Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಮಾನತೆ?

ಬರಗಾಲದ ಬಿಸಿಲಿನಲ್ಲಿ ಬಡವಾದ ದೇಹ
ಹರಿದ ಅOಗಿಯೊಳಗೆ ತೂರಿಕೊOಡಿದೆ.
ಪ್ರತಿ ಹೆಜ್ಜೆ ಇಡುವುದಕ್ಕೂ ತನ್ನ ಶಕ್ತಿಯೊOದಿಗೆ ಕಲಹ.
ಆದರೂ ಮಗು ಅಮ್ಮನ ಹಿOದೆ
ಓಡುತ್ತಿದೆ ತನಗೆ ತಿOಡಿ ಬೇಕೆOದು.
ಹಸಿದ ಕOಗಳ ಕೂಗು ಜಗತ್ತನ್ನೆ ಮರೆತಿದೆ.

ಅಪಾರ್ಟಮೇಂಟನಲ್ಲಿ ಕೊಬ್ಬಿದ ದೇಹ
ಚಿತ್ರವಿಚಿತ್ರ ಬಟ್ಟೆಯೊಳಗೆ ಸೇರಿಕೊOಡಿದೆ.
ಪ್ರತಿ ಹೆಜ್ಜೆ ಇಡುವುದಕ್ಕೂ ಸೋಮಾರಿತನದೊOದಿಗೆ ಕಲಹ.
ಆದರೂ ಮಗು ಅಮ್ಮನಿOದ ದೂರ ಓಡುತ್ತಿದೆ ತನಗೆ ತಿಂಡಿ ಬೇಡೆOದು.
ವಸ್ತುಗಳೊOದಿಗೆ ಮೈಮರೆತು ತನ್ನನ್ನೇ ಮರೆತಿದೆ.

ಸಮಾನರೆOದು ಹೇಳಲು ಸಾಕು ಒOದು ನಿಮಿಷ.
ಸಾಧಿಸಲಾಗಲ್ಲಿಲ್ಲ ಕಳೆದರೂ ಸಾವಿರ ಸಾವಿರ ವರುಷ.
ಕೆಲವರ ಹಬ್ಬದ ಆಚರಣೆಗೆ ನೆಪ ಹೊಸ ವರುಷ.
ಕOಗೆಟ್ಟ ಕೆಲವರಿಗೆ ಭೂಮಿಯ ತುOಬೆಲ್ಲಾ ವಿಷ.

ಸOವಿಧಾನಕೊಟ್ಟ ಮೊದಲ ಹಕ್ಕು
ನಮ್ಮೆಲ್ಲರ ಸಮಾನತೆ.
ಹೇಳಿ ಅತ್ಮೀಯರೆ,
ನಾವೆಲ್ಲರೂ ಸಮಾನರೇ?

- rukmini

13 Dec 2016, 01:35 pm

ಹೊಸ ಹೊಂಬೆಳಕು

ಹೊಸ ಹೊಂಬೆಳಕು
ಅಲ್ಲಲ್ಲ ಬರಿದೆ ಬೆಳಕು
ನಿಜ ನಗೆಯ ಸ್ವರೂಪ
ನೋವ ಜಯಿಸಿದ ಭಾವ ...
ಧರೆಗಿಳಿದ ವರ್ಷನು
ಸುರಿಸಿ ಅಮೃತ ಧಾರೆ
ಮರೆಸಿ ನಿನ್ನೆಲ್ಲ ನೋವು
ಸರಿಸಿದನೆ ಸಹಿಸಿದ ನೋವ ತೆರೆ ..
ಕ್ಷಮೆಯಿರಲಿ ಹೂಗಳೆ ನನ್ನಲಿ
ಸೈರಿಸುವಿರಿ ನಾನುಣಿಸುವ
ಭ್ರಮೆಯ ಭಾರ
ಅರಿಯದೆ ನಿಮ್ಮಂತರಾಳ
ಪ್ರತಿಯಾಗಿ ನೀವೀವಿರಿ
ಬರಿದೆ ಮುದವನು ,,,
ಬಿರಿದಿದೆ ಭಾವುಕ
ಹೃದಯದಾಳದ ಮನ
ಕಳಿಸಿದೆ ಕಣ್ಣೀರಧಾರೆ
ನಿಮ್ಮೊಡನೆ ಆತ್ಮನಿವೇದನೆಗೆ ..
ಮೇಘವೆ ,ವರ್ಷವೆ ವಂದನೆ
ಬಿಕ್ಕಿಸಿದೆ ಮನವನೆ
ತಂದೆ ಹಗುರ ಭಾವನೆ
ಕರುಣಾಳುವಿನ ಹರಿಕಾರ ನೀನೆ ...

