ಸೂರ್ಯ ಲೋಕದಿಂದ
ಧರೆಗೆ ಬಂದವಳಿಗೆ
ಭುವಿಯಲ್ಲಿ ಶಾಖವಂತೆ
ಉಪಯೋಗ ಬಾರದ
ಕಡಲು ಕುದಿಯುವ
ಕೆಂಡವಂತೆ ಇವಳಿಗೆ
ಸಹ್ಯಾದ್ರಿ ಮರಗಿಡಗಳು
ಮರಭೂಮಿಯ ಕಂಬದಂತೆ
ಗುಡಿ ಚರ್ಚಮಸಿದಿಗಳು
ಸತ್ತ ದೇವರ ಸಮಾದಿಗಳಂತೆ
ತಂಪು ನೀಡುವ ಚಂದಿರ
ಕೆಂಡಕಾರುವ ಬೆಂಕಿಯಚೆಂಡಂತೆ
ಗುಡ್ಡ ಬೆಟ್ಟ ಕಲ್ಲುಗಳು
ಹೆಣದ ರಾಶಿಯಂತೆ
ಉಕ್ಕಿ ಹರಿಯುವ ನದಿಯು
ಹೆಣ್ಣಿನ ರೋಧನೆಯಂತೆ
ಹಾರಾಡುವ ಹಕ್ಕಿಗಳು
ಕಣ್ಣುಕುಕ್ಕಲು ಬಂದಿವೆಯಂತೆ
ಈ ನರಪಿಳ್ಳೆಗಳು ಒಬ್ಬರಿಗೆ
ಒಬ್ಬರೂ ಗೊತ್ತಿರದ ಗುಲಾಮರಂತೆ
ಇವತ್ತು ಬುಡಬುಡಿಕೆಯವ ಬಂದಿದ್ದ
ಇಳಿ ವಯಸ್ಸು ಹರಕಂಗಿ
ಬಾಡಿದ ಮುಖ
ಹಣೆಯ ಕುಂಕುಮ ಅಳಿಸಿ
ಹಲವು ದಿನವಾಯ್ತೇನೋ
ಹೆಗಲ ಕಂಬಳಿಗೆ ಹಲವು ತೂತು
ನನ್ನೆದುರು ನಿಂತು ಸುಮ್ಮನೆ ದಿಟ್ಟಿಸಿದ
ಒಳ ಒಳಗೆ ಹೆದರಿಕೆ ನನಗೆ
ಕೆಟ್ಟದನ್ನು ಹೇಳಿಯಾನೆಂದು...
ವಿಷಾದದ ನಗೆನಕ್ಕು
ಮನವನೋದಿದವನಂತೆ
'ಹೆದರದಿರು ನುಡಿದಿಲ್ಲ
ನಾನೆಂದೂ ಕೆಟ್ಟದನ್ನು
ನಿನ್ನ ಮಗನೊಬ್ಬ ಅದ್ಭುತ ಎಂದಿದ್ದೆ,
ನಿಮ್ಮಪ್ಪನೆದುರು ನಿಂತು..
ಎಲ್ಲ ಅಪ್ಪಂದಿರಿಗೂ ಮಗ
ಅದ್ಭುತವೇ ಅಲ್ಲವೇ...'
ಹೊಸ ಧೋತರ ಬಗಲಕಿಸೆ ಅಂಗಿ
ಕಂಬಳಿಯ ತುಂಬ ಜೋಳವನು ತುಂಬಿ
ಹರಸಿ ಕಳಿಸಿದ್ದ ನಿನ್ನಪ್ಪ ಹಿರಿಮನುಷ
ಒಳ್ಳೆಯದನೇ ನುಡಿಯುತ್ತ
ಒಳ್ಳೆಯದನೇ ಬಯಸುತ್ತ
ಹಲವು ತಲೆಮಾರಿನ ಬದುಕು
ಚೆಂದ ಸಾಗಿತ್ತು...
ಕೊನೆಗಾಲದಲ್ಲೊಮ್ಮೆ ನೋಡ ಬಂದೆ
ನಿನ್ನಂಥವರನು
ನಾ ನುಡಿದ ನುಡಿಗಳು
ನಿಜವಾದವೇ ಎಂದು, ಕಣ್ತುಂಬಿಕೊಂಡ
ಒಳಗಿಂದ ಬಂದ ಮೊಮ್ಮಗನ ನೋಡುತ್ತ
ಮತ್ತೆ ನುಡಿದ
'ಇವನೆಂಥ ಚೆಂದ '
" ಹಕ್ಕಿ ನುಡಿದೈತೆ, ಒಳ್ಳೆಯ ಕಾಲ ಬರತೈತೆ"
ನುಡಿಯುತ್ತ ನಡೆದಿದ್ದ
ಬುಡಬುಡಿಕೆಯ ಬಾರಿಸುತ
ಗಮನವಿರಲಿಲ್ಲವನಿಗೆ
ತನ್ನ ಕೈ ಬುಡಬುಡಕೆ ದನಿ ಮಾಡದಿದ್ದುದು
ಹರಿದ ದಾರದ ಹಳೆಯ ಬುಡಬುಡಕೆಗೆ
ದನಿಯೆಂಬುದೆಲ್ಲಿ
ಭಾರ ಹೃದಯದಿ ನಿಂತಿದ್ದೆ ನಾನು..
ಭವಿಷ್ಯ ನುಡಿದಿದ್ದವಗೆ
ಭವಿಷ್ಯವಿಲ್ಲದುದ ನೆನೆಯುತ್ತ...
ತಿಳಿಯಲಿಲ್ಲವೇ ಗೆಳತಿ
ನನ್ನಯ ಪ್ರೀತಿ
ಅರ್ಥವಾಗಲಿಲ್ಲವೇ ಸಂಗಾತಿ
ನನ್ನ ಮನದ ನೋವಿನ ಸ್ಥಿತಿ!
ನೀನು ಹೊರಡುವೆನೆಂದಾಗ
ಸಾವಿರ ನೋವು ನನ್ನೆದೆಯಾಗ
ಸ್ತಬ್ದವಾಯ್ತು ನನ್ನ ಹೃದಯರಾಗ
ಒಂಟಿತನ ತುಂಬಿತ್ತೆನ್ನ ಮನದಾಗ
ನೀನು ಮೌನ ಸುಂದರಿಯೆನ್ನುವುದು
ನನ್ನ ಹೃದಯಕ್ಕೆ ಗೊತ್ತು
ನೀನು ಬರೀ ಮೌನವಾಗಿದ್ದರೆ
ನನ್ನ ಜೀವ ಹೇಗೆ ಬದುಕೀತು!
ಮೌನ ಮುರಿದು ಮಾತಾಡು
ಹೇಳು ನಿನ್ನ ಅಂತರ್ಯದ ಹಾಡು
ನಾನಿಲ್ಲಿವೇ ನಿನ್ನ ಜೋಡು
ಕಟ್ಟುವ ನಾವು ಪ್ರೇಮದಗೂಡು!
*****""*****"""*****""********
ಬಲವಂತ ಮೋರಟಗಿ.
ಬಸವಪ್ರಿಯ
@9740123673