Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

#ಮಗಳು

ಧರೆಯ ದೇವತೆ ಈ ನನ್ನ ಮಗಳು
ಅವಳಿಗೆ ನಾ ಇಟ್ಟ ಹೆಸರು ಧರಿತ್ರೀ
ನನ್ನ ಮನದ ಇಂಗಿತ ಅರಿತಿದ್ದಳೆನು ಮಗಳು
ಹುಟ್ಟಿ ಬಂದಳು ಇನ್ನೂಬ್ಬ ತಾಯಿಯಾಗಿ
ಈ ನನ್ನ ಜೀವಕೆ, ಧರೆಗೆ ಒಡತಿಯಾಗಿ.....

- Umesh

13 Dec 2016, 11:26 pm

ಹನಿ...

#
ಮನ ಬಿಚ್ಚಿದ ಸ್ನೇಹದೆಳೆಗೆ
ತಾರೆಗಳು ನೆನಪಿನ ಹೂಗಳ
ಪೊಣಿಸುವ ಇರುಳು...

- Indushekar Chinivar

13 Dec 2016, 10:06 pm

ಚಂದ್ರಂಗೆ ಚಶ್ಮಾ ಹಾಕಿ...!

ಚಂದ್ರಂಗೆ ಚಶ್ಮಾ ಹಾಕಿ
ಸೂರ್ಯಂಗೆ ಸೂತ್ರಾ ಕಟ್ಟಿ
ಆಕಾಶಕ್ಕೆ ರೆಕ್ಕೆ ಕಟ್ಟಿ
ಭೂಮಿಗೆ ಕುದರೆ ಕಟ್ಟಿ
ರಥದೋಳಗೆ ರಾಜಾ ರಾಣಿ ಯಾಗೋಣ

ಕಾಮನ ಬಿಲ್ಲು ಹೆಗಲಿಗೇರಿಸಿ
ಮೋಡಗಳ ದಿಂಬಿಗೆ ತಲೆಯ ಒರಗಿಸಿ
ಆಕಾಶದ ಅಗಣಿತ ಚುಕ್ಕೆಗಳನು
ಎಣಿಸಿ ಎಣಿಸಿ ಭೂಮಿಗೆ ಎಸೆಯೋಣ

ರಚಣೆ: ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

13 Dec 2016, 08:30 pm

ಮಗು ನಾನು

" ಮಗು ನಾನು"
-------------
ಈಗೀಗ ಕಣ್ತೆರೆದ ಮಗು ನಾನು
ಜಗದ ಬೆಳಕ ನೋಡಲು
ನನ್ನ ಪಾತ್ರ ನಾನಾಡಲು

ಈಗ ಜನ್ಮತಳೆದ ಜೀವ ನಾನು
ಯಾರು ತಂದೆ? ಯಾರು ತಾಯಿ?
ಯಾರು ಬಂಧು ಬಳಗ ನಾ ಕಾಣೆ?

ಯಾರೋ ಹೆಸರಿಡವರು
ಯಾರೋ ಉಸಿರ ನೀಡಿದವರು
ಒಂದು ತಿಳಿಯದು ಈ ಅನಾಮಿಕಗೆ

ಯಾರೋ ಎತ್ತಿಕೊಳ್ಳವರು
ಯಾರೋ ಮುದ್ದಿಸುವರು
ಅದೋ ಗೊತ್ತಿದೆ ನಾನವರ
ಪ್ರೀತಿಯ ಜೀವಗೊಂಬೆ

ರಚನೆ* ಆನಂದ ಎಸ್ ಪೂಜಾರಿ

- ಆನಂದ ಪೂಜಾರಿ

13 Dec 2016, 07:24 pm

ಚಂಡ.

ಕಡಲ ಧರೆಯಲಿ
ಅಬ್ಬರಿಸಿ ಬೊಬ್ಬಿರಿದ ಚಂಡ
ನಂತ ವ್ಯಾಘ್ರ " ವಾರ್ದ " ನನ
ಮಾರುತಕ್ಕೆ ತತ್ತರಿಸಿ ನಲುಗಿ ಸುಳಿ
ಗಾಳಿಗೆ ಮಡಿಲೊಳಗಿನ ದುಃಖ ಚೆನ್ನೈ
ನಗರಿಗರ ಮೋರೆಯ ನೋವ್ವು-ದುಮ್ಮಾನ
ಗಳಿಗೆ ನನ್ನದೋಿಂದಿಷ್ಟು ಕನಿಕರದ
ಹನಿ ಹನಿ ಕಣ್ಣೀರು.

