Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವಿತೆ

ನಾ ಬರೆಯುವೆ ಕವಿತೆ
ಕವಿತೆಯಲ್ಲಿರುವುದೇ ಜೀವನದ ಹಣತೆ
ದಾರಿ ದೀಪವಾಗಲಿ ಈ ಬೆಳಕಿನ ಹಣತೆ
ಸದಾ ನೆನಪಾಗಲಿ ಹಣತೆ-ಕವಿತೆ!!
----ಪ್ರಸನ್ನರಾಮನಗರಂ.

- ಪ್ರಸನ್ನರಾಮನಗರಂ

16 Dec 2016, 05:51 pm

~~~~¶ಓ ಶ್ವೇತಕನ್ಯೆ¶~~~~~

ಓ ಶ್ವೇತಕನ್ಯೆ ಕಲಿಸುವೆನು ಬಾರೆ ಶೃಂಗಾರ ಪಾಠವನು
ಮನಧನ್ಯೆ ಅರಿಯೇ ನನ್ನೆದೆಯ ಪ್ರೇಮದಾಟವನ್ನು
ಜಗವೆ ಸಾಗುತಿದೆ ನೊಡು ಪ್ರೀತಿಯ ದಾರಿಯಲಿ
ನೀ ನೋಡು ಬಂದು ಪ್ರೀತಿಯ ಅಂದರದಲಿ

ಲೇಖನಿಯು ನಾನು ಸ್ವಚ್ಛ ಬಿಳಿ ಹಾಳಿ ನೀನು
ಒಲವಿನ ಶಹರಿಯಲಿ ಬರೆಯೋಣ ಪ್ರೇಮ ಕವನ
ಸಮ್ಮಿಲನದ ಛಾಯೇ ಸಂಮೋಹನದ ಹೂವೇ
ಹೃದಯ ಮಂದಿರದೊಳು ನಲಿದಾಡು ಬಾರೆ ನವಿಲೆ

ಅಲ್ಲೆಲ್ಲು ನಿಂತು ಹುಡುಕಾಡದಿ ಒಲವೇ
ಸಿಗಲಾರದೆಂದು ನನ್ನೆದೆಯ ಚಿಲುಮೇ
ಬಳಿ ಬಾರೆ ಸಖಿಯೇ ತೊರುವೇನು ಮನವೇ
ನನ್ನಂತರಾಳದ ಒಲವುಕ್ಕುವ ಕುಲುಮೇ

ಬದುಕೊಂದು ಕದನ ನಿನ್ನಲ್ಲಿ ಸುದಿನ
ಹೊರಾಡಿ ಪಡೆವೇ ಸಮ್ಮತಿಯ ಕವನ
ಬದುಕೆಂಬ ಬರಡು ನನ್ನಲ್ಲಿ ಇವುದು
ಒಲವಿನ ಪನ್ನಿರ ತಂದು ಮಿಂಚನ್ನು ಸುರಿಯೇ

ಮುಸ್ಸಂಜೆಯ ಸಮಯ ಭಾನೆಲ್ಲಾ ರಂಗಾಯಣ
ಕಂಡೆ ನಿನ್ನ ನಾ ಅಲ್ಲೆ, ಆ ದಿನ ನನ್ನೆಗೆ ರಿಂಗಣ
ಒಲವೆಂಬ ವೀಣಿ ನೀ ಮಿಟು ಮದನೆ
ಶೃಂಗಾರ ಕವನ ಹೊಮ್ಮುವುದು ಕೇಳೆ

ನಾನಿಲ್ಲಿ ಕಾಯುವೆನು ನಿನ್ನಾಗಮನದ ಕ್ಷಣಕೆ
ಬದುಕೆಂಬ ಗುಡಿಯ ದೇವತೆಯ ಮನಕೆ
ನೀ ಅಲ್ಲಿ ನನ್ನಾತ್ಮದೊಲುಮೆ ನಿನ್ನಲ್ಲಿ
ನಾ ಇಲ್ಲಿ ಮೂಕ ವಿಸ್ಮಯ ನಿನ್ನಾಗಮನದಿ ನಾ ತನ್ಮಯ...

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

16 Dec 2016, 03:41 pm

ಕಾತರ

ಎಳೆ ಬಿಸಿಲೆ
ಸುಡು ಬಿಸಿಲೆ
ಹೊಂಬಿಸಿಲೆ
ಚುಂಬಿಸಲೆ ನಾ
ಚಿಗುರ ನೀ ಚುಂಬಿಸುವ ಮುನ್ನ

- Rashu

16 Dec 2016, 12:01 pm

ನೀನೊಂದು .

