Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

**ಜಯಂತಿ**

ಜಾತಿಯ ಹೆಸರಿನಲ್ಲಿ
ಆಚರಿಸುವುದು ಬೇಡ
ಮಹಾತ್ಮರ ಜಯಂತಿ
ಅದುವಲ್ಲಾ ನಮ್ಮ ಸಂಸ್ಕ್ರತಿ!
ಜೀವನದಲ್ಲಿ ಅಳವಡಿಸಿಕೊಳ್ಳಿ
ಮಹಾತ್ಮ ರು ಸಾರಿದ ನೀತಿ
ಅಂತರಾಳದಲ್ಲಿ ಅರಳಲಿ ‌ ಮಾನವೀಯ ಪ್ರೀತಿ!
ಆವಾಗ ಬಾಳಲ್ಲಿ ಕಾಣುವುದು
ಸಂತಸದ‌‌ ಸಂತೃಪ್ತಿ ಸಂಪ್ರೀತಿ!
‌‌‌‌ **ಬಸವಪ್ರಿಯ**
೯೭೪೦೧೨೩೬೭೩

- ಬಲವಂತ ಮೋರಟಗಿ(ಬಸವಪ್ರಿಯ)

12 Dec 2016, 07:17 pm

ಮಾನವಜನ್ಮ

ತಾಯಿಯ ಗರ್ಭದಿಂದ ಮಾನವರೂಪ ಜನ್ಮತಾಳಿ,
ತಾಯಿ-ತಂದೆಯ ಪ್ರೀತಿ-ಆರೈಕೆಗೆ ಪಾತ್ರರಾಗಿ,
ಪುಟ್ಟ ಪುಟ್ಟ ಹೆಜ್ಜೆಯಿಟ್ಟು,ಮಾತು ಕಲಿತು,
ಬಾಲ್ಯಾವಸ್ಥೆಯಲ್ಲಿ ಆಟವಾಡಿ,
ಯವ್ವನಾವಸ್ಥೆಯಲ್ಲಿ ಸ್ವಭಾವ-ಬುದ್ದಿ ಕಲಿತು,
ಜೀವನಾದಾರಕ್ಕೆ ಕೆಲಸ ಪಡೆದು,
ತನ್ನದೇ ಆದ ಸಂಸಾರ ಗಳಿಸಿ,
ತನ್ನ ಮಕ್ಕಳಿಗಾಗಿ ದುಡಿದು,
ಮುಪ್ಪನ್ನು ಪೂರೈಸುವುದೇ ಮಾನವಜನ್ಮ.

- Shilpa dhruva

12 Dec 2016, 06:43 pm

ಸ್ನೇಹ..

ಕನಸುಗಳು ನೂರಾರು
ಹಂಚಿಕೊಳ್ಳಲು ಜೊತೆ ಇರುವೆಯಾ..

ಸಾವಿರ ಯೋಚನೆ ನಡುವೆ
ಗುರಿಯೊಂದ ತಲುಪಲು
ನಿನ್ನಾಸರೆ ನೀಡುವೆಯಾ..

ಮನದಂಗಳದ ಕೈತೋಟದಲಿ
ಅರಳಿದ ಸ್ನೇಹ ಕುಸುಮವು ನೀ..
ಸದಾ ಹೀಗೆ ಇಲ್ಲಿ ನಗುತಾ ನಲಿವೆಯಾ...?

- Indushekar Chinivar

12 Dec 2016, 05:55 pm

ದೃಷ್ಠಿ

ಹರಿದಿದೆ ಸೀರೆಯ ಸೆರಗು
ನೀರೆ ...ಗೆ
ನೀರಿಗೆ ಬಂದರೂ ಕೊರಗು
ದಾರಿಗೆ ಬಂದರೆ
ದಾವಿಸಿ ಬರುವರು
ಕ್ಷೇಮಕ್ಕಲ್ಲ,
ನೋಡಲು ಮೈ ಬೆರಗು..!!
__________________
*ಎಲ್ಲಾರ್_ಸೂರ್ಯ*

- ಸುರೇಶ ಎಲ್.ರಾಜಮಾನೆ

12 Dec 2016, 05:39 pm

ಅಮ್ಮ ಬಿಕ್ಕಿ ಅತ್ರಳು

ಮಾನವ ಬಗೆದರು ದೇಹನ
ಮಾಯಾವಾದವು ಹಸಿರಬನ
ತರಗಲೆಯಂತ ಉದುರಿತು ಜೇವನ

ಮಾನವರ ಧ್ವನಿಗೆ ಬಿದ್ದ ಮೇಲೆ
ಒಂಟಿ ಮರದ ಕೂಂಬೆಯಲ್ಲಿ
ಕೋಗಿಲೆ ಹಾಡಲಿಲ್ಲಾ
ಇತರಿರಗೆ ಸಹ ಉಳಿಗಾಲವಿಲ್ಲಾ

ಯಾವ ನದಿಗಳು ಇಲ್ಲಾ!
ಝರಿಯ ಮಾತೇಕೆ?
ದಾಹ ತೀರಿಸಲು!
ರಣ ಬಿಸಲು ಸೆಟದೇಕೆ?

