Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಲ್ಪವಿರಾಮ

ಬಡತನವೆಂಬ ಜಟಿಲ ಹಗ್ಗವು
ದುಡಿದು ಮುರಿದ ರಟ್ಟೆ ಜಟ್ಟಿ ಹಿಡಿಯುತ್ತಿದ್ದರು,ಗಾಣದಿ ಆತನ ಮರುಗಿಸಿ
ಇಟ್ಟು,ಕನಸಲಿ,ಅವನಾಡುವ ಮಾತಲಿ,ಅವನ ಹಿಂದೆಯೇ ಬರಬಹುದೆಂಬ ಒಂದೇ ಭಯದಿಂದ
ರೈತ ನಗುಎಂಬ ಅಲ್ಪವಿರಾಮದಲ್ಲಿ ಬೇಯುತಿಹನು.....

- ಅದ್ಯತನ

11 Dec 2016, 07:49 am

ವಿದಾಯ

ಕಣ್ ಹಾಯಿಸಿ ದಷ್ಟು ಕರಿ ಮೊಡಗಳು
ಅಗಲೊ ಈಗಲೊ ಸುರಿಬಹುದು
ಧಾರಕಾರದ ಸುರಿಮಳೆ....
ಹೋರಡು ಗೆಳತಿ.

ನಿಜ ಗೆಳೆಯ....
ಸುರಿಯಲಿ ಮಳೆ ರೊಯೈಂದು
ನಾನೇಕೆ ತೋಯೈಲಿ..
ಕೈಯಲಿ ಕೊಡೆಯಿರುವಾಗ.

ಮೊಡದ ಮಳೆ ನಿನ್ನ ತಾಕಲಾರದು
ನಿಜ ಗೆಳತಿ.
ನಮ್‌‌‌‌‌ ಅಗಲಿಕೆ ಯ ನೋವು
ನಿನ್ನ ಕಂಗಳಲ್ಲಿ ನೀರಾಗಿ ಹನಿ ಹನಿಯಾಗಿ
ನಿನ್ನ ತೋಯೈವುದನು .
ಹೇಗೆ ತಡೆಯುವೆ.
ಮನದ ಭಾರ ಕರಗುವವರೆಗೆ..

ಪ್ರಕಾಶ.ಟಿ.ಚಳಕೆರೆ

- Prakasha. T.Challakere

11 Dec 2016, 12:12 am

ಅರ್ಥವಿಲ್ಲದ ಜೀವನ..

ಅರ್ಥವಿಲ್ಲದ ಜೀವನ.. ಅರ್ಥವಿಲ್ಲದ ಜೀವನಕ್ಕೆ ಬೆಲೆ ಇಲ್ಲದ ಭಾವನೆಗಳ ನಡುವೆ ಬದುಕಿನ ಜಂಜಾಟ....
ಮನಸ್ಸಿನ ಮಾತು ಕೇಳುವ ಬದಲು ಕನ್ನಡಿಯ ಮುಂದೆ ನಿಂತು ಕಣ್ಣೀರು ಹಾಕುವುದು ಒಳ್ಳೆಯದು....
ಮನಸ್ಸಿನ ಮಾತು ಕೇಳಿದರೂ ಕೇಳಲಿಲ್ಲ ಎಂದು ನಟಿಸುವ ಕಂಗಳ ಮುಂದೆ ನಾಟಕವಾಡುವ ಪಾತ್ರಧಾರಿ ನಾನು.....

- Girish Bhat

11 Dec 2016, 12:01 am

ಬೆಳಕು

ನಿನ್ನ ಕಂಗಳ ಹೊಳಪಿನಲಿ
ಬೆಳಕಿನ ಕಿರಣ ಕಂಡೆ
ನಿನ್ನ ನಸು ನಗುವಿನಲಿ
ಭರವಸೆಯ ಆಸೆ ಕಂಡೆ
ನಿನ್ನ ಮುಗ್ಧ ಆಟಗಳಲಿ
ಕನಸು ನನಸಾದುದ ಕಂಡೆ
ನಿನ್ನ ನುಡಿ ಮುತ್ತು ಗಳಲಿ
ಹೆಮ್ಮೆಯ ಸಾಫಲ್ಯ ಕಂಡೆ
ನಿನ್ನ ಬೆಳವಣಿಗೆಯಲಿ
ಹಿಂದೆ ನಿಂತ ನನ್ನ ನೆರಳ ಕಂಡೆ
ನಿನ್ನ ಜೀವನ ಸುಖದಲಿ
ನನ್ನ ಗುರಿಯ ಕಂಡೆ
ಓ ನನ್ನ ಬೆಳಕೆ ಬೆಳಗಲಿ
ನಿನ್ನ ಹಿರಿಮೆ ಸದಾ ನನ್ನ ಹಾರೈಕೆ
ಸದಾ ನನ್ನ ಹಾರೈಕೆ

- kavita Rajesh

10 Dec 2016, 11:10 pm

ಗೆಳತಿಯ ಹಂಬಲ

ಕೊರೆಯುವ ಈ ಚಳಿಯಲ್ಲಿ,
ಬೀಸುವ ತಂಗಾಳಿಯಲ್ಲಿ,
ನಿನ್ನ ನೆನಪು ಕಾಡಿದೆ.
ಕವನ ಕಟ್ಟಿ ಹಾಡಿದೆ.