ನೀನೊಂದು ಕುಂಚವಿರದೆ
ಮೂಡಿದ ಅದ್ಭುತ ಚಿತ್ರ ಕಲೆ
ನೀನೊಂದು ಉಳಿಯಿರದೆ
ಮೂಡಿದ ಶ್ರೇಷ್ಟ ಶಿಲ್ಪ ಕಲೆ ,
ಹೂವ ನೋಡಿದೊಡನೆ ಎಂದಿತು ಕಣ್ಗಳು
ನನ್ನಂಗಳದಿ ಪನ್ನೀರ ಚಿಮುಕಿಸಿ
ಚೆಂದದ ಚಿತ್ತಾರ ಬಿಡಿಸಿ
ಶ್ರೇಷ್ಟ ಭಾವನೆಗಳ ಸ್ಪುರಿಸಿ
ಬಾಳ ಬೆಳಗುವ ನೀನು
ನನ್ನ ಪಾಲಿನ ಭಾಗ್ಯ ದೇವತೆ
ಎಂದು ಕಣ್ಣ ಮುಚ್ಚಿ ಹೂವಿಗೆ
ಕೃತಘ್ನತೆ ಅರ್ಪಿಸಿತು ಒಳ ಮನಸ್ಸು ...

---ಭಾರತಿ

- Bharavi

16 Dec 2016, 09:03 am

ದೇವರ ದೇವರು

ಕಲ್ಲು ಮಣ್ಣಿನಲ್ಲಿ ದೇವರ ಕಂಡವರು ನಾವು
ನಿರ್ಜಿವ ವಸ್ತುವಿನಲ್ಲಿ ದೇವರ ಕಂಡವರು ನಾವು
ತಮ್ಮ ಕೆಲಸದಲ್ಲಿ ದೇವರ ಕಂಡವರು ನಾವು
ಆದರೆ ಹೆಣ್ಣೆಂಬ ನಿಜ ದೇವರ ಮರೆತವರು ನಾವು
-ಅಪ್ಪಣ್ಣಗೌಡ ಇಡಕನಹಳ್ಳಿ

- ಅಪ್ಪಣ್ಣಗೌಡ.ಐ.ಜೆ.

16 Dec 2016, 07:56 am

ತಾಯಿ

ಯಾರು ಬರೆದವರು
ನಿನ್ನ ಚಿತ್ತದ ಬರಹ!!
ತೀರಿಸಬಹುದೇ ನೀನು
ಹೆತ್ತ ತಾಯಿಯ ಋಣವ!!

ಕಂಡು ಕಾಣದ ಅವಿವೇಕ
ಹೊದ್ದಿ ಮಲಗಿಹುದು!!
ಹುಚ್ಚು ಯೋಚನೆಗಳು
ಹೆಚ್ಚಿ ಕುಳಿತಿಹುದು!!

ನೂರು ಜನ್ಮ ಎತ್ತಿ
ಬರುವಿಯೆಂದರೂ ನೀನು!!
ಕರುಳ ಬಂಧ ಇಲ್ಲದೇ
ಆದೀತೆ ನಿನ್ನ ಜನನ!!

ಕೆಟ್ಟ ಮಕ್ಕಳ ಹೆತ್ತ ತಾಯಿಯು
ಕೇಡ ಬಯಸಳು ತನ್ನ ಕಂದಗೆ!!
ನಿನ್ನ ನಗುವಲಿ ತನ್ನ ನೋವನು
ಮರೆತು ನಗುವಳು ನಿತ್ಯ ಹರುಷದಿ!!

- ಪಿ.ಜಿ.ಜ್ಯೋತಿ

16 Dec 2016, 12:03 am

ವಿಜಯಭೇರಿ

ತನ್ನ ಸುಡದಿರೆ ಹಣತೆ
ಬೆಳಕ ನೀಡದು ಗೆಳತಿ
ಬೆಳಕ ನೀಡದ ಹಣತೆ
ದಾರಿ ತೋರದ ಪ್ರಣತಿ!!

ಇಲ್ಲದರಿಯುವ ಮೊದಲು
ಇದ್ದು ಅರಿಯುವರಿಲ್ಲ
ಕಳೆದಿರುವ ಸಮಯವದು
ಮತ್ತೆ ಮರಳುವುದಿಲ್ಲ!!

ಕಡಲ ದಡದಲಿ ಮನೆಯ
ಮಾಡ ಬಯಸಿದರಿನಿಯ
ಅಲೆಯು ಅಪ್ಪಳಿಸಿತೆಂದು
ಬೆದರಿ ಓಡಿದರೆಂತು!!

ಕುದುರೆ ಲಾಳದ ಎದಿರು
ಮದುರಿ ಕೂರುವ ಬದಲು
ಏರಿ ನಡೆದರೆ ಸವಾರಿ
ನೀನಾಗುವೆ ವಿಜಯಭೇರಿ!!

- ಪಿ.ಜಿ.ಜ್ಯೋತಿ

