Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಿರುಗಿ ಬರಲಾರೆ ನಾ ಆ ನಿನ್ನ

ಮರಳಿ ಬಾರದಷ್ಟು ದೂರಕ್ಕೆ ಬಂದಿರುವೆ
ಮತ್ತೆ ಕೂಗದಿರು ನಲ್ಮೆಯ ಒಲವೇ
ತಿರುಗು ಬರಲಾರೆ ನಾ ಆ ನಿನ್ನ ತೆಕ್ಕೆಗೆ;

ಮನಸನೊಪ್ಪಿಸಿದೆ ಸಾಕೆನ್ನಲಿಲ್ಲ
ಮೈಯನೊಪ್ಪಿಸಿದೆ ದಾಹ ತಿರಲಿಲ್ಲ
ಬದುಕನ್ನೊಪ್ಪಿಸಿದೆ ಬೇಡವೆಂದು ಎಂದು ಹೇಳಲಿಲ್ಲ
ಎಲ್ಲವು ನಿನಗೊಪ್ಪಿಸಿ ನಿರ್ಲಿಪ್ತ ನೆರಳು
ಮೌನದ ನೋವಿನ ಕಣಿವೆಯಲಿ ಸಾಗುತಿದೆ
ಎಲ್ಲರನು ದೂರವಿರಿಸಿದೆ ಮೊದಲು
ಕೊನೆಗೆ ನಡು ನೀರಿನಲ್ಲಿ ಕೈಬಿಟ್ಟ ಛಲವೇ,
ಮತ್ತೇಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬಾರಲಾರೆ ನಾ ಆ ನಿನ್ನ ತೆಕ್ಕೆಗೆ;

ಏಕಾಂಗಿ ಪಯಣ ಸಾಕೆನಿಗೆ
ನಿನ್ನ ಮಧುರ ನೆನಪಿನ ಗಾನ
ಅಂತರಂಗದ ಕುಲುಮೆಯೋಳಗೆ
ಸೋಲೆಂಬ ಜ್ವಾಲಾಮುಖಿಯ ಸಂಗಮ
ಸಂಗಾತಿ ಸಂಪ್ರಿತಿ ಸಂಕೋಲೆಯ ಸುಪುತ್ರಿ
ಏ ಒಲವೇ ನೀನೆಷ್ಟು ಕ್ರೂರಿ ನನ್ನೊಳಗೆ
ಸಾಕು ಮಾಡಿನ್ನು ಹೃದಯ ಹೊಡೆಯುವ ಪಾಠ
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;

ಮನದ ಮಹಲನು ಕೊಳ್ಳೆಯೊಡೆದ ಮೂಹಿನಿ
ಬದುಕನ್ನು ನರಕವಾಗಿಸಿದ ಯಾಮಿನಿ
ಪ್ರೇಮದ ಮುಖವಾಡವನೊತ್ತ ಅಂತರ್ಯಾಮಿ
ಯುವ ಮನಸುಗಳ ಕೊಂದ ನೋವಿನ ಧಮನಿ
ಮತ್ತೆ ಹೂ ಅರಳುವುದೆಂದು ಹಂಬಲಿಸದಿರು
ಮರುಭೂಮಿಯಲಿ ಸಿಡಿಲೊಡೆದು ಒಣಗಿ ನಿಂತ
ಏಕಾಂಗಿ ಮರ ನಾನು ಬಯಸದಿರು ಮತ್ತೆಂದು
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;

ಸಾವಿರ ಕನಸುಗಳನು ಕೂಡಿಸಿಟ್ಟಿ ಅಂದು
ಎಲ್ಲವನು ಕೊಂದು ಹೊರಟೊದೆ ಇಂದು
ಜೀವ ಪಡೆಯಲು ನೀನಗ್ಯಾವ ಅಧಿಕಾರವಿಲ್ಲ
ಇದನ್ನೆಂದು ನಾ ನಿನ್ನ ಪಾಲಾಗಲು ಬಿಡುವುದಿಲ್ಲ
ನೆನಪುಗಳ ಜೋಳಿಗೆಗೆ ದಾಸನಾಗಿರುವೇ ಅಷ್ಟೇ;
ಯುವ ಮನಸುಗಳ ತೆಕ್ಕೆಯಲಿ ಮಗ್ಗಲು ಬದಲಿಸುವ
ವ್ಯೆಬಿಚಾರವನ್ನೆ ಅಧಿಕಾರವೆನ್ನುವ ವ್ಯೆಶ್ಯೆಯೇ
ಮತ್ತೆ ಕೂಗದಿರು ನಲ್ಮೆಯ ಒಲವೇ
ಮತ್ತೆಂದು ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ

