Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಿಂಧೂರ ತಿಲಕ

ನನ್ನ ಪ್ರೀತಿ ನಿನ್ನ ಹಣೆಗೆ
ಸಿಂಧೂರ ತಿಲಕವಾಗಲಿ
ಆ ತಿಲಕ ನಮ್ಮ ಪ್ರೀತಿಯ
ಬಂಧನಕ್ಕೆ ಚಿಲಕವಾಗಲಿ

ನನ್ನ ಪ್ರೀತಿ ನಿನ್ನ ಕಣ್ಣಿಗೆ
ಕಾಡಿಗೆಯಾಗಲಿ
ಆ ಕಾಡಿಗೆ ನಮ್ಮ
ಪ್ರೀತಿಗೆ ಕಾವಲಾಗಲಿ

ನನ್ನ ಪ್ರೀತಿ ನಿನ್ನ ಕೈಗಳಿಗೆ
ಬಳೆಗಳಾಗಲಿ
ಆ ಬಳೆಗಳಲ್ಲಿ ನಮ್ಮ ಪ್ರೀತಿ
ಬಂಧಿಯಾಗಲಿ

ನನ್ನ ಪ್ರೀತಿ ನಿನ್ನ ಕಾಲ್ಬೆರಳಿಗೆ
ಕಾಲುಂಗರವಾಗಲಿ
ಆ ಉಂಗರ ನಮ್ಮ
ಪ್ರೀತಿಗೆ ಶ್ರಂಗಾರವಾಗಲಿ

ನನ್ನ ಪ್ರೀತಿ ನಿನ್ನ
ಮುಡಿಗೆ ಹೂವಾಗಲಿ
ಆ ಹೂ ನಮ್ಮ ಪ್ರೀತಿಗೆ
ಪರಿಮಳವಾಗಲಿ

ನನ್ನ ಪ್ರೀತಿ ನಿನ್ನ
ನಾಸಿಕಕೆ ನತ್ತಾಗಲಿ
ಆ ನತ್ತಿನ ಒಡತಿ ನನ್ನ
ಮನದ ಒಡತಿಯಾಗಲಿ

ನನ್ನ ಪ್ರೀತಿ ನಿನ್ನ
ಕೋರಳಿಗೆ ಮಾಂಗಲ್ಯವಾಗಲಿ
ಆ ಮಾಂಗಲ್ಯ ನಮ್ಮ
ಬಾಳಿಗೆ ಶುಭಮಂಗಳವಾಗಲಿ

ಮಹೇಶ ಕಾಳಿ

- ಮಹೇಶ ಕಾಳಿ

12 Dec 2016, 11:26 am

ಗೊತ್ತಿರದ ಗುಲಾಮರು

*ಗೊತ್ತಿರದ ಗುಲಾಮರು*

ಸೂರ್ಯ ಲೋಕದಿಂದ
ಧರೆಗೆ ಬಂದವಳಿಗೆ
ಭುವಿಯಲ್ಲಿ ಶಾಖವಂತೆ
ಉಪಯೋಗ ಬಾರದ
ಕಡಲು ಕುದಿಯುವ
ಕೆಂಡವಂತೆ ಇವಳಿಗೆ
ಸಹ್ಯಾದ್ರಿ ಮರಗಿಡಗಳು
ಮರಭೂಮಿಯ ಕಂಬದಂತೆ
ಗುಡಿ ಚರ್ಚಮಸಿದಿಗಳು
ಸತ್ತ ದೇವರ ಸಮಾದಿಗಳಂತೆ
ತಂಪು ನೀಡುವ ಚಂದಿರ
ಕೆಂಡಕಾರುವ ಬೆಂಕಿಯಚೆಂಡಂತೆ
ಗುಡ್ಡ ಬೆಟ್ಟ ಕಲ್ಲುಗಳು
ಹೆಣದ ರಾಶಿಯಂತೆ
ಉಕ್ಕಿ ಹರಿಯುವ ನದಿಯು
ಹೆಣ್ಣಿನ ರೋಧನೆಯಂತೆ
ಹಾರಾಡುವ ಹಕ್ಕಿಗಳು
ಕಣ್ಣುಕುಕ್ಕಲು ಬಂದಿವೆಯಂತೆ
ಈ ನರಪಿಳ್ಳೆಗಳು ಒಬ್ಬರಿಗೆ
ಒಬ್ಬರೂ ಗೊತ್ತಿರದ ಗುಲಾಮರಂತೆ

