Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೂರಾದ ದಾರಿಯಲಿ ನಿಂತವನ ಸ್ವಗ

ಅಶರೀರವಾಣಿ ಮೌನವೊಂದನ್ನು
ಶೂನ್ಯಕ್ಕೆಸೆದು ಸುಮ್ಮನಾಗಿದೆ
ಆತ್ಮವಿನ್ನೂ ಕಂಪಿಸುತ್ತಿದೆ

ಒಬ್ಬಂಟಿಯ ಜೋಡಿ ಕಣ್ಣ ಹನಿಗಳು 
ಕೆನ್ನೆಗಿಳಿದು ಬರೆದಿವೆ
ಅಕ್ಷರವಾಗದ ಆರ್ತ ಅರ್ಥದ ನೋವಿನ ಓಲೆ
ತಲುಪಲಾರದ ವಿಳಾಸಕ್ಕೆ

ರಾತ್ರಿಯ ಕತ್ತಲು ಹಗಲಿನ ಬೆಳಕು
ತಬ್ಬಿಕೊಂಡಂತಿದೆ ಒಂದನ್ನೊಂದು 
ಇಳಿಸಂಜೆಯ ಹೊತ್ತಲಿ

ನೀ ಎಲ್ಲಿ ಹೋದೆಯೋ 
ನೆನಪುಗಳಲ್ಲಾದರೂ ಹುಡುಕಿಕೊಳ್ಳೋಣವೆಂದರೆ
ಹೋಗುವ ಮುನ್ನ ನೆನಪುಗಳ ಕಣ್ಣು ಕಿತ್ತು ಹೋದೆ

ಹೋದವಳ ಮನಸು ಹಗುರ
ಉಳಿದವನ ಬದುಕು ಹೆಣಭಾರ
ಯಾವತ್ತೂ ಈ ಬದುಕಿಗೆ ಎದಿರಾಗಬೇಡ
ಎದಿರಾದರೂ ನಗಬೇಡ
ನಿನ್ನ ನಗುವಿನ ಅರ್ಥ ಹುಡುಕುವ ಶಬ್ಧಕೋಶ
ನನ್ನ ಬದುಕಲ್ಲಿ ಉಳಿದಿಲ್ಲ  !
                               - ಜೀವ ಮುಳ್ಳೂರು
                                  8970922703

- ಜೀವ ಮುಳ್ಳೂರು

10 Dec 2016, 05:21 pm

ಅವಳಿಗಾಗೆರಡು ಸಾಲುಗಳು

ನನ್ನವಳ ನೆನೆದು ನಾ ನನ್ನೊಳಗೆ ಕಳೆದುಹೋದೆ
ನನ್ನವಳು ನನ್ನೆದೆಯಮೇಲೆ
ಬೆರಳಲಿ ರಂಗೋಲಿ ಬಿಡಿಸಿದ ಕನಸು ಕಂಡೆ

ಕನಸದು ನಿಜವಾಗಲಿ ಎಂದುಕೊಂಡೆ
ಅವಳೆದೆಯ ಹಾಸಿ ಆಲಂಗಿಸಿ
ನನ್ನನ್ನು ಒಳಗೆಳೆದು ಬಾಗಿಲು ಹಾಕಿಕೊಂಡಳು

ಮನಸಿನ ಕನಸು ಒಳಗೆ ಅವಿತು ಬೆವೆತು
ಬೆಚ್ಚಗಾಗಿ ಬೆವರಾಯಿತು.
==================
*ಎಲ್ಲಾರ್ ಸೂರ್ಯ*