ನಿನ್ನಿಂದ ಪಡೆದ ನೆನಪುಗಳನೆ ಹೂತು
ಕವಿತೆಗಳ ಫಲ ಪಡೆದು ನಿನ್ನದೇ ಹೆಸರಿಡುವೇ
ಸ್ತಬ್ಧವಾದ ನನ್ನೆದೆಯ ಹೃದಯ ವೀಣೆಗೆ ಕಲಿಸಿ
ಒಲವೇ ನಿನ್ನ ರಂಗ ಮಂದಿರದ ಲೀಲೆಗಳನು
ಜಗತ್ತಿನ ಮುಂದೆ ವೈಣಿಕನಾಗಿ ಫಲಿಕಿಸುವೆ
ನವಬಾವದಲಿ ನವೂದಯದ ಕಿರಣವನ್ನು
ಮತ್ತೊಮ್ಮೆ ತೆರೆದಿಡುವೆ ಕೆಂಬಣ್ಣದೊಕಳಿಯಲ್ಲಿ
ಕರೆದರು ಕೇಳಿಸದಂತೆ ಸಾಗುವೇನು ಬಿಮ್ಮನೆ
ನಡೆಯಲಾರದು ಇನ್ನು ನಿನ್ನಾಟ ಮುಗಿಸಿಬೀಡು ಸುಮ್ಮನೆ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:44 pm

ದೇವರು ಹಚ್ಚಿದ ಹಣತೆ

ಅಂತರಂಗದ ಪ್ರೇಮ ಗುಡಿಯ ಅಂಗಳದಲಿ
ಹಾರದೆ ಉರಿಯಲಿ ದೇವರರು ಹಚ್ಚಿದ ಹಣತೆ
ತಮಂದ ಪಯಣಕೆ ನಿರ್ಮಲ ಬೆಳಕನು
ಚಲ್ಲುತ ಸಾಗಲಿ ನವೂದಯದ ಪ್ರಣತಿ

ಅದಿ-ಅಂತ್ಯಕೂ ನೋವು-ನಲಿವಿಗೂ
ಇರಲಿ ಬೇದವಿಲ್ಲದ ಪ್ರೀತಿಯ ಸಮತೆ
ಬಯಸಂಶಯಗಳ ಸಂಕೋಲೆಯಲಿ
ಬದುಕಿಗೆ ಸಾರಲಿ ಒಲುಮೆಯ ಘನತೆ

ಕೊಲ್ಲಲು ಎತಿದೆ ಕೈಗೂ ಗೊತ್ತಿದೆ
ಒಲುಮೆಯ ಬೆಚ್ಚನೆ ಅಪ್ಪುಗೆಯ ಪ್ರೀತಿ
ಚುಚ್ಚುವ ಮುಳ್ಳಿನ ನಡುವೆ ನಗುವುದು
ಗುಲಾಬಿ ಹೂವಿಗದು ಬದುಕಿನ ನೀತಿ

ಜ್ವಾಲಮುಖಿಯನು ಚಿಮ್ಮುವ ಒಡಲಲು
ಚಿಗುರದೇ ಚೆಲುವಲಿ ಹಸುರಿನ ಗರಿಕೆ?
ಸುನಾಮಿ ಅಲೆಯಲು ಅಡಗಿ ಕುಳಿತಿದೆ
ಶಾಂತತೆಯ ಮಧುರ ಮಂಥನದ ಮಹಿಮೆ

ದ್ವೇಷವ ಸಾರುವ ಮನಸಿನ ಕೊಳದಲು
ಚಿಮ್ಮಲಿ ಸಿಹಿ ನಲ್ಮೆಯ ಪನ್ನಿರಿನ ಒರತೆ
ಜಾತಿ-ಮತಗಳ ಮಂದಿರದಲ್ಲು ಇರಲಿ
ಏಕರೀತಿಯ ಮನುಜ ಪ್ರೇಮದ ಅಳತೆ

ಸುಡುವ ಸೂರ್ಯನು ತಂಪು ಚಲ್ಲುವ
ಸಂಜೆಯ ಕರಪಿನ ರಂಗಿನ ಬಾನಿನಲಿ
ಉರುಳುವ ಚಂದಿರನು ನಗುವನು
ಏಕಾಂತದಲಿ ಅದುವೆ ಅವನಿಗೆ ಸ್ಪೂರ್ತಿ

