Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಂದರ ಕಾಂತಿಯ ಬಾಲೆ!

ಸುಂದರ ಕಾಂತಿಯ ಬಾಲೆ!
ಏನು ನಿನ್ನ ಲೀಲೆ.

ನಿನ್ನ ನೋಡಿ ನನ್ನ ಮನಸ್ಸಿಗೆ ಅಂಟಿತಲ್ಲಾ ಕಲೆ,
ನನ್ನ ಹೃದಯದಲ್ಲಿ ಸುರಿಯಿತಲ್ಲಾ;
ನಿನ್ನ ಚಂದದ ಚಹರೆಯ ಮಳೆ.

- ವೇಣು ಆರ್ ಚಿನ್ನದೂರು

10 Dec 2016, 08:14 pm

ವೀರ ಪುತ್ರ

ಧೀರ ಯೋಧರು
ಶೂರ ಯೋಧರು
ನಮ್ಮ ಸೈನಿಕರು

ಶತ್ರುಗಳೆದಯ ನಡುಗಿಸುವರು
ಭಾರತ ಮಾತೆಯ ವೀರ ಪುತ್ರರು
ನಮ್ಮ ಕಾಯುವ ನಮ್ಮ ಸೈನಿಕರು

ಇಲ್ಲವರಿಗೆ ಮನೆಯವರ ಪ್ರೀತಿ
ಬಯಸಲೊಲ್ಲವರು ಕೀರ್ತಿ
ಇದು ನಮ್ಮ ಸೈನಿಕರ ನಿಜ ಮೂರ್ತಿ

ಕಾಯುವ ಕೈಗಳೆ ಸಾಯಿಸಿದಂತೆ ಮಾಡುವ
ಬದಲು ಸೈನಿಕರನ್ನೊಮ್ಮೆ ಭೇಟಿ ಮಾಡುವ
ಅವರ ಧೈರ್ಯಕ್ಕೊಂದು ಧೀರ್ಘ ಸಲಾಂ

ಜೈ ಹಿಂದ್...........
ಈ ಮೂಲಕ ಸೈನಿಕರನ್ನು ಗೌರವಿಸೋಣ.

- ರನ್ನ ಮಹಾದೇವ

10 Dec 2016, 07:51 pm

ನಮ್ಮ ಬಡತನ

ನಮ್ಮ ಬಡತನ:
ಬಂಡಿಯ ನೊಗಹೊತ್ತು ಎಳೆಯುವ ಅಮಾಯಕ ಎತ್ತಿನಂತೆ,
ಬಿರುಗಾಳಿಗೆ ಸಿಕ್ಕು ಗರಗಿಟ್ಟಲೆಯಾದ ಒಣ ಎಲೆಯಂತ,
ಮೂಟೆ ಹೊತ್ತು ಊರೂರು ಸುತ್ತುವ ಕತ್ತೆಯಂತೆ,
ಉಂಡವರು ಉಂಡೆಸೆದ ಎಲೆಯೊಳಗಿನ ಅನ್ನ ಅರಸುವಂತೆ,
ಒಡೆದು ಮಾಸಿದ ಕನ್ನಡಿ ನಮ್ಮ ಬಡತನ ನಮಗೆ ತೋರಿಸುವಂತೆ,
ಆಕಾಶಕ್ಕೆ ಎಸೆದ ಆಸೆಯ ಕಲ್ಲು ಮರಳಿ ಬಂದು ನಮಗೇ ಬಡಿಯುವಂತೆ,
ಯಜಮಾನರಿಗೆ ಅಂಗಳ ಅಂಚಿನಲ್ಲಿ ಕಾವಲು ಕಾಯುವ ಚಪ್ಪಲಿಯಂತೆ,
ನಮ್ಮವರ ಕಣ್ಣುಗಳ ಅಂಚುಗಳಲಿ ತುಂಬಿಕೊಂಡ ದುಃಖದ ಚಿತ್ರಗಳಿಗೆ ಮರಳಿ ಮರಳಿ ಜೀವ ಬಂದಂತೆ,
ನಮ್ಮ ಬಡತನ.....ನಮ್ಮ ಬಡತನ..........

ರಚನೆ: ರೇವಣಸಿದ್ದ ಗೌಡರ.

- Revanasidda Goudar

10 Dec 2016, 07:46 pm

ವೀರಯೋಧ

ಓ! ಅದೋ ಅಲ್ಲಿಹನು ಗಡಿನಾಡ ವೀರ
ಅವನಿಗೆ ಜನರ ಹಾರೈಕೆ ಅಪಾರ, ಅಪಾರ
ಶತ್ರುಗಳ ಶತ್ರುವೇ ಭುವಿಯ ಈ ವೀರ ಸದಾ ಮಿನುಗಲಿ ನಮ್ಮ ಸೂಪರ್, ಶೂರ.

ಹತ್ತಿರದಲಿ ಪ್ರೀತಿಯ ತಂದೆಯಿಲ್ಲ- ತಾಯಿಯಿಲ್ಲ
ಆದರೂ ಕೊಂಚ ದುಃಖವಿಲ್ಲ- ದುಗುಡವಿಲ್ಲ
ಕೆಚ್ಚೆದೆಯ ಈ ಮಲ್ಲ
ಎಲ್ಲರನು ಗೆಲ್ಲಬಲ್ಲ

ನೀಲಿಯಾಗಸಕೆ ಚಂದ್ರ ಶೋಭೆ
ಬ್ರುಹತ್ ಭೂಮಿಗೆ ಯೋಧ ಶೋಭೆ ಯೋಧನ ಕಾಪಾಡೆ ಹೇ! ಭಾರತಾಂಬೆ
ಅವನಿದ್ದರಲ್ಲವೇ? ತಾಯಿ ನಿನಗೆ ಪ್ರಭೆ.

