ಜಾತಿಯ ಹೆಸರಿನಲ್ಲಿ
ಆಚರಿಸುವುದು ಬೇಡ
ಮಹಾತ್ಮರ ಜಯಂತಿ
ಅದುವಲ್ಲಾ ನಮ್ಮ ಸಂಸ್ಕ್ರತಿ!
ಜೀವನದಲ್ಲಿ ಅಳವಡಿಸಿಕೊಳ್ಳಿ
ಮಹಾತ್ಮ ರು ಸಾರಿದ ನೀತಿ
ಅಂತರಾಳದಲ್ಲಿ ಅರಳಲಿ ಮಾನವೀಯ ಪ್ರೀತಿ!
ಆವಾಗ ಬಾಳಲ್ಲಿ ಕಾಣುವುದು
ಸಂತಸದ ಸಂತೃಪ್ತಿ ಸಂಪ್ರೀತಿ!
**ಬಸವಪ್ರಿಯ**
೯೭೪೦೧೨೩೬೭೩
ತಾಯಿಯ ಗರ್ಭದಿಂದ ಮಾನವರೂಪ ಜನ್ಮತಾಳಿ,
ತಾಯಿ-ತಂದೆಯ ಪ್ರೀತಿ-ಆರೈಕೆಗೆ ಪಾತ್ರರಾಗಿ,
ಪುಟ್ಟ ಪುಟ್ಟ ಹೆಜ್ಜೆಯಿಟ್ಟು,ಮಾತು ಕಲಿತು,
ಬಾಲ್ಯಾವಸ್ಥೆಯಲ್ಲಿ ಆಟವಾಡಿ,
ಯವ್ವನಾವಸ್ಥೆಯಲ್ಲಿ ಸ್ವಭಾವ-ಬುದ್ದಿ ಕಲಿತು,
ಜೀವನಾದಾರಕ್ಕೆ ಕೆಲಸ ಪಡೆದು,
ತನ್ನದೇ ಆದ ಸಂಸಾರ ಗಳಿಸಿ,
ತನ್ನ ಮಕ್ಕಳಿಗಾಗಿ ದುಡಿದು,
ಮುಪ್ಪನ್ನು ಪೂರೈಸುವುದೇ ಮಾನವಜನ್ಮ.
ಹಾಡು ಕಟ್ಟಿ ಹಂತಿ ಹೊಡೆದವರು ನಾವು
ಮಟ್ಟಿ ಹೊಡೆದು ಮೆಟ್ಟಿ ನಿಂತವರು ನಾವು
ಕವಣಿಗೆ ಕಲ್ಲು ಕಟ್ಟಿ ಕಾಳು ಉಳಿಸಿಕೊಂಡವರು ನಾವು
ಹೆಗಲಿಗೆ ನೊಗ ಕಟ್ಟಿ ನೆಲ ಊಳಿದವರು ನಾವು
ಮಳೆರಾಯನಿಗೆ ಕಾಡಿ ಬೇಡಿ ಬೆಳೆ ಉಳಿಸಿಕೊಂಡವರು ನಾವು
ಬಿಸಿಲಿಗೆ ಮೈ ಒಡ್ಡಿ ಬೆಳೆ ಬೆಳೆಸಿದವರು ನಾವು
ಮಣ್ಣಲ್ಲಿ ಮೈ ತೇದವರು ನಾವು
ನುಡಿಗೆ ನಾಲಿಗೆ ಮೇಲೆ ನೆಲೆ ಕೊಟ್ಟವರು ನಾವು
ನಾಡಿಗೆ ಬೆನ್ನೆಲುಬಾಗಿ ನಿಂತವರು ನಾವು
ನಾಡ ಬಂಡಿಗೆ ಗಾಲಿಯಾದವರು ನಾವು
ಬೇಡುವ ಕೈ ಗಿಂತ ನೀಡುವ ಕೈ ಲೇಸೆಂದವರು ನಾವು
ಸ್ವಾಭಿಮಾನಕ್ಕಾಗಿ ಉರುಳಿಗೆ ಕೊರಳು ಕೊಟ್ಟವರು ನಾವು
ಮನುಜರ ಹೊಟ್ಟೆ ತುಂಬಿಸಲು ಮಣ್ಣೊಳಗೆ ಮಣ್ಣಾದವರು ನಾವು