ಭಗವಂತನೆಂಬ ಓ,
ನಮ್ಮೆಲ್ಲರ ಪ್ರಭುವೇ ನಿನಗೋಂದಿಷ್ಟು
ಕಾಳಜಿಯಿದ್ದಲ್ಲಿ ನನ್ನವರ ದುಗುಡ ಕೇಳಿ
ಉಳಿಸಿ ಬಿಡು ಇದೊಂದು ಬಾರಿಯೂ...

--ಭಾಮಿನಿ ಡಿ.ಕೆ .ಎಸ್

- bhamini. chitradurga

13 Dec 2016, 07:04 pm

ಹನಿ..

ಇಳಿ ಸಂಜೆಯಲಿ ,
ತನ್ನ ಕೆಂಪು ಕರದಲಿ‌
ಇಳೆಯ‌ ಗಲ್ಲವ ತಾಕಿ
'ಕಾಲವು ಕ್ಷಣ ನಿಲ್ಲಬಾರದೆ'
ಎಂದು ಆದಿತ್ಯ ಕೇಳಿದ ಸಂಜೆ...

- Indushekar Chinivar

13 Dec 2016, 06:03 pm

ರೈತನ ಕೄಷಿ

ದಟ್ಟವಾದ ಕಾಡಿನಿOದ ಸಾಕಾಗುವಷ್ಟು ಮಳೆ.
ಕಷ್ಟದಿOದ ರೈತ ಪಡೆದ ಬೇಕಾದ ಬೆಳೆ.
ದೊಡ್ಡ ಯOತ್ರ ಬOತು ತೆಗೆಯಲು ಕಳೆ.
ಗಡಗಡ ಶಬ್ದಕ್ಕೆ ನಡುಗಿಹೋಯಿತು ಇಳೆ.

ದನದ ಸಗಣಿಯೇ ಅOದು ರೈತನಿಗೆ ಆಧಾರ.
ರಾಸಾಯನಿಕವೇ ಇOದು ಅಲ್ಪಬೆಳೆಗೆ ಆಹಾರ.
ಸಾವಯವ ಕೄಷಿ ಮಾಡುವಾತನೇ ಬಲುಚತುರ.
ಶ್ರಮಪಟ್ಟು ಮುOದೆ ಬOದ ರೈತನಾಗುವ ಪ್ರಗತಿಪರ.

ಬೆಳೆಸಿದ ಬೄಹತ ಬೆಳೆಗೆ ಬಾಜಾರಿಲ್ಲ ಬೆಲೆಯಿಲ್ಲ.
ಮಧ್ಯವರ್ತಿಯ ಮೋಸಕ್ಕೆ ಮನ್ನಣೆ ಇದೆಯಲ್ಲ.
ಕOಗಾಲಾದ ಕOಗಳಲ್ಲಿ ಕಣ್ಣಿರಿಗೆ ಬರವಿಲ್ಲ.
ಜನನಾಯಕರ ಮಾತಕೇಳಿ ರೈತ ಕಿವುಡಾದನಲ್ಲ.

ಕೀಟಕ್ಕಾಗಿ ಕ್ರೀಮಿನಾಷಕದಿOದ ಭೂಮಿ ಹಾಳಾಯಿತು.
ಬೆಳೆ ಬೆಳೆಯದೆ ಪಡೆದ ಸಾಲ ತೀರದಾಯಿತು.
ಸ್ವಾರ್ಥದ ಜನರ ದಾಹ ತೀರದೆ ಅತಿಯಾಯಿತು.
ಬೆಳೆಯ ಜೊತೆಗೆ ರೈತನ ಶವ ಬೆOಕಿಯಲ್ಲಿ ಲೀನವಾಯಿತು.

ಹಲವರಲ್ಲಿ ಕೆಲವರುOಟು ಎಲ್ಲದಕ್ಕೂ ಅಪವಾದ.
ಶ್ರಮದ ಖುಷಿಯಲ್ಲಿ ಫಲವ ತೆಗೆದ ಸಮ್ರದ್ಧ.
ತನ್ನ ನOಬಿ ಕಾಯಕ ಮಾಡುತ ಫಲದಾಯಕನಾದ.
ಪ್ರೀತಿಯಲ್ಲಿ ಎಲ್ಲರಿOದ ಪ್ರಣಾಮ ಪಡೆದ.

- rukmini

13 Dec 2016, 05:07 pm

ಹೂಮನದ ಹೆಣ್ಣೇ...