ವಿವಿಧತೆಯಲಿ ಏಕತೆ ಸಾರುತಿಲಿರವ
ಕಾಣದ ದೇವನೆ ಇದುವೇ ನಿನ್ನಯ ರೀತಿ
ಅಳುಸುವೆ-ನಗಿಸುವೆ ಕೋಡಿಸಿ ಒಲಿಸುವೆ
ನಿನಗದು ಬದುಕಿನ ಭರವಸೆಯ ನೀತಿ

ಬೆಳಗುವ ಹಣತೆಯ ಹೃದಯದಿ ಹಚ್ಚುವೆ
ಸುಡುವುದಕದನು ಬಳಸುವದು ಆನೀತಿ
ಸುಟ್ಟರು ನರಳದೆ ಸಾಗುವುದನು ಕಲಿಸುವೆ
ಸಾವಿಗೂ-ನೋವಿಗು ಕಾರಣ ನೀನಾಗಿರುವೆ
ನತ್ಮಯ ದೇವನೆ ನಿನ್ನ ಲಿಲೇಗೆ
ಚಿನ್ಮಯ ನಾ ನಿನ್ನನು ಸೇರುವ ಹೊತ್ತಗೆ...

,-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:42 pm

ಹೋಗಿಬಿಟ್ಟಳವಳು

ಹೋಗಿಬಿಟ್ಟಳವಳು ತಿರುಗಿ ನೋಡದೆ
ಕನಸುಗಳ ರಾಶಿಗೆ ಬೆಂಕಿಯ ಸುರಿದು
ಧಗಧಗನೆ ಹತ್ತಿ ಉರಿಯುತಿವೆ ಜ್ವಾಲೆಯಲಿ;
'ನನ್ನ ಅಂತಿಮ ಯಾತ್ರೆಯ ದಾರಿಯಲಿ'
'ಹೂಗಳ ಚಲ್ಲಿರಿ, ಅವಳು ಬಂದರು ಬರಬಹುದು'
ಬೂದಿಯಾಗುವ ಭಾವನೆಗಳ
ಅಂತಿಮ ಸಂಸ್ಕಾರದ
ಕೊನೆಯ ಕಾರ್ಯಕ್ಕೆ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:41 pm

ಮುಗುಳು ನಗೆ

ನಲಿವಿನ ಮುನ್ನ ಸುಳಿದಾಡುವೆ
ನಗುವಿನ ಸಾರಥಿ ನೀನಾಗಿರುವೆ
ಮೌನವ ತಬ್ಬಿದ ಮೊಗದೊಳಗೆ
ನಲ್ಮೆಯ ಕಂಪನ ನೀ ತರುವೆ
ಹೇಳಿಬೀಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಪ್ರೇಮ ಸಮ್ಮತಿಗೆ ಮುನ್ನುಡಿ ಬರೆವೆ
ವಿರಹದಲು ನೆನಪುಗಳ ಕಲರವವಾಗುವೆ
ನಲ್ಲೆಯ ಅಂತಿಮ ನಿರ್ಗಮನದಲಿ
ನೋವಿಗ ಚರಿತೆಗೆ ಬೆನ್ನುಡಿ ಬರೆವೆ
ಹೇಳಿಬಿಡು ಮುಗುಳುನಗೆ
ನೀ ಯಾರ ಸ್ವತ್ತೆಂದು ನನಗಿಂದು

ಮುದುಡಿದ ತಾವರೆಯಲು ಇರುವೆ
ಅರಳುವ ಗುಲಾಬಿಯಲು ನಲಿವೆ
ಜನನಕೂ-ಮರಣಕೂ ನಿನ್ನದೇ ಸ್ವಾಗತ
ಮೊಗದಲಿ ಸಂಚರಿಸುವ ಸುಧೆಯೇ
ಹೇಳಿಬಿಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಮಳೆ ಹನಿ ತುಂತುರು ಮೈದಡಿವಿರಲು
ಮುತ್ತಿನ ಮಾಲೆಯ ಅದು ಹೆಣೆದಿರಲು
ಮುಂಜಾವಿನ ಸೋನೆಯು ನಿನಾಗಿರಲು
ಭುವಿಯ ಕಂಪನ ನನ್ನೆದೆ ಚುಂಬನ
ಹೇಳಿಬಿಡು ಮುಗುಳು ನಗೆ
ನೀ ಯಾರ ಸ್ವತ್ತೆಂದು ನನಗಿಂದು