- ಆನಂದ ಪೂಜಾರಿ

11 Dec 2016, 11:27 pm

ಬಾ ಇನಿಯಾ ಮರಳಿ ಸನಿಹ

ಹೇಳಿ ಹೋಗು ಗೆಳೆಯ
ದೂರಾಗುವ ಮುನ್ನ
ಹೇಳಿ ಹೋಗು ಇನಿಯಾ
ಮನ ಕದಡಿದ ಕಾರಣ

ನನ್ನ ಬಾಳ ಪಯಣಕೆ
ಅಂಬಿಗ ಎಂದು ನಂಬಿದೆ
ನಡು ನೀರಲಿ ಬಿರುಗಾಳಿಗೆ ಬಿಟ್ಟು
ಈಜಿ ನೀ ದಡ ಸೇರಿದೆ ಗೊತ್ತಿಲ್ಲದೆ

ಕನಸಿನಲ್ಲು ನೆನೆಸಿರಲಿಲ್ಲ
ಮೈ ಮನ ದೋಚುವೆವೆಂದು
ಪ್ರೀತಿಯ ಆಳ ತಿಳಿಯದೆ
ಮೈ ಸುಖ ಬೇಡಿ ಕಾಡಿದೆ ಅಂದು

ಧರೆಯು ಸುಡುತ್ತಿದೆ ಇಂದು
ಒಡಲು ಉರಿಯುತ್ತಿದೆ ಬೆಂದು
ಕಡಲ ಬಳ್ಳಿ ಚಿಗುರುತ್ತಿದೆ ನೊಂದು
ನನ್ನ ಜೀವಕೆ ಜನ್ಮದಾತ ಯಾರೆಂದು?

ಬಾ ಇನಿಯ ಮರಳಿ ಸನಿಹ
ನಿನ್ನಲಿಲ್ಲದೆ ತಾಳೇನು ಈ ವಿರಹ
ದೂರಾದರೆ ನೋವು ತರತರಹ
ನೀ ಬರೆದ ಬರಹ ಅಚ್ಚಾಗಿದೆ ಒಡಲಲಿ

ಓ ಹೃದಯಾ ನೋಡು ಮೊಗವ
ಅರುಳುವ ಮೊಗ್ಗು ಹೂವಾಗಿ
ಕಮರಿಹೋಗುವ ಮುನ್ನ ಬಾ
ನನ್ನ ಮುಡಿ ಸೇರು ಹೂಮಾಲೆಯಾಗಿ

- ಆನಂದ ಪೂಜಾರಿ

11 Dec 2016, 11:24 pm

ಎಲ್ಲಿದೆ ಬದುಕು?

ಎಲ್ಲಿದೆ ಸೊಗಸು ಈ ನರಜನ್ಮಕ್ಕೆ
ಎಲ್ಲಿದೆ ಬದಕು ಈ ಅಸುರ ಮನಕ್ಕೆ
ಏನು ಅರಿಯದ ಮಗ್ದ ಪ್ರಾಣಿಗಳು
ಬದುಕಿ ಬದುಕಿಸುತ್ತಿವೆ ಬಾಳನು
ನಕ್ಕು ನಲಿದು ನೂಕತ್ತಿವೆ ಕಾಲನು

ನಿರ್ಮಲ ಸ್ವಚ್ಚ ಮನಸ್ಸಿನ
ಗೋಡೆ ಕೆಡವಿ ಮೆರತ್ತಿಹನು
ಅಮುಲುಗಣ್ಣಿನಲ್ಲಿ ಜಗವ
ನೋಡುತ್ತಿಹ ಅಂಧಕಾರನು
ಪ್ರಕೃತಿ ಅಂದಕ್ಕೆ ಹಲುಬುತ್ತಿಹನು

ಕಾಡು ಪ್ರಾಣಿಗಳು ಕಾಡಿನಲ್ಲಿವೆ
ಸೃಷ್ಠಿ ಮಡಿಲಲ್ಲಿ ಮನೆಮಾಡಿವೆ
ಕಾಡುವ ಪ್ರಾಣಿಗಳು ನಾಡಿನಲ್ಲಿವೆ
ನಾಡಿನಲ್ಲಿ ನೆಲೆಯಿಲ್ಲದೆ ತಿರುಗತ್ತಿವೆ
ಎಷ್ಟು ತಿರುಗಿದರೂ ಬದುಕು ಕಟ್ಟಲಾಗಲಿಲ್ಲ