ನರಳುವ ಆ ... ಅಕ್ಷರದಲ್ಲಿ
ವಿಲವಿಲನೆ ಒದ್ದಾಟ
ರಕ್ತದ ಚೀಲದಲ್ಲಿ
ಸರಸರನೆ ಚೀರಾಟ

ಕಾಪಾಡವ ಪ್ರಕೃತಿ ವಗ ಮೂಲವಿಲ್ಲದೆ
ಗುಣಿತ್ತಾಕ್ಷರದಲ್ಲಿ ಕಾಲ ತಳ್ಲಿದೆ

- Shinan

12 Dec 2016, 05:12 pm

ಚಿಟ್ಟೆ

ಜಗದೊಳು ಜನ್ಮತಾಳಿದಾಗ,
ಜಿನುಗುಡುತ,ಮೌನವಾಗಿ,
ಸಂತಸದಿಂದ ಸಹಜಗಾಳಿಯಲ್ಲಿ ತೇಲಾಡುತ ಕುಣಿದಾಡುವುದು.
ಈ ಜಗವೇ ತನದೆಂದು ಹಿಗ್ಗುವುದು,
ಬಣ್ಣ ಬಣ್ಣದ ಮೈಯಲ್ಲಿ ಮಿಂಚುವುದು,
ಮುಗ್ದತೆ, ಸತ್ ಮನ,ಸದ್ ಬುದ್ ಬುದ್ದಿ ತನುವಲಿ ಮೆರೆಯುವುದು,
ಕ್ಷಣಮಾತ್ರದಲಿ ತನಗರಿಯದೆ ಸಾವು ಬರುವುದು,
ಈ ಜಗದಲಿ ಇದೆಯೇ ಅದಕೆ ಉಳಿಗಾಲ.

- Shilpa dhruva

12 Dec 2016, 04:54 pm

ನನಗೂ ಪಕ್ಕವಿದ್ದರೆ....!!!!

ಪಾತರಗಿತ್ತಿಗಿದ್ದಷ್ಟು ಪಕ್ಕ ಇದ್ದರೆ;
ಹಾರಿ ಬಿಡುತ್ತಿದ್ದೆ ಆಕಾಶದೆತ್ತರಕ್ಕೆ
ಅಂಗೈಷ್ಟಗಲ ಹಾಯಿದೋಣಿಯದ್ದರೆ;
ದಾಟಿ ಬಿಡುತ್ತಿದ್ದೆ ಕಡಲುದ್ದಕ್ಕೂ
ಗೋದಿಹುಲ್ಲಿನಷ್ಟು ಹುಲ್ಲಾಗಿದ್ದರೂ;
ಬಿಟ್ಟು ಬಿಡುತ್ತಿದ್ದೆ ಹೊರಲಾರದಷ್ಟು ತೆನೆಹೊರೆಯ
ಮಿನಗು ದೀಪದಷ್ಟು ಬೆಳಕಾಗಿದ್ದರೂ;
ಬೆಳಗಿ ಬಿಡುತ್ತಿದ್ದೆ ಕತ್ತಲ ಲೋಕಕ್ಕೆ
ಕೀರಲು ಧ್ವನಿಯಷ್ಟು ಕಿರಚಲುಧ್ವನಿಯಿದ್ದರೂ;
ಚೀರಿ ಬಿಡುತ್ತಿದ್ದೆ ಅನ್ಯಾಯಕ್ಕೆ
ಬಳ್ಳಿಯಷ್ಟು ಚಿಕ್ಕದಾಗಿದ್ದರೂ;
ಚಾಚಿಕೊಂಡು ಬಿಡುತ್ತಿದ್ದೆ ಜಗದ ಚಾವಣಿಗೆ
ಗುಬ್ಬುಯಷ್ಟು ಪುಟ್ಟದಾಗಿದ್ದರೂ;
ಕಟ್ಟಿ ಬಿಡುತ್ತಿದ್ದೆ ಗೂಡೊಂದ ಈ ಲೋಕಕೆ
ಇರುವೆಯಷ್ಟು ಚಿಕ್ಕದಾಗಿದ್ದರೂ;
ದುಡಿದು ಬಿಡುತ್ತಿದ್ದೆ ಜಗಕುಟುಂಬಕ್ಕೆ
ಮಂದಗೇಡಿಯಷ್ಟು ಬುದ್ದಿವಂತನಾಗಿದ್ದರೂ;
ಬರೆದು ಬಿಡುತ್ತಿದ್ದೆ ತಾಯ ನುಡಿ ಲೋಕಕ್ಕೊಂದು ಹಾಡು