ಬರೆಯು ಕವಿತೆಯ ಸಾಲಿನಲಿವಿತು
ವೀಣೆಯ ಮಿಟುವ ವೈಣಿನೊಳಗು
ಸ್ವರವನು ಬೆರೆಸುವ ಗಾಯಕನಲ್ಲು
ಕೇಳುವ ರಸಿಕನ ನಗೆ ಮೋಗದಲ್ಲು
ಚಿಮ್ಮುವ ಚಿನಕುರುಳಿ ಹೇ ಮುಗುಳು ನಗೆ
ಹೇಳಿಬಿಡು ನೀ ಯಾರ ಸ್ವತ್ತೆಂದು ನನಗಿಂದು

ನವಿನಲಿ ನಾಟ್ಯಕೆ ಜೊತೆ ಇರುವೆ
ಕೋಗಿಲಿ ಸ್ವರದಲೂ ಅಡಗಿರುವೆ
ಅರಿಯು ನೀರಲು ಕಲರವ ನಿನ್ನದೇ
ಪ್ರಕೃತಿ ಸ್ವಭಗನು ಕಂಡೊಡೆ ಜನಿಸುವೇ
ಹೇಳಿಬಿಡು ಮುಗುಳು ನಗೆ
ನೀ ನನ್ನ ಸ್ವತ್ತೆಂದು ನನಗಿಂದು...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:38 pm

ಕವಿತೆ ಹಳೆಯದಾದರೇನು?

ನಾನು ಬರೆಯುವೆ ಒಂದು ಕವಿತೆ
ಹಳೆಯದೇರಡು ಸಾಲು ಸಾಲ ಪಡೆದು
ನವ ಭಾವನೆಯ ಎರಕಹೋಯ್ದು
ಹಳೆತು ಹೊಸತು ಕಲೆತು ಬೆರೆತು
ಸೃಜಿಸುತಿಹುದು ಹೊಸ ಚೈತನ್ಯದ ಕವಿತೆ
ವಸಂತಾಗಮನದ ನವ ಚಿಗುರಿನಂತೆ

ಹಳೆತು ಮುಖಕೆ ನವತು ಬಣ್ಣದಿ ಶೃಂಗರಿ
ಎಣೆಯುವೆ ನನ್ನೆದೆಯ ಹೃದಯದೊಲೆ
ಹಳೆಯ ಹಾಡು ಆದರೇನು? ಹೊಸತು ಪಾಡು ಬೇಡವೇನು?
ನವೂದಯದೊಂಬಣ್ಣ ಬದಲಾಗಲಾರದೆಂದು
ಕವಿಯ ಮನವು ಅಷ್ಟೆ, ಭಾವದ್ವೇತ್ಯಾಸವನ್ನು ನೋಡು
ಅಂದು ಇಂದು ಕವಿತೆಯೊಂದೆ ಭಾವ ಬೇರೆ ಅಲ್ಲವೇನು?

ಯಾರು ಏನೆಂದರು ನನಗೇನು ಮನವೇ
ಓದುವವರಿಹರಲ್ಲ ಸಾಕು ಇಂದೇನಗೇ
ನವತು ಕವಿತೆ ಬರೆಯಲಿಲ್ಲಿ ಬಿಡದೆ ಬರೆದು
ಮುಗಿಸಿದರೆಲ್ಲ ನಮ್ಮ ಹಿರಿಯ ಕವಿಗಳು
ನಾನೆನೆಂದು ಬರೆಯಲಿ? ಅದನೆ ಮತ್ತೆ ಬರೆಯುವೆನು
ನಗುವವರು ನಗಲಿ, ಮುಖ ತಿರುಗಿಸುವವರು ತಿರುಗಿಸಲಿ;

ಹಳೆಯ, ನಡು, ನವೂದಯವನೊಮ್ಮೆ ನೋಡು
ಎಲ್ಲರು ಅದನೆ ಬರೆದರು ಅವರದೇ ಮೋಡಿಯಲ್ಲಿ
ಕನ್ನಡ ಸಾಹಿತ್ಯ ವೀಣೆಯು ಒಂದೆ ಇರಬಹುದು
ವೈಣಿಕರ ಬೆರಳುಗಳು ಒಂದೆ ಅಲ್ಲ ಕೇಳು
ನುಡಿಸುವವನ ಮನವು ಭಾವ ತುಂಬಿ ಹಾಡಲು
ಕೇಳುಗನೆದೆಯಲಿ ನೋವು ತುಂಬಿದರೇಗೆ ಹೇಳು?