- Bharavi

13 Dec 2016, 01:27 pm

ಅಮ್ಮ ತೋರುವ ದಾರಿ

ಭಯಪಡುವಾಗಲೂ ದಿಕ್ಕು ತೋಚದೆ ಕಂಗಲಾದಗಲೂ
ಅಮ್ಮನೆಂಬ ಮಮತೆಯ ಕೂಗು ಸದಾ ಜೊತೆಗಿದ್ದು ಕಾಪಾಡುವ ನೆರಳಾಗಿದ್ದರೆ
ಬದುಕೆ ಬಂಗಾರ, ಸತ್ಯ ಶೃಂಗಾರ
ನೋವ ನೆಲಳ ಮೀಟುವ ಮಹಾಪೂರ

-- ಬೀರು ದೇವರಮನಿ

- Beeru Devaramani

13 Dec 2016, 12:58 pm

ಶುಭೋದಯಕೆ ಸ್ವಾಗತ

ಚಿಂತಿ ಮಾಡಕೊಂತ ಯಾಕ ಕುಂತಿ..
ಜೀವನ ನೀ ನಡೆಸದೆ ಇದ್ದರೂ ನೀ ನಡೆಸಿದರೂ ತನ್ನ ಪಾಡಿಗೆ ಹಗಲಿರುಳ ತಳ್ಳಿ ನಡಿಯೋದ...
ಕಾಲಿಗಂಟಿಕೊಂಡ ಕಾಲ ಚಕ್ರ ನನ್ನ ನಿನ್ನ ಯಾವತ್ತು ಕಾಯೂದಿಲ್ಲ ...
ಮುಳ್ಳು ಬೇಲಿಗೆ ಮೈಲಿಗೆ ಅಂಟಿಕೊಂಡಿಲ್ಲ ...
ಬಿಸಿಲಿಗೆ ಬೆಂದ ಅರಳಿದ ಗುಲಾಬಿ ನಗುತ್ತಿದೆಯಲ್ಲ..
ಮುಳ್ಳು ಸಂಕಟಗಳಿಗೆ ಎದುರಾಗಿ ಬದುಕ ಸಾಗುತಲಿದೆ
ತಾಳಕೆ ತಕ್ಕಂತೆ ಹೆಜ್ಜೆ ಹಾಕಿ ಸುಂದರ ಬದುಕಿಗೆ ಸಾಕ್ಷಿಯಾದರೆ ಸಾಕು ಅದೇ ಸ್ವರ್ಗ
ನರಕಕ್ಕೆ ಕಿಚ್ಚು ಹತ್ತಿಸಿ ಬರುವ ಕಷ್ಟಗಳಿಗೆ ಬರೆ ಎಳೆದು ಕಳಿಸಿಬಿಡೋಣ....



-- ಬೀರು ದೇವರಮನಿ

- Beeru Devaramani

13 Dec 2016, 12:50 pm

ಚೂರಾದ ಮನ

ಭಾವನೆಯೆ ಬರಿದಾದ ಮೇಲೆ,
ಏಕೆ ಗೆಳೆಯ ಈ ಪ್ರೀತಿಯ ಅಲೆ.
ನಿನಗಾಗಿ ಕಾದು ಸೋತಿರುವೆನು,
ಇನ್ನೆಂದೂ ನಾ ನಿನ್ನ ಬಳಿ ಬರಲಾರೆನು.....