ಕಾಣದ ಲೋಕಕ್ಕೆ ಕಾಲಿಡುತ್ತಿರುವರು
ಕಂದಕದ ಕಡಲಲ್ಲಿ ತೀರದ ಪಯಣ
ಬಯಲು ಬೀರುಗಾಳಿಯ ಜೊತೆಗೆ ಕದನ
ತನ್ನವರನ್ನ ತಿಂದು ತೇಗಿ ದಣಿದು
ಅಹಂ ಕೋಟೆಯೊಳಗೆ ಬಿಕ್ಕುವನು

ದಕ್ಕದ ಪಕ್ಕದ ಗೋಡೆಗೆ ತೆಲೆಯಿಡುವನು
ಅಂದದ ಚೆಂದದ ಬಾಳಿಲಿ ತೆಲೆ ಹಿಡಿವನು
ಮನದ ಮಾತಿಗೆ ಪ್ರೀತಿ ದೀಪವನ್ನಿಟ್ಟು
ಅಲೆ ಅಲೆಯಾಗಿ ಅಲೆಯವನು
ಬದಕು ಸೊಗಸ ಸಂಚಾರಿಯಾಗಿ

- ಆನಂದ ಪೂಜಾರಿ

11 Dec 2016, 11:22 pm

ಬದಕು ಭಾವಂತರ

ಬದಕು ಭಾವಂತರ
ಬವಣೆ ನಿರಂತರ
ಮನದೊಳಗೆ ಅಂತರ
ಜಗದೊಳಗೆ ಅವಾಂತರ

ಜೀವನ ಸುಂದರ
ಸಿಹಿ ಕಹಿಗಳ ಹಂದರ
ಈ ಬಾಳು ಮಂದಾರ
ನಗುತ್ತಿರು ನೀ ಚಂದಿರ

ಬದಕು ಬಂಗಾರ
ಹೂ ಮುಳ್ಳುಗಳ ಶೃಂಗಾರ
ನವ ಮನಗಳ ಸಿಂಗಾರ
ಬದಕಬೇಡ ಹೇಂಗರ?

ಆದರೂ ಬದಕು ಬವಣೆ
ನಿರಂತರ ಶೋಷಣೆ
ದೇಹ ದೇಹಗಳ ಘರ್ಷಣೆ
ಜಗದೊಳಗೆ ಬರಿ ಸಂಘರ್ಷಣೆ

ರಚನೆ* ಆನಂದ ಎಸ್ ಪೂಜಾರಿ

- ಆನಂದ ಪೂಜಾರಿ

11 Dec 2016, 11:19 pm

ನಿರೀಕ್ಷೆ

ಅರ್ಥವಾಗದ ಮೌನ
‌ಸುರಿಯದ ಕಂಬನಿ
ಉಕ್ಕದ ಭಾವನೆ
ಬೆಸೆಯದ ಅನುಬಂಧ
ನನಸಾಗದ ಕನಸು
ಆದರೂ ಕಾಯುತಿರುವೆ
ಮೌನ ಮಾತಾಗಬಹುದೆಂದು
ಆನಂದ ಬಾಷ್ಪ ಸುರಿಸಬ಼ಹುದೆಂದು
ಭಾವನೆಗಳು ಹೊಮ್ಮಬಹುದೆಂದು
ಈ ಬಂಧನ ಹೊಸೆದುಕೊಳ್ಳಬಹುದೆಂದು
ಸ್ವಪ್ನ ಸಾಕಾರವಾಗಬಹುದೆಂದು
ಬಹುದೆಂದು....
.....‌‌‌‌‌‌‌...................ಕವಿರಾಜ

- kavita Rajesh

11 Dec 2016, 10:54 pm

ಬುಡಬುಡಿಕೆಯವ...

ಇವತ್ತು ಬುಡಬುಡಿಕೆಯವ ಬಂದಿದ್ದ
ಇಳಿ ವಯಸ್ಸು ಹರಕಂಗಿ
ಬಾಡಿದ ಮುಖ
ಹಣೆಯ ಕುಂಕುಮ ಅಳಿಸಿ
ಹಲವು ದಿನವಾಯ್ತೇನೋ
ಹೆಗಲ ಕಂಬಳಿಗೆ ಹಲವು ತೂತು

ನನ್ನೆದುರು ನಿಂತು ಸುಮ್ಮನೆ ದಿಟ್ಟಿಸಿದ
ಒಳ ಒಳಗೆ ಹೆದರಿಕೆ ನನಗೆ
ಕೆಟ್ಟದನ್ನು ಹೇಳಿಯಾನೆಂದು...

