Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೀಪವು ಆರಿತು ಗಾಳಿಯ ರಭಸಕ್ಕೆ
ಮನಸ್ಸು ಮುರಿಯಿತು ಮಾತಿನ ಹೂಡತಕೆ
ಹಚ್ಚಬಹುದು ದೀಪವ ಬೆಂಕಿಯಿಂದ
ಸೇರಿಸಬಹುದೇ ಮನವ ಸಾಂತ್ವನದಿಂದ...
- siddarth
09 Dec 2016, 09:35 pm
ಕಣ್ ತೆರೆದು ನೋಡು
ಕನಸು ಕರಗುವ ಮುನ್ನ...
ಗುರಿ ಮುಟ್ಟಿ ನೋಡು
ಕಿಚ್ಚು ಆರುವ ಮುನ್ನ ...
ಬದುಕಿದು ಮೂರು ದಿನದ ಆಟ
ಗೆದ್ದುಬಿಡು ನಿನ್ನಾಟ ಮುಗಿಯುವ ಮುನ್ನ...
- chikki
09 Dec 2016, 09:14 pm
ಜಗದ ಕತ್ತಲ
ಮೂಲೆಯಲಿ
ಬೆತ್ತಲಾಗಿಹ
ಜನಾಂಗಗಳು
ಗುಡಿ ಗೋಪುರ
ಮಂದಿರಗಳ
ಪ್ರವೇಶಿಸಲು ತಡಕಾಡುವ
ಜಾತಿಗಳು
ಮುಟ್ಟಿಸಿಕೊಳ್ಳದೆ ತುಸು ದೂರ
ಸಾಗುವ
ಬಿಳಿ ಗೋಡೆಯ ಕಪ್ಪು
ಕಲೆ
ಜಾತಿ ಧರ್ಮ ಜನಾಂಗಗಳಿಗೆ
ಈಗೀಗ ಬಿಸಿ
ರಕ್ತದ ಹಸಿ ಜ್ವಾಲೆ
ಕುಲ ಜಾತಿ ಚರಿತ್ರೆಯೂ
ಕಣ್ಣಿರಲೆ ತುಳಿದಿಹುದು
ನಮ್ಮ ಕತೆಯ...
ತುಸು ಸ್ವಾರ್ಥಿ ಧರ್ಮ ಹುಟ್ಟಿಸಿಹ
ಜಾತಿಗಳ ಬಲೆಯೊಳಗೆ ಸಿಲುಕಿಹ
ನಮ್ಮ ವ್ಯಥೆಯ??
ನಾಗರಾಜ್ ಬಾಳೆಗದ್ದೆ...
- Nagaraj Bhat Begadde
09 Dec 2016, 09:05 pm
ಅಂತರಂಗದ ತಳಮಳ
ಹರಿದು ಬರುತಿದೆ
ಪದಗಳ ರೂಪದಿ
ಕವಿತೆ ಬರೆದು
ತೆರೆದಿಡುತಿರುವೆ ಮನವ
ನಿಮ್ಮಂಗಳದಿ
- kavita Rajesh
09 Dec 2016, 08:51 pm
ಜೋಗದ ವೈಭೋಗವೋಂದು
ಜಲದ ಸೋಬಗಿನ ಸುಗ್ಗಿ
ಮನದುಂಬಿ ನೋಡಿ
ಸವಿದಂತೆ ಆಗುವದು
ಸಿಹಿ ಪಾಯಸ ಹುಗ್ಗಿ
ಜೋಗದಾಳಕ್ಕೆ ಇಳಿಯುವಾಗ
ಏನೋ ಬರಸೇಳೆತ
ಏರುವಾಗ ಸುರಿವ
ಮಳೆಯಲ್ಲೂ ಮೈ ಬೆವತ
ಜೋಗದೈಸಿರಿಯಲ್ಲಿ