ಇರುಳು ಸರಿದು ಮಬ್ಬು ಕವಿದು
ರಗ್ಗು ಹೊದ್ದು ಮಲಗಲು,
ಕನಸ ಕದವ ತಟ್ಟಿ ಬಿಡುವೆ.
ಕರವ ಹಿಡಿದು ಬಳಿಗೆ ಸೆಳೆವೆ.

ಹೇಳೆ ಗೆಳತಿ ಎಂದು ಬರುವೆ
ಒಂಟಿತನವ ಒಡೆಯಲು?
ಒಲವ ಗೀತೆ ಹಾಡಲು,
ಬೆಚ್ಚಗಿನ ಬದುಕಾಗಲು.
:-ಜಿ.ನಾಗರಾಜ್ (ನಾದಲೀಲೆ)
9844742494

- NAGARAJ G

10 Dec 2016, 11:01 pm

ಕನಸು-ನೆನಪು

ಕದ ತಟ್ಟಿತು ಕನಸು ಮರೆಯುವಾಗ ಸವಿ ನೆನಪನು..
ಮರೆಮಾಚಿತು ನೆನಪು ಮುಂದೆ ಇರುವ ಕನಸನು...
ಕನಸುಗಳನ್ನು ಕಾಣಬೇಕೇ?
ನೆನಪುಗಳನ್ನು ಮರೆಯಬೇಕೇ??
ಕನಸು ಹಿಂದಿನ ನೆನಪೆ?
ನೆನಪು ಮುಂದಿನ ಕನಸೆ?
ತಿಳಿಯುವುದರೊಳಗೆ ಕನಸು ಕರಗಿತ್ತು...
ನೆನಪು ನಶಿಸಿತ್ತು...!!

- Kavana L S

10 Dec 2016, 10:10 pm

ಓ... ಸೂರ್ಯ!!

ಕತ್ತಲಲ್ಲಿ ಕಳೆದು ಹೋದ ಓ... ಸೂರ್ಯ,
ನಿನಗೊಂದಿಷ್ಟು ಕರುಣೆಯಿಲ್ಲವೆ?..
ಆ ಚಂದ್ರನೋ...ಬೆಳದಿಂಗಳು ಚೆಲ್ಲಿ,
ಮೋಸಮಾಡಿಬಿಟ್ಟ
ಆ ಚುಕ್ಕಿಗಳೋ... ಕಣ್ಣು ಮಿಟುಕಿಸಿ ಸನ್ನೆಮಾಡಿ,
ಮಾಯವಾದವು
ಆ ಸಾಗರದ ಅಲೆಗಳೋ... ಮೈ ಗೆ ಸೋಂಕಿಸಿ, ತಳ ಸೇರಿ ಬಸಿದು ಹೋದವು
ಆ ತಂಗಾಳಿಯೋ... ಆಸೆ ಹುಟ್ಟಿಸಿ, ಬಿರುಗಾಳಿಯಾಯಿತು
ಆ ಮಳೆಯೋ... ಮುತ್ತಟ್ಟು ಮೈ ಮರೆಸಿ, ಮಾಯವಾಯಿತು
ಆ ಇಬ್ಬನಿಯೋ... ಮುತ್ತು ಚೆಲ್ಲಿ , ಮತ್ತೆಲ್ಲಿ ಹುಡುಕಿದರು ಸಿಗದಾಯಿತು
ಆ ಕೋಗಿಲೆಯೋ... ಹಾಡು ನಿಲ್ಲಿಸಿ, ಮನಸ್ಸು ಭಾರ ಮಾಡಿ ಹಾರಿಹೋಯಿತು
ಆ ನವಿಲೋ... ಗೆಜ್ಜೆ ಬಿಚ್ಚಿ, ನನ್ನೆದೆಗೆಸೆದು ಕೇಕೆಹಾಕಿತು