15 Dec 2016, 11:44 pm

ಎರಡು ದಿನ

ಯಾರ ಅರಿವಿಗೂ ಬಾರದಂತೆ
ನಾನೊಬ್ಬನೇ ಎರಡು ದಿನ
ಒಬ್ಬಂಟಿಯಾಗಿರಲು ಆಶಿಸುವೆ
ಯಾರೂ ಗೊತ್ತಿಲ್ಲದೆಡೆಯಲ್ಲಿ

ಏನೂ ಕಾರಣವಿಲ್ಲ
ಯಾರಲ್ಲಿಯೂ ಬೇಸರವಿಲ್ಲ
ಆವುದೋ ಒಳದನಿಯ ಆಸೆಯಿದು
ಯಾವ ಅನುಸೂಚಿಯಿಲ್ಲದಂತೆ

ಯಾವ ಆತಂಕವೂ ಬೇಡ
ಹೇಗೆ ಎಲ್ಲಿರುವೆನೆಂದೋ
ಎರಡೇ ಎರಡು ದಿನದಿ ತಿರುಗಿ ಬರುವೆ
ಮತ್ತೆ ನಿಮ್ಮೊಳಿರುವೆ ಎಂದೂ

ಕ್ಷಮಿಸಿಬಿಡಿ
ಯಾರಿಗೂ ಹೇಳಲಿಲ್ಲ
ಎಲ್ಲಿಗೆ ಪಯಣವೆಂದು
ನನಗೂ ಗೊತ್ತಿಲ್ಲ

ಹೃತ್ಪೂರ್ವಕ ಹಾರೈಸಿರೇ
ನಾ ಕ್ಷೇಮವಾಗಿರಲೆಂದೂ
ಹೋಗಿ ಬರುವೆ
ಚಿರನಗುವಿನಲಿ ......
......ಎಂದೂ ನಿಮ್ಮವನೇ ನಾನು!

- Prasanna kumar K S

15 Dec 2016, 11:35 pm

¶ಕನ್ನಡದ ಕಲಿಗಳೆ¶

ಕನ್ನಡದ ಕಲಿಗಳೆ ಗಡಿನಾಡ ಹುಲಿಗಳೆ
ತೊರೆದು ಬನ್ನಿರೆಲ್ಲಾ ಜಾತಿ-ಮತವಾ
ನಾಡಿನೋಡಲಿಗಿಂದು ಕುತ್ತುಬಂದೊದೆಗಿವುದು
ಅಭಿಮಾನದ ಅಪ್ಪುಗೆಯ ತಬ್ಬುತಾ ಬನ್ನಿ

ಜಾತಿಯ ನೆಪ ಒಡ್ಡಿ ಬೇದದ ವಿಷ ಬಿತ್ತಿ
ಸಾಮರಸ್ಯದ ಗುಡಿಯ ಕೆಡವುತಿಹರು
ನಮ್ಮದೇ ಅನ್ನ, ಗಂಧ-ಗಾಳಿಯನುಂಡು
ಉಂಡಮನೆಗೆರಡು ಬಗೆಯಲೊಂಚುತಿಹರು

ಕಾವೇರಿಯಿಂದ್ ಗೋದಾವರಿಯವರೆಗೆ
ಹಬ್ಬಿರುವುದು ನಾಡದೇವಿಯ ಕರುಳ ಬಳ್ಳಿ
ಓ ಕರುನಾಡ ಕಲ್ಕಿಗಳೆ ನಾಡನುಳಿಸ ಬನ್ನಿ
ಜಾತಿ-ಮತ ಪಂಥಗಳ ತೊರೆದು ನೀವ್ ಬನ್ನಿ

ತಾಯಿ ರಾಜೇಶ್ವರಿಯು ಬೆತ್ತಲಾಗುವ ಮುನ್ನ
ಎಚ್ಚೆತ್ತು ಬನ್ನಿ ಮಲಗಿದವರನು ಬಡಿದೆಬ್ಬಿಸಿ ತನ್ನಿ
ಅಭಿಮಾನ ಗರ್ವದಲಿ ಮೈ ಮರೆತು ಮಲಗದಿರಿ
ಕುತ್ತುಬಂದಿಹಿವುದು ಎಚ್ಚೆತ್ತು ಹೋರಾಡ ಬನ್ನಿ

ಕನ್ನಡಿಗರೊಕ್ಕಟ್ಟು ಧೀರ ದಿಕ್ಷೆಯ ಛಲ ತೊಟ್ಟು
ಪ್ರಾಣವನೆ ಪಣಕಿಟ್ಟು ಗಡಿಯಾಚೆ ನೂಕಬನ್ನಿ
ಈ ಜನುಮ ಸಿಕ್ಕಿಹುದು ತಾಯಿ ಋಣ ತಿರಿಸಲು
ಭುವನೇಶ್ವರಿಯ ಭವ್ಯ ಸಾಮ್ರಾಜ್ಯವನುಳಿಸ ಬನ್ನಿ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 10:42 pm