ಹಿರಿಯ-ಕಿರಿಯ ಎನ್ನಲೇಕೆ ತಾಯಿ ಒಬ್ಬಳಲ್ಲವೇನು?
ಮಾಡುವೆನು ಸೇವೆಯನು ಹಿರಿಯರು ಮಾಡಿದಂತೆ
ಬೇಡವೇನೆಗೆ ಬಿರುದು ಸನ್ಮಾನಗಳ ಹಿರಿಮೆ
ಬಡವ ನಾನು ದುಡಿದಷ್ಟು ಊಣಬಡಿಸುವೇ
ವಲ್ಲದ ಭೋಜನದಲಿ ಕಲ್ಲು ಹುಡುಕಬೇಡಿರಿ
ಕನ್ನಡಮ್ಮನ ಪಾದದಲ್ಲಿ ನನದೊಂದು ಹೂ ಇರಲಿ ಬೀಡಿ....,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:37 pm

ಮಾಗಿಯ ಚಳಿ

ಮಾಗಿಯ ಚಳಿಯು ಮೈದಡವುತಿರಲು
ಸೋನೆ ಮಳೆಯು ಜೊತೆಗೂಡಿರಲು
ಧರಣಿಯ ಒಡಲಲಿ ಕಂಪನದಾವಳಿ
ನನ್ನದೇ ಗೂಡಿಲಿ ವಿರಹದ ಕರಾವಳಿ

ನಲ್ಲೆಯ ಚುಂಭನ ಬಯಸಿದ ಮನಸಿದು
ಆಲಿಂಗನದ ಬಿಸಿಗಂಬಲಿಸಿದ ತನಿವಿದು
ನಿನ್ನೆದೆ ತನುವಲಿ ಉದುಗಲೆಂದೆನೋ
ನನ್ನೆದೆಯ ಕಡಲು ಅಬ್ಬರಿಸುತಿದೆ

ಜಿಟಿಜಿಟಿ ಹನಿಹನಿ ಕಲರವದಲ್ಲು
ಬಿಸಿಲನು ಮರೆಸುತ ಸಾಗಿದೆ ಈ ಮಳೆ
ಭುವಿಯನು ತಾಕಿ ಚಿಮ್ಮುವ ಹನಿಯಲಿ
ಕಂಡೆನು ನಲ್ಲೆ ನಿನ್ನಯ ಕಾಲ್ಗೆಜ್ಜೆಯನು

ಮಳೆ ಹನಿ ಚಿಮ್ಮುವ ಚೆಲುವಲಿ
ನಿನ್ನಯ ಪಾದದ ನರ್ತನದಾವಳಿ
ಚುಮುಚುಮು ಚಳಿಯು ನಗೆ ಬಿರುತಿದೆ
ನನ್ನೊಳಗದು ಮೈದೋರಿ ನಿಲ್ಲುತಿದೆ

ಬಿಡದೆ ಸೋ ಎಂದು ಸುರಿಯುವ ಸೋನೆಗೆ
ತಿಳಿಯಿತೇನೊ ನೀ ಬಳಿ ಇರದ ಸುಳಿವು
ಕಾಡುತಿರುವಿಬ್ಬರು ನಲ್ಲೆ ಭಲ್ಲೆಯ ನೀನು
ಬಳಿ ಇರಬೇಕಿತ್ತು ನೀ ಈ ಸಮುದಲ್ಲಿ

ನಡುಗುವ ಮೈ ಮನ ಸೀತದ ಗಾಳಿಗೆ
ನಿನ್ನಯ ನೆನಪಿನ ಚಿತ್ರಾವಳಿಯಲು
ಚುಂಭನದಬ್ಬಲ ಬಯಸಿದೆ ಬಯಲು
ನಡುಗುವ ತುಟಿಯು ಕಾಡಿದೆ ಅಸಲು

ಸೋನೆಯು ಮಾಗಿಯು ಜೊತೆ ಸಾಗಿರಲು
ಮಿಲನದ ಸಂಭ್ರಮ ನನ ಕಾಡುತಿರಲು
ತಪ್ಪು ಎನಬೇಡವೇ ಸಖಿ ಇದು ಮಾಗಿಯ ಕಾಲ
ಬಂದು ಬಿಡು ಒಮ್ಮೆ ಮುಖಾಮುಖಿ
ಇಬ್ಬರು ಒಂದಾಗಬೇಕಿದೆ ಸಖಾಸಖಿ...