ರಚಣೆ:ರೇವಣಸಿದ್ದ ಗೌಡರ
ಸಾ: ರಬಕವಿ-587314
Mobile:9008060918

- Revanasidda Goudar

10 Dec 2016, 09:15 pm

ಉಳ್ಳವರ ಗೋಡೆಗೆ ಅಂದವಾದವರು

ಇಟ್ಟಿಗೆ ಬಟ್ಟಿಯಲಿ,
ಬದುಕು ಸುಟ್ಟುಕೊಂಡವರು ನಾವು
ಕನಸುಗಳನು,
ಸುಡುವ ಹಂಚಲ್ಲಿಟ್ಟು ಕರಗಿಸಿಕೊಂಡವರು
ಆಡುವ ಕಂದನ ಕೈ ಗೆ,
ಸುಡುವ ಇಟ್ಟಿಗೆ ಇಟ್ಟವರು
ಹಸಿದ ಹೊಟ್ಟಗಳನು,
ನೆಲಕ್ಕಿಟ್ಟು ಹೊಸೆದವರು
ಬಂಧು-ಬಾಂದವರ ಸಂಬಂಧ,
ಗಾಳಿಗೆ ತೂರಿದವರು
ಆಸೆ-ಆಕಾಂಕ್ಷೆಗಳನು,
ಪಟಮಾಡಿ ಹಾರಿಬಿಟ್ಟವರು
ಬದುಕಿನ ಎಲ್ಲ ಭಾವನೆಗಳನು,
ತೋರಣ ಮಾಡಿ ಕಟ್ಟಿದವರು
ಆದರೂ ನಾವು,
ಉಳ್ಳವರ ಗೋಡೆಗೆ ಅಂದವಾದವರು

ರಚಣೆ: ರೇವಣಸಿದ್ದ ಗೌಡರ
ಸಾ:ರಬಕವಿ-587314
Mobile: 9008060918

- Revanasidda Goudar

10 Dec 2016, 08:46 pm

ಕೊನೆಯ ನಿಲ್ದಾಣವಲ್ಲ ಇದುವೇ..

ಕೊನೆಯ ನಿಲ್ದಾಣವಲ್ಲ ಇದುವೇ
ಸಾಗಬೇಕಿದೆ ಇನ್ನು
ಇದೆ ಇನ್ನೊಂದು ನಿಲ್ದಾಣವು..
ಇನೆಷ್ಟು ನಿಲ್ದಾಣವೋ.....
ಸಾಗಬೇಕಿದೆ ನಾನು
ಬದುಕ ಬೇಕಲ್ಲ
ಬದುಕುವುದಕ್ಕೆ ಸಾಗುವುದು
ಸಾಗುತ್ತಾ ಬದುಕುವುದು
ತಿಳಿಯದಲ್ಲ ನನಗೆ
ತಿಳಿಯ ಬೇಕಿದೆ ನಾನು
ತಿಳಿಸುವವರು ಯಾರು
ಹುಡುಕ ಬೇಕಿದೆ ಅವರ..
ಆದರ್ಶ ಕಲಸೆ

- Adarsha kalse

10 Dec 2016, 08:31 pm

ಕನಸು-ನನಸು

ಪ್ರೊಜೆಕ್ಟರ್ ಬೆಳಕಲ್ಲಿ
ಛಾವಣಿಯಿಲ್ಲದ ಥೇಟರಿನಲ್ಲಿ
ಧುತ್ತೆಂದು ಪರದೆಯ ಮೇಲೆ ನೀ ಬಂದಾಗ
ಮಂಜಾದವೋ.. ಕಣ್ಣೆಲ್ಲ ಮಂಜಾದವೋ..

ಕಂದೀಲು ಬೆಳಕಿನಲಿ
ಮುರುಕು ಹಂಚಿನ ಮನೆಯ ಛಾವಣಿಯೊಳಗೆ
ಫಳ ಫಳನೆ ಹೊಳೆಯುವ ನಕ್ಷತ್ರವಾಗಿ ನೀ ಬಂದಾಗ
ಖುಷಿಯಾದವೋ ಮನವೆಲ್ಲ ಖುಷಿಯಾದವೋ

ಮುಚ್ಚಳವಿಲ್ಲದ ಮೋಡದೊಳಗೆ
ತಳವಿಲ್ಲದ ತಾಟಿನೊಳಗೆ
ಬುಡವಿಲ್ಲದ ಬದುಕಿನೊಳಗೆ
ಕಣಸು ಕಾಣಬೇಕು ನನಸಾಗಿಸಬೇಕು

ರಚಣೆ: ರೇವಣಸಿದ್ದ ಗೌಡರ
ಸಾ: ರಬಕವಿ-587315
Mobile: 9008060918

- Revanasidda Goudar

10 Dec 2016, 08:14 pm