- shwetashri naik

13 Dec 2016, 12:01 pm

ಹೆತ್ತವಳು

ಅಮ್ಮ,
ಬಂದಿರುವುದು ಕಳೆಯಲು ಒಂದಿಷ್ಟು ದಿನ
ಬಂಧನಗಳ ನಡುವೆ ಏಕೆ ಕಟ್ಟಿ ಹೋಗಿದೆ ಈ ಮನ

ನನ್ನದಿಲ್ಲಿ ಎನ್ನಿಲ್ಲ ಎಂಬ ಅರಿವಿದೆ
ಆದರು ಮಹಾದಾಸೆಗಳ ಹೊತ್ತು ಈ ಜೀವ ಸಾಗಿದೆ

ಪುಟ್ಟ ಪುಟ್ಟ ಕನಸು ಬೆಳೆದು ದೊಡ್ಡದಾಗುವುದೇಕೆ?
ಚಿಗುರುವ ಮುನ್ನವೆ ಬಾಡಿ ಹೋಗುವುದೇಕೆ..

ಅರ್ಥವಾಗದ ಈ ಜೀವನಕ್ಕೆ ಉತ್ತರವೆಲ್ಲಿ ಹುಡುಕಲಿ..
ಕೈ ಹಿಡಿದು ನೆಡೆಸೆನನ್ನು ಬಾ ಬೇಗ ನಿನ್ನಿಂದು.

ರವೀಂದ್ರ ಬಿ.ಆರ್.

- ರವೀಂದ್ರ

13 Dec 2016, 11:41 am

ಬಿಸಿಲು

ಮುಂಜಾನೆಯ ರವಿತೇಜನ ಕಿರಣ ಅಪ್ಪುವುದು ಇಳೆಯನು,
ಎಳೆಬಿಸಿಲು ಚಾಚುವುದು ಸಾವಿರಾರು ಜೀವಸಂಕುಲಗಳನು,
ಬಿಸಿಲು ಹೆಚ್ಚಿಸುವುದು ಜಗದ ಸೌಂದರ್ಯವನು,
ಸಂತಸದಲಿ ಮುದಗೊಳಿಸುವುದು ಕಣ್ಣುಗಳನು.

- Shilpa dhruva

13 Dec 2016, 11:22 am

ಅವಲಂಬನೆ

ಅವಲಂಬಿಸುವರು ಇತರರನು,
ಮಾಡುವರು ಸಸಾರವನು,
ಬರುವುದು ಸಂಕಷ್ಟ ನಿರೀಕ್ಷಿಸದೆ,
ಅನುಭವಿಸುವರು ತಾವೇ ಅಪೇಕ್ಷಿಸದೆ,
ಬೇಕಾ ಈ ಅವಲಂಬನೆ?
ಏತಕ್ಕಾಗಿ ಈ ಪರಾವಲಂಬನೆ?
ಎಲ್ಲರೂ ಬದುಕುವುದು ವಿಶಾಲವಾದ ಈ ಪ್ರಪಂಚದಲಿ,
ಇರುವುದು ಎಲ್ಲರಿಗೂ ಅವಕಾಶ ಈ ಜಗದಲಿ,
ತೋರಿಸಿ ಬದುಕಿ ಯೋಚಿಸದೆ,
ಸಾದಿಸಿ ಬದುಕಲಿ ಚಿಂತಿಸದೆ.