- ಸುರೇಶ ಎಲ್.ರಾಜಮಾನೆ

10 Dec 2016, 05:00 pm

ಸ್ನೇಹ ಇದು ಸ್ನೇಹ☆

ರೆಕ್ಕೆ ಬಂದಮೇಲೆ ನಾವು
ಕಲಿಯಲೆಂದು ಬಂದ ನಾವು

ರೆಕ್ಕೆ ಬಿಚ್ಚಿ ಹಾರುವಾಗ
ಅತ್ತ ಇತ್ತ ನೋಡುವಾಗ

ಹಕ್ಕಸ್ಮತ್ತಾಗಿ ಸಿಕ್ಕೆವು
ಸಕ್ಕತ್ತಾಗೆ ನಕ್ಕೆವು

ಸ್ನೇಹ ನಮ್ಮ ಸ್ನೇಹ
ಮರೆಯೋ ಹಾಗಿಲ್ಲ

- ಭರತ್

10 Dec 2016, 04:53 pm

ಹೊಟ್ಟೆ ತುಂಬಿಸದ ಕವನ

ನನ್ನ ಖಾಲಿ ತಲೆಯಲ್ಲಿ,
ಹೊಟ್ಟೆ ತುಂಬಿಸದ ಕವನ
ಗಪ್ ಚಿಪ್ ಮಲಗಿದೆ
ನನ್ನ ಲಬ್-ಡಬ್ ಸೌಂಡ್ ಮಾಡುವ ಹಾರ್ಟಲ್ಲಿ,
ಜೇಬು ತುಂಬಿಸದ ಕವನ
ಉಸಿರು ಬಿಗಿ ಹಿಡಿದು ಮೌನವಾಗಿ ಮಲಗಿದೆ
ನನ್ನ ದೃಷ್ಟಿ ಹೀನ ಕಣ್ಣುಗಳಿಗೆ,
ದಾರಿ ತೋರಿಸದ ಕವನ
ಕತ್ತಲೆ ಜೊತೆ ಕೈ ಕೈ ಜೋಡಿಸಿದೆ.
ವಸಂತರಾಜನಿಗೆ ಕೈ ಕೊಟ್ಟ ಕೋಗಿಲೆಯಂತೆ
ಹುಣ್ಣಿಮೆ ರಾತ್ರಿಗೆ ಕೈ ಕೊಟ್ಟ ಚಂದಿರನಂತೆ
ನನ್ನ ಕವನ....ನನ್ನ ಕವನ....ಕವನ...ಕವನ..ಕ.....

ರಚನೆ: ರೇವಣಸಿದ್ದ ಗೌಡರ
ಸಾ: ರಬಕವಿ-587314
Mobile:9008060918

- Revanasidda Goudar

10 Dec 2016, 04:41 pm

ಮನಸ್ಸೆಂಬ ಮಾಯೆ

ಮನವೆ ತನುವನಾಳುವ ಧನಿಕ
ಮೀರಿದೆಯಾದರೆ ಬಾಳು ಕ್ಷಣಿಕ
ದೇವನೊಲುಮೆಯ ಕಲ್ಪನೆ ಚಿತ್ರ
ಮನದ ಚಿತ್ತದಿ ನಲುಮೆಯ ಗಾತ್ರ

ಉರಗದ ಹುತ್ತದಿ ಕಾಣುವೆಯಾದರೆ
ದರ್ಪದ ಅಹಂ ವಿಷದ ಆಸರೆ
ಕೋರಿಕೆ ವಿನಃ ಅತಿಯ ದಾಹ
ಬಿಟ್ಟರು ಬಿಡದೀ ಮತಿಯ ಮೋಹ

ಮನವೇ ಸ್ವತಃ ವಾನರನ ಸಮ
ಕೇಂದ್ರೀಕೃತ ಸ್ಥಿರವಿಲ್ಲದ ಮರ್ಮ
ಕಾಣದ ಕಡಲಿಗೆ ಕರೆಯುವ ಮನವೆ
ಶಾಂತಿಯಿದ್ದರು ಕೆದಕುತಲಿರುವೆ

ನಾನಾ ವಿಧದ ಸ್ವಪ್ನ ಸಂಗತಿ
ಅವಸರ ವಿಘ್ನ ಅಸುರ ಸಂಗಾತಿ
ಸುಳ್ಳದು ಎಂದರೂ ಕೇಳದ ಆತ್ಮ
ಕ್ಷಮಿಸನು ಎಂದಿಗೂ ಆ ಪರಮಾತ್ಮ

ಕಾಂತಿಯ ತರಹದಿ ಬೆಳಗುವ ಮನವೇ
ಮಣ್ಣಿನ ಮಡಿಲಿಗೆ ಬೆರೆಸಲು ತರವೇ
-ದೇವ ಕಜ್ಜೇರ.

