
ದಯಮಾಡಿ ನನ್ನ ಪ್ರೀತಿಸು....

- Ranganath KS

16 Dec 2016, 10:10 pm

7 ಜನ್ಮವು ನಿನಗೆ ಮೀಸಲು

ನಿನ್ನ ಕಂಡ ಆ ಕ್ಷಣ
ತನಿದು ಕುನಿಯಿತು ನನ್ನ ಮನ
ಅರಿಯದೆ ಹೋದೆ ನಿ ನನ್ನ ಪ್ರೀತಿಯನ್ನ
ನಿನಗಾಗಿ ಹಂಬಲಿಸುತ್ತಿದೆ ಈ ಮನ
ನಿನ್ನದೇ ನೆನಪು ಪ್ರತಿ ಕ್ಷಣ

- ಯಶ್ ಗೌಡ - S.B

16 Dec 2016, 09:20 pm

ಮತ್ತೆ ಚಿಗುರಿದ ಪ್ರೀತಿ

ದೇಹ ಸುಕ್ಕಾಗಿಹ
ಈ ಇಳಿ ವಯಸ್ಸಿನಲ್ಲಿ
ಉರುಗೋಲ ಹಿಡಿದು
ನಾ ನಡೆವುದೆಲ್ಲಿ!!

ಗಡಗಡನೆ ನಡುಗುವ
ಈ ದೇಹದೊಡಲಲ್ಲಿ
ಮಿಡಿಯುತಿಹುದು ಹೃದಯ
ನವ ಉಲ್ಲಾಸ ಚೆಲ್ಲಿ!!

ಸಂಸಾರ ಸಾಗರವ
ಈಜಿ ದಡ ಸೇರಿದ ಮೇಲೆ
ಕೊನೆಯ ಹಂತದ ಪಯಣ
ನಿನ್ನ ಜೊತೆಯಲ್ಲಿ!!

ಹರೆಯದಲಿ ಉದಿಯಾದ
ಮೊದಲನೆಯ ಪ್ರೇಮವದು
ಬಲಿಯಾಯಿತು ಅಂದು
ಜಾತಿಗೆ ಅಂಜಿ!!

ತಡೆಯುವರು ಯಾರಿಹರು
ಈ ನಮ್ಮ ಮಿಲನವನ್ನು
ಇಂದು ಸಂದಿಸುವೆ ನಿನ್ನ
ಬಂದು ಸೇರಿಕೊ ನನ್ನ!!

ಉರುಗೋಲ ಬದಿಗೆಸೆದು
ಕರದಲ್ಲಿ ನಿನ್ನ ಹಿಡಿದು
ನನ್ನ ಎದೆಗೊಮ್ಮೆ ಒರಗಿಸಿ
ಬಿಡಲು ಒಲ್ಲೆ!!

ಇಂದು ತಳೆಯಲಿದೆ
ಪ್ರೀತಿಯು ಮರುಜನ್ಮ
ಎಂದು ಬರುತಲಿದೆ
ಮತ್ತೆ ಚಿಗುರಿದ ಪ್ರೀತಿ!!

- ಪಿ.ಜಿ.ಜ್ಯೋತಿ

16 Dec 2016, 06:34 pm

ನಿರೀಕ್ಷೆ...

ಒಲವೆ..
ಎದೆಯಲಿ ಮಿಂದ
ಭಾವ ಕುಂಚವು
ಮನದ ಭಿತ್ತಿಯಲಿ
ನಿನ್ನ ಚಿತ್ತಾರ ಬಿಡಿಸಿ
ಕಾತರದಿ ಕಾದಿದೆ
ಇಳಿ ಸಂಜೆಯಲಿ...

- Indushekar Chinivar

16 Dec 2016, 06:29 pm