ಹೂಮನದ ಹೆಣ್ಣೇ
ನೀ ಅರಳೆಯ
ಮೊಗ್ಗಾಗಿ ಮುನಿದು
ನರಳಿ ನಲುಗುವೆಯಾ

ನವಿರಾದ ಭಾವಗಳ
ಅಂತರಾಳದಿ ಬಚ್ಚಿಟ್ಟು
ಸುಂದರ ಸ್ವಪ್ನಗಳ
ಪಕಳೆ ಅಡಿಯಲಿ ಕಾಪಿಟ್ಟು
ಮೌನದಿ ಕೊರಗುವೆಯಾ

ನೀ ಸೂಸುವ ಸುಗಂಧ
ಕನಸ ಬಿತ್ತುವ ಮೃದುಸ್ಪರ್ಶ
ಸವಿಮಾತ ಮಧುಪಾನ
ನಿನ್ನಂತರಂಗದ ಸ್ನೇಹಯಾನ
ನೀನೆ...
ಈ ಜೀವಕೆ ಕೋಮಲಗಾನ
ಈ ಜನ್ಮದ ಚೈತನ್ಯತಾಣ

ಓಹ್ ಹೂಮನದ ಹೆಣ್ಣೇ..
ನನಗಾಗಿ ಅರಳೆಯ‌...?

- Indushekar Chinivar

13 Dec 2016, 04:25 pm

ಕ್ಷಮೆಯಿರಲಿ ಹೂಗಳೆ...

ಹೊಸ ಹೊಂಬೆಳಕು
ಅಲ್ಲಲ್ಲ ಬರಿದೆ ಬೆಳಕು
ನಿಜ ನಗೆಯ ಸ್ವರೂಪ
ನೋವ ಜಯಿಸಿದ ಭಾವ ...
ಧರೆಗಿಳಿದ ವರ್ಷನು
ಸುರಿಸಿ ಅಮೃತ ಧಾರೆ
ಮರೆಸಿ ನಿನ್ನೆಲ್ಲ ನೋವು
ಸರಿಸಿದನೆ ಸಹಿಸಿದ ನೋವ ತೆರೆ ..
ಕ್ಷಮೆಯಿರಲಿ ಹೂಗಳೆ ನನ್ನಲಿ
ಸೈರಿಸುವಿರಿ ನಾನುಣಿಸುವ
ಭ್ರಮೆಯ ಭಾರ
ಅರಿಯದೆ ನಿಮ್ಮಂತರಾಳ
ಪ್ರತಿಯಾಗಿ ನೀವೀವಿರಿ
ಬರಿದೆ ಮುದವನು ,,,
ಬಿರಿದಿದೆ ಭಾವುಕ
ಹೃದಯದಾಳದ ಮನ
ಕಳಿಸಿದೆ ಕಣ್ಣೀರಧಾರೆ
ನಿಮ್ಮೊಡನೆ ಆತ್ಮನಿವೇದನೆಗೆ ..
ಮೇಘವೆ ,ವರ್ಷವೆ ವಂದನೆ
ಬಿಕ್ಕಿಸಿದೆ ಮನವನೆ
ತಂದೆ ಹಗುರ ಭಾವನೆ
ಕರುಣಾಳುವಿನ ಹರಿಕಾರ ನೀನೆ ...

- Bharavi

13 Dec 2016, 03:57 pm

ಕವಿ- ಕತೆ

ಬೇಡ ಎನ್ನಬೇಡ
ನನ್ನ ಕವಿತೆ
ಬಾಡಿ ಹೋದೀತು
ಸಾಹಿತ್ಯ ಕತೆ

ಬೇಡವಾಯಿತೆ
ಭಾವನೆಗಳ ಮಾತು ಮಂಥನ
ಕೊನೆಯಾದೀತು
ನೋವು ನಲಿವುಗಳ ಕಥನ

ಬೇಸರವಾಯಿತೆ
ಮನದ ತುಮುಲಗಳ ಆಕ್ರಂದನ
ಮುದುಡಿ ಹೋದೀತು
ಮೃದು ಹೃದಯಕಮಲದ ಚೇತನ

ಹೊರೆಯಾಯಿತೆ
ಕಾವ್ಯ ಕನ್ನಿಕೆಯ ತಾಕಲಾಟ
ಮುದವ ನೀಡೀತು
ಅವಳೊಂದಿಗಿನ ಲಲಾಟ

ಕಹಿಯಾಯಿತೆ
ಸಿಹಿ ಸಾಲುಗಳ ಕಣ್ಣೋಟ
ಮಧುರವಾದೀತು
ಸಾಹಿತ್ಯದ ಜೇನೂಟ

ಬರೆಯದಿರಲಾರೆ
ನಾ ನಿನ್ನ, ಕವಿತೆ
ಬೇಸರವಾದರೂ
ನೀ ನನ್ನ ಹಣತೆ

✍ಚಂದ್ರಶೇಖರ ಹೆಗಡೆ
CRP ಗುಳೇದಗುಡ್ಡ ಪಶ್ಚಿಮ

- ಚಂದ್ರಶೇಖರ ಹೆಗಡೆ

13 Dec 2016, 03:50 pm