ನೆನಪಾಗುತ್ತಿದೆ ಹಿಂದಿನ ಭಾರತ ಬದುಕು
ನಸು ಬೆಳಕಾಗಿದೆ ಇಂದಿನ ಜೀವನ ತುಣುಕು
ರಾಜ-ಸೇವಕ, ಗುರು-ಶಿಷ್ಯರ ಸ್ವಾಮಿ ಭಕ್ತಿ
ಆಜ್ಞಾ ಕಾರ್ಯದಿ ಚಿತ್ತ ಭಕ್ತಿಯ ಮುಕ್ತಿ
ಇದುವೆ ಆನಾದಿ ಕಾಲದ ಶೋಭಿತ ಸೂಕ್ತಿ
ಆದರೆ ಏನಾಗಿದೆ ಇವತ್ತು?
ನೋಡು ನೋಡುತಾ ಬರುವ ಕಾಲಗಳು
ಆಯಾತಪ್ಪಿ ಮುಕ್ಕುರುಸಿ ಬೀಳುತ್ತಿವೆ
ಕಾರಣ, ಮೋಸದ ಆಡಳಿತಸೂತ್ರ ಬಳಕೆಯ ಕಾರ್ಖಾನೆ
ಉಗುಳುತಿದೆ ತನ್ನೋಳಗಿನ ವಿಷದ್ವೇಷ
ಬಲಿಯಾದವರು ಅಮಾಯಕರು! ಬಳಿಯೇ ಯಮಪಾಶ
ಕೇಳೋರು ದಿಕ್ಕಿಲ್ಲ, ಬಂದರೋ ಅವರಿಗೆ ಬದುಕಿಲ್ಲ
ಅಧಿಪತಿಯೇ ಭ್ರಷ್ಟನಾದರೆ ಅಧಿಕಾರಿಗಳು ಅದೃಷ್ಟರು!
ಅಧರ್ಮ ಕಾಲ ಬರಬಹುದೇನೋ...?
ಮಾಯಾ ಜಾಲ ಬೀಸಿ ಉಕ್ಕಿಸುವುದು ಹಾಲಹಲ
ಬರಬಹುದು ವಿಷ್ಣುವಿನ ಹನ್ನೆರಡನೇ ಅವತಾರ
ಮೊದಮೊದಲು ಹೆದರಬಹುದು ನೋಡಿ ಇವರ ಗ್ರಹಚಾರ
ಜಾತಿ ಎಂಬ ಬಲೆ, ಮತವೆಂಬ ಸೆಲೆ, ಕೋಮುವಾದದ ಅಲೆ
ಕಂಡು! ಕಂಗಾಲಾದರೂ ಸಂಶಯವಿಲ್ಲ
ಗೋಮುಖ ಧರಿಸಿದ ವ್ಯಾಘ್ರಗಳೋ ಸುತ್ತಲಿನ ಜನರು
ಸಾಥ್ ನೀಡುವ ನಾಟಕವಾಡಿ ದೂರ ಓಡಿ ಸಂತಸ ಪಡುವವರು!
ಅಶಾಂತಿ, ಕೊಲೆ, ದರೋಡೆ ಎಂಬ ಭೂತ ಮೈಗೂಡಿಸುವವರು!
ಬಲಿಯಾದವರು ಪರಿಶುದ್ಧ ಧರ್ಮಾಂಧರು!
-ದೇವ ಕಜ್ಜೇರ
ಏನಾಗುತ್ತಿದೆ ಎಂಬುದ ಅರಿಯದ ಮನಸ್ಸು
ಗಾಢವಾದ ಸಿಹಿಯ ನೋವಿನಂಚಿನಲ್ಲಿದೆ ತುಸು
ಆ ಚೆಲುವೆಯು ನೆನಪಾಗುತಾ....
ಈ ಮನಸ್ಸೆಂಬ ಕಗ್ಗಲ್ಲಿಗೆ ವಿಕಾರ ಹೋಗಿ ಆಕಾರ ಬಂದಿದೆ,
ಅವಳು ದೂರ ಇರುವುದರಿಂದ
ವಿರಹದ ವೇದನೆ ಕಾರಂಜಿಯ ಬುಗ್ಗೆಯಂತೆ ಚಿಮ್ಮುತ್ತಿದೆ♡
ಮುದ್ದು ಮನಸ್ಸಿನ ಹುಡುಗಿ
ಹೂವಂತೆ ನಗು ಚೆಲ್ಲಿ, ಎಂದೆಂದಿಗೂ
ಬಾನಲ್ಲಿ ಮಿನುಗುವ ತಾರೆ
ಮುಂಜಾನೆ ಸೂರ್ಯನು
ಬೆಳದಿಂಗಳ ಚಂದ್ರನು, ಕಾದಿಹರು
ಈ ದಿನ ಶುಭಕೋರಲು
ನಿನ್ನ ಕಣ್ಣ ಬೆಳಕೆ ಅವರ ಪ್ರತಿಬಿಂಬ
ಗಾನ ನವೀನ ಸ್ವರಧರೀಣಿಗೆ
ಈ ದಿನ ಸಪ್ತ ಸ್ವರಗಳು ಸೇರಿ
ಮಡುವವು ಸಮ್ಮೇಳನ.
ಅಂಬರಕ್ಕೆ ಕೈ ಚಾಚಿ
ಕ್ಷತ್ರಿಯನ ಜೊತೆ ಹೋರಾಡಿ
ತಾಯಿ ಇಂದ ಬೇಡಿ ಪಡೆದು
ಪೋಣಿಸಿ ಬರೆದೆ ನಿನ್ನ ಹೆಸರು.....