- Deva Kajjera

10 Dec 2016, 03:28 pm

ಕವಣಿಯ ಕಲ್ಲು

ಕವಣಿಗೆ ಕಲ್ಲಾದೆವು
ಬಿಲ್ಲಿಗೆ ಬಾಣವಾದೆವು
ತೋಪಿಗೆ ಸಿಡಿಗುಂಡಾದೆವು
ಬೆಂಕಿ ಕಡ್ಡಿಗೆ ಉರಿಮದ್ದಾದೆವು
ಗುಲಾಬಿ ಹೂ ಗಿಡಮರಕೆ ಮುಳ್ಳಾದೆವು
ನಿಮ್ಮ ಕಾಲಿಗೆ ಚಪ್ಪಲಿಯಾದೆವು
ಯಾಕೆಂದರೆ.....
ನಾವು ಮುಗ್ಧರು.... ಮುಗ್ಧರು....

ರಚನೆ: ರೇವಣಸಿದ್ದ ಗೌಡರ.
ಸಾ: ರಬಕವಿ-587314
Mobile: 9008060918

- Revanasidda Goudar

10 Dec 2016, 03:13 pm

ಮದುವೆ

ಬಂಧನವದಲ್ಲವದು ಒಂದಾದ ಎರೆಡು
ಪರಿಧಿಯಿರೆ ಬಂಧನವು ಇಲ್ಲದಿರನಂತವು
ಅಂತ್ಯವಿಲ್ಲದನಂತ ಮಧುರ ಸಮ್ಮಿಲನವು
ಟಿಸಿಲೊಡೆದು ಹರಡಲೊಂದಾದ ದ್ವಂದ್ವವು

ತಿಳಿದಿತ್ತೆ ಮೊದಲೇನು ಹೊಂದುವುದು ಎಲ್ಲೆಂದು
ಯಾರೆಂದು ಹೇಗೆಂದು ಎಂದೆಂದು ಎಷ್ಟೆಂದು
ಕಲೆಸಿ ಬೆಸೆಯುವುದದುವೇ ಬೇರ್ಪಟ್ಟ ಬೆಸುಗೆಗಳು
ದೈವಮಾಡಿದ ಜೋಡು ಪ್ರೇಮವನುಭವಿಸಲು

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

10 Dec 2016, 02:54 pm

ದುರಂತ

ಓ..ಸೂರ್ಯ,
ನೀ ಬಂದು ನಮ್ಮ ಮನೆಯ ಒಲೆಯೊಳಗೆ ಕುಳಿತುಬಿಡು,
ನನ್ನ ಅವ್ವ ರೊಟ್ಟಿ ಬೇಯಿಸಿ ಬಿಡುವಳು ನಿನ್ನ ನೆತ್ತಿಯ ಮೇಲಿಟ್ಟು.

ಓ..ಸೂರ್ಯ,
ನೀ ಬಂದು ಸ್ಮಶಾನದಲಿ ಚಿತೆಯಾಗು
ನಮ್ಮವರು ಹೆಣ ಸುಟ್ಟು ಬಿಡು
ಅವರ ಮೈಯೊಳಗಿನ ರಕ್ತಗಾಯ ಅಳಿಸಿಬಿಡು.

ಓ... ನನ್ನ ಜನಗಳೆ,
ಸತ್ತು ಸಮಾಧಿ ಸೇರಿದ ನಮ್ಮವರ ಹೆಣಗಳನು
ಕಿತ್ತು ಹೊರಗೆ ಎಸೆಯಿರಿ
ಹದ್ದು ಕಾಗೆಗಳು ಹಸಿದು ಕುಳಿತಿವೆ
ತಿಂದು ತೇಗಲಿ...

ಓ... ಚಂದ್ರ,
ನೀ ಬಂದು ನಮ್ಮ ಹರಕು ಮುರುಕು ಹಂಚಿನ ಗುಡಿಸಲು ಮೇಲೆ ಕುಳಿತುಬಿಡು
ನೀ... ತಂಪಿಗೆ ಹೆಸರಂತೆ...
ಕಣ್ಣು ಮುಚ್ಚಿ ಕಣಸು ಕಾಣುವೆ ನಾ,
ನನಗೆ ಉಳಿದಿರುವುದೊಂದೆ ನಾ ಬಡವ.....

