ಎಷ್ಟು ಭಾರದ ದಾತನಿವ
ಅಷ್ಟು ಹಗುರ ಸಲೀಸು ಕೂಸುಕೊಂಡ,
ದೀರ್ಘ ಗರ್ಭವ ಸೀಳಿ ಬಂದ ಕೂಸದು ಹಡೆದವಗೆ ತೂಗದ ತೊಟ್ಟಿಲು ತೋರಿತು ಅಳುತಳುತ ಹಾಡಿದ ಲಾಲಿಯ ನಡುವೆ ಅನಂತಾಯುಷ್ಯ ಪಡೆಯಿತು ಆ ಕೂಸು!
ಸರದಿಯಲಿದ್ದವರೆಲ್ಲ ಹೆರುವವರೆ
ಉತ್ತಲಾಗದು ಬಿತ್ತಲಾಗದು ಕೊನೆಯ ನಿಟ್ಟುಸಿರಿನಲೆ ಇದರ ಹುಟ್ಟು ,ಬರಡು ಬಂಜೆ ಎಂಬ ಮಾತೇ ಇಲ್ಲ ಇದು ಸಮಯದ ಸಂತಾನ.
ಈ ಕೂಸಾಗದ ಮನೆಯೇ ಇಲ್ಲ
ಒಮ್ಮೊಮ್ಮೆ ಕುಲಾವಿಗೂ ಬರವಿಲ್ಲ
ಇದರ ಜನನಕೆ ನೆಲ,ಕುಲ,ಜಲದ ತಂಟೆ ಬೇಕಿಲ್ಲ, ಜನ ಜನರು ತಾವೀದ್ದರೆ ಸಾಕು ತಾನುದಿಸುವುದು ಉಸಿರು ತಿಂದು
ಅಳದ ಕೂಸಿದು ಅಳಿಸುವ ಕೂಸು
ಹಡೆವವರು ನಡೆವಲ್ಲಿ ಪರದೆ ಎಳೆದು ಆಟ ಮುಗಿಯಿತಿನ್ನು ಎಂದು ಕೊನೆ ತಿಳಿಸುವ ಮರಿಗೂಸು.
ತನ್ನಾದಿಯಲೆ ತನ್ನವರಂತ್ಯ ಕಾಣ್ವ ಇದಕೆ " ಸಾವು" ಎಂಬ ಹೆಸರಿಟ್ಟರೇನೆ ಲೇಸು.
ಓ ತಾಯಿಯೇ ನನ್ನನ್ನು
ಈ ಭೂಮಿಗೆ ತಂದೆಯೆ
ಹಸಿವಾದಾಗ ಉಣ್ಣಿಸಿದೆ
ನನ್ನ ನೋವು-ನಲಿವುಗಳಿಗೆ
ಸ್ಪಂದಿಸಿದೆ
ತಪ್ಪು-ಒಪ್ಪು ಗಳನ್ನು ಕಲಿಸಿದರು
ಪ್ರೀತಿಯ ಅಥ೯ ತಿಳಿಸಿದೆ
ಸಮಾಜಕ್ಕೆ ಪೂರಕವಾಗಿ
ಬದುಕು ಎಂದು ಹೇಳಿದೆ
ನನಗಾಗಿ ಎಲ್ಲಾ ತ್ಯಾಗ
ಮಾಡಿದೆ.
ನಿನಗಾಗಿ ಏನು ಕೇಳ ಬಯಸಲಿಲ್ಲ
ಸಮಾಜದಲ್ಲಿ ದೇವರ ಸ್ಥಾನ
ಪಡೆದೆ..
ಗುರುಗಳಲ್ಲಿ ಮೊದಲನೆ
ಸ್ಥಾನ ಪಡೆದೆ..
ಓ ತಾಯಿಯೇ ನಿನ್ನ ಬಗ್ಗೆ
ಹೇಳಬೇಕೆಂದರೆ
ಮಹಾಭಾರತದ ಪುಟವೆ
ಮೀರುತ್ತದೆ
ಗೆಳೆಯರೆ ತಾಯಿಯ ಋಣ ತೀರಿಸಲು
ಈ ಜನ್ಮ ಸಾಲದು
ಯಾವತ್ತು ತಂದೆ ತಾಯಿಯನ್ನು ಕಡೆಗಣಿಸಬೇಡಿ
ಈ ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಯಾರ ಪ್ರೀತಿಯು ಮೇಲಲ್ಲ...
ಸುವಾಸನೆ ಸೂಸುವ
ಕೆಲವೊಂದು ಮನಸ್ಸು
ದುರ್ಗಂಧ ಬೀರುವ
ಕೊಳಕಾದ ಮನಸ್ಸು
ಪಾಸಿಟಿವ್ ಥಿಂಕಿಂಗ್
ಅದರಲ್ಲಿಹುದು
ನೆಗೆಟಿವ್ ಚಿಂತೆ
ಮತ್ತೊಂದರಲ್ಲೂ...
ಚಿಂತಿಸುವವರನ್ನು
ಜಾಣನೆನ್ನುವರು
ಸುಮ್ಮನೆ ಕೂರುವವರು
ದಡ್ಡರೆನಿಸುವರು,,
ಮನದ ಮಾತು
ಮನದಟ್ಟಾಗದಿದ್ದರೆ,
ಮೌನವೇ ಮಾತಾಗಿ
ಕೊನೆಗಾಣುವುದು..