ವಿಷಾದದ ನಗೆನಕ್ಕು
ಮನವನೋದಿದವನಂತೆ
'ಹೆದರದಿರು ನುಡಿದಿಲ್ಲ 
ನಾನೆಂದೂ ಕೆಟ್ಟದನ್ನು
ನಿನ್ನ ಮಗನೊಬ್ಬ  ಅದ್ಭುತ ಎಂದಿದ್ದೆ,
ನಿಮ್ಮಪ್ಪನೆದುರು ನಿಂತು..
ಎಲ್ಲ ಅಪ್ಪಂದಿರಿಗೂ ಮಗ
ಅದ್ಭುತವೇ ಅಲ್ಲವೇ...'

ಹೊಸ ಧೋತರ ಬಗಲಕಿಸೆ ಅಂಗಿ
ಕಂಬಳಿಯ ತುಂಬ ಜೋಳವನು ತುಂಬಿ
ಹರಸಿ ಕಳಿಸಿದ್ದ ನಿನ್ನಪ್ಪ  ಹಿರಿಮನುಷ

ಒಳ್ಳೆಯದನೇ ನುಡಿಯುತ್ತ
ಒಳ್ಳೆಯದನೇ ಬಯಸುತ್ತ
ಹಲವು ತಲೆಮಾರಿನ ಬದುಕು
ಚೆಂದ ಸಾಗಿತ್ತು...

ಕೊನೆಗಾಲದಲ್ಲೊಮ್ಮೆ ನೋಡ ಬಂದೆ
ನಿನ್ನಂಥವರನು
ನಾ ನುಡಿದ ನುಡಿಗಳು
ನಿಜವಾದವೇ ಎಂದು, ಕಣ್ತುಂಬಿಕೊಂಡ
ಒಳಗಿಂದ ಬಂದ ಮೊಮ್ಮಗನ ನೋಡುತ್ತ
ಮತ್ತೆ ನುಡಿದ
'ಇವನೆಂಥ ಚೆಂದ '

" ಹಕ್ಕಿ ನುಡಿದೈತೆ, ಒಳ್ಳೆಯ ಕಾಲ ಬರತೈತೆ"
ನುಡಿಯುತ್ತ ನಡೆದಿದ್ದ
ಬುಡಬುಡಿಕೆಯ ಬಾರಿಸುತ
ಗಮನವಿರಲಿಲ್ಲವನಿಗೆ
ತನ್ನ ಕೈ ಬುಡಬುಡಕೆ ದನಿ ಮಾಡದಿದ್ದುದು
ಹರಿದ ದಾರದ ಹಳೆಯ ಬುಡಬುಡಕೆಗೆ
ದನಿಯೆಂಬುದೆಲ್ಲಿ

ಭಾರ ಹೃದಯದಿ ನಿಂತಿದ್ದೆ ನಾನು..
ಭವಿಷ್ಯ ನುಡಿದಿದ್ದವಗೆ
ಭವಿಷ್ಯವಿಲ್ಲದುದ ನೆನೆಯುತ್ತ...

-ಡಾ. ಶಿವಾನಂದ ಕುಬಸದ

- ಡಾ.ಶಿವಾನಂದ ಕುಬಸದ

11 Dec 2016, 08:02 pm

ಮನಸೋಳಗೆ ಕುಳಿತಿರಲು ನೀನು

ಮನಸೊಳಗೆ ಕುಳಿತಿರಲು ನೀನು
ನನ್ನೊಳಗೆ ನನ್ನನ್ನೆ ಹುಡುಕುತಿರುವೆನು ನಾನು
ಸ್ನೇಹದ ಬಂಧನದಲ್ಲಿ ಬಂಧಿಸಿರಲು ನೀನು
ಕೇಳುವೆಯ ಪ್ರೀತಿಯ ಮಾತನ್ನು ಹೇಳಲು ನಾನು