- Shilpa dhruva

13 Dec 2016, 11:14 am

"ನನ್ನೆದೆಯ ಹಾಡು" ---------

ನನ್ನೆದೆಯ ಹೊಂಗಾಡಿನಲ್ಲಿ
ನಿನ್ನದೆ ನೆನಪು ಗೆಳತಿ
ಮತ್ತೆ ಮತ್ತೆ ಬರುತೈತಿ
ನೋವನ್ನು ತರತೈತಿ!
ನಿನ್ನ ಮನದ ಮೌನದಲ್ಲಿ
ನನ್ನ ಜೀವ ತುಂಬೈತಿ
ನಿನ್ನ ಮಾತಿನಾಂತರ್ಯದಲ್ಲಿ
ನನ್ನೆದೆಯ ಹಾಡೈತಿ!
ನಿನ್ನ ಕಣ್ ನೋಟದಲ್ಲಿ
ಅದಮ್ಯ ಪ್ರೇಮ ಅರಳೈತಿ
ನಿನ್ನ ಪ್ರೇಮ ಸೆಳೆತದಲ್ಲಿ
ನನ್ನೆದೆಯ ಹಾಡೈತಿ!
ಕಾರಣವಾಯಿತು ನನ್ನ ಬಾಳಿಗೆ
ನಿನ್ನಯ ಪ್ರೀತಿಯ ಬೆಸುಗೆ
ಚಿಗುರೊಡಿಯಿತು ನನ್ನದೆಯಲ್ಲಿ
‌‌‌ ‌‌‌ಮಾಗಿದ ಕನಸ್ಸು
ಪ್ರೇರಣಯಲ್ಲವೇ ಅದಕ್ಕೆ
ನಿನ್ನ ಮೊಗ್ಗಿನ ಮನಸ್ಸು!

---------------------------------------------
@ ಬಸವಪ್ರಿಯ
(ಬಲವಂತ ಮೋರಟಗಿ)

- ಬಲವಂತ ಮೋರಟಗಿ(ಬಸವಪ್ರಿಯ)

13 Dec 2016, 10:50 am

ಶಾOತಿ ಹುಡುಕಿದ ಮನ

ಬದುಕಲಾರೆನು ನಾನು ಬರೀ ಭ್ರಮೆಯೊಳಗೆ.
ಹಿOಸೆ ನೀಡುತ ಕಾಡುವ ಪ್ರಶ್ನೆಗಳೆಷ್ಟೋ ಎದೆಯೊಳಗೆ.
ಹೊರಬOದಾಗ ಸಿಡಿಯುವುದು ಜ್ವಾಲಾಮುಖಿ.
ಮನದ ಮೌನ ಭಾವನೆಯ ಅOತರ್ಮುಖಿ.

ನನ್ನ ಉಸಿರು ಪ್ರೀತಿಸಿದ್ದು ಬರೀ ಹಸಿರನ್ನು.
ಅದು ಸಮ್ರದ್ಧ ನಾಡಿನ ಗOಧದ ಕಾಡು.
ಉತ್ಸಾಹ ಚಿಲುಮೆಯಾದ ಮನದ ಹಾಡು.
ಚಿಮ್ಮುತ್ತಿದೆ ರೋಷ ತಡೆಯಲಾಗುತ್ತಿಲ್ಲ.
ಬೆಳಕು ಕಾಣದಾಗಿದೆ ಕತ್ತಲೆಯ ಜಗದಲ್ಲೆಲ್ಲ.

ನುಡಿಯಲಾಗದ ನುಡಿ ಬರಹಕ್ಕೆ ಇಳಿದಿದೆ.
ಆಕಾಶದಲ್ಲಿನ ಮೋಡದ ವರ್ಷಧಾರೆ ಭುವಿಗಿಳಿದOತೆ.
ಬುದ್ದನ ಶಾOತಿ ಬೇಕೆOದು ಮನ ಬಯಸಿದೆ.
ಆದರೆ ಬುದ್ದನೊOದಿಗೆ ಆತನ ಶಾOತಿಯೂ ಹೊರಟು ಹೋಗಿದೆ.

- rukmini

13 Dec 2016, 10:21 am