ಎಲ್ಲ ನೂವು ಮರೆತ
ಹತ್ತಿನಿಂತೆ ಜೋಗದ
ಮೇರು ಪರ್ವತ
ಜೋಗದ ಗುಂಡಿಗೆ
ಆಕಾಶದಿಂದ ಸುರಿಯುತಿಹದು
ಮಲ್ಲಿಗೆ ಮಾಲೆಯ ದಂಡೆ
ಬಾನಿಂದ ಭೂಮಿಗೆ
ಜಾರುತಿದೆ ಚಂದ್ರನ ಸೆರಗು
ಜೋಗದ ಝರಿಯಾಗಿ
ನಕ್ಷತ್ರಗಳೆಲ್ಲ ಸೇರಿ
ಸೂರ್ಯನ ರಾಯಭಾರಿಯಾಗಿ
ಮಿನುಗುತಿವೆ ನಾಲ್ಕು ಜರಿ
ಕಾಮಧೇನು ಕ್ಷೀರಧಾರೆಯಾಗಿ
ಹರಿಯುತಿಹಳು ಶಿವನ ಜಡೆಯಿಂದ
ಧರೆಗೆ ಜೋಗದ ಜಲಧಾರೆಯಾಗಿ
ಕಾಮಧೇನುವಿನ ಕ್ಷೀರಧಾರೆ
ಹರಿಯುತಿಹುದು ಶಿವನ ಜಡೆಯಿಂದ
ಜೋಗದ ಜಲಧಾರೆಯಾಗಿ ಧರೆಗೆ
ಮಹೇಶ ಕಾಳಿ
- ಮಹೇಶ ಕಾಳಿ
09 Dec 2016, 08:49 pm
ಹೇಗೆ ತಿಳಿಯಲಿ ಓ ನನ್ನ ಧರೆ
ನಾ ಮೆಚ್ಚಿದೆ ನಿನ್ನ ಮನಸಾರೆ
ನಿನ್ನ ನೆಡೆ ನುಡಿ ಕಂಡು ಕಣ್ಣಾರೆ
ಹೇಗೆ ಮರೆಯಲಿ ಓ ನನ್ನ ತಾರೆ
-ಅಪ್ಪಣ್ಣಗೌಡ ಇಡಕನಹಳ್ಳಿ
- ಅಪ್ಪಣ್ಣಗೌಡ.ಐ.ಜೆ.
09 Dec 2016, 08:46 pm
ಪದಚೆಂದವಿದೆಎಂದು
ಬಳಸಬಾರದು ಎಂದು
ಬಳಸಬಾರದ ಕಡೆಗೆಲ್ಲ.
ರಮಣೀಯ ಪದದ ಸೊಗಸಿಗೆ
ಮನಸೋತ ಲೇಖಕನೊಬ್ಬ
ಅದ ಬಳಸದ ಕಡೆಗಳಿಲ್ಲ.
ಒಂದೊಮ್ಮೆ ಬರೆದನು
ಸಮೂಹ ಸಾವಿನ ಸಂತಾಪಕ್ಕೂ,
ಆ ಸಾವು ರುದ್ರರಮಣಿಯವೆಂದು.
ಅದ ಕಂಡವರು ಉಗಿದರು,
ಅವನಿಗೆ ಸಾವೂ ರಮಣೀಯವೇ ಎಂದು.
✍
- ಶೈಲಸುತೆ
09 Dec 2016, 08:21 pm
ಕಿರುಹರೆಯದ ಹೊತ್ತಿನಲಿ,
ಹುಡುಗಾಟದ ಮತ್ತಿನಲಿ,
ನೀ ಬರಿ ನೆನಪಾಗಿ ಹೋದದ್ದು
ಸರಿಯೇನೋ. . ಹುಡುಗ.
ಏಲ್ಲಾ ಹೊರಟಿದ್ದರೇನಾಯ್ತ?
ನಿನವ್ವ ಬೇಡ ಅಂದದಕ್ಕೂ
ಕಾರಣವಿತ್ತು.
ತಿರುಗಾಟ ಎಂದರೇನೆ
ವಾಂತಿ ಮಾಡುತ್ತಿದ್ದ ನಿನಗೆ,
ಪ್ರವಾಸ ಸುತ್ತುವುದು
ಬಲು ತ್ರಾಸಾಗುತ್ತಿತ್ತು.