~~~¶ಗಜ್ಹಲ್¶~~~

ಮತ್ತದೆ ಮಾದಕ ಹೆಜ್ಜೆ ಕರೆತಂದಿದಿಂದು ನಿನ್ನ ಮನದಂಗಳಕೆ
ಮತ್ತೆ ಭಯದ ಬಯಲಿನಲಿ ನಡುಗುತಿದೆ ಮನ ಸೊಲುವೆನೆಂದು

ನಿನ್ನ ಮನವನೊಮ್ಮೆ ಕೇಳಿಬೀಡು ಮತ್ತೆ ತೋರೆದೊಗುವದೇನು?
ಮತ್ತೆ ತಲೆ ತಗ್ಗಿಸಭಾರದು ನಾನು ಪ್ರೀತಿಯ ಸೋಲಿನಲಿ

ಬದುಕು ನನ್ನನ್ನಿಲ್ಲಿ ತಂದು ನಿಲ್ಲಿಸಿದೆ, ನೀ ಬರಬೇಡ ಜೊತೆಗಿಂದು
ನೀ ಮಾಯಾವಿ, ಮೊಸದ ಚಂದಗಾತಿ, ಸಾಯಿಸಬೇಡವೆ ನನ್ನ;

ಬದುಕೊಂದು ಕದನ ನಾ ಜಯಿಸಬೇಕಿದೆ ಅದನ
ಮತ್ತೆ ಸೊಲಿನ ಸುಳಿಯಲಿ ಸಿಲುಕಿಸಿ ನಲುಗಿಸದಿರೇನ್ನ

ನೋಯುತಿಹವು ಎಷ್ಟೊ ಮನಸುಗಳು ನಿನ್ನ ನಂಭಿ ಏ ಪ್ರೀತಿಯೇ
ಇನ್ನಾದರು ನಿಲ್ಲಿಸು ನಿನ್ನಾಟವನು ಮನಸು ಮಸಣವಾಗುವ ಮುನ್ನ

ಬದುಕಿನ ಚಿಲುಮೆಯಾಗು, ನೀ ಜೀವದ ಗೆಲುವಾಗು,
ಅದನು ಬಿಟ್ಟು ಸ್ಮಶಣದ ತವರಾಗದಿರು ಪಾಪಿ ಪ್ರೇಮವೇ;...,

-ಸಿದ್ದುಯಾದವ್‌ ಚಿರಿಬಿ

- ಸಿದ್ದುಯಾದವ್ ಚಿರಿಬಿ

15 Dec 2016, 10:14 pm