ರಚಣೆ: ರೇವಣಸಿದ್ದ ಗೌಡರ
ರಬಕವಿ-587324
Mobile:9008060918

- Revanasidda Goudar

12 Dec 2016, 02:09 pm

ಮಣ್ಣೊಳಗೆ ಮಣ್ಣಾದವರು

ಹಾಡು ಕಟ್ಟಿ ಹಂತಿ ಹೊಡೆದವರು ನಾವು
ಮಟ್ಟಿ ಹೊಡೆದು ಮೆಟ್ಟಿ ನಿಂತವರು ನಾವು
ಕವಣಿಗೆ ಕಲ್ಲು ಕಟ್ಟಿ ಕಾಳು ಉಳಿಸಿಕೊಂಡವರು ನಾವು
ಹೆಗಲಿಗೆ ನೊಗ ಕಟ್ಟಿ ನೆಲ ಊಳಿದವರು ನಾವು
ಮಳೆರಾಯನಿಗೆ ಕಾಡಿ ಬೇಡಿ ಬೆಳೆ ಉಳಿಸಿಕೊಂಡವರು ನಾವು
ಬಿಸಿಲಿಗೆ ಮೈ ಒಡ್ಡಿ ಬೆಳೆ ಬೆಳೆಸಿದವರು ನಾವು
ಮಣ್ಣಲ್ಲಿ ಮೈ ತೇದವರು ನಾವು
ನುಡಿಗೆ ನಾಲಿಗೆ ಮೇಲೆ ನೆಲೆ ಕೊಟ್ಟವರು ನಾವು
ನಾಡಿಗೆ ಬೆನ್ನೆಲುಬಾಗಿ ನಿಂತವರು ನಾವು
ನಾಡ ಬಂಡಿಗೆ ಗಾಲಿಯಾದವರು ನಾವು
ಬೇಡುವ ಕೈ ಗಿಂತ ನೀಡುವ ಕೈ ಲೇಸೆಂದವರು ನಾವು
ಸ್ವಾಭಿಮಾನಕ್ಕಾಗಿ ಉರುಳಿಗೆ ಕೊರಳು ಕೊಟ್ಟವರು ನಾವು
ಮನುಜರ ಹೊಟ್ಟೆ ತುಂಬಿಸಲು ಮಣ್ಣೊಳಗೆ ಮಣ್ಣಾದವರು ನಾವು

ರಚಣೆ:ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

12 Dec 2016, 01:37 pm

ಎಲ್ಲರೆದೆಯೊಳಗೂ ಪ್ರೇಯಸಿಯಿದ್

ಎಲ್ಲರೆದೆಯೊಳಗೂ
ಒಬ್ಬಳು ಪ್ರೇಯಸಿಯಿದ್ದಾಳೆ.
ಹೇಳಿಕೊಳ್ಳುವ ಮಹದಾಸೆ;
ಕ್ಷಮಿಸಿ, ಹೆಂಡತಿ ಜೊತೆಗಿದ್ದಾಳೆ..!

ಎಲ್ಲರೆದೆಯೊಳಗೂ
ಒಬ್ಬ ಪ್ರಿಯಕರನಿರುತ್ತಾನೆ.
ಹೇಳಿಕೊಳ್ಳದೆ ಮೆಲುಕುವಾಸೆ;
ಕ್ಷಮಿಸಿ, ಗಂಡನಪ್ಪಿಕೊಂಡಿದ್ದಾನೆ..!

ಎಲ್ಲರೂ ಪರಿಪಕ್ವವಾಗುವ ಮುನ್ನ
ಬೆಂದು ನೊಂದಿದ್ದಾರೆ.
ಮೌನವ ಗಾನವಾಗಿಸಲು
ಕನ್ನಡಿಯೆದುರು ನಿಂತಿದ್ದಾರೆ.......

ಎಲ್ಲರೆದೆಯೊಳಗೂ.................!

*ಸಿಹಿಗಲ್ ಪ್ರಶಾಂತ, ಶಿವಮೊಗ್ಗ*

- ಸಿಹಿಗಲ್ ಪ್ರಶಾಂತ

12 Dec 2016, 12:57 pm

ಜಗದ ಭಾಂಧವ್ಯ

ಮನ ಮನದ ನಡುವೆ ಅಹಮ್ಮಿನ ಪರದೆ
ಸಖನ ಮನವನರಿಯದೆ ದೂರವೇಕೆ ಸರಿದೆ.
ಜಗದರಿವ ಭ್ರಮಿಸಿ ಬೀಗುವುದು ನಿಷ್ಪಲ
ಮನದರಿವನರಿತು ಬಾಳುವುದೆ ತತ್ಪಲ

- ಜಿ. ಶಿವಪ್ಪ ನಾಯಕ

12 Dec 2016, 11:36 am