ರಚನೆ: ರೇವಣಸಿದ್ದ ಗೌಡರ.
ಸಾ: ರಬಕವಿ-587314
Mobile:9008060918

- Revanasidda Goudar

10 Dec 2016, 02:32 pm

@@ಕನ್ನಡೋತ್ಸವ@@

ಉತ್ಸವ ಉತ್ಸವ ಕನ್ನಡೋತ್ಸವ
ಕರುನಾಡಿನ ಜನ್ಮದೋತ್ಸವ
ಸಿರಿನಾಡಿನ ಸಂಭ್ರಮೋತ್ಸವ
ಕರ್ನಾಟಕದ ಉದಯದೋತ್ಸವ!
‌‌ ನಾಡು ಕಟ್ಟಿದ ವೀರಪುತ್ರರ
ಸಾಧನೆಗೈದ ಕನ್ನಡಿಗರ
‌‌‌ ಡಿಂಡಿಮವ ಬಾರಿಸಿ
ಶತೃಗಳ ಸಂಹರಿಸದ
ವೀರರೋತ್ಸವ!
ರನ್ನನ ಬೀಡಿನ
ಪಂಪನ ನಾಡಿನ
ಬಸವ ಗೂಡಿನ
ಕನ್ನಡ ಮಣ್ಣಿನ ಮಕ್ಕಳೋತ್ಸವ!
ಸಿರಿಸಂಪಿಗೆ ಸೇವಂತಿಗೆ
ಸೂಜಿ ಜಾಜೀ ಮಲ್ಲಿಗೆ
ಮಾವು-ಬೇವು,ಜೋಳ-ಬತ್ತ
ರಾಗಿ ಗೋದಿ ಬೆಳೆಗಳ
ಖಣಜದೋತ್ಸವ!
ಕದಂಬ ಕಟ್ಟಿದ ನಾಡಿನೋತ್ಸವ
ಚನ್ನಮ್ಮನ ಬೀಡಿನ ಶೌರ್ಯದೋತ್ಸವ
ಜನಪದ ಸಂಸ್ಕ್ರತಿಯ ಸಡಗರೋತ್ಸವ
ಕವಿಪುಂಗರು ಹುಟ್ಟಿದ ನಾಡಿನೋತ್ಸವ!
___________________
@ಬಲವಂತ ಮೋರಟಗಿ(ಬಸವಪ್ರಿಯ)








‌‌‌‌



‌‌‌

- ಬಲವಂತ ಮೋರಟಗಿ(ಬಸವಪ್ರಿಯ)

10 Dec 2016, 01:54 pm

ಇತಿಹಾಸದ ಬೆನ್ನೇರಿ

ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಅರಮನೆಗೆ:-
ಕಲ್ಲು ಹೊತ್ತು ನೆತ್ತಿ ನೆಗ್ಗಿಸಿಕೊಂಡವರ,
ಕಲ್ಲು ಕಟೆದವರ,ಗಾರೆ ಕಲಿಸಿದವರ,
ಗೋಡೆ ಕಟ್ಟಿದವರ, ಬೆನ್ನು ಬಾಗಿಸಿಕೊಂಡವರ...
ರಂಗು.. ರಂಗಿನ ಕಥೆಗಳು...

ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದರೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಯುದ್ಧದೊಳಗೆ:-
ಖಡ್ಗ ಝಳಪಿಳಿಸಿದವರ,
ಬಿಲ್ಲಿಗೆ ಬಾಣ ಹೂಡಿದವರ,
ಆನೆಗೆ ಅಂಕುಶ ಚುಚ್ಚಿದವರ,
ಕುದುರೆಗೆ ನಾಲು ಬಡೆದವರ,
ಖಡ್ಗಕ್ಕೆ ರುಂಡ ಕೊಟ್ಟವರ,
ನೆಲಕ್ಕೆ ರಕ್ತ ಕೋಡಿಯಾದವರ....
ರಂಗು ರಂಗಿನ ಕಥೆಗಳು...

ರಚನೆ:ರೇವಣಸಿದ್ದ ಗೌಡರ.
ಸಾ:ರಬಕವಿ-587314
Mobile:9008060918

- Revanasidda Goudar

10 Dec 2016, 01:30 pm