ಸೇರುವೆಯ ನನ್ನ ನೀನು, ಕಾಯುತಿರುವೆನು ನಾನು
ತಿಳಿಯೆನು ನಾನು, ಏನೆಂದು ನೀನು
ಒಪ್ಪಲೇ ಬೇಕೆಂದು ನೋವ ಕೊಡೆನು
ಮಗುವಿನಂತೆ ಕಾಪಡುವೆನು ಒಪ್ಪಿ ಬಂದರೆ ನೀನು

ಮನಸ್ಸಿನ ಕನಸು ತಪ್ಪೇನೊ ತಿಳಿಯೆನು ನಾನು
ತಪ್ಪಿದ್ದರೆ ಮನ್ನಿಸಿ ಸರಿಯೆನು ತಿಳಿಸು ನೀನು
ಮನದ ಭಾವ ಬಿಚ್ಚಿಡುತಿಹೆ ನಿನ್ನೆದುರು ನಾನು
ಕಾಯುವೆನು ನಾನು ಒಪ್ಪಿ ಬರುವುದಾದರೆ ನೀನು

ತಿಳಿಯದೆ ಸೋತಿಹುದು ಮನಸು
ನಿನ್ನನೇ ಸೇರಲು ಕಾಯುತಿಹುದು ಕನಸು
ನಿನಗಾಗಿ ಕಾಯುತಿರಲು ಕನಸು ಮನಸು
ನೀನಾಗಿ ಬರುವೆಯ ಒಂದು ನನಸು

ನನ್ನ ಭಾವಗಳು ನೋಯಿಸಿದ್ದರೆ ಕ್ಷಮಿಸು
ಭಾವಗಳ ಮುಚ್ಚಿಟ್ಟು ಸೋತು ಸೋಲಿಸಲಾರೆನು
ಹೇಳು ನೀನು ಒಪ್ಪಿ ಬರುವೆಯೇನು
ಮನಸ್ಸು ತೆರೆದಿಟ್ಟು ಕಾಯುತಿರುವೆನು ನಾನು
.......

- ಶ್ರೀಕಾವ್ಯ

11 Dec 2016, 07:49 pm

ಸೂರ್ಯ ಎಂದರು ಎಲ್ಲರೂ

ಬಂಗಾರನೀರ ಮೈಗೆರಚಿಕೊಂಡು ಪಡುವಣದಡೆಗೆ ದವಡಿಸಿದನಷ್ಟೆ ;
ನಮ್ಮ ತೀರದ ಮಾತುಕತೆ ಕದ್ದಾಲಿಸಲು ನಾಳೆ ಬಂದರೂ ಬರಬಹುದು ಅದೇ ಜಾಗೆಗೆ...

- prajna

11 Dec 2016, 07:16 pm

*ಮೌನಗೌರಿ*

ತಿಳಿಯಲಿಲ್ಲವೇ ಗೆಳತಿ
ನನ್ನಯ ಪ್ರೀತಿ
ಅರ್ಥವಾಗಲಿಲ್ಲವೇ ಸಂಗಾತಿ
ನನ್ನ ಮನದ ನೋವಿನ ಸ್ಥಿತಿ!
ನೀನು ಹೊರಡುವೆನೆಂದಾಗ
ಸಾವಿರ ನೋವು ನನ್ನೆದೆಯಾಗ
ಸ್ತಬ್ದವಾಯ್ತು ನನ್ನ ಹೃದಯರಾಗ
ಒಂಟಿತನ ತುಂಬಿತ್ತೆನ್ನ ಮನದಾಗ
ನೀನು ಮೌನ ಸುಂದರಿಯೆನ್ನುವುದು
ನನ್ನ ಹೃದಯಕ್ಕೆ ಗೊತ್ತು
ನೀನು ಬರೀ ಮೌನವಾಗಿದ್ದರೆ
ನನ್ನ ಜೀವ ಹೇಗೆ ಬದುಕೀತು!
ಮೌನ ಮುರಿದು ಮಾತಾಡು

ಹೇಳು ನಿನ್ನ ಅಂತರ್ಯದ ಹಾಡು
ನಾನಿಲ್ಲಿವೇ ನಿನ್ನ ಜೋಡು
ಕಟ್ಟುವ ನಾವು ಪ್ರೇಮದಗೂಡು!
*****""*****"""*****""********
ಬಲವಂತ ಮೋರಟಗಿ.
ಬಸವಪ್ರಿಯ
‌‌‌‌@9740123673

- ಬಲವಂತ ಮೋರಟಗಿ(ಬಸವಪ್ರಿಯ)

11 Dec 2016, 06:36 pm