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:34 pm

ಬದುಕು

ಒಬ್ಬಂಟಿಯಾಗಿ ಇಲ್ಲಿಯವರೆಗು ಬಂದಿರುವೆ
ಹಿಂತಿರುಗಿ ನೋಡಿದರೆ ಹೆಜ್ಜೆ ಗುರುತುಗಳು
ಬೀರುಗಾಳಿಯಲಿ ಮಾಸುತಿವೆ
ನಶಿಸುವ ಮನುಜನಿಗೆ ಹೆಜ್ಜೆಯ ಗುರುತುಗಳೆ ಆಧಾರ
ಅವೆ ಇಲ್ಲವಾಗುತಿವೆ ನನ್ನ ಬದುಕಿನಲಿ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:33 pm

ಬರಗಾಲ

ನೇಸರನು ತನ್ನ ಸುಡುವ ನಾಲಿಗೆಯಿಂದ
ನೆಲವ ನೆಕ್ಕಿ ನಕ್ಕಾನ
ಹಸಿರು ಫಸಲ ನುಂಗಿ ತೇಗ್ಯಾನ
ಝುಳು ಝುಳು ಹರಿಯುವ ಜಲವನ್ನೆಲ್ಲ
ಹಿಂಗಿಸಿ ಕಿಸಿ ಕಿಸಿ ನಕ್ಕಾನ
ಚಿಲಿ ಪಿಲಿ ಗುಟ್ಟುವ ಹಕ್ಕಿಗಳ
ಕತ್ತು ಹಿಚಕ್ಯಾನ
ಮೂಕ ಪ್ರಾಣಿಗಳ ಒಡಲು ಬಗಿದಾನ
ಗಿಡ ಮರ ಬಳ್ಳಿಗಳ ಒಣಗಿಸಿ
ವಿಕೃತ ನಗಿ ಬೀರಾನ

ರಚಣೆ:ರೇವಣಸಿದ್ದ ಗೌಡರ
ರಬಕವಿ-೫೮೭೩೧೪
ಮೊ.೯೦೦೮೦೬೦೯೧೮

- Revanasidda Goudar

15 Dec 2016, 06:14 pm

ಮೌನ..

ಮಸಿ ಕಾಣದ ಲೇಖನಿಯಲಿ
ಗೀಚಿದೆ ನೀ ಮೂಕಭಾವದಿ...
ಕಂಡೂಕಾಣದ ಪದಗಳ ಅರಸುತಾ
ಅಲೆದಿರುವೆ ನಾ
ಬದುಕ ಪುಟಗಳಲಿ...

- Indushekar Chinivar

15 Dec 2016, 04:41 pm

"ಏಕೆ ಹೀಗೆ....?" ---------

ಬತ್ತಿದ ಭಾವದಲ್ಲಿ
ಚಿತ್ತಾರ ಬಿಟ್ಟವಳೆ
ಎತ್ತ ಹೋದಯಾ...ನೀನು
ನನ್ನ ತೊರೆದೆಯಾ!
ಕಷ್ಟ ಕಾಲದಲ್ಲಿ
ಜೊತೆಯಲ್ಲಿ ಇರುವೆನೆಂದು
ಭಾಷೆಯನ್ನು ಕೊಟ್ಟ ನೀನು
ಬಿಟ್ಟು ಹೊರಟೆಯಾ....ಗೆಳತಿ!
ಏಳೇಳು ಜನ್ಮದಲ್ಲಿ
ನನ್ನಲ್ಲಿ ಇರುವೆನೆಂದು
ಭರವಸೆಯ ಭವನಕಟ್ಟಿ
ಒಂಟಿಯಾಗಿ ನನ್ನ ಬಿಟ್ಟು
ಹೊರಟು ಹೋದೆಯಾ...ಗೆಳತಿ!
ಏಕೆ ಹೀಗೆ ಮಾಡಿದೆ ನನಗೆ
ಮನಸ್ಸು ಹೇಗೆ ಬಂತು ನಿನಗೆ
ಘಾಸಿಗೊಳಿಸಿದೆ ನನ್ನ ಮನಸ್ಸಿಗೆ
ನಲಿವಾಗಿರಲಿ ನಿನ್ನ ಜೀವನ ಗಳಿಗೆ!
---------------------------------------------*ಬಸವಪ್ರಿಯ*
(ಬಲವಂತ ಮೋರಟಗಿ)

- ಬಲವಂತ ಮೋರಟಗಿ(ಬಸವಪ್ರಿಯ)

15 Dec 2016, 03:13 pm