- Ramachandra GL

10 Dec 2016, 07:28 pm

ಕರೆ ತಂದು ನಿಲ್ಲಿಸಲೇ?..

ನಿಮ್ಮ,
ಪಲ್ಲಕ್ಕಿಗೆ ಹೆಗಲು ಕೊಟ್ಟು
ಮಂಚಕ್ಕೆ ಮೈ ಕೊಟ್ಟು
ಖಡ್ಗಕ್ಕೆ ಕೊರಳು ಕೊಟ್ಟು
ಘೋರಿಯೊಳಗೆ ನಿಟ್ಟುಸಿರುಬಿಟ್ಟು,
ಮಗ್ಗಲು ಬದಲಿಸಿದವರನು
ಕರೆ ತಂದು ನಿಲ್ಲಿಸಲೇ?.....

ರಚನೆ: ರೇವಣಸಿದ್ದ ಗೌಡರ.

- Revanasidda Goudar

10 Dec 2016, 07:26 pm

ಕನ್ನಡಿಗ...

ನಾನೊಬ್ಬ ಕನ್ನಡಿಗ
ಬರಿಯಲೊಲ್ಲೆ, ಒದಲೊಲ್ಲೆ
ಅದು ಸಂವಹನಕೆ ಮುಳ್ಳಂತೆ
ಗೌರವಕದು ಪೆಟ್ಟನಗೆ
ಆದರೂ
ಕನ್ನಡಿಗನೆಂದು ಸಾರುವೆ...!

- Praveen Melagiri

10 Dec 2016, 06:58 pm

ಯವ್ವಾ ಬೇ...

ನಾನ್ ಒಂದ ಕವಿತೆ ಹೇಳ್ತಿನಿ ಕೇಳ್...
ನೀನಂದ್ರ
ನನ್ನ ಬಿಕ್ಕಳಿಕೆ ನೀರಿನಂಗ್
ನಾನು ನಡೆಯುವಾಗಿನ ನನ್ನ ನೆರಳಿಂಗ್
ಅತ್ತರೆ ಕಣ್ಣೋರೆಸುವ ಕರವಸ್ತ್ರದಂಗ್
ತಪ್ಪು ಮಾಡಿದಾಗ ತಿದ್ದಿ ಹೇಳು ಸರಸ್ವತಿಯಂಗ್
ನೀನೆ ನನ್ನ ಸಹನೆ ಒಡಲು ಪ್ರೀತಿಯ ಮಡಿಲು
ಯವ್ವಾ ಬೇ....
ಪರಶುರಾಮ. ಪೇಟ್ಕರ್ ,ಲೋಕಾಪುರ
೭೪೧೧೩೪೦೫೩೧

- preethu

10 Dec 2016, 06:37 pm

ಪ್ರಣಯ ಪಕ್ಷಿಗಳು...

ಸಂಜೆಯ ಹೊಂಗಿರಣದ ಸವಿಯ ಸವಿದು ವಿರಮಿಸುತ್ತ ಕುಳಿತಿರುವ ಪ್ರೇಮಿಗಳು.....
ಸುಂದರ ಕ್ಷಣಗಳ ನೆನೆಯುತ ಪ್ರೀತಿಯ ಬೆಳಕನ್ನು ಚೆಲ್ಲುತಿಹ ಮನಸುಗಳು...
ಮನಸು ಒಪ್ಪಿಸಿ ಅದಲು ಬದಲು ಮಾಡಿಕೊಂಡ ಹೃದಯಗಳು...
ಎಲ್ಲೆಲ್ಲು ತುಂಬಿದೆ ಒಲವಿನ ಕಡಲು...
ಆಕೆಯ ಕಣ್ಣಲ್ಲಿ ಆತನು..ಆತನ ಕಣ್ಣಲ್ಲಿ ಆಕೆಯು ತುಂಬಿರಲು...
ಸುಂದರ ಅನಿಸುವುದು ಸೂರ್ಯನ ಕೆಂಪಾದ ಕಿರಣಗಳು...
ಆವರಿಸಲಿ ಎಂದು ಅಪೆಕ್ಷಿಸುತ್ತಿದೆ ಮನಸು ಚಂದ್ರನ ಬೆಳದಿಂಗಳು....

- ಮಹೇಶ್..

10 Dec 2016, 06:34 pm

ಕಲ್ಪನೆಯ ಕವನ

ಕಲ್ಪನೆಯಲಿ ಕಂಡಳು ಕವನ...
ನೋಡಿ ಮೆಚ್ಚಿದೆ ಅವಳ ನಯನ..
ಬೇರೆಲ್ಲು ಹರಿಯಲಿಲ್ಲ ನನ್ನ ಗಮನ..
ಅವಳ ಬಳಿ ಹೋಗಲು ತುಡಿಯುತಿತ್ತು ನನ್ನ ಮನ...
ಆದರು ಒಂದು ಗೊಂದಲ ಇದು ಸ್ನೇಹಾನ ಇಲ್ಲ ಪ್ರೀತೀನ.....

- ಮಹೇಶ್..

10 Dec 2016, 06:26 pm

ಹನಿಗವನ

ಮುಂಜಾವಲಿ ತುಂಬುವ
ಕಾಂತಿಯ ಇಳೆಯಲಿ
ಮುಸ್ಸಂಜೆಯಲಿ ಕದಿಯುವ
ಶಾಂತಿಯ ಅವಳಲಿ
ವಿರಹದಲಿ ಕರಗುವ
ನಿಶೆಯ ಅಂತರಾಳದಲಿ...

- Indushekar Chinivar

10 Dec 2016, 06:18 pm