ನೀ ಇನ್ನಷ್ಟೂ ಕಾಟ ಕೊಟ್ಟಿದ್ದರವರು ಒಪ್ಪುತ್ತಿದ್ದರೇನೋ. . ?
ನೀ ಅವರ ಪ್ರೀತಿಯ ಏಕೈಕ ಕೂಸಲ್ಲವೇನೋ.. ?
ಕೊಟ್ಟವರು ಯಾರು
ನಿನಗಾ ಕೆಟ್ಟ ಸಲಹೆ. .?
ಬೇಕಿತ್ತೇ ನಿನಗದು
ಹನ್ನೇರಡರ ವಯಸಿನೊಳಗೆ. .?
ಅಮ್ಮ ಬರುವ ವೇಳೆಗೆ
ಸಾಯುವಾಟದ ನಾಟಕವಾಡಲು ಹೋಗಿ.
ತಡವಾಗಿ ಬಂದಮ್ಮನ
ಮಡಿಲು ಸೇರಿದೆಯಾ ಶವವಾಗಿ..
ಉರುಳು ಹಾಕದೆ ಕುತ್ತಿಗೆಗೆ
ಸುತ್ತಿಕೊಂಡ ಸೀರೆ
ಪ್ರಾಣ ತೆಗೆಯಿತೆಂದಾರದು
ವಿಧಿಯ ಕರೆ.
ಅಡ್ಡ ಕಂಬಕ್ಕೂ ಸಿರೇಯ
ಗಂಟು ಹಾಕಿರಲಿಲ್ಲ.
ನೀ ಹಾರಿದಾಕ್ಷಣ ಜಾರಿ
ಬರುವುದೆಂಬ ಉಪಾಯವಿತ್ತಲ್ಲ..
ಆದರೆ ನಿನ್ನಾಯಸ್ಸು
ಮುಗಿದಿರಬೇಕು.. .
ಅದಕೆಂದೆ ಆ ಹತ್ತಿಯ ಸೀರೆ
ಜಾರದೆಯೇ ಕುಳಿತಿರಬೇಕು..
ಬೇಕಿತ್ತೇ ನಿನಗೀ
ಸಾವಿನೊಂದಿಗಿನಾಟ
ಬದುಕಿಸಿಕೋ ಅಮ್ಮ
ಎಂಬ ಕೊನೆಯ ಅಳಲಾಟ.
ಶಾಲೆಯೇ ಪ್ರವಾಸವ ರದ್ದು
ಮಾಡಿದೆ ಕಂದ.
ಮತ್ತೆದ್ದು ಬಾನೀನು
ಆಶಿಕ ನೆಂಬ ಮುದ್ದು ಮುಖದಿಂದ. .. .
✍
- ಶೈಲಸುತೆ
09 Dec 2016, 08:10 pm
ಯಾವ್ಯಾವುದೋ ವೇಷ ನಟನ ಕಂಡಿಹೆಯೇ?
ಜೀವ ನಿರ್ಜೀವದಲು ಸಂಚರರಿಪನವನೆ
ಬಂದಿಹನೆ ಅನುಭವಕೆ ಕಾಣದವನು
ಒಂದೆನಾಟಕ, ಪಾತ್ರದವನೊಬ್ಬನೇ ಇರಲು ಜಗದಲ್ಲಿ
ವೇಷಕಳಚುವ ಮೊದಲೆ ಅರಿಯಬಹುದೇ?
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
09 Dec 2016, 07:49 pm
ದೇಶವನ್ನು ಕಾಯುತ್ತಾರೆ ನಮ್ಮ ಯೋಧರು
ವೀರಮರಣ ಹೊಂದುತ್ತಾರೆ ಮಹಾವೀರರು
ಚಳಿ,ಗಾಳಿ ಎಂಬುದನ್ನು ನೋಡದೆ ಕಾಯುತಾರೆ ದೇಶವ
ಕೊಡಬೇಕು ಅವರಿಗೆ ನಾವು ಗೌರವ.
- Krupa
09 Dec 2016, 07:46 pm