ನಮ್ಮ ಬಡತನ:
ಬಂಡಿಯ ನೊಗಹೊತ್ತು ಎಳೆಯುವ ಅಮಾಯಕ ಎತ್ತಿನಂತೆ,
ಬಿರುಗಾಳಿಗೆ ಸಿಕ್ಕು ಗರಗಿಟ್ಟಲೆಯಾದ ಒಣ ಎಲೆಯಂತ,
ಮೂಟೆ ಹೊತ್ತು ಊರೂರು ಸುತ್ತುವ ಕತ್ತೆಯಂತೆ,
ಉಂಡವರು ಉಂಡೆಸೆದ ಎಲೆಯೊಳಗಿನ ಅನ್ನ ಅರಸುವಂತೆ,
ಒಡೆದು ಮಾಸಿದ ಕನ್ನಡಿ ನಮ್ಮ ಬಡತನ ನಮಗೆ ತೋರಿಸುವಂತೆ,
ಆಕಾಶಕ್ಕೆ ಎಸೆದ ಆಸೆಯ ಕಲ್ಲು ಮರಳಿ ಬಂದು ನಮಗೇ ಬಡಿಯುವಂತೆ,
ಯಜಮಾನರಿಗೆ ಅಂಗಳ ಅಂಚಿನಲ್ಲಿ ಕಾವಲು ಕಾಯುವ ಚಪ್ಪಲಿಯಂತೆ,
ನಮ್ಮವರ ಕಣ್ಣುಗಳ ಅಂಚುಗಳಲಿ ತುಂಬಿಕೊಂಡ ದುಃಖದ ಚಿತ್ರಗಳಿಗೆ ಮರಳಿ ಮರಳಿ ಜೀವ ಬಂದಂತೆ,
ನಮ್ಮ ಬಡತನ.....ನಮ್ಮ ಬಡತನ..........
ನಾನ್ ಒಂದ ಕವಿತೆ ಹೇಳ್ತಿನಿ ಕೇಳ್...
ನೀನಂದ್ರ
ನನ್ನ ಬಿಕ್ಕಳಿಕೆ ನೀರಿನಂಗ್
ನಾನು ನಡೆಯುವಾಗಿನ ನನ್ನ ನೆರಳಿಂಗ್
ಅತ್ತರೆ ಕಣ್ಣೋರೆಸುವ ಕರವಸ್ತ್ರದಂಗ್
ತಪ್ಪು ಮಾಡಿದಾಗ ತಿದ್ದಿ ಹೇಳು ಸರಸ್ವತಿಯಂಗ್
ನೀನೆ ನನ್ನ ಸಹನೆ ಒಡಲು ಪ್ರೀತಿಯ ಮಡಿಲು
ಯವ್ವಾ ಬೇ....
ಪರಶುರಾಮ. ಪೇಟ್ಕರ್ ,ಲೋಕಾಪುರ
೭೪೧೧೩೪೦೫೩೧
ಸಂಜೆಯ ಹೊಂಗಿರಣದ ಸವಿಯ ಸವಿದು ವಿರಮಿಸುತ್ತ ಕುಳಿತಿರುವ ಪ್ರೇಮಿಗಳು.....
ಸುಂದರ ಕ್ಷಣಗಳ ನೆನೆಯುತ ಪ್ರೀತಿಯ ಬೆಳಕನ್ನು ಚೆಲ್ಲುತಿಹ ಮನಸುಗಳು...
ಮನಸು ಒಪ್ಪಿಸಿ ಅದಲು ಬದಲು ಮಾಡಿಕೊಂಡ ಹೃದಯಗಳು...
ಎಲ್ಲೆಲ್ಲು ತುಂಬಿದೆ ಒಲವಿನ ಕಡಲು...
ಆಕೆಯ ಕಣ್ಣಲ್ಲಿ ಆತನು..ಆತನ ಕಣ್ಣಲ್ಲಿ ಆಕೆಯು ತುಂಬಿರಲು...
ಸುಂದರ ಅನಿಸುವುದು ಸೂರ್ಯನ ಕೆಂಪಾದ ಕಿರಣಗಳು...
ಆವರಿಸಲಿ ಎಂದು ಅಪೆಕ್ಷಿಸುತ್ತಿದೆ ಮನಸು ಚಂದ್ರನ ಬೆಳದಿಂಗಳು....
ಕಲ್ಪನೆಯಲಿ ಕಂಡಳು ಕವನ...
ನೋಡಿ ಮೆಚ್ಚಿದೆ ಅವಳ ನಯನ..
ಬೇರೆಲ್ಲು ಹರಿಯಲಿಲ್ಲ ನನ್ನ ಗಮನ..
ಅವಳ ಬಳಿ ಹೋಗಲು ತುಡಿಯುತಿತ್ತು ನನ್ನ ಮನ...
ಆದರು ಒಂದು ಗೊಂದಲ ಇದು ಸ್ನೇಹಾನ ಇಲ್ಲ ಪ